ಬಾಲಕನಿಗೆ ಕಿರುಕುಳ: ಸೆರೆಗೀಡಾದ ಬೇಕಲ ಎಇಒ ಅಮಾನತು

ಕಾಸರಗೋಡು: 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀ ಡಿದ ಪ್ರಕರಣದಲ್ಲಿ  ನೀಲೇಶ್ವರ ಪೊಲೀ ಸರು ಬಂಧಿಸಿದ ಬೇಕಲ ಉಪಜಿಲ್ಲಾ ಶಿಕ್ಷಣ ಅಧಿಕಾರಿ  ವಿ.ಕೆ. ಸೈನುದ್ದೀನ್ ನನ್ನು ತನಿಖಾ ವಿಧೇಯವಾಗಿ ಶಿಕ್ಷಣ ಡೆಪ್ಯುಟಿ ಡೈರೆಕ್ಟರ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿಯವರ ನಿರ್ದೇಶ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಪಡನ್ನ ನಿವಾಸಿಯೂ, ಪಡನ್ನಕ್ಕಾಡ್‌ನಲ್ಲಿ ವಾಸಿಸುವ ಸೈನುದ್ದೀನ್‌ನನ್ನು ನೀಲೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ನಿನ್ನೆ ಬಂಧಿಸಿದ್ದರು. ಆರೋಪಿಗೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ …

ಬಾಲಕನಿಗೆ ಕಿರುಕುಳ: ಸೆರೆಗೀಡಾದವರ ಸಂಖ್ಯೆ 10ಕ್ಕೆ; ತಲೆಮರೆಸಿಕೊಂಡ ಯೂತ್‌ಲೀಗ್ ನೇತಾರನ ಪತ್ತೆಗಾಗಿ ಶೋಧ

ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡ 16ರ ಹರೆಯದ ಬಾಲಕನಿಗೆ ಸಲಿಂ ಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಪಯ್ಯನ್ನೂರು ಕೋರೋತ್‌ನಲ್ಲಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ನೌಕರನಾದ ಗಿರೀಶ್ (47) ಎಂಬಾತನನ್ನು ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 10ಕ್ಕೇರಿದೆ. ಬೇಕಲ ಎಇಒ ಪಡನ್ನದ ವಿ.ಕೆ. ಸೈನುದ್ದೀನ್ (52), ಪಡನ್ನಕ್ಕಾಡ್‌ನ ರಂಸಾನ್ (64), ಆರ್‌ಪಿಎಫ್ ನೌಕರ ಪಿಲಿಕ್ಕೋಡ್ ಎರವ್‌ನ ಚಿತ್ರರಾಜ್ (48), ತೃಕ್ಕರಿಪುರ ವಳುವಕ್ಕಾಡ್‌ನ ಕುಂಞಹಮ್ಮದ್ (55), ಚಂದೇರದ ಅಪ್ಸಲ್ …

ಪ್ರಧಾನಿ ಮೋದಿಗೆ 75: ಬಿಜೆಪಿಯಿಂದ ದೇಶಾದ್ಯಂತ ಸೇವಾ ಕಾರ್ಯಕ್ರಮ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು 75 ವಸಂತಕ್ಕೆ ಕಾಲಿರಿಸಿದ್ದು, ಇದರ ಅಂಗವಾಗಿ ಬಿಜೆಪಿಯು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹುಟ್ಟುಹಬ್ಬದ ಸಲುವಾಗಿ ಕೇಂದ್ರ ಸರಕಾರವು ಇಂದಿನಿಂದ ಪೋಷಣ್ ಮಾಹ್ ಜೊತೆಗೆ ಸ್ವಸ್ಥನಾರಿ, ‘ಸಶಕ್ತ್ ಪರಿವಾರ್’ ಅಭಿಯಾನಕ್ಕೂ ಚಾಲನೆ ನೀಡಿದೆ. ಇದರ ಹೊರತಾಗಿ ಬಿಜೆಪಿ ಮತ್ತು ಯುವಮೋರ್ಚಾದ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನದಿಂದ ಹಿಡಿದು ಹಲವು ಕಾರ್ಯಕ್ರಮಗಳನ್ನು ಹುಟ್ಟುಹಬ್ಬದಂಗವಾಗಿ ದೇಶಾದ್ಯಂತವಾಗಿ ಹಮ್ಮಿಕೊಳ್ಳಲಾಗಿದೆ. ಇನ್ನು ಬಿಜೆಪಿ ನೇತೃತ್ವದಲ್ಲಿರುವ ರಾಜ್ಯಗಳಲ್ಲಿ ವಿವಿಧ  ಕಾರ್ಯಕ್ರಮಗಳನ್ನೂ ಇಂದಿನಿಂದ ಆರಂಭಿಸಲಾಗಿದ್ದು, ಇದು ಅಕ್ಟೋಬರ್ …

ಶಾಲಾ ಬಸ್-ಸ್ಕೂಟರ್ ಢಿಕ್ಕಿ : ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಉಪ್ಪಳ: ಶಾಲಾ ಬಸ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರರಾದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸಂಭವಿಸಿದೆ. ಇಂದು ಬೆಳಿಗ್ಗೆ 7.45 ರ ವೇಳೆ ಬಾಯಾರು ಪೆಟ್ರೋಲ್ ಪಂಪ್ ಸಮೀಪ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಬಾಯಿಕಟ್ಟೆ ಕಳಾಯಿ ನಿವಾಸಿ ಮೊಹಮ್ಮದ್ ಸಾದಿಕ್ ಹಾಗೂ ಭಂಡಾರ ಕಳಾಯಿಯ ಮೊಹಮ್ಮದ್ ಮೊನುದ್ದೀನ್ ಎಂಬಿವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಈ ಇಬ್ಬರು ಬಾಯಿಕಟ್ಟೆಯಲ್ಲಿರುವ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳಾಗಿದ್ದಾರೆ. ಇವರು ಪೈವಳಿಕೆಯಿಂದ ಬಾಯಾರು ಭಾಗಕ್ಕೆ  ಸ್ಕೂಟರ್‌ನಲ್ಲಿ ತೆರಳುತ್ತಿದ್ದಾರ …

ಕಾರು ಖರೀದಿಸಿ ಹಣ ನೀಡದೆ ವಂಚನೆ: ಓರ್ವ ಸೆರೆ

ಮಂಜೇಶ್ವರ :ಕಾರು ಖರೀದಿಸಿ ಬಳಿಕ ಹಣ ನೀಡದೆ ವಂಚಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡ ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಉಳಿಯತ್ತಡ್ಕ ಎಸ್‌ಪಿ ನಗರದ ಅಬ್ದುಲ್ ಅಶ್ಪಾಕ್ (31) ಎಂಬಾತನನ್ನು ಬಂಧಿಸಲಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಹೊಸಬೆಟ್ಟು ಕಟ್ಟೆಬಜಾರ್ ಪಾಂಡ್ಯಾಲ ನಿವಾಸಿ ಮಜೀದ್ ಎಂಬವರು ನೀಡಿದ ದೂರಿನಂತೆ ಅಬ್ದುಲ್ ಅಶ್ಪಾಕ್ ಸಹಿತ ಐದು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಗಳು ಇತ್ತೀಚೆಗೆ ಮದುವೆ ಅಗತ್ಯಕ್ಕೆಂದು ತಿಳಿಸಿ ಮಜೀದ್‌ರ ಕಾರನ್ನು ಖರೀದಿಸಿ …

