70 ವರ್ಷದ ಮೇಲ್ಪಟ್ಟವರಿಗೆ ಆಯುಷ್ಮಾನ್ ಆರೋಗ್ಯ ವಿಮೆ: ಭಾರತೀಯ ಪೆನ್ಶನರ್ಸ್ ಮಹಾಸಂಘ ಸ್ವಾಗತ

ಕಾಸರಗೋಡು: ಆದಾಯಮಿತಿ ಇಲ್ಲದೆ ದೇಶದ 70 ವರ್ಷಕ್ಕಿಂತ ಮೇಲಿನ ಎಲ್ಲರಿಗೂ 5 ಲಕ್ಷ ರೂ. ಮೌಲ್ಯದ ಆಯುಷ್ಮಾನ್ ವಿಮಾ ಯೋಜನೆಯನ್ನು ಜ್ಯಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ತೀರ್ಮಾನವನ್ನು ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ ಸ್ವಾಗತಿಸಿದೆ. ದೇಶದ ಎಲ್ಲಾ ವರ್ಗದ ಜನರಿಗೆ ಪ್ರಯೋಜನ ಸಿಗುವ ಈ ಯೋಜನೆ ಭಾರತದ ಇತಿಹಾಸದಲ್ಲೇ ಪ್ರಥಮವಾಗಿದೆ ಎಂದು ಸಂಘ ಶ್ಲಾಘಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್. ಸುರೇಶ್, ಕೋಶಾಧಿಕಾರಿ ಕೆ. ದಯಾನಂದ, ಸದಸ್ಯರಾದ ಬಾಲಚಂದ್ರ, ರವೀಂದ್ರನ್ ನಾಯರ್, ಮಾಧವನ್ ನಾಯರ್, ಚಂದ್ರು, ಸತೀಶ, ಕಾರ್ಯದರ್ಶಿ ಸಿ.ಎಚ್. ಜಯೇಂದ್ರ ಮಾತನಾಡಿದರು.

You cannot copy contents of this page