‘ದಿ ಕೇರಳ ಸ್ಟೋರಿ’ ನಿರ್ದೇಶಕರಿಗೆ ರಾಷ್ಟ್ರೀಯ ಪುರಸ್ಕಾರ: ಮುಖ್ಯಮಂತ್ರಿ ಆಕ್ರೋಶ

ತಿರುವನಂತಪುರ: ನಿನ್ನೆ ಪ್ರಕಟಿಸಲಾದ 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ದಿ ಕೇರಳಸ್ಟೋರಿ’ ಎಂಬ ಸಿನಿಮಾ ನಿರ್ದೇಶಿಸಿದ  ಸುದೀಪ್ರೋ ಸೇನ್‌ರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿದುದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಪುಗಾರರು ಭಾರತೀಯ ಚಿತ್ರರಂಗದ  ಹೆಮ್ಮೆಯ ಸಂಪ್ರದಾಯಕ್ಕೆ ದ್ರೋಹ ಬಗೆದಿದ್ದಾರೆ. ಕೇರಳವನ್ನು ಕೆಣಕುವ ಮತ್ತು ಕೋಮುವಾದವನ್ನು ಹರಡುವ ಉದ್ದೇಶದಿಂದ ಸುಳ್ಳುಗಳ ಮೇಲೆ ನಿರ್ಮಿಸಲಾದ ದಿ ಕೇರಳ ಸ್ಟೋರಿ ಚಿತ್ರಕ್ಕೆ ಪ್ರಶಸ್ತಿ ನೀಡುವ ಮೂಲಕ ತೀರ್ಪುಗಾರರು ದೀರ್ಘ ಕಾಲದಿಂದ ಕೋಮು ಸಾಮರಸ್ಯ ಮತ್ತು ರಾಷ್ಟ್ರೀಯ  …

ಛತ್ತೀಸ್‌ಘಡ್‌ನಲ್ಲಿ ಕ್ರೈಸ್ತ ಭಗಿನಿಯರ ಬಂಧನ: ಕಾಂಗ್ರೆಸ್‌ನಿಂದ ಪ್ರತಿಭಟನೆ

ವರ್ಕಾಡಿ: ಹಳ್ಳಿಗಾಡಿನ ಆದಿವಾಸಿ ಗಳ ಸೇವೆ ಮಾಡುತ್ತಿದ್ದ ಇಬ್ಬರು ಕ್ರೈಸ್ತ ಭಗಿನಿಯರನ್ನು ಅನ್ಯಾಯವಾಗಿ ಬಂ ಧಿಸಿ ಛತ್ತೀಸ್‌ಘಡ್ ಸರಕಾರ ಜೈಲಿ ಗಟ್ಟಿದ್ದು ಅದರ ಕೆಟ್ಟ ಫಲಗಳನ್ನು ಅನುಭವಿಸಲಿದೆ ಎಂದು ಕಾಸರ ಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಹೇಳಿದ್ದಾರೆ. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿ ಯಿಂದ ಮಜಿರ್ಪಳ್ಳದಲ್ಲಿ ಹಮ್ಮಿಕೊಂ ಡಿದ್ದ ಪ್ರತಿಭಟನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು.  ನೇತಾರರಾದ ಶಾಹುಲ್ ಹಮೀದ್ ಪೆರ್ಲ, …

ಸಿನೆಮಾ, ಮಿಮಿಕ್ರಿ ತಾರೆ ಕಲಾಭವನ್ ನವಾಸ್ ನಿಧನ

ಕೊಚ್ಚಿ: ಚಲನಚಿತ್ರ ಹಾಗೂ ಮಿಮಿಕ್ರಿ ನಟನೂ ಆಗಿರುವ ಕಲಾಭವನ್ ನವಾಸ್ (51) ನಿಧನ ಹೊಂದಿದರು. ಮಲಯಾಳಂ ಸಿನೆಮಾ ಚಿತ್ರೀಕರಣವೊಂದರಲ್ಲಿ ಪಾಲ್ಗೊಳ್ಳಲು ಕಲಾಭವನ್ ನವಾಸ್ ಚೋಟಾಣಿಕ್ಕರೆಗೆ ಬಂದು ಹೋಟೆಲೊಂದರ ಕೊಠಡಿಯಲ್ಲಿ ತಂಗಿದ್ದರು. ಅಲ್ಲಿ ನಿನ್ನೆ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಿಮಿಕ್ರಿ ವೇದಿಕೆಗಳಲ್ಲಿ ಮಿಂಚಿದ್ದ ನವಾಸ್ ಬಳಿಕ ಮಲಯಾಳಂ ಸಿನೆಮಾರಂಗಕ್ಕೂ ಪ್ರವೇಶಿಸಿ ಹಲವು ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಅವರು ಕಲಾಭವನ್ ಮಿಮಿಕ್ರಿ ಟ್ರೂಪ್‌ನ ಸದಸ್ಯರೂ ಆಗಿದ್ದರು. ನಾಟಕ ಕಲಾವಿದರಾದ ಅಬೂಬಕ್ಕರ್‌ರ ಪುತ್ರನಾಗಿರುವ ಮೃತರು ಪತ್ನಿ ನಟಿ ರೆಹ್ನಾ, ಮಕ್ಕಳಾದ ನಹರಿನ್, …