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಮಿಕರ ಮಧ್ಯೆ ಘರ್ಷಣೆ ಇಬ್ಬರಿಗೆ ಇರಿತ; ಆರೋಪಿಗಳೆನ್ನಲಾದ ತಂದೆ, ಪುತ್ರ ನಾಪತ್ತೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಾಗಿ ತಲುಪಿದ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಇಬ್ಬರಿಗೆ ಇರಿತ ಉಂಟಾಗಿದೆ. ಮೇಘ ಕನ್‌ಸ್ಟ್ರಕ್ಷನ್ ಕಂಪೆನಿಯ ಮೈಲಾಟಿಯಲ್ಲಿರುವ ಲೇಬರ್ ಕ್ಯಾಂಪ್‌ನಲ್ಲಿ ನಿನ್ನೆ ಸಂಜೆ ಘರ್ಷಣೆ ನಡೆದಿದೆ. ಉತ್ತರ ಭಾರತ ನಿವಾಸಿಗಳಾದ ಯತಿವೀಂದರ್ ಸಿಂಗ್, ಗುರ್ಬಾ ಸಿಂಗ್ ಎಂಬಿವರು ಇರಿತದಿಂದ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಇನ್ನೋರ್ವನನ್ನು ಕಾಞಂಗಾಡ್‌ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರ್ಮಿಕರ ಮಧ್ಯೆ ನಡೆದ ವಾಗ್ವಾದವೇ ಘರ್ಷಣೆಯಲ್ಲಿ ಕೊನೆಗೊಂಡಿದೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಬೇಕಲ ಪೊಲೀಸರು ಸ್ಥಳಕ್ಕೆ …

ಕೊಲೆಯತ್ನ ಪ್ರಕರಣದ ಆರೋಪಿಗೆ ಸಂರಕ್ಷಣೆ ನೀಡಿದ ಯುವತಿ ಸೇರಿ ಕರ್ನಾಟಕದ ಇಬ್ಬರ ಸೆರೆ

ಕಾಸರಗೋಡು: ಕೊಲೆಯತ್ನ ಪ್ರಕರಣದ ಆರೋಪಿಗಳ ಪೈಕಿ ಓರ್ವನಿಗೆ ತಲೆಮರೆಸಿಕೊಳ್ಳಲು ಸಂರಕ್ಷಣೆ ಒದಗಿಸಿದ ಆರೋಪದಂತೆ ಯುವತಿ ಸೇರಿ ಇಬ್ಬರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಕಡಬ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಉಪ್ಪಿನಂಗಡಿ ನಿವಾಸಿಗಳಾದ ರುಬೀನಾ (27) ಮತ್ತು ಅಬೂಬಕ್ಕರ್ ಸಿದ್ದೀಕ್ ಸಿ.ಕೆ. (41) ಬಂಧಿತರಾದ ಆರೋಪಿಗಳು. ಉಪ್ಪಿನಂಗಡಿಯಿಂದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಚೆಂಗಳ ಗ್ರಾಮ ಚೆರ್ಕಳ ನೋರ್ತ್‌ನ ಕೋಳಿಕ್ಕರ ಹೌಸಿನ ಮೊಹಮ್ಮದ್ ನವಾಸ್ (32) ಎಂಬವರನ್ನು ಕಳೆದ ಜುಲೈ ೨೪ರಂದು ರಾತ್ರಿ ಕಾರಿನಲ್ಲಿ ಬಂದ ನಾಲ್ವರ ತಂಡ ಚೆರ್ಕಳ …

ಎಸ್‌ಬಿಐ ಬ್ಯಾಂಕ್ ದರೋಡೆ: ಎಂಟು ಕೋಟಿ, 50 ಕಿಲೋ ಚಿನ್ನಾಭರಣ ಅಪಹರಣ

ಬೆಂಗಳೂರು: ವಿಜಯಪುರ ಜಿಲ್ಲೆಯ ಮನಗುಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ನೆನಪಿಂದ ಮಾಸುವ ಮೊದಲೇ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಳವು ನಡೆಸಲಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಿಂದ ದರೋಡೆ ನಡೆಸಲಾಗಿದೆ. ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರ ತೋರಿಸಿ ಬ್ಯಾಂಕ್‌ನ ಮೆನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ ದರೋಡೆ ನಡೆಸಲಾಗಿದೆ. ಮುಸುಕುದಾರಿಗಳಾದ ಐದು ಮಂದಿಯ ತಂಡ ನುಗ್ಗಿ ದರೋಡೆ ನಡೆಸಿದ್ದು, ಬ್ಯಾಂಕ್‌ನಿಂದ ಸುಮಾರು 8 ಕೋಟಿ ರೂ., …

