ಉಪ್ಪಳ: ಪ್ರತಾಪನಗರ ನಿವಾಸಿ, ಕೂಲಿ ಕಾರ್ಮಿಕ ಸದಾನಂದ (56) ನಿಧನ ಹೊಂದಿದರು. ಮೊನ್ನೆ ಮನೆ ಸಮೀಪದ ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅಸ್ವಸ್ಥಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದರು. ಆದರೆ ರಾತ್ರಿ ಮತ್ತೆ ಉಲ್ಬಣಗೊಂಡು ನಿಧನ ಸಂಭವಿಸಿದೆ. ಮೃತರು ಪತ್ನಿ ಸರಸ್ವತಿ, ಮಕ್ಕಳಾದ ಯತೀಶ್ ಕುಮಾರ್, ನವ್ಯ, ಸೊಸೆ ಸನ್ಮಿತ, ಅಳಿಯ ಕೃಷ್ಣ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