ಹೃದಯಾಘಾತ: ವಾದ್ಯ ಕಲಾವಿದ ನಿಧನ

ಪಾವೂರು: ಮುಡಿಮಾರು ನಿವಾಸಿ ಕೇಶುವ (39) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ವಾದ್ಯ ಕರಾವಿದರಾಗಿದ್ದರು. ಮೃತರು ತಂದೆ ಕೊಗ್ಗ, ತಾಯಿ ಯಮುನ, ಪತ್ನಿ ಕುಸುಮ, ಮಕ್ಕಳಾದ ಗಣ್ಯ, ನಿತಿನ್, ಸಹೋದರರಾದ ವಾಮನ, ರಾಜೇಶ, ಉಮೇಶ, ಸಹೋದರಿಯರಾದ ವಿಮಲ, ಲೀಲಾ, ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕೊರಗಜ್ಜ ಸೇವಾ ಸಮಿತಿ ಕೊಂಡೆಯೂರು, ಮುಡಿಮಾರು ಮಲರಾಯ ಗುಳಿಗ ಸೇವಾ ಸಮಿತಿ ಸಂತಾಪ ಸೂಚಿಸಿದೆ.

ಹೋಟೆಲ್ ಮಾಲಕ ನಿಧನ

ಉಪ್ಪಳ: ಹೋಟೆಲ್ ಮಾಲಕ, ಬಿಜೆಪಿ ಹಿರಿಯ ಕಾರ್ಯಕರ್ತ ಬಂದ್ಯೋಡು ನಿವಾಸಿ ಕೃಷ್ಣ (ಶೈಲು- 58) ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕದ್ರಿ ಸಿಟಿ ಆಸ್ಪತ್ರೆ ಪರಿಸರದಲ್ಲಿ ೨೫ ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ದಿ| ಕುಂಞಂಬು ಕೋಮರ- ದಿ| ಮಾಣಿಕ್ಯ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಶೀಲ, ಮಕ್ಕಳಾದ ಉಜ್ವಲ್, ನವನೀತ, ಸೊಸೆ ಶ್ರುತಿ, ಸಹೋದರ ಶ್ರೀಧರ, ಸಹೋದರಿ ಯರಾದ ಸುಮತಿ, ಶಾರದ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ನೀರ್ಚಾಲು ವ್ಯಾಪಾರಿ ಘಟಕ ಮಹಾಸಭೆ

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೀರ್ಚಾಲು ಘಟಕದ ವಾರ್ಷಿಕ ಮಹಾಸಭೆ ನೀರ್ಚಾಲು ವ್ಯಾಪಾರ ಭವನದಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸಿ, ಮಾತನಾಡಿದರು. ನೀರ್ಚಾಲು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ರವಿ ನೀರ್ಚಾಲು ವಾರ್ಷಿಕ ವರದಿ, ಕೋಶಾಧಿಕಾರಿ ಗೋಪಾಲ ಬಿ. ಆಯವ್ಯಯ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ದಾಮೋದರನ್, ದಿನೇಶ್, ಮೊಹಮ್ಮದ್ ಕುಂಞಿ ಹಾಜಿ ಕುಂಜಾರು ಶುಭ ಕೋರಿದರು. ರವಿ ನೀರ್ಚಾಲು ಸ್ವಾಗತಿಸಿ, ಉಪಾಧ್ಯಕ್ಷ ಸತ್ಯಶಂಕರ ಭಟ್ ವಂದಿಸಿದರು.

ದೂರುದಾರರ ಹೆಸರು ಬಹಿರಂಗ: ಕುಂಬಳೆ ಪಂ. ಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಂಪಿಟಿಎ ಅಧ್ಯಕ್ಷೆ

ಕುಂಬಳೆ: ಪೇಟೆಯಲ್ಲಿ ರಸ್ತೆ ಬದಿ ನಡೆಸುತ್ತಿರುವ ವ್ಯಾಪಾರದ ಬಗ್ಗೆ ಪಂಚಾಯತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ನೀಡಿದವರ ಹೆಸರನ್ನು ಬಹಿರಂಗಪಡಿಸಿದ ಪಂಚಾಯತ್ ಕಾರ್ಯದರ್ಶಿಯ ಕರ್ತವ್ಯಲೋಪದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮಾತೃಸಮಿತಿ ಅಧ್ಯಕ್ಷೆ ವಿನೀಶ ಬಾಲಕೃಷ್ಣನ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯದರ್ಶಿ ತನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿಯೂ ಅವರು ದೂರಿದರು. ಶಾಲಾ ವಿದ್ಯಾರ್ಥಿಗಳು ಸಂಚರಿಸುವ ದಾರಿಯಲ್ಲಿ ವಿದ್ಯಾರ್ಥಿನಿಯರು ಅನುಭವಿಸುವ ಕೆಟ್ಟ ಅನುಭವ ಸಾಮಾನ್ಯವಾದ ಹಿನ್ನೆಲೆಯಲ್ಲಿ ಪಂಚಾಯತ್‌ಗೆ ತಾನು ದೂರು ನೀಡಿದ್ದು, …

