ಕುಂಬಳೆಯ ಯುನಾನಿ ಆರೋಗ್ಯ ಕೇಂದ್ರವನ್ನು ಆಶ್ರಯಿಸುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ : ಈ ವರ್ಷ 32 ಲಕ್ಷ ರೂಪಾಯಿಗಳ ಔಷಧಿ ಖರೀದಿ

ಕುಂಬಳೆ:  ಯುನಾನಿ ಚಿಕಿತ್ಸೆ ಫಲಪ್ರದವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿರುವ ರಾಜ್ಯದ ಏಕೈಕ ಸರಕಾರಿ ಯುನಾನಿ ಆರೋಗ್ಯ ಕೇಂದ್ರಕ್ಕೆ  ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲುಪುತ್ತಿದ್ದಾರೆ. ಇದರಿಂದ ಈ ವರ್ಷ ಆರಂಭದಲ್ಲಿ ಔಷಧಿ ಕ್ಷಾಮ ಎದುರಿಸಬೇಕಾಗಿ ಬಂದಿತ್ತು. ಡಿಸ್ಪೆನ್ಸರಿಯ ಆಡಳಿತ ಹೊಣೆಗಾರಿಕೆಯುಳ್ಳ ಕುಂಬಳೆ ಪಂಚಾಯತ್ ಔಷಧಿ ಖರೀದಿಸಲು 2 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. 2025-26ನೇ ಹಣಕಾಸು ವರ್ಷದಲ್ಲಿ 32 ಲಕ್ಷ ರೂಪಾಯಿಗಳ ಔಷಧಿ ರೋಗಿಗಳಿಗೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಔಷಧಿ ಕ್ಷಾಮ ಕಂಡುಬಂದ ಬಗ್ಗೆ ಮೆಡಿಕಲ್ ಆಫೀಸರ್ ಡಾ| ಶಕೀರ್ …

ಜ್ಯೂನಿಯರ್ ವಿದ್ಯಾರ್ಥಿಗೆ ಹಲ್ಲೆ: 15 ಮಂದಿ ವಿರುದ್ಧ ಕೇಸು

ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳ ತಂಡವೊಂದು ಜ್ಯೂನಿಯರ್ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರು ಉಂಟಾಗಿದೆ. ಈ ಘರ್ಷಣೆಯಲ್ಲಿ ಪ್ರಥಮ ವರ್ಷ ಪದವಿಯ ವಿದ್ಯಾರ್ಥಿ ಮಲಪ್ಪುರಂ ತಳ್ಳಿಪ್ಪಾಡಿ ಪುರಂಙ ಒಲಂಗಾಟ್ ವೀಟಿಲ್‌ನ ಒ.ಎಂ. ಸಾಹಿದ್ (19) ಗಾಯ ಗೊಂಡಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ ನೀಡಿದ ದೂರಿನಂತೆ ಇದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳಾದ ಸವಾದ್, ಗಸ್ವಾನ್, ಸುನೈಬ್, ಅಲಿ, ಅಜ್ಮಲ್  ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿ …

ಪೆರಿಯ ಅವಳಿ ಕೊಲೆ ಪ್ರಕರಣ: ಕೆ. ಮಣಿಕಂಠನ್‌ರನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ

ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಿಪಿಎಂ ನೇತಾರನೂ, ಕಾಞಂಗಾಡ್ ಬ್ಲೋಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ಮಣಿಕಂಠನ್‌ರನ್ನು ರಾಜ್ಯ ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಮಣಿಕಂಠನ್ ರನ್ನು ಬ್ಲೋಕ್ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಹಾಗೂ ಸದಸ್ಯತ್ವದಿಂದ ಹೊರಹಾಕಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನೇತಾರ ನ್ಯಾಯವಾದಿ ಎಂ.ಕೆ. ಬಾಬುರಾಜ್ ರಾಜ್ಯ ಚುನಾವಣಾ ಆಯೋಗವನ್ನು ಸಮೀಪಿಸಿದ್ದರು. ಕೆ. ಮಣಿಕಂಠನ್ ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯನಾಗಿದ್ದಾರೆ. ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಣಿಕಂಠನ್ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಪೆರಿಯ ಅವಳಿ …

ಮೃತದೇಹಗಳನ್ನು ಹೂತು ಹಾಕಿದ ಬಗ್ಗೆ ಹೇಳಿಕೆ: ಧರ್ಮಸ್ಥಳದಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ; ರಾಡಾರ್ ಬಳಸಿ ಶೋಧ ನಡೆಸುವಂತೆಯೂ ಒತ್ತಾಯ

ಬೆಳ್ತಂಗಡಿ: ಧರ್ಮಸ್ಥಳ ಪರಿಸರದಲ್ಲಿ ಹಲವು ಮಹಿಳೆಯರ ಅಸಹಜ ಸಾವು ಸಂಭವಿಸಿದೆ ಯೆಂದೂ, ಅವರ ಮೃತದೇಹಗಳನ್ನು ತಾನು ಹೂತುಹಾಕಿದ್ದೇನೆಂದು ಆರೋಪಿಸಿ ವ್ಯಕ್ತಿಯೋರ್ವ ನೀಡಿದ ದೂರಿನಂತೆ ವಿಶೇಷ ತನಿಖಾ ತಂಡ ತನಿಖೆ ಮುಂದುವರಿಸಿದೆ. ಕಳೆದೊಂ ದು ವಾರದಿಂದ ಧರ್ಮಸ್ಥಳ ಪರಿಸರದ ಕಾಡು ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಮೃತದೇಹ ಹೂತು  ಹಾಕಲಾಗಿದೆಯೆಂದು ದೂರುಗಾರ ಸೂಚಿಸಿದ 13 ಸ್ಥಳಗಳ ಪೈಕಿ ಆರನೇ ಸ್ಥಳದಲ್ಲಿ  ಮಾತ್ರ ಕಳೇಬರವೊಂದು ಲಭಿಸಿದೆ. ