ತಲಪಾಡಿಯಲ್ಲಿ ಆರು ಮಂದಿ ಸಾವಿಗೆ ಕಾರಣವಾದ ಬಸ್ ಚಾಲಕ ಸೆರೆ

ಮಂಜೇಶ್ವರ: ತಲಪ್ಪಾಡಿಯಲ್ಲಿ ಮೊನ್ನೆ ಮಧ್ಯಾಹ್ನ ಆರು ಮಂದಿಯ ಸಾವಿಗೆ ಕಾರಣವಾದ ಭೀಕರ ಬಸ್ ಅಪಘಾತಕ್ಕೆ ಸಂಬಂಧಿಸಿ ಅದರ ಚಾಲಕನನ್ನು ಮಂಜೇಶ್ವರ ಪೊಲೀ ಸರು ಬಂಧಿಸಿದ್ದಾರೆ. ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಾಗಲಕೋಟೆ  ಅಂಬೇಡ್ಕರ್ ನಗರದ  ನಿಜಲಿಂಗಪ್ಪ ಛಲವಾದಿ (47) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ.ಈತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು ಈ ವೇಳೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ.

ಮೊನ್ನೆ ಮಧ್ಯಾಹ್ನ 1.45ರ ವೇಳೆ ತಲಪಾಡಿಯಲ್ಲಿ ಅಪಘಾತ ಸಂಭವಿಸಿತ್ತು. ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿತ್ತು. ಇದರಿಂದ ಆಟೋ ರಿಕ್ಷಾ ಚಾಲಕ ಹಾಗೂ  ೫ ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.  ಅಲ್ಲದೆ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಸ್ ಬಳಿಕ ಹಿಮ್ಮುಖವಾಗಿ ಸಂಚರಿಸಿ ರಸ್ತೆ ಬದಿ ನಿಂತಿದ್ದ ಪ್ರಯಾಣಿಕರಿಗೆ  ಢಿಕ್ಕಿ ಹೊಡೆದಿತ್ತು. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ.

ಬಸ್ ಮೊದಲು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಳಿಕ ತನ್ನ ಸೀಟಿನಿಂದ ಕೆಳಗಿಳಿದು ಚಾಲಕ ಓಡಿ ಹೋಗಿ ದ್ದರಿಂದ ಇಳಿಜಾರು ರಸ್ತೆಯಲ್ಲಿ ಬಸ್ ಹಿಮ್ಮುಖವಾಗಿ ಸಂಚರಿಸಿತ್ತು.  ಇದೇ ವೇಳೆ ಬಸ್‌ಅಪಘಾತಕ್ಕೆ ಸಂಬಂಧಿಸಿ ಸ್ಪಷ್ಟೀಕರಣ ನೀಡಿದ ಕರ್ನಾಟಕ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಬಸ್ ಚಾಲಕನ ಅತೀ ವೇಗದ ಹಾಗೂ ಅಜಾ ಗರೂಕತೆಯಿಂದಾಗಿ ಅಪಘಾತಕ್ಕೀ ಡಾಗಿದೆ. ಅಲ್ಲದೆ ಯಾವುದೇ ರೀತಿಯ ಬ್ರೇಕ್‌ಫೇಲ್ ಸಂಭವಿಸಿಲ್ಲ.ತಾಂತ್ರಿಕ ದೋಷವೂ ಇಲ್ಲವೆಂದು ತಿಳಿಸಿದ್ದಾರೆ.

You cannot copy contents of this page