ಕನ್ನಡಿಗರ ಶೈಕ್ಷಣಿಕ ಸಹಿತ ವಿವಿಧ ಸಮಸ್ಯೆಗೆ ಪರಿಹಾರ ಆಗ್ರಹಿಸಿ ಕರ್ನಾಟಕ ಗಡಿ ಪ್ರಾಧಿಕಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿ

ಕಾಸರಗೋಡು: ಕಾಸರಗೋಡಿನಲ್ಲಿ ಅಲ್ಪಸಂಖ್ಯಾತ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನಿಯೋಗವೊಂದು ತಿರುವನಂತಪುರದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು, ಶೈಕ್ಷಣಿಕ ಉದ್ಯೋಗ ನೇಮಕಾತಿಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನಿಯಮಾನುಸಾರ ಮೀಸಲು ಕಲ್ಪಿಸಬೇಕು, ಪಡಿತರ ಚೀಟಿ, ಮತದಾರರ ಗುರುತು ಚೀಟಿಗಳಲ್ಲಿ ಕನ್ನಡ ಭಾಷೆ ಅಳವಡಿಸಬೇಕು, ಬದಿಯಡ್ಕದ ಕಯ್ಯಾರು ಕಿಞ್ಞಣ್ಣ ರೈ ಕನ್ನಡ ಭವನಕ್ಕೆ …

ಜಿಲ್ಲೆಯಲ್ಲಿ ತೀವ್ರಗೊಂಡ ಕಡಲ್ಕೊರೆತ ತಡೆಗಟ್ಟಲು ವಿವಿಧ ಯೋಜನೆ ಜ್ಯಾರಿಗೊಳಿಸುವುದಾಗಿ ನೀರಾವರಿ ಸಚಿವ

ಕಾಸರಗೋಡು: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಕಡಲ್ಕೊರೆತವನ್ನು ತಡೆಗಟ್ಟಲು ವಿವಿಧ ಯೋಜನೆಗಳನ್ನು ಜ್ಯಾರಿಗೊಳಿಸುವುದಾಗಿ ಶಾಸಕ ಸಿ.ಎಚ್.ಕುಞಂಬು ಮಂಡಿಸಿದ ಸಬ್‌ಮಿಶನ್‌ಗೆ ಉತ್ತರವಾಗಿ ನೀರಾವರಿ ಸಚಿವ  ರೋಶಿ ಅಗಸ್ಟಿನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 2025ರಲ್ಲಿ ತೀವ್ರ ಕಡಲ್ಕೊರೆತ ಕಂಡುಬಂದಿದ್ದು, 87.65 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಜಿಲ್ಲೆಯ ತೀರಪ್ರದೇಶಗಳಲ್ಲಿ ಕಡಲ್ಕೊರೆತ ಬೆದರಿಕೆ ಉಂಟಾಗಿದ್ದು, ನಾಶ ನಷ್ಟ ಸಂಭವಿಸಿದೆ. ಕಡಲ್ಕೊರೆತ ತೀವ್ರವಾದ ಕಣ್ವತೀರ್ಥ, ಮುಸೋಡಿ, ಉಪ್ಪಳದ ಹನುಮಾನ್ ನಗರ, ಐಲ ಕಡಪ್ಪುರ, ಮಣಿಮುಂಡ, ಕೊಯಿಪ್ಪಾಡಿ, ಕಾವುಗೋಳಿ, ಕೀಯೂರು, ಚೆಂಬರಿಕ, ತೃಕನ್ನಾಡ್, ಅಜಾನೂರು, ವಲಿಯಪರಂಬ ಎಂಬೆಡೆಗಳಲ್ಲಿ ತೀರ …