ಕೈಕಂಬದಲ್ಲಿ ತ್ಯಾಜ್ಯ ವಿರುದ್ಧ ಕ್ರಿಯಾ ಸಮಿತಿ ಹೋರಾಟಕ್ಕೆ

ಉಪ್ಪಳ: ಕೈಕಂಬದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದ ವಿರುದ್ಧ ಆಂದೋಲನ ತೀವ್ರಗೊಳಿಸಲು ಕ್ರಿಯಾ ಸಮಿತಿ ಮುಂದೆ ಬಂದಿದೆ. ಕೈಕಂಬದ ಅಪಾರ್ಟ್‌ಮೆಂಟೊಂದರ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡುವುದರ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಕೈಕಂಬ ಮಾಲಿನ್ಯಮುಕ್ತ ಕ್ರಿಯಾ ಸಮಿತಿ ತಿಳಿಸಿದೆ.

ಈ ಅಪಾರ್ಟ್‌ಮೆಂಟ್‌ನಿಂದ ಸಮೀಪ ನಿವಾಸಿಗಳ ಕುಡಿಯುವ ನೀರಿನ ಮೂಲ ಕೂಡಾ ಮಲಿನೀಕರ ಣಗೊ ಳ್ಳುತ್ತಿದ್ದು, ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ. ಈ ಮಧ್ಯೆ ನಿರಂತರವಾಗಿ ಫ್ಲಾಟ್‌ನಿಂದ ಮಲಿನ ಜಲವನ್ನು ಸಾರ್ವಜನಿಕ ಸ್ಥಳಗಳಿಗೆ ಹರಿಯಬಿಡಲಾಗುತ್ತಿದೆ. ಪಂಚಾಯತ್, ಆರೋಗ್ಯ ಇಲಾಖೆ ಅಧಿಕಾರಿಗಳು ಇದರ ವಿರುದ್ಧ ಮೌನ ವಹಿಸಿದ ಹಿನ್ನೆಲೆಯಲ್ಲಿ ಕ್ರಿಯಾ ಸಮಿತಿ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದೆ.

ಸಮಿತಿ ಅಧ್ಯಕ್ಷ ಮಹಮ್ಮೂದ್ ಖಾದರ್ ಹಾಜಿ ಈ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ಮಹಮ್ಮೂದ್ ಕೈಕಂಬ, ಅಬ್ದುಲ್ ರಹಿಮಾನ್ ಹಾಜಿ, ಅಬೂಕರೀಷ್ಮಾ, ಖಾದರ್ ಆಲಿಕುಂಞಿ ಹಾಜಿ, ನಾಸರ್ ಕರೂರ್, ಲತೀಫ್ ಮಕ್ಕಿ, ಸಂಚಾಲಕ ಸಿದ್ದಿಕ್ ಕೈಕಂಬ, ಅಬೂಬಕ್ಕರ್ ಮಾತನಾಡಿದರು.

RELATED NEWS

You cannot copy contents of this page