ಕುಂಬಳೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದ ಮರಗಳ ರೆಂಬೆ ಕಡಿದು ತೆರವು: ಮರದಲ್ಲಿದ್ದ ಹಕ್ಕಿಗಳು ವಾಸಸ್ಥಳವಿಲ್ಲದೆ ಕಂಗಾಲು

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿದ್ದ ಮರಗಳ ರೆಂಬೆಗಳನ್ನು ಕೆಎಸ್‌ಇಬಿ ಅಧಿಕಾರಿಗಳು ಕಡಿದು ತೆಗೆದಿದ್ದಾರೆ.

ಕುಂಬಳೆ ಪೇಟೆಯಲ್ಲಿ ಬದಿಯಡ್ಕ ಭಾಗಕ್ಕೆ ತೆರಳುವ ರಸ್ತೆ ಬದಿ ಆಟೋ ರಿಕ್ಷಾ ನಿಲ್ದಾಣ  ಸಮೀಪವಿದ್ದ ಮರಗಳ ರೆಂಬೆಗಳನ್ನು ಕಡಿದು ತೆಗೆಯಲಾಯಿತು. ಈ ಮರಗಳು ಎತ್ತರಕ್ಕೆ ಬೆಳೆದು ಅದರ ರೆಂಬೆಗಳು ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುತ್ತಿದ್ದವು. ಈ ಮರದಡಿಯಲ್ಲಿ ಕಾಲುದಾರಿಯಲ್ಲೇ ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ನಡೆದು ಹೋಗುತ್ತಿದ್ದರು. ಮರದ ರೆಂಬೆಗಳು  ವಿದ್ಯುತ್ ತಂತಿಗೆ ಸ್ಪರ್ಶಿಸುವ  ವೇಳೆ ಅದರ ಕೆಳಗೆ ನಡೆದು ಹೋಗುವವರಿಗೆ ಶಾಕ್ ತಗಲುವ ಸಾಧ್ಯತೆ ಇದೆಯೆಂದು ಇದರಿಂದ ಮರದ ರೆಂಬೆಗಳನ್ನು ಕಡಿದು ತೆಗೆಯಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಕೇಳಿಬಂದಿತ್ತು.  ಈ ಹಿನ್ನೆಲೆಯಲ್ಲಿ  ಇಂದು ಬೆಳಿಗ್ಗೆ ಅಲ್ಲಿಗೆ ತಲುಪಿದ ಕೆಎಸ್‌ಇಬಿ ಅಧಿಕಾರಿಗಳು ರೆಂಬೆಗಳನ್ನು ಕಡಿದು ತೆರವುಗೊಳಿಸಿದ್ದಾರೆ.

ಇದೇ ವೇಳೆ ಮರಗಳ ರೆಂಬೆಗಳನ್ನು ಕಡಿದು ತೆರವುಗೊಳಿಸಿದ ಪರಿಣಾಮ  ಆ ಮರಗಳಲ್ಲಿ ಗೂಡು ಕಟ್ಟಿ ಜೀವಿಸುತ್ತಿದ್ದ ಹಕ್ಕಿಗಳಿಗೆ ವಾಸಸ್ಥಳವಿಲ್ಲದಂತಾಗಿದೆ. ರೆಂಬೆ ಕಡಿಯುವ ವೇಳೆ ಮರಗಳಲ್ಲಿ ಹಕ್ಕಿಗಳ ಗೂಡು ಪತ್ತೆಯಾಗಿದೆ. ಅದರಲ್ಲಿದ್ದ ಹಕ್ಕಿಗಳು ಹಾರಿಹೋಗಿದ್ದು, ಗೂಡಿನಲ್ಲಿ ಒಂದು ಮರಿ ಹಕ್ಕಿ ಉಳಿದುಕೊಂಡಿದೆ. ಇದನ್ನು ಸಾಕಲು ಆಸಕ್ತಿಯುಳ್ಳವರಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page