ಅನಧಿಕೃತ ಮರಳು ಸಾಗಾಟ: 2ವಾಹನ ವಶ; ಕೇಸು ದಾಖಲು

ಮಂಜೇಶ್ವರ: ದಾಖಲುಪತ್ರಗಳಿಲ್ಲದೆ ಅನಧಿಕೃತವಾಗಿ ಹೊಳೆಯಿಂದ ಮರಳು ಸಾಗಿಸುತ್ತಿದ್ದ ಓಮ್ನಿ, ಟಿಪ್ಪರ್ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಚಾಲಕರನ್ನು ಸೆರೆ ಹಿಡಿದಿದ್ದಾರೆ. ಉಪ್ಪಳ ಪೇಟೆಯಲ್ಲಿ ವಾಹನ ತಪಾಸಣೆ ವೇಳೆ ಪತ್ವಾಡಿ ಭಾಗದಿಂದ ಆಗಮಿಸಿದ ಟಿಪ್ಪರ್ ಲಾರಿಯನ್ನು ತಪಾಸಣೆ ನಡೆಸಿದಾಗ ಅನಧಿಕೃತವಾಗಿ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಲಾರಿಯನ್ನು ವಶಕ್ಕೆ ತೆಗೆದು ಚಾಲಕ ಕುಂಜತ್ತೂರು ಬಾಚಳಿಕೆ ನಿವಾಸಿ ಮುಹಮ್ಮದ್ ಅಶ್ರಫ್ ಎಂ. (38) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಉಪ್ಪಳ ಗೇಟ್ ಬಳಿ ಪತ್ವಾಡಿ ಭಾಗದಿಂದ ಆಗಮಿಸಿದ …

ಪತ್ನಿಯೊಂದಿಗೆ ಸಿಟ್ಟುಗೊಂಡು ಬಾಲಕಿಯೊಂದಿಗೆ ಸ್ನೇಹ; ಲೈಂಗಿಕ ಕಿರುಕುಳ; ವ್ಲೋಗರ್ ಸೆರೆ

ಕಾಸರಗೋಡು: ಮದುವೆ ಯಾಗುವುದಾಗಿ ಭರವಸೆಯೊಡ್ಡಿ ೧೫ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವ್ಲೋಗರ್‌ನ್ನು ಸೆರೆಹಿಡಿಯಲಾಗಿದೆ. ಕುಂಬಳೆ ಬಳಿಯ ಕೊಡ್ಯಮ್ಮೆ ಚೇಪಿನಡ್ಕ ನಿವಾಸಿ ಮುಹಮ್ಮದ್ ಸಾಲಿ (35) ಎಂಬಾತನನ್ನು ಬಂಧಿಸಲಾಗಿದೆ. ವಿದೇಶದಿಂದ ಊರಿಗೆ ಬರುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊಯಿಲಾಂಡಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ. ಶಾಲು ಕಿಂಗ್ ಮೀಡಿಯಾ, ಶಾಲು ಕಿಂಗ್ ವ್ಲೋಗ್ಸ್, ಶಾಲು ಕಿಂಗ್ ಫ್ಯಾಮಿಲಿ ಎಂಬೀ ಹೆಸರುಗಳಲ್ಲಿ ಕಳೆದ ಏಳು ವರ್ಷಗಳಿಂದ ಈತ ಸಾಮಾಜಿಕ ತಾಣಗಳಲ್ಲಿ ಸಕ್ರಿಯನಾಗಿದ್ದನು. ಪತ್ನಿಯೊಂದಿಗೆ ಸಿಟ್ಟುಗೊಂಡಿದ್ದ ಸಂದರ್ಭದಲ್ಲಿ ಹದಿನೈದರ ಹರೆಯದ …

ವಿದ್ಯುತ್ ತಂತಿಗೆ ಆವರಿಸಿಕೊಂಡ ಕಾಡು ಬಳ್ಳಿಗಳು: ಚೂರಿತ್ತಡ್ಕದಲ್ಲಿ ಅಪಾಯಭೀತಿ

ಕುಂಬಳೆ: ಕುಂಬಳೆ ಪಂಚಾಯ ತ್‌ನ ಎಂಟನೇ ವಾರ್ಡ್‌ನಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳು ತೋರಿಸಿದ ಜಾಗ್ರತೆಯನ್ನು ಐದನೇ ವಾರ್ಡಾದ ಚೂರಿತ್ತಡ್ಕ ಸಂತೋಷ್‌ನಗರದಲ್ಲೂ ತೋರಿಸಬೇಕೆಂದು ನಾಗರಿಕರು ಆಗ್ರಹಪಡುತ್ತಿದ್ದಾರೆ. ಚೂರಿತ್ತಡ್ಕ ಸಂತೋಷ್‌ನಗರದಲ್ಲಿ ಕಾಡುಬಳ್ಳಿಗಳು ವಿದ್ಯುತ್ ಕಂಬಕ್ಕೆ  ಆವರಿಸಿಕೊಂಡಿದೆ. ಕಾಡುಬಳ್ಳಿಗಳು ವಿದ್ಯುತ್ ಕಂಬದಿಂದ ತಂತಿಗೆ ತಲುಪಿದೆ. ಮಳೆ ಸುರಿಯುವ ವೇಳೆ ಈ ಬಳ್ಳಿಗಳ ಮೂಲಕ ವಿದ್ಯುತ್ ಹರಿಯಲು ಸಾಧ್ಯತೆಯಿದ್ದು, ಇದು ಆತಂಕ ಮೂಡಿಸುತ್ತಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಇದೇ ರೀತಿ ಎಂಟನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬದಲ್ಲಿ ಕಾಡು ಬಳ್ಳಿಗಳು ಆವರಿಸಿಕೊಂಡಿರುವ ಬಗ್ಗೆ ‘ಕಾರವಲ್’ ಮೀಡಿಯ …

ರಾಷ್ಟ್ರದ ಧ್ವಜ ಹಾರಾಡಲು ಹುತಾತ್ಮ ಯೋಧರ ಉಸಿರೇ ಕಾರಣ- ಕೊಂಡೆವೂರು, ಕಾರ್ಗಿಲ್ ವಿಜಯ ದಿವಸ್‌ನಲ್ಲಿ ಅಜಿತ್ ಹನುಮಕ್ಕನವರ್

ಉಪ್ಪಳ: ಭಾರತದ ಸಾರ್ವ ಭೌಮತೆ, ಶಾಂತಿ, ಸಮಾಧಾನಗಳು ನೆಲೆಗೊಳ್ಳಲು, ಭಾರತೀಯ ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರಾಡಲು ವೀರ ಹುತಾತ್ಮ ಸೈನಿಕರ ಉಸಿರು ಕಾರಣ ಎಂದು ರಾಷ್ಟಿçÃಯ ಚಿಂತಕ ಅಜಿತ್ ಹನುಮಕ್ಕನವರ್ ಅಭಿಪ್ರಾಯ ಪಟ್ಟರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶನಿವಾರ ನಡೆದ ‘ಕಾರ್ಗಿಲ್ ವಿಜಯ್ ದಿವಸ್’ ಆಚ ರಣೆ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿ ದರು. ಕಾರ್ಗಿಲ್ ಯುದ್ದದ ಮೊದಲ ಹುತಾತ್ಮ ಕ್ಯಾಪ್ಟನ್ ಸೌರಬ್ ಕಾಲಿಯಾ ರನ್ನು ಚಿತ್ರಹಿಂಸೆಗೊಳಪಡಿಸಿದ ಮೃತದೇಹವನ್ನು ಪಾಕಿಸ್ತಾನೀಯರು ಭಾರತಕ್ಕೆ ಹಿಂತಿರುಗಿಸಿದ್ದರು. ಆದರೆ …

ಕೂಲಿ ಕಾರ್ಮಿಕ ನಿಧನ

ಬಾಯಾರು: ಪೆರುವಾಯಿ ಅಡ್ವಾಯಿ ನಿವಾಸಿ ಪ್ರಸ್ತುತ ಬಳ್ಳೂರು ಓಟೆಪಡ್ಪುನಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ ವೆಂಕಪ್ಪ ನಾಯ್ಕ (54) ನಿಧನ ಹೊಂದಿದರು. ಈ ಹಿಂದೆ ಹಲವು ವರ್ಷಗಳ ಕಾಲ ಕೊಲ್ಲಿಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ರೇವತಿ, ಸಹೋದರರಾದ ಮಾಲಿಂಗ, ಸದಾಶಿವ, ಬಾಲಕೃಷ್ಣ, ಗೋಪಾಲಕೃಷ್ಣ, ಸಹೋದರಿಯರಾದ ಶಶಿಕಲಾ, ರುಕ್ಮಿಣಿ, ಲಕ್ಷ್ಮಿ, ಕಮಲ, ಸೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದ ರರಾದ ವಾಮನ, ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ.

ಜಾತಿ ಜನಗಣತಿಯಲ್ಲಿ ತೀಯಾರನ್ನು ಪ್ರತ್ಯೇಕ ಸಮುದಾಯವಾಗಿ ದಾಖಲಿಸಬೇಕು- ತೀಯಾ ಮಹಾಸಭಾ

ಕಾಸರಗೋಡು: ಮುಂದಿನ ವರ್ಷ ನಡೆಯಲಿರುವ ಜಾತಿ ಜನಗಣತಿಯಲ್ಲಿ ಮಲಬಾರಿನಲ್ಲಿರುವ ಸುಮಾರು 60 ಲಕ್ಷ ಜನಸಂಖ್ಯೆಯುಳ್ಳ ತೀಯÁರನ್ನು ಪ್ರತ್ಯೇಕ ಸಮುದಾಯ ವಾಗಿ ಸರ್ಕಾರದ ದಾಖಲೆಗಳಲ್ಲಿ ಸೇರಿಸಬೇಕೆಂದು ತೀಯಾ ಮಹಾ ಸಭಾದ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಈ ಸಮುದಾಯಕ್ಕೆ ಕೇವಲ ಉಪ ಜಾತಿಯೆಂಬ ಪರಿಗಣನೆಯ ಮೂಲಕ ಅವಕಾಶ ನಿರಾಕರಿಸುವುದು ಅನ್ಯಾ ಯವಾಗಿದೆ. 2026ರ ಜನದಯಗಣತಿ ಯಲ್ಲಿ ತೀಯಾ ಸಮುದಾಯದ ಬೇಡಿಕೆಯನ್ನು ಪರಿಗಣಿಸಲು ಸರಕಾರ ಮತ್ತು ಸಂಬAಧಪಟ್ಟ ಅಧಿಕಾರಿಗಳು ಸಿದ್ಧರಾಗಬೇಕು ಎಂದು ಉದಯಗಿರಿ ಶ್ರೀ ಹರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ …

ಶ್ರೀ ವಿಶ್ವ ಬ್ರಾಹ್ಮಣ ಸೇವಾ ಸಂಘ ವಾರ್ಷಿಕ ಮಹಾಸಭೆ, ವಿನಂತಿ ಪತ್ರ ಬಿಡುಗಡೆ

ಕಾಸರಗೋಡು: ವಿಶ್ವಬ್ರಾಹ್ಮಣ ಸೇವಾ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಇವರ ಅಧ್ಯಕ್ಷತೆಯಲ್ಲಿ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಜರಗಿತು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆ.ಜಿ. ಗಣೇಶ ಆಚಾರ್ಯ ಮಂಡಿಸಿದರು. ನಲ್ಕ ಪ್ರವೀಣ್ ಕುಮಾರ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಇದೇ ವೇಳೆ ಶ್ರೀ ವಿಶ್ವಕರ್ಮ ಮಹಿಳಾ ಸಂಘ, ಯುವಕ ಸಂಘ ವಾರ್ಷಿಕ ಮಹಾಸಭೆ ಜರಗಿತು. ಹೇಮಲತಾ ಗಣೇಶ ಆಚಾರ್ಯ ವಾರ್ಷಿಕ ವರದಿ, ಗಾಯತ್ರಿ ಭವಾನಿ ಶಂಕರ ಆಚಾರ್ಯ ಲೆಕ್ಕಪತ್ರ, ಯುವಕ ಸಂಘದ ಕಾರ್ಯದರ್ಶಿ ಕೆರೆಮನೆ …

ಎಡನೀರು ಮಠಕ್ಕೆ ಹೊರೆಕಾಣಿಕೆ ಸಮರ್ಪಣೆ

ಎಡನೀರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಯವರ ಪಂಚಮ ಚಾತುರ್ಮಾಸ್ಯ ವ್ರತಾಚಾರಣೆ ಅಂಗವಾಗಿ ಕಾಸರಗೋಡು ವಲಯ ಸಮಿತಿ ವತಿಯಿಂದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಆರಂಭಗೊಂಡು ಮಠಕ್ಕೆ ಸಮರ್ಪಿಸಲಾಯಿತು. ಈ ವೇಳೆ ವಲಯ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರದಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್, ಕೆ.ವಿ. ತಿರುಮಲೇಶ ಹೊಳ್ಳ, ಕೆ.ವಿ. ಶೇಷಾದ್ರಿ …

ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿಯಿಂದ ಚಿತ್ರರಚನೆ ಸ್ಪರ್ಧೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಚಿತ್ರರಚನೆ ಸ್ಪರ್ಧೆ ನಡೆಸಲಾಯಿತು. ಎ.ಕೆ.ಪಿ.ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಪಿ., ಯು.ಪಿ. ವಿಭಾಗದ ಹಲವು ವಿದ್ಯಾರ್ಥಿಗಳು ಭಾಗವಹಿಸಿದರು. ಜಿಲ್ಲಾ ಅಧ್ಯಕ್ಷ ಸುಗುಣನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದು, ರಾಜ್ಯ ಕಾರ್ಯದರ್ಶಿ ಹರೀಶ್ ಉದ್ಘಾಟಿಸಿದರು. ರಾಜೇಂದ್ರನ್ ಸ್ವಾಗತಿಸಿ, ಪ್ರಜೀತ್ ಎನ್.ಕೆ. ವಂದಿಸಿದರು. ಸುಧೀರ್ ಕೆ., ಶರೀಫ್, ರಮೇಶನ್, ಪ್ರಜೀಶ್, ಸುರೇಶ್ ಬಿ.ಜೆ, ಸನ್ನಿ ಜೇಕಬ್, ಮನು, ಮನೀಶ್, ಶ್ರೀಕಾಂತ್ ಶುಭ ಹಾರೈಸಿದರು. ಎಲ್.ಪಿ. ವಿಭಾಗ …