ಶಾಲೆಗಳಲ್ಲಿ ಸಂಭ್ರಮದ ಪ್ರವೇಶೋತ್ಸವ

ಕಾಸರಗೋಡು: ಜ್ಞಾನದ ಹಸಿವು ನೀಗಿಸಲು ಜೊತೆಯಾಗಿ ಕಲಿಯಲು ವಿದ್ಯಾರ್ಥಿಗಳು ಶಾಲಾ ಅಂಗಣಕ್ಕೆ ತಲುಪುವಾಗ ಅವರನ್ನು ಸ್ವಾಗತಿಸುವುದಕ್ಕಾಗಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಸಜ್ಜಾಗಿ ನಿಂತಿವೆ. ಒಂದುಗೂಡಿ, ಒಂದಾಗಿ, ಒಂದಾಗುವ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳನ್ನು ವಿದ್ಯಾಲಯಗಳು ಸ್ವಾಗತಿಸಿವೆ. ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ ಮಡಿಕೈ ಜಿವಿಎಚ್‌ಎಸ್‌ಎಸ್‌ನಲ್ಲಿ ಇಂದು ಬೆಳಿಗ್ಗೆ ಜರಗಿತು.  ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ  ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಶಾಸಕರು ಸಹಿತ ಹಲವು ಗಣ್ಯರು ಭಾಗವಹಿಸಿದರು. ಇದರ ಹೊರತಾಗಿ ಜಿಲ್ಲೆಯ 592 ಸಾರ್ವಜನಿಕ …

ಮನೆಯ ಬೆಡ್‌ರೂಮ್‌ನಲ್ಲಿ ಬಚ್ಚಿಡಲಾಗಿದ್ದ 33 ಕಿಲೋ ಗಾಂಜಾ ಪತ್ತೆ: ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಪೊಲೀಸರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ 33.05 ಕಿಲೋ ಗಾಂಜಾ ಪತ್ತೆ ಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಉಪ್ಪಳ ಸೋಂಕಾಲು ಕೊಡಂಗೆ ರಸ್ತೆಯ ಕೌಶಿಕ್ ನಿಲಯದ ಅಶೋಕ ಕೆ (25) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಗುಪ್ತ ಮಾಹಿತಿ ಲಭಿಸಿದನ್ವಯ ಪೊಲೀಸರು ಆರೋಪಿಯ ಮನೆಗೆ ಧಾಳಿ ನಡೆಸಿದ ಪರಿಶೀಲನೆಯಲ್ಲಿ  ಆ ಮನೆಯ ಬೆಡ್‌ರೂಂನೊಳಗೆ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ  ತುಂಬಿಸಿಡಲಾಗಿದ್ದ ಸ್ಥಿತಿಯಲ್ಲಿ ಗಾಂಜಾ ಪತ್ತೆಯಾಗಿದೆ. ಬಂಧಿತನು ಗಾಂಜಾ ವಿತgಣಾ ಜಾಲದ ಪ್ರಧಾನ ಕೊಂಡಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ವರಿಷ್ಠ …

ರಾಜ್ಯದಲ್ಲಿ ಕೋವಿಡ್‌ಗೆ ಮತ್ತೆ ಓರ್ವ ಬಲಿ: 1400 ದಾಟಿದ ಸೋಂಕಿತರ ಸಂಖ್ಯೆ

ಕೊಚ್ಚಿ: ರಾಜ್ಯದಲ್ಲಿ ಮತ್ತೆ ಹರಡತೊಡಗಿರುವ ಕೋವಿಡ್ 24 ವರ್ಷದ ಯುವತಿ ಪ್ರಾಣ ಅಪಹರಿ ಸಿದೆ.  ಕೋವಿಡ್ ಸೋಂಕು ತಗಲಿದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದರು. ಅದು ಫಲಕಾರಿ ಯಾಗದೆ ಅವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕಿ ತರ ಸಂಖ್ಯೆ ಈಗ 1400ರ ಗಡಿ ದಾಟಿದೆ.  ಕಳೆದ ೨೪ ತಾಸುಗಳಲ್ಲಿ ಮಾತ್ರವಾಗಿ 24 ಮಂದಿಯಲ್ಲಿ ಕೋವಿಡ್ ದೃಢೀಕರಿಸಲ್ಪಟ್ಟಿದೆ. ದೇಶದಲ್ಲಿ ಒಟ್ಟಾರೆಯಾಗಿ ಕೋವಿಡ್ ಸೋಂಕಿತರ ಸಂಖ್ಯೆ ೩೭೫೫ಕ್ಕೇರಿದೆ. ಇದರಲ್ಲಿ ೭ ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ವರದಿಗಳು ಸೂಚಿಸಿದೆ. …