ತೋಡಿನಲ್ಲಿ ಯುವಕನ ಮೃತದೇಹ ಪತ್ತೆ

ಕಾಸರಗೋಡು: ಪಾಣತ್ತೂರು ಮಾಪಿಳಚ್ಚೇರಿಯಲ್ಲಿ ಯುವಕ ತೋಡಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮಾಪಿಳಚ್ಚೇರಿ ನಿವಾಸಿ ರಾಜೇಶ್ (35) ಮೃತಪಟ್ಟ ಯುವಕ. ನಿನ್ನೆ ಸಂಜೆ ೫ ಗಂಟೆ ವೇಳೆಗೆ ಮನೆ ಸಮೀಪದ ತೋಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಅಜಾಗ್ರತೆಯಿಂದ ತೋಡಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಮಾಹಿತಿ ತಿಳಿದು ರಾಜಪುರಂ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಅಣ್ಣಯ್ಯ ನಾಯ್ಕ್- ಜಯಂತಿ ದಂಪತಿ ಪುತ್ರನಾದ ಮೃತರು ಸಹೋದರ ರಾಜೇಂದ್ರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಗರ್ಲ್ಸ್ ಹೈಸ್ಕೂಲ್ ಬಳಿಯ ನಿವಾಸಿ ದಿ| ಮಾಧನ ಎನ್.ಎ ಎಂಬವರ ಪತ್ನಿ ನಿವೃತ್ತ ಬ್ಯಾಂಕ್ ಉದ್ಯೋಗಿ ನಳಿನಿ   (64) ನಿನ್ನೆ ರಾತ್ರಿ ನಿಧನ ಹೊಂದಿದರು.  ಇವರು ಉತ್ತರ ಕೇರಳ, ದ.ಕ. ಜಿಲ್ಲೆಯಾದ್ಯಂತ ಗಾಯಕಿಯಾಗಿ ರಸಮಂಜರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದರು. ಕಾಸರಗೋಡಿನ ರೆಡ್ ರೋಸ್ ಆರ್ಕೆಸ್ಟ್ರಾ ತಂಡ, ತುಳು ಚಲನಚಿತ್ರ ರಂಗದ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲಾ) ಅವರ ತಂಡದಲ್ಲೂ  ಗಾಯಕಿಯಾಗಿದ್ದರು.  ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನ ಸಮಿತಿ ಸದಸ್ಯೆಯೂ ಆಗಿದ್ದರು. ಮೃತರು ಮಕ್ಕಳಾದ  …

ಕನ್ಯಪ್ಪಾಡಿ-ಪಳ್ಳ ರಸ್ತೆ ಶೋಚನೀಯ ಕಾಂಗ್ರೆಸ್‌ನಿಂದ ನಾಳೆ ಪ್ರತಿಭಟನೆ

ಬದಿಯಡ್ಕ: ಸಂಚಾರ ಯೋಗ್ಯ ವಲ್ಲದ ಕನ್ಯಪ್ಪಾಡಿ-ಪಳ್ಳ ರಸ್ತೆಯ ಶೋಚನೀಯಾವಸ್ಥೆಯನ್ನು ಪ್ರತಿಭಟಿಸಿ ಯೂತ್ ಕಾಂಗ್ರೆಸ್ ಎಣ್ಮಕಜೆ, ಬದಿಯಡ್ಕ ಮಂಡಲ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಇದರಂಗವಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಚೆನ್ನೆಕುಂಡ್‌ನಲ್ಲಿ ರಸ್ತೆಯ ಹೊಂಡಗಳಲ್ಲಿ ದೋಣಿ ಇಳಿಸಿ ಪ್ರತಿಭಟನೆ ನಡೆಸಲಾ ಗುವುದು.  ಡಿಸಿಸಿ ಪ್ರಧಾನ ಕಾರ್ಯ ದರ್ಶಿ, ಎಣ್ಮಕಜೆ ಪಂಚಾ ಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಉದ್ಘಾಟಿಸುವರು. ನೇತಾರರ ಸಹಿತ ಹಲವರು ಕಾರ್ಯಕರ್ತರು ಭಾಗವಹಿ ಸುವರು.  ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.