ಅಡೂರು: ಪಿಕಪ್ ಚಾಲಕ ನೋರ್ವ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಡೂರು ಬಳಿಯ ಮಣಿಯೂರು ಮೂಲಡ್ಕ ನಿವಾಸಿ ಗೋಪಾಲ ಎಂಬವರ ಪುತ್ರ ಯೋಗೀಶ್ (28) ಮೃತ ಯುವಕನಾಗಿದ್ದಾರೆ. ಇವರು ಇಂದು ಬೆಳಿಗ್ಗೆ ಮನೆ ಬಳಿಯ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತರು ತಂದೆ, ತಾಯಿ ಯಶೋದ, ಪತ್ನಿ ಪ್ರಜ್ವಲ, ಸಹೋದರ ಶರತ್,ಸಹೋದರಿ ಶರಣ್ಯ ಹಾಗೂ ಅಪಾರಬಂಧು-ಮಿತ್ರರನ್ನು ಅಗಲಿದ್ದಾರೆ.