ಕಟ್ಟಡದಿಂದ ಬಿದ್ದು ವ್ಯಾಪಾರಿ ಸಾವಿಗೀಡಾದ ಪ್ರಕರಣ: ಗುತ್ತಿಗೆದಾರನ ಬಂಧನ ಬೆನ್ನಲ್ಲೇ ಪುತ್ರ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಅದರ ಮಾಲಕನಾದ ವ್ಯಾಪಾರಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಸೆರೆಗೀಡಾದ ಗುತ್ತಿಗೆದಾರನ ಪುತ್ರ ಕೆರೆಯಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಪುಲ್ಲೂರು ಪುಳಿಕ್ಕಾಲ್‌ನ ನರೇಂದ್ರನ್ ಎಂಬವರ ಪುತ್ರ ಕಾಶೀನಾಥನ್ (17) ಮೃತಪಟ್ಟ ದುರ್ದೈವಿಯಾಗಿದ್ದಾನೆ. ನಿನ್ನೆ ಸಂಜೆ  ಕಾಶೀನಾಥನ್ ನಾಪತ್ತೆಯಾಗಿದ್ದನು. ಈ ಹಿನ್ನೆಲೆ ಯಲ್ಲಿ  ಸಂಬಂಧಿಕರು ಶೋಧ ನಡೆಸು ತ್ತಿದ್ದ ವೇಳೆ ಪುಲ್ಲೂರು ಕ್ಷೇತ್ರ ಸಮೀ ಪದ ಕೆರೆ  ಬಳಿ ಕಾಶೀನಾಥನ್‌ನ ಬಟ್ಟೆಬರೆ, ಚಪ್ಪಲಿ  ಕಂಡುಬಂದಿತ್ತು.  ಇದರಿಂದ ನಾಗರಿಕರು ಹಾಗೂ ಅಗ್ನಿಶಾಮಕದಳ …

ಯುವಕನ ಕೊಲೆಗೆ ಯತ್ನಿಸಿದ ಪ್ರಕರಣ : ಆರೋಪಿಗೆ ಸಂರಕ್ಷಣೆ ನೀಡಿದ ಕರ್ನಾಟಕ ನಿವಾಸಿ ಸೆರೆ

ಕಾಸರಗೋಡು: ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗಳಿಗೆ ಸಂರಕ್ಷಣೆ ಒದಗಿಸಿದುದಕ್ಕೆ ಸಂಬಂಧಿಸಿ ಕರ್ನಾಟಕ ನಿವಾಸಿಯಾದ ಯುವಕನೋರ್ವನನ್ನು ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದ ಪೊಲೀಸರು  ಬಂಧಿಸಿದ್ದಾರೆ. ಕರ್ನಾಟಕದ ಕಡಬ ಕುಂಡಾಜೆ ಅತೂರು ರಾಮಕುಂಜೆ ನಿವಾಸಿ ಸಮೀರ್ ಸಿ.ಕೆ.(35) ಬಂಧಿತ ಆರೋಪಿ. ಜುಲೈ ೨೪ರಂದು ಚೆರ್ಕಳ ಕೋಳಿಕ್ಕರೆ ಹೌಸ್‌ನ ಮೊಹಮ್ಮದ್ ನವಾಜ್ (32) ಎಂಬಾತನನ್ನು ಚೆರ್ಕಳ ಪೇಟೆಯಲ್ಲಿ ಪೂರ್ವದ್ವೇಷದ ನಿಮಿತ್ತ ಕಾರಿನಲ್ಲಿ ಬಂದ ನಾಲ್ವರ ತಂಡ ಇರಿದು ಗಾಯಗೊಳಿಸಿತ್ತು. ಅದಕ್ಕೆ ಸಂಬಂಧಿಸಿ ಗಾಯಾಳು ನೀಡಿದ ದೂರಿನಂತೆ ಅರ್ಶಾದ್ …

ಬ್ರಹ್ಮಶ್ರೀ ನಾರಾಯಣನ್ ಪದ್ಮನಾಭನ್ ಮರುದಂಪಾಡಿತ್ತಾಯರ್ ನಿಧನ

ಕಾಸರಗೋಡು: ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದ ಪೆರಿಯ ನಂಬಿಯವರಾಗಿದ್ದ ಪುಲ್ಲೂರು ವಿಷ್ಣುಮಂಗಲಂ ಮರುದಂಪಾಡಿ ಇಲ್ಲಂ ನಿವಾಸಿ ನಾರಾಯಣನ್ ಪದ್ಮನಾಭನ್ (64) ನಿಧನ ಹೊಂದಿದರು. ಹೃದಯಾಘಾತದಿಂದ  ನಿನ್ನೆ ರಾತ್ರಿ 11.30ರ ವೇಳೆ ನಿಧನ ಸಂಭವಿಸಿದೆ. ಸ್ನಾನಗೃಹದಲ್ಲಿ  ಬಿದ್ದ ಸ್ಥಿತಿಯಲ್ಲಿ ಕಂಡು ಬಂದ ಇವರನ್ನು ಕೂಡಲೇ ಮಾವುಂಗಾಲ್‌ನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿ ತಾದರೂ ಜೀವ ಉಳಿಸಲು ಸಾಧ್ಯ ವಾಗಲಿಲ್ಲ. ಏಟುಮಾನೂರ್ ಮಹಾ ದೇವ ಕ್ಷೇತ್ರ, ಕುಮಾರನೆಲ್ಲೂರ್ ದೇವಿ ಕ್ಷೇತ್ರ, ಆಯಂಬಾರ ಶ್ರೀ ಮಹಾ ವಿಷ್ಣು ಕ್ಷೇತ್ರಗಳಲ್ಲಿ ಅರ್ಚಕರಾಗಿದ್ದರು. ೨೦೦೮ರಿಂದ …

ಮುಂದುವರಿಯುತ್ತಿರುವ ‘ಆಪರೇಶನ್ ಅಖಾಲ್’ : ಇಬ್ಬರು ಯೋಧರ ವೀರ ಮೃತ್ಯು: ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದರನ್ನು ನಿರ್ಮೂಲನೆಗೊಳಿ ಸಲು ಭಾರತೀಯ ಸೇನಾ ಪಡೆ ಆಪರೇಶನ್ ಅಖಾಲ್ ಎಂಬ ಹೆಸರಲ್ಲಿ  ಆರಂಭಿಸಿರುವ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನಾ ಪಡೆಯ ಇಬ್ಬರು  ಜವಾನರು ವೀರ ಮೃತ್ಯು ಹೊಂದಿದ್ದಾರೆ. 9 ಸೈನಿಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಭಾರತೀಯ ಸೇನಾ ಪಡೆಯ ಲ್ಯಾನ್ಸ ನಾಯಕ್ ಪ್ರಿತ್ವಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಈ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದಾರೆ. ಇದೇ ಸಂದರ್ಭದಲ್ಲಿ  ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. …

ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 20.8 ಲಕ್ಷ ರೂ. ಪತ್ತೆ: ಕರ್ನಾಟಕ ನಿವಾಸಿ ವಶ

ಮಂಜೇಶ್ವರ: ಸರಿಯಾದ ದಾಖಲುಪತ್ರಗಳಿಲ್ಲದೆ ಬಸ್ಸಿನಲ್ಲಿ ಕಾಸರ ಗೋಡಿನತ್ತ ಸಾಗಿಸುತ್ತಿದ್ದ 20,80,000 ರೂ. ನಗದನ್ನು ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಿಂದ ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ್ ಕುಮಾರ್ ನೇತೃತ್ವದ ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ದಕ್ಷಿಣಕನ್ನಡ ಜಿಲ್ಲೆಯ ಜಯಶೀಲ ಪುಟ್ಟಣ್ಣ ಶೆಟ್ಟಿ (52) ಎಂಬಾತನನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡು ನಂತರ ವಶಪಡಿಸಲಾದ ನಗದು ಸಹಿತ ಆತನನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮಂಗಳೂರಿನಿಂದ ಕಾಸರಗೋ ಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ ನಗದು ವಶಪಡಿಸಲಾಗಿದೆ. ಈ ಕಾರ್ಯಾಚರಣೆ …

ಮಾದಕದ್ರವ್ಯ ಕೈವಶ: ಇಬ್ಬರ ಸೆರೆ

ಬದಿಯಡ್ಕ: ಮಾದಕದ್ರವ್ಯವಾದ 2.245 ಗ್ರಾಂ ಮೆಥಾಫಿಟಾಮಿನ್ ಕೈವಶವಿರಿಸಿಕೊಂಡ ಆರೋಪದಂತೆ ಇಬ್ಬರನ್ನು ಅಬಕಾರಿ ತಂಡ ಸೆರೆಹಿಡಿದು ಪ್ರಕರಣ ದಾಖಲಿಸಿಕೊಂಡಿದೆ. ಉಬ್ರಂಗಳ ಚಕ್ಕೂಟಲ್ ವೀಟಿಲ್ ಮೊಹಮ್ಮದ್ ಸಾದಿಕ್ ಸಿ.ಬಿ ಮತ್ತು ನೆಕ್ರಾಜೆ ಚೆನ್ನಡ್ಕ ನಿವಾಸಿ ನೌಶಾದ್ ಎ.ಕೆ ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರ. ಬದಿಯಡ್ಕ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿ.ಎ. ಜಿಷ್ಣು ಪಿ.ಆರ್ ನೇತೃತ್ವದ ಅಬಕಾರಿ ಕೋಂಬಿಂಗ್ ಆಪರೇಶನ್‌ನ ಅಂಗವಾಗಿ ಉಬ್ರಂಗಳ ಚಕ್ಕೂಟದಲ್ಲಿ  ನಡೆಸಿದ ಪರಿಶೀಲನೆಯಲ್ಲಿ ಈ ಇಬ್ಬರನ್ನು ಸೆರೆಹಿಡಿದಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್‌ಗಳಾದ ಅಬ್ದುಲ್ಲ …

ಉದ್ಯಮಿ, ಧಾರ್ಮಿಕ ಮುಂದಾಳು ನಿಧನ

ಉಪ್ಪಳ: ಕಯ್ಯಾರು ನಿವಾಸಿ ಉದ್ಯಮಿ, ಧಾರ್ಮಿಕ ಮುಂದಾಳು ಹರಿಶ್ಚಂದ್ರ ಹೊಳ್ಳ (83) ನಿಧನ ರಾದರು. ನಿನ್ನೆ ಮಧ್ಯಾಹ್ನ ಇವರಿಗೆ ಮನೆಯಲ್ಲಿ ಹೃದಯÁಘಾತ ಉಂ ಟಾಗಿತ್ತು. ಉಪ್ಪಳದ ಪೂರ್ಣಿಮಾ ಇಂಡಸ್ಟಿçÃಸ್ ಇದರ ಮಾಲಕರಾಗಿ ದ್ದರು. ಉಪ್ಪಳ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದರು. ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸAಸ್ಥೆಯ ಪ್ರದಾನಿಯÁಗಿ ದ್ದರು. ಅಲ್ಲದೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಮತ್ತು ಸಂಘ ಸಂಸ್ಥೆಗಳಿಗೆ ಉದಾರ ಸಹಾಯ ನೀಡುತ್ತಿದ್ದರು. ಮೃತರು ಪತ್ನಿ ಲಲಿತ, ಮಕ್ಕಳಾದ ಪೂರ್ಣಿಮಾ, ಪದ್ಮಿನಿ, ಪ್ರೀತಿ, ಸಂತೋಷ್ ಹೊಳ್ಳ, ಅಳಿ …

ರೈಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ ಸಾವು

ಕಾಸರಗೋಡು: ರೈಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ ಬಳಿಕ ಸಾವನ್ನಪ್ಪಿದ ಘಟನೆ ನಡೆದಿದೆ. ತಮಿಳುನಾಡು ಉಳಿಲಾಂಪೆಟ್ಟಿ ಮಲಾಂಪೆಟ್ಟಿ  ನಿವಾಸಿ ಚೆಲ್ಲನ್ ಎಂಬವರ ಪುತ್ರಿ ಸಾರಾ ಚೆಲ್ಲನ್ (10) ಸಾವನ್ನಪ್ಪಿದ ಬಾಲಕಿ. ಮೂಲತಃ ಮಹಾರಾಷ್ಟ್ರ  ನಿವಾಸಿಯಾಗಿದ್ದಾಳೆ.  ಅಸೌಖ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಮಹಾರಾಷ್ಟ್ರದ ರೋಹದಿಂದ ದಾದರ್-ತಿರುನಲ್ವೇಲಿ ಎಕ್ಸ್‌ಪ್ರೆಸ್  ರೈಲಿನಲ್ಲಿ ಮಧುರೈಗೆ ಕೊಂಡೊಯ್ಯ ಲಾಗುತ್ತಿತ್ತು. ಬಾಲಕಿಯ ಜತೆಗೆ ಆಕೆಯ ತಾಯಿಯೂ ಇದ್ದರು. ಪ್ರಯಾಣ ಮಧ್ಯೆ  ಬಾಲಕಿ ಪ್ರಜ್ಞಾಹೀನಗೊಂಡಳು.  ರೈಲು ಹೊಸದುರ್ಗ ನಿಲ್ದಾಣಕ್ಕೆ ತಲುಪಿದಾಗ ಅಲ್ಲಿನ ರೈಲ್ವೇ ಸಿಬ್ಬಂದಿಗಳು ಬಾಲಕಿಯನ್ನು ತಕ್ಷಣ …

ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ: ಭಾರೀ ನಷ್ಟ

ಕಾಸರಗೋಡು: ವಿದ್ಯಾನಗರದ ಕುಟುಂಬ ನ್ಯಾಯಾಲಯ ಸಮೀಪ ಉಳಿಯತ್ತಡ್ಕ ರಸ್ತೆ ಬದಿಯ 100 ಕೆವಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ನಲ್ಲಿ ನಿನ್ನೆ  ದಿಢೀರ್ ಬೆಂಕಿ ಎದ್ದು ಭಾರೀ ಭೀತಿ ಸೃಷ್ಟಿಸಿದೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವೇಣು ಗೋಪಾಲ್‌ರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ  ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರ. ಇದರಿಂದ ವಿದ್ಯುತ್ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ. ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ತಗಲಿಕೊಂಡಿರುವುದರಿಂದಾಗಿ ಗಂಟೆಗಳ ತನಕ ವಿದ್ಯುತ್ ಪೂರೈಕೆ …

30 ಬಾಟ್ಲಿ ತೆಂಗಿನೆಣ್ಣೆ, 1 ಪೆಟ್ಟಿಗೆ ಆಪಲ್ ಕಳವುಗೈದ ಆರೋಪಿ ಸೆರೆ

ಕೊಚ್ಚಿ: ಎರ್ನಾಕುಳಂ ಆಲುವಾದ ವ್ಯಾಪಾರ ಸಂಸ್ಥೆಯಿಂದ ತೆಂಗಿನೆಣ್ಣೆ ಕಳವುಗೈದ ಪ್ರಕರಣದಲ್ಲಿ ಆರೋಪಿ ಸೆರೆ. ಅಸ್ಸಾಂ ನಿವಾಸಿ ಜಾವೇದ್ ಅಲಿಯನ್ನು ಆಲುವಾ ಪೊಲೀಸರು ಪೆರುಂಬಾವೂರ್‌ನಿಂದ ಸೆರೆ ಹಿಡಿದಿದ್ದಾರೆ. ನಿನ್ನೆ ತೋಟ್ ಮುಖಂನ ಶಾ ವೆಜಿಟೇಬಲ್ಸ್‌ನಿಂದ ಕಳವು ನಡೆಸಲಾಗಿತ್ತು. 30 ಬಾಟಲಿ ತೆಂಗಿನೆಣ್ಣೆ ಹಾಗೂ 1 ಪೆಟ್ಟಿಗೆ ಆಪಲ್, ೫೦೦೦ದಷ್ಟು ನಗದು ಇಲ್ಲಿಂದ ಕಳವುಗೈಯ್ಯಲಾಗಿತ್ತು. 100ರಷ್ಟು ಸಿಸಿ ಟಿವಿ ದೃಶ್ಯಗಳನ್ನು ತಪಾಸಣೆಗೊಳಪಡಿಸಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಕೋತಮಂಗಲದಿಂದ ಕಳವುಗೈದ ಓಮ್ನಿ ವ್ಯಾನ್‌ನಲ್ಲಿ ರಾತ್ರಿ ಸಂಚಾರ ನಡೆಸಿ ಕಳವು ನಡೆಸುವುದು …