ಗಲ್ಫ್ ಉದ್ಯೋಗಿ ಮನೆಯಿಂದ ಕಳವು

ಕಾಸರಗೋಡು:  ಗಲ್ಫ್ ಉದ್ಯೋಗಿ ಯಾದ ಉದುಮ ಬಾರಾದ ಮುರಳಿ ಎಂಬವರ ಮನೆಯಿಂದ ೮ ಪವನ್ ಚಿನ್ನಾಭರಣ ಹಾಗೂ ೫ ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿ ನಲ್ಲಿದ್ದ ನಗ-ನಗದು ದೋಚಿದ್ದಾರೆ.  ಮುರಳಿ ಗಲ್ಫ್‌ನಲ್ಲಿದ್ದಾರೆ.   ಮುರಳಿ ಅವರ ಪತ್ನಿ ಹಾಗೂ ಮಕ್ಕಳು ಸಮೀಪದಲ್ಲಿರುವ ಮುರಳಿಯ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಅಲ್ಲಿಂದ ಸ್ವಂತ ಮನೆಗೆ  ತೆರಳಿದಾಗ  ಕಳ್ಳರು ಮನೆಗೆ ನುಗ್ಗಿದ ವಿಷಯ ಅರಿವಿಗೆ ಬಂದಿದೆ. ಈ ಬಗ್ಗೆ  ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿದೆ.

RELATED NEWS

You cannot copy contents of this page