ನಾಪತ್ತೆಯಾಗಿದ್ದ ಮಹಿಳೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ನಾಪತ್ತೆಯಾಗಿದ್ದ ಮಹಿಳೆ ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೈವಳಿಕೆ ಕಾಯರ್‌ಕಟ್ಟೆ ಬಳಿಯ ಮೂಡಂಬಿಕಾನ ನಿವಾಸಿ ದಿ| ಸತ್ಯನಾರಾಯಣ ಭಟ್‌ರ ಪತ್ನಿ ಶಂಕರಿ ಅಮ್ಮ (74) ಮೃತ ಮಹಿಳೆ. ಮೇ ೩೧ರಂದು ಬೆಳಿಗ್ಗಿನಿಂದ ಇವರು ನಾಪತ್ತೆಯಾಗಿದ್ದರು. ಸಂಬಂಧಿಕರು ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗದ  ಹಿನ್ನೆಲೆಯಲ್ಲಿ  ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು. ನಿನ್ನೆ ಸಂಬಂಧಿಕರು ಹಾಗೂ ನಾಗರಿಕರು ಹುಡುಕಾಡುತ್ತಿದ್ದಾಗ ಮಧ್ಯಾಹ್ನ ವೇಳೆ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ  ಕಾಸರಗೋಡು ಜನರಲ್ …

ಗ್ಯಾಸ್ ಏಜೆನ್ಸಿ ಅಂಗಡಿಯಿಂದ 2.95 ಲಕ್ಷರೂ. ಕಳವು

ಕಾಸರಗೋಡು: ಕಾಸರಗೋಡು ನಗರದ  ಹಳೆ ಪ್ರೆಸ್‌ಕ್ಲಬ್ ಜಂಕ್ಷನ್ ಬಳಿ ಕಾರ್ಯವೆಸಗುತ್ತಿರುವ ಭಾರತ್ ಗ್ಯಾಸ್  ಏಜೆನ್ಸಿ ಕಚೇರಿಗೆ ಕಳ್ಳರು ನುಗ್ಗಿ 2,95,360 ರೂ. ಕಳವುಗೈದಿದ್ದಾರೆ. ತಳಂಗರೆ ನಿವಾಸಿ ಆಯಿಷ ಎಂಬವರು ಗ್ಯಾಸ್ ಏಜೆನ್ಸಿಯನ್ನು ನಡೆಸುತ್ತಿದ್ದು ಆ ಬಗ್ಗೆ ಅವರು ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಈ ಸಂಸ್ಥೆ ಮಾಲಕರು ಬೆಳಿಗ್ಗೆ ಬಾಗಿಲು ತೆರೆದಾಗಲೇ ಕಳವು ನಡೆದ ವಿಷಯ  ಗಮನಕ್ಕೆ ಬಂದಿದೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಅಲ್ಲಿಂದ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ.  ಕಳ್ಳರ …

ಕಾರು-ಬಸ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

 ಮಂಜೇಶ್ವರ:  ಕಾರು ಮತ್ತು ಬಸ್ ಮಧ್ಯೆ ಉಂಟಾದ ಅಪಘಾತ ದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ವರ್ಕಾಡಿ  ಬಳಿಯ ತೋಕೆ ನಿವಾಸಿ ಸಿಪ್ರಿಯನ್ ಡಿ’ಸೋಜಾರ ಪುತ್ರ ಕೆಲ್ವಿನ್ ಡಿ’ಸೋಜಾ (18)  ನಿನ್ನೆ ಮುಂಜಾನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ತೋಕೆ ನಿವಾಸಿಗಳಾದ ಪ್ರಜ್ವಲ್ (24), ಪ್ರೀತಂ (19) ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.  ಮೇ 30ರಂದು ಬೆಳಿಗ್ಗೆ ಈ ಮೂರು ಮಂದಿ ಕಾರಿನಲ್ಲಿ  ಮಂಜೇಶ್ವರದಿಂದ ಹೊಸಂಗಡಿಯತ್ತ ತೆರಳುತ್ತಿದ್ದಾಗ ಮಂಜೇಶ್ವರ ಸಮೀಪದ …

ಕರ್ನಾಟಕ ಮದ್ಯ ಕೈವಶವಿರಿಸಿದ್ದಾತ ಸೆರೆ

ಕುಂಬಳೆ:  ಕರ್ನಾಟಕ ಮದ್ಯ ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬೇಕೂರು ಸುಭಾಷ್‌ನಗರ ನಿವಾಸಿ ಸುಶೀಲನ್ (55) ಎಂಬಾತನನ್ನು ಕುಂಬಳೆ ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಅಬಕಾರಿ ಇನ್‌ಸ್ಪೆಕ್ಟರ್ (ಗ್ರೇಡ್) ಅನೀಶ್ ಕುಮಾರ್ ಎಂ ನೇತೃತ್ವದ ತಂಡ ಬಂಧಿಸಿದೆ. ಆರೋ ಪಿಯ ಕೈಯಿಂದ 8.82 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಖಿಲೇಶ್ ಎಂ.ಎಂ, ಪ್ರಜಿತ್, ಪಿ. ಜಿತಿನ್, ಸಿಇಒ ಚಾಲಕ ಪ್ರವೀಣ್ ಕ ಕುಮಾರ್ ಪಿ ಎಂಬಿವರಿದ್ದರು.

