ಮಾಧ್ಯಮ ಕಾರ್ಯಕರ್ತರ ಮೇಲೆ ತಂಡದಿಂದ ಹಲ್ಲೆ: ಕೊಲೆಗೀಡಾದ ಸೌಜನ್ಯರ  ಮಾವನ ಕಾರಿಗೆ ಹಾನಿ;  ಧರ್ಮಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕೊಲೆಗೀಡಾದ ಸೌಜನ್ಯ ಎಂಬ ಯುವತಿಯ ಮಾವ ವಿಠಲ ಗೌಡರ ವಾಹನವನ್ನು ತಂಡವೊಂದು ತಡೆದು ನಿಲ್ಲಿಸಿ  ಹಾನಿಗೊಳಿಸಿದ ಘಟನೆ ನಡೆದಿದೆ. ಧರ್ಮಸ್ಥಳ ಟ್ರಸ್ಟನ್ನು ಬೆಂಬಲಿಸುವ ವ್ಯಕ್ತಿಗಳು ವಾಹನಕ್ಕೆ ಹಾನಿಗೈದಿರುವುದಾಗಿ ದೂರಲಾಗಿದೆ. ನಿನ್ನೆ ಸಂಜೆ ನಾಲ್ವರು ಮಾಧ್ಯಮ ಕಾರ್ಯಕರ್ತರ ಮೇಲೆ ಹಲ್ಲೆಗೈದ ಘಟನೆಯ ಬೆನ್ನಲ್ಲೇ ಉಂಟಾದ ಘರ್ಷಣೆ ವೇಳೆ ವಾಹನಕ್ಕೆ ಹಾನಿಗೈಯ್ಯಲಾಗಿದೆ. ವಾಹನದ ಗಾಜುಗಳನ್ನು ಪುಡಿಗೈದು  ಸೀಟುಗಳನ್ನು ಹರಿದು ಹಾಕಿರುವುದಾಗಿ ದೂರಲಾಗಿದೆ. ಬಿಗ್‌ಬಾಸ್ ಸ್ಪರ್ಧಿ ರಜತ್ ಎಂಬವರು ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ಸೌಜನ್ಯರ ಮನೆಗೆ  ಭೇಟಿ ನೀಡಿದ್ದರು. …

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಧರ್ಮಸ್ಥಳ ದೇಗುಲ ಉಗ್ರರ ಟಾರ್ಗೆಟ್ ಆಗಿತ್ತು

ಬೆಂಗಳೂರು: 2022 ನವಂಬರ್ 19ರಂದು ಸಂಜೆ ಮಂಗಳೂರಿನ ಕಂಕನಾಡಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್  ಸ್ಫೋಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಲಭಿಸಿದೆ. ಕುಕ್ಕರ್ ಬಾಂಬ್‌ನ ಅಸಲಿ ಟಾರ್ಗೆಟ್ ಧರ್ಮಸ್ಥಳ ದೇಗುಲ ಆಗಿತ್ತೆಂಬ ಸ್ಫೋಟಕ ಮಾಹಿತಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯಲ್ಲಿ ಬಯಲುಗೊಂಡಿದೆ. ಶಂಕಿತ ಉಗ್ರರು ಧರ್ಮಸ್ಥಳ ದೇವಾಲಯದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರೆಂಬ ಮಾಹಿತಿಯನ್ನು ಇ.ಡಿ ಬಯಲಿಗೆಳೆದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಬಾಂಬನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಇರಿಸಿ ಸ್ಫೋಟಿಸಲು ಸಂಚು …

ನಿಧನ

ಬೆಳ್ಳೂರು: ಕಿನ್ನಿಂಗಾರು ಬೈಕಾಜೆ ಕನಕತ್ತೋಡಿ ಗುತ್ತು ನಿವಾಸಿ, ಕೃಷಿಕ ರಮಾನಾಥ ಆಳ್ವ (65) ನಿಧನ ಹೊಂದಿದರು. ಜ್ವರ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಲಕ್ಷ್ಮಿ ಆಳ್ವ, ಮಕ್ಕಳಾದ ಶರಣ್ ಆಳ್ವ, ಚಿನ್ಮಯ್, ಸಹೋದರರಾದ ಸಚ್ಚಿದಾನಂದ ಆಳ್ವ , ಜೀವರಾಜ ಆಳ್ವ, ರವೀಂದ್ರ ಆಳ್ವ, ಅಶೋಕ ಆಳ್ವರ, ಸಹೋದರಿಯರಾದ ಸಾವಿತ್ರಿ ಶೆಟ್ಟಿ, ಗೀತಾಲಕ್ಷ್ಮಿ ಭಂಡಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

ವರ್ಕಾಡಿ ಕಾಂಗ್ರೆಸ್ ಕಚೇರಿ ಕೆ.ಕೆ. ಜಾಯಿರನ್ ಸ್ಮೃತಿ ಭವನ ಉದ್ಘಾಟನೆ

ವರ್ಕಾಡಿ: ಸ್ವತಂತ್ರ ಭಾರತದ ರೂವಾರಿಗಳಾದ ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿಯಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ಮುನ್ನಡೆಯು ತ್ತಿರುವ ಕಾಂಗ್ರೆಸ್ ಜನ ಹೃದಯಗಳಲ್ಲಿ ಸ್ಥಾಯಿಯಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷದ ಉಲ್ಲೇಖವಿಲ್ಲದೆ ಆಧುನಿಕ ಭಾರತದ ಇತಿಹಾಸ ಪೂರ್ಣವಾಗದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಹೇಳಿದ್ದಾರೆ. ವರ್ಕಾಡಿ ಮಂ ಡಲ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ ಕೆ.ಕೆ. ಜಾಯಿರನ್ ಸ್ಮೃತಿಭವನ ಮಜಿರ್ಪಳ್ಳದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವರ್ಕಾಡಿ ಮಂ ಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋ ತ್ತಮ …

ಬಿಜೆಪಿ ಹಿರಿಯ ಕಾರ್ಯಕರ್ತ ನಿಧನ

ಮಂಜೇಶ್ವರ: ಕೊಡ್ಲಮೊಗರು ಬಳಿಯ ಕೊಣಿಬೈಲು ನಾಣಿಲ್ತಾಡಿ ನಿವಾಸಿ ಕೃಷಿಕ, ಹಿರಿಯ ಬಿಜೆಪಿ ಕಾರ್ಯಕರ್ತ ರಾಘವ ಬೆಳ್ಚಾಡ (76) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮಕ್ಕಳಾದ ಕಾರ್ತೀಶ್ (ಬಿಜೆಪಿ ಮಂಡಲ ಕಮಿಟಿ ಸದಸ್ಯ), ಸುನೀತಾ, ವನಿತಾ, ಮಮತಾ, ಸುಖಲತಾ, ಸೊಸೆ ಮಲ್ಲಿಕಾ, ಅಳಿಯಂದಿರಾದ ಯಾದವ, ರಾಧಾಕೃಷ್ಣ, ಮೋಹನ, ದಾಮೋದರ, ಸಹೋದರಿ ಶಾರದಾ, ಸಹೋದರ ರಾದ ಮಾಧವ, ವಿಶ್ವನಾಥ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಪತ್ನಿ ಸೀತಾ ಈ …

ಜಿಲ್ಲೆಯ ಹಲವು ಕಡೆ ಕಾಲ್ನಡೆ ಪ್ರಯಾಣಿಕರಿಗೆ ರಸ್ತೆ ದಾಟಲು ಅಸೌಕರ್ಯ: ಫೂಟ್ ಓವರ್ ಬ್ರಿಡ್ಜ್‌ಗೆ ಬಿಜೆಪಿ ಮನವಿ

ಮಂಜೇಶ್ವರ: ಜಿಲ್ಲೆಯ ಹಲವು ಕಡೆಗಳಲ್ಲಿ ಕಾಲ್ನಡೆ ಸಂಚಾರಿಗಳಿಗೆ ರಸ್ತೆ ದಾಟಲು ಅಸೌಕರ್ಯವಿರುವು ದನ್ನು ಮನಗಂಡು ಬಿಜೆಪಿ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದೆ. ಕಾಸರಗೋಡು ಅಡ್ಕತ್ತಬೈಲು, ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತೀ ಕ್ಷೇತ್ರ ಬಳಿ, ಬಂಗ್ರಮಂಜೇಶ್ವರದಲ್ಲಿ ರಸ್ತೆ ಅಡ್ಡದಾಟಲು ಸಮಸ್ಯೆಯಿದ್ದು, ಇಲ್ಲಿ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಂಡದಲ್ಲಿ ಬಿಜೆಪಿ ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯಾ ರೈ, ಮಂಗಳೂರು ಸಂಸದ ಬ್ರಿಜೇಶ್ …

ಪಾಲಕ್ಕಾಡ್ ವಿಭಾಗೀಯ ರೈಲ್ವೇ ಅಧಿಕಾರಿ ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ

ಮಂಜೇಶ್ವರ: ಪಾಲಕ್ಕಾಡ್ ವಿಭಾಗೀಯ ರೈಲ್ವೇ ಅಧಿಕಾರಿ ಮಧುಕರ್ ರಾವತ್, ಎಡಿಆರ್‌ಎಂ ಜಯಕೃಷ್ಣನ್ ನಿನ್ನೆ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ತಲುಪಿ ಅಭಿವೃದ್ಧಿ ಬಗ್ಗೆ ಅವಲೋಕನ ನಡೆಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಹರಿಶ್ಚಂದ್ರ ಮಂಜೇಶ್ವರ ಉಪಸ್ಥಿತರಿದ್ದರು. ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಅಧಿಕಾರಿಗಳಿಗೆ ಬಿಜೆಪಿ ಮುಖಂಡರು ಮನವಿ ನೀಡಿದರು. ಹೊಸಂಗಡಿ ರೈಲ್ವೇ ಸೇತುವೆ, ಹೊಸಬೆಟ್ಟು ಕ್ರಾಸಿಂಗ್, ಶಾಪಿಂಗ್ ಕಟ್ಟಡ, ಪಾರ್ಕ್ ಹಾಗೂ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಸ್ವಯಂಚಾಲಿತ ಲಿಫ್ಟ್ ಸ್ಥಾಪಿಸಲು, ವಿವಿಧ ರೈಲುಗಳು ಮಂಜೇಶ್ವರದಲ್ಲಿ …

ಜಿಲ್ಲೆಯ ಕಾನೂನು, ಸುವ್ಯವಸ್ಥೆಯನ್ನು ಖಾತರಿಪಡಿಸಬೇಕು- ಬಿಜೆಪಿ

ಕಾಸರಗೋಡು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಖಾತರಿಪಡಿ ಸಬೇಕು ಮಾತ್ರವಲ್ಲದೆ ಮುಂದೆ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಅಗತ್ಯದ ಎಲ್ಲಾ ಪೂರ್ವಭಾವಿ ಭದ್ರತಾ ಕ್ರಮಗಳನ್ನು ಈಗಲೇ ಆರಂಭಿಸಬೇಕಾಗಿದೆ ಎಂದು  ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರಾವಡ ಎ. ಚಂದ್ರಶೇಖರನ್ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ. ನಿನ್ನೆ ಕಾಸರಗೋಡಿಗೆ ಆಗಮಿಸಿದ ಅವರು ಎಸ್.ಪಿ. ಕಚೇರಿಯಲ್ಲಿ ಕರೆದ ಜಿಲ್ಲೆಯ ವರಿಷ್ಠ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಈ ನಿರ್ದೇಶ ನೀಡಿದ್ದಾರೆ.

ಎನ್‌ಟಿಯುನಿಂದ ರಾಮಾಯಣ ಮಾಸಾಚರಣೆ, ವನಿತಾ ಸಂಗಮ 9ರಂದು

ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ವನಿತಾ ವಿಭಾಗ ಇದರ ಆಶ್ರಯದಲ್ಲಿ ವನಿತಾ ಸಂಗಮ, ರಾಮಾಯಣ ಮಾಸಾಚರಣೆ ಈ ತಿಂಗಳ 9ರಂದು ಬೆಳಿಗ್ಗೆ 10 ಗಂಟೆಗೆ ಕೂಡ್ಲು ಎನ್‌ಟಿಯು ಕಾರ್ಯಾಲಯದಲ್ಲಿ ನಡೆಯಲಿದೆ. ಮಧೂರು ಪಂ. ಸದಸ್ಯೆ ರಾಧಾ ಉದ್ಘಾ ಟಿಸುವರು. ಸಾಮಾಜಿಕ ಕಾರ್ಯಕರ್ತ ಮುರಳೀಧರ ಯಾದವ್ ನಾಯ್ಕಾಪು ಮಾತನಾಡುವರು. ವನಿತಾ ವಿಭಾಗದ ಸಂಚಾಲಕಿ ದಿವ್ಯಾ ಕದ್ರಿ ಅಧ್ಯಕ್ಷತೆ ವಹಿಸುವರು. ಎನ್‌ಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣನ್ ಟಿ, ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭಾಕರನ್ ನಾಯರ್ ಶುಭ ಕೋರುವರು. …