ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಮಾರ್ಗಸೂಚಿ ಮತ್ತು ತರಬೇತಿ ಓಣಂ ಬಳಿಕ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಗಡಿ ಪುನರ್‌ನಿರ್ಣಯಿಸಲು ಅವುಗಳ ಕಾರ್ಯದರ್ಶಿಗಳಿಗಿರುವ   ಅಗತ್ಯದ ಮಾರ್ಗಸೂಚಿಯನ್ನು ಓಣಂ ಹಬ್ಬದ ಬಳಿಕ ಹೊರಡಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಗ್ರಾಮ- ಬ್ಲೋಕ್ ಮತ್ತು ಜಿಲ್ಲಾ ಪಂಚಾಯತ್‌ಗಳ ವಾರ್ಡ್‌ಗಳನ್ನು ವಿಭಜಿಸಿ  ಹೊಸ ವಾರ್ಡ್‌ಗಳನ್ನು ರೂಪೀಕರಿಸಿದ ಅಧಿಸೂಚನೆಯನ್ನು ಸರಕಾರ ಈಗಾಗಲೇ ಹೊರಡಿಸಿದೆ. ಇನ್ನು ನಗರಸಭೆಗಳು ಮತ್ತು ಕಾರ್ಪರೇಷನ್‌ಗಳ ವಾರ್ಡ್‌ಗಳ ವಿಭಜನೆ ಕ್ರಮ ಇನ್ನಷ್ಟೇ ನಡೆಸಲು ಬಾಕಿ ಇದೆ. ಆ ಕುರಿತಾದ ಅಧಿಕೃತ ಸೂಚನೆ ಸರಕಾರ ಶೀಘ್ರ ಹೊರಡಿಸಲಿದೆ. ಆ ಬಳಿಕವಷ್ಟೇ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಗಡಿ ನಿರ್ಣಯ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದಕ್ಕಾಗಿರುವ ಮಾರ್ಗಸೂಚಿಯನ್ನು ಸರಕಾರ ಹೊರಡಿಸಬೇಕಾಗಿದೆ. ಮಾತ್ರವಲ್ಲ ಗಡಿ ನಿರ್ಣಯಿಸುವ ಕುರಿತಾದ ತರಬೇತಿ ಸಂಬಂಧಪಟ್ಟ ಸಿಬ್ಬಂದಿಗಳಿಗೆ ನೀಡಬೇಕಾಗಿದೆ. ಈ ಪ್ರಕ್ರಿಯೆಗಳು  ಪೂರ್ಣಗೊಂಡ ಬಳಿಕವಷ್ಟೇ ವಾರ್ಡ್‌ಗಳ ಗಡಿ ನಿರ್ಣಯ ಕ್ರಮ ಆರಂಭಗೊಳ್ಳಲಿದೆ. ಗಡಿ ನಿರ್ಣಯಕ್ಕಾಗಿ ರಾಜ್ಯ ಚುನಾವಣಾ ಆಯುಕ್ತ ಎ. ಶಾಜಹಾನ್‌ರ ಅಧ್ಯಕ್ಷತೆಯಲ್ಲಿ ಡಿಲಿಮಿಟೇಷನ್ ಸಮಿತಿಗೆ ರೂಪು ನೀಡಲಾಗಿದ್ದು, ಓಣಂ ಹಬ್ಬದ ಬಳಿಕ ಈ ಸಮಿತಿ ಸಭೆ ಸೇರಿ ಅನುಸರಿಸಬೇಕಾಗಿರುವ ಮಾರ್ಗಸೂಚಿಗಳಿಗೆ ರೂಪು ನೀಡಲಿದೆ. ಅದಾದ ಬಳಿಕ ಸಂಬಂಧಪಟ್ಟ ಸಿಬ್ಬಂದಿಗಳಿಗೆ ಆಯಾ ಜಿಲ್ಲಾ ಮಟ್ಟದಲ್ಲಿ ವಾರ್ಡ್‌ಗಳ ಗಡಿನಿರ್ಣಯ ಕ್ರಮಗಳ ಕುರಿತು ತರಬೇತಿ ನೀಡಲಾಗುವುದು. ನಂತರವಷ್ಟೇ  ವಾರ್ಡ್‌ಗಳ ಗಡಿ ನಿರ್ಣಯ ಕ್ರಮ ಆರಂಭಗೊಳ್ಳಲಿದೆ.

RELATED NEWS

You cannot copy contents of this page