ಮಂಗಲ್ಪಾಡಿ: ಪ್ರತಾಪನಗರ ಶ್ರೀ ಗಾಯತ್ರಿವಿಶ್ವಕರ್ಮ ಮಂದಿರದಲ್ಲಿ 47ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ ಇಂದು ಬೆಳಿಗ್ಗೆ ಸಮಾಪ್ತಿಗೊಂಡಿತು. ನಿನ್ನೆ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಗಣಹೋಮ, ವಿಶ್ವಕರ್ಮ ಹೋಮ, ಮಹಾಪೂಜೆ, ಮಧ್ಯಾಹ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಹುಮಾನ ವಿತರಣೆ ಹಾಗೂ ಸೂರ್ಯಾಸ್ತಮಾನದಿಂದ ಇಂದು ಬೆಳಿಗ್ಗೆ ಸೂರ್ಯೋದಯದ ತನಕ ವಿವಿಧ ಸಂಘ ಸಂಸ್ಥೆಗಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