ಟ್ರಾನ್ಸ್‌ಫಾರ್ಮರ್‌ನ ಮೇಲೆ ಬಿದ್ದ ಮರದ ರೆಂಬೆ: ನಾಲ್ಕು ವಿದ್ಯುತ್ ಕಂಬಗಳು ನಾಶ

ಸೀತಾಂಗೋಳಿ: ಕಟ್ಟತ್ತಡ್ಕದಲ್ಲಿ ಆಲದ ಮರದ ರೆಂಬೆ ತುಂಡಾಗಿ ಟ್ರಾನ್ಸ್‌ಫಾರ್ಮರ್‌ನ ಮೇಲೆ ಬಿದ್ದಿದ್ದು ಇದರಿಂದ ನಾಲ್ಕು ವಿದ್ಯುತ್ ಕಂಬಗಳು ನಾಶಗೊಂಡಿವೆ. ಇದರಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆ ಎದುರಾಯಿತು. ಮೊನ್ನೆ ಸುರಿದ ಭಾರೀ ಮಳೆ ಹಾಗೂ ಗಾಳಿ ವೇಳೆ ಈ ಘಟನೆ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಇದು ಸಂಭವಿಸಿರುವುದರಿಂದ ಭಾರೀ ಅಪಾಯ ತಪ್ಪಿಹೋಗಿದೆ. ಟ್ರಾನ್ಸ್‌ಫಾರ್ಮರ್‌ನತ್ತ ಬಾಗಿ ನಿಂತ ಮರದ ರೆಂಬೆಗಳನ್ನು ಕಡಿದು ತೆರವುಗೊಳಿಸಬೇಕೆಂದು ನಾಗರಿಕರು ಹಲವು ಬಾರಿ ಕೆಎಸ್‌ಇಬಿ ಅಧಿಕಾರಿಗಳಲ್ಲಿ ತಿಳಿಸಿದ್ದರ ಅದಕ್ಕೆ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಜುಗಾರಿ ಕೇಂದ್ರಕ್ಕೆ ಪೊಲೀಸ್ ದಾಳಿ: ಇಬ್ಬರ ಸೆರೆ, ಹಲವರು ಪರಾರಿ

ಕುಂಬಳೆ: ಕೊಯಿಪ್ಪಾಡಿ ಕಡಪ್ಪುರದಲ್ಲಿ ಜುಗಾರಿ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು  ಇಬ್ಬರನ್ನು ಬಂಧಿಸಿದ್ದಾರೆ. ಹಲವರು ಓಡಿ ಪರಾರಿಯಾಗಿದ್ದಾರೆ. ಬಂಧಿತರ ಕೈಯಿಂದ  10,100  ರೂ. ವಶಪಡಿಸಲಾಗಿದೆ. ಕೊಯಿಪ್ಪಾಡಿ ಕಡಪ್ಪುರದ ಮೊಹಮ್ಮದ್ ಕುಂಞಿ (55), ಕುಬಣೂರಿನ ಕಿರಣ್ (35) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.   ನಿನ್ನೆ ಮುಂಜಾನೆ ಜುಗಾರಿ ದಂಧೆ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಮಾದಕವಸ್ತು ವಶ ಓರ್ವ ಸೆರೆ

ಕಾಸರಗೋಡು: ಮುಟ್ಟ ತ್ತೋಡಿ   ಬಾರಿಕ್ಕಾಡು ಕಲ್ಲಕಟ್ಟೆ  ನಿವಾಸಿ ಅನೀಶ್ ಬಿ (36) ಎಂಬಾತನನ್ನು ಮಾದಕ ವಸ್ತುವಾದ 3.49 ಗ್ರಾಂ ಮೆಥಾಫಿಟಾಮಿನ್ ಸಹಿತ ಕಾಸರ ಗೋಡು ಅಬಕಾರಿ ತಂಡ ಬಂಧಿಸಿ ಕೇಸು ದಾಖಲಿಸಿ ಕೊಂಡಿದೆ. ಕಾಸರಗೋಡು ಎಕ್ಸೈಸ್ ಸ್ಪೆಶಲ್ ಸ್ಕ್ವಾಡ್‌ನ ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶೋ ಬ್ ಕೆ.ಎಸ್ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಆಫೀ ಸರ್ (ಗ್ರೇಡ್) ಸಿ.ಕೆ.ವಿ ಸುರೇಶ್, ಪ್ರಿವೆಂಟೀವ್ ಆಫೀಸರ್‌ಗಳಾದ ಅಜೀಶ್ ಸಿ, ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ  ಶಿಜಿತ್ ವಿ.ವಿ ಮತ್ತು ಚಾಲಕ …