ಜಿಲ್ಲೆಯ ಹಲವೆಡೆಗಳಲ್ಲಿ ಅಬಕಾರಿ ಕಾರ್ಯಾಚರಣೆ: ಮದ್ಯ ವಶ

ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ನಗರದ ಕರಂದಕ್ಕಾಡ್‌ನಲ್ಲಿ  ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಶ್ರೀನಿವಾಸನ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ  ಖಾಸಗಿ ಹಿತ್ತಿಲೊಂದರಲ್ಲಿ ಬಚ್ಚಿಡಲಾಗಿದ್ದ 180 ಎಂ.ಎಲ್‌ನ 37 ಪ್ಯಾಕೆಟ್ (6.66 ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದೇತಂಡದ ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್ ನೇತೃತ್ವದ ಅಬಕಾರಿ ತಂಡ ಕೂಡ್ಲು ವಿವೇಕಾನಂದ ನಗರದಲ್ಲಿ ನಿನ್ನೆ …

ವ್ಯಾಪಕಗೊಳ್ಳುತ್ತಿರುವ ಕಡಲ್ಕೊರೆತ: ಮಣಿಮುಂಡ ಸಹಿತ ಕಡಲತೀರ : ಪ್ರದೇಶದ ಜನರ ಮನೆಗಳು ಸಮುದ್ರಪಾಲಾಗುವ ಭೀತಿ

ಉಪ್ಪಳ: ಮಂಗಲ್ಪಾಡಿ, ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳ ಕಡಲತೀರಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ರಸ್ತೆಗಳು ಹಾಗೂ ಮನೆಗಳು ಅಪಾಯದಂಚಿನಲ್ಲಿವೆ. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಣಿಮುಂಡದಲ್ಲಿ ನಾಲ್ಕು ಮನೆಗಳು ಯಾವುದೇ ಕ್ಷಣ ಸಮುದ್ರಪಾಲಾಗುವ ಭೀತಿ ನೆಲೆಗೊಂಡಿದೆ. ಇಲ್ಲಿನ ಜಯರಾಮ, ಕೇಶವ, ಅಲಿಮ, ಅವ್ವಾಬಿ ಎಂಬವರ ಮನೆ ಅಪಾಯದಂಚಿನಲ್ಲಿದೆ. ಹಲವು ದಿನಗಳಿಂದ ಕಡಲ್ಕೊರೆತ ವ್ಯಾಪಕಗೊಂಡಿದ್ದು, ನೀರು ಮನೆಗೆ ಬಡಿದು ಅಂಗಳತನಕ ತಲುಪುತ್ತಿದೆ. ಮನೆ ಸುತ್ತಲೂ ಮರಳು ತುಂಬಿಕೊಂಡಿದ್ದು, ಇಲ್ಲಿ ವಾಸ ಮಾಡಲು ಅಸಾಧ್ಯವಾಗುತ್ತಿದೆ. ಈ ಪರಿಸರದಲ್ಲಿ ತಡೆಗೋಡೆ ನಿರ್ಮಿಸಲು …

ಭ್ರಷ್ಟಾಚಾರ ಆಡಳಿತ ಆರೋಪಿಸಿ ಕುಂಬಳೆ ಪಂಚಾಯತ್ ಕಚೇರಿಗೆ ಸಿಪಿಎಂ ಮಾರ್ಚ್

ಕುಂಬಳೆ: ಕುಂಬಳೆ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಆಡಳಿತ ವ್ಯಾಪಕಗೊಂಡಿರುವುದಾಗಿ ಆರೋಪಿಸಿ ಸಿಪಿಎಂ ಕುಂಬಳೆ ಲೋಕಲ್ ಕಮಿಟಿ ಪಂಚಾಯತ್ ಕಚೇರಿಗೆ ನಿನ್ನೆ ಮಾರ್ಚ್ ನಡೆಸಿತು. ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಉದ್ಘಾಟಿಸಿದರು. ಕುಂಬಳೆ ಪಂಚಾಯತ್‌ನಲ್ಲಿ ಆಡಳಿತ ನಡೆಸುವವರು ಕೊಳ್ಳೆಹೊಡೆಯುವ ತಂಡದಂತೆ ವರ್ತಿಸುತ್ತಿದ್ದಾರೆಂದು ಅವರು ಆರೋಪಿಸಿದರು. ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆದು ಅಭಿವೃದ್ಧಿ ಇಲ್ಲದಂತೆ ಮಾಡಲಾಗಿದೆ.   ಪಂಚಾಯತ್ ಆಡಳಿತ ಸಮಿತಿ ಜನಪರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು    ಮುಟ್ಟಿದ್ದೆಲ್ಲದರಲ್ಲೂ ಭ್ರಷ್ಟಾಚಾರ ನಡೆಸಿ ಕುಂಬಳೆಯ ಜನತೆಗೆ ಸವಾಲಾಗಿ ಪರಿಣಮಿಸಿದೆಯೆಂದು ಸುಬೈರ್ ತಿಳಿಸಿದರು.  ಲೋಕಲ್ ಸೆಕ್ರೆಟರಿ …

ಕಾಸರಗೋಡಿನಲ್ಲಿ ಕನ್ನಡವನ್ನು ಬಲಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಪಾತ್ರ ಮಹತ್ತರ- ವಿಶಾಲಾಕ್ಷ ಪುತ್ರಕಳ

ಕಾಸರಗೋಡು: ಕಾಸರಗೋಡಿನಲ್ಲಿ ಕನ್ನಡವನ್ನು ಬಲಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಪಾತ್ರ ಮಹತ್ತರವಾದುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ, ನಿವೃತ್ತ ಅಧ್ಯಾಪಕ ವಿಶಾ ಲಾಕ್ಷ ಪುತ್ರಕಳ ನುಡಿದರು. ಕಾಸರ ಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ನಿನ್ನೆ ಸಂಜೆ ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃ ತಿಕ ಭವನದಲ್ಲಿ ನಡೆದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಪತ್ರಿಕೆಗಳು ಸವಾಲುಗಳನ್ನು ಎದುರಿಸುತ್ತಿವೆ. ಹೊಸ ತಲೆಮಾರು …

ಹೃದಯಾಘಾತ: ಟೈಲರ್ ನಿಧನ

ಮಂಜೇಶ್ವರ: ಪೊಸೋಟು ಬಳಿಯ ಚಾದಿಪಡ್ಪು ನಿವಾಸಿ ಹಿರಿಯ ಟೈಲರ್ ನಾರಾಯಣ (70) ನಿಧನರಾದರು. ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದÄ, ನಿನ್ನೆ ಬೆಳಿಗ್ಗೆ ಎದ್ದೇಳಲಿಲ್ಲ. ಮನೆಯವರು ನೋಡಿದಾಗ ನಿಧನಹೊಂದಿದ್ದರು. ಹೊಸಂಗಡಿ ಪೇಟೆಯಲ್ಲಿ ಹಾಗೂ ಮನೆ ಸಮೀಪದಲ್ಲಿ ಟೈಲರಿಂಗ್ ನಡೆಸುತ್ತಿದ್ದರು. ಮೃತರು ಪತ್ನಿ ಭಾರತಿ, ಸಹೋದರಿಯರಾದ ಕಲ್ಯಾಣಿ, ಯಶೋದ, ಭವಾನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬಂಗ್ರಮಂಜೇಶ್ವರ ರಸ್ತೆ ತಿರುವಿನಲ್ಲಿ ಅಪಾಯ ಆಹ್ವಾನಿಸಿ ವಿದ್ಯುತ್ ಕಂಬದ ಆಧಾರ ತಂತಿ

ಮಂಜೇಶ್ವರ: ಬಂಗ್ರಮಂಜೇಶ್ವರ ರಸ್ತೆಯ ತಿರುವೊಂದರಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರತಂತಿ ವಾಹನ ಸವಾರರಿಗೆ ಆತಂಕ ಉಂಟುಮಾಡುತ್ತಿದೆ. ರಸ್ತೆ ಬದಿಯಲ್ಲಿ ರುವ ಈ ತಂತಿ ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಎದುರು ಭಾಗದಿಂದ ಬರುವ ವಾಹನಗಳಿಗೆ ಸರಿದುಹೋಗಲು ಸ್ಥಳ ನೀಡುವ ಮಧ್ಯೆ ತಂತಿಗೆ ಬಡಿದು ಅಪಾಯ ಉಂಟಾಗುವ ಭೀತಿ ಇದೆ. ಬಂಗ್ರಮಂಜೇಶ್ವರದ ಈ ದಾರಿಯಾಗಿ ಕಟ್ಟೆಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಗೆ ಹೊಸಂಗಡಿ  ಪೇಟೆಯಿಂದ ದಿನನಿತ್ಯ ನೂರಾರು ವಾಹನಗಳು ಸಂಚರಿ ಸುತ್ತಿವೆ. ಅಪಾಯಕ್ಕೆ ಆಹ್ವಾನ …

ಮತ್ತೆ ಮಳೆ ತೀವ್ರ: ಮುನ್ನೆಚ್ಚರಿಕೆ

ತಿರುವನಂತಪುರ: ರಾಜ್ಯದಲ್ಲಿ ಮತ್ತೆ ಮಳೆ ತೀವ್ರಗೊಳ್ಳುತ್ತಿದೆ. ಇಂದಿನಿಂದ ಮತ್ತೆ ಕೆಲವೆಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕಲ್ಲಿಕೋಟೆ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ನಾಳೆ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಹಾಗೂ ಶುಕ್ರವಾರ ಎರ್ನಾಕುಳಂ, ಕಲ್ಲಿಕೋಟೆ, ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಝಾರ್ಖಂಡ್‌ನ ಮೇಲ್ಭಾಗ ದಲ್ಲಿ ವಾಯುಭಾರ ಕುಸಿತ ನೆಲೆಗೊಂಡ ಕಾರಣ ಮಳೆ ತೀವ್ರ ವಾಗಿ …

ಬೆದ್ರಡ್ಕ: ಭಾರತೀಯ ಸೇನೆಗೆ ಆಯ್ಕೆಗೊಂಡ ಆಟೋ ಚಾಲಕನಿಗೆ ಸನ್ಮಾನ

ಬೆದ್ರಡ್ಕ: ಭಾರತೀಯ ಸೇನೆಗೆ ಆಯ್ಕೆಗೊಂಡ ಬೆದ್ರಡ್ಕ ನಿವಾಸಿ ರಂಜಿತ್‌ರನ್ನು ಬೆದ್ರಡ್ಕದ ಯುವ ತೇಜಸ್ ತಂಡದ ನೇತೃತ್ವದಲ್ಲಿ ಆಟೋಚಾಲಕರು ಸನ್ಮಾನಿಸಿ ಗೌರವಿಸಿದರು. ಈ ಹಿಂದೆ ಬೆದ್ರಡ್ಕದಲ್ಲಿ ಆಟೋಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ರಂಜಿತ್ ಇತ್ತೀಚೆಗೆ ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದಾರೆ. ಈ ಮಧ್ಯೆ ಊರಿಗೆ ಬಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಂಜಿತ್ ಭಾರತೀಯ ಸೇನೆಗೆ ಆಯ್ಕೆಗೊಂಡಿ ರುವುದು ನಾಡಿಗೆ ಹೆಮ್ಮೆ ತಂದಿದೆ. ಅವರ ಪ್ರಯತ್ನ, ನಿಷ್ಠೆ, ಸಾಧನೆ ಪ್ರೇರಣಾದಾಯಕ. ಅವರ ಸಾಧನೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ರೈತಸಂಘ ಕುಡಾಲು ಮೇರ್ಕಳ ವಿಲ್ಲೇಜ್ ಸಮ್ಮೇಳನ

ಉಪ್ಪಳ: ಭಾರತದ ಕೃಷಿ ಪರಂಪರೆಯನ್ನು ಮರೆತು ಕೇಂದ್ರ ಸರಕಾರ ಆಡಳಿತ ಮಾಡುತ್ತಿದೆ. ಇದರಿಂದ ಕೃಷಿಕರು ಕಷ್ಟ ಅನುಭ ವಿಸುತ್ತಿದ್ದಾರೆ ಎಂದು ಕುಡಾಲ್ ಮೇರ್ಕಳ ರೈತ ಸಂಘದ ವಿಲೇಜ್ ಸಮ್ಮೇಳನ ವನ್ನು ಸುಬ್ಬಯ್ಯಕಟ್ಟೆಯಲ್ಲಿ ಉದ್ಘಾಟಿಸಿದ ರಾಜ್ಯ ಸಮಿತಿ ಸದಸ್ಯ ಕೆ. ಆರ್. ಜಯಾನಂದ ನುಡಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ, ಬಿ ಸೀತಾರಾಮ ಶೆಟ್ಟಿ, ಎಸ್ ಬಾಲಕೃಷ್ಣ ಶೆಟ್ಟಿ, ಬಿ.ಎ ಖಾದರ್,  ಬಿ.ಎ ಲತೀಫ್,  ಪುಷ್ಪ ಭಾಗವಹಿ ಸಿದರು. ಪ್ರತಿನಿಧಿ ಸಮ್ಮೇಳನದಲ್ಲಿ ಹಿರಿಯ ಕೃಷಿಕರಾದ ತಿಮ್ಮಣ್ಣ ಶೆಟ್ಟಿ ಎಸ್, ಜೋಸೆಫ್ ಕ್ರಾಸ್ತ, …

ಸೀಮೆ ಎಣ್ಣೆ ಬೆಲೆ ಲೀಟರ್‌ಗೆ 4 ರೂ. ಹೆಚ್ಚಳ

ಕಾಸರಗೋಡು: ರಾಜ್ಯದಲ್ಲಿ ರೇಶನ್ ಸೀಮೆ ಎಣ್ಣೆ ಬೆಲೆಯಲ್ಲಿ ಲೀಟರ್‌ಗೆ 4 ರೂ. ಹೆಚ್ಚಿಸಲಾಗಿದೆ. ಪ್ರಸ್ತುತ ಲೀಟರ್‌ಗೆ 61 ರೂಪಾಯಿ ಆಗಿದ್ದು, ಅದನ್ನು  65 ರೂ.ಗೇರಲಿದೆ. ಬೆಲೆಯೇರಿಕೆಯನ್ನು ಆಹಾರ ಸಾರ್ವಜನಿಕ ವಿತರಣೆ ಇಲಾಖೆ ಶೀಘ್ರ ಜ್ಯಾರಿಗೆ ತರಲಿದೆ.  ಬೆಲೆ ಹೆಚ್ಚಿಸುವಾಗ  ಹೆಚ್ಚುವರಿಯಾಗಿ ಲಭಿಸುವ ಮೊತ್ತ ಕೇಂದ್ರ, ರಾಜ್ಯ ಸರಕಾರಗಳಿಗೆ ಲಭಿಸಲಿದೆ. ಇದೇ ವೇಳೆ ರಾಜ್ಯದಲ್ಲಿ ರೇಶನ್ ಅಂಗಡಿಗಳಲ್ಲಿ  ಸೀಮೆ ಎಣ್ಣೆ ವಿತರಣೆ ಮಂದಗತಿಯಲ್ಲಿದೆ. ಕೇಂದ್ರ ಮಂಜೂರು ಮಾಡಿದ 56.76 ಲಕ್ಷ ಲೀಟರ್ ಸೀಮೆ ಎಣ್ಣೆಯಲ್ಲಿ 20 ಶೇ. ಮಾತ್ರಕೇರಳ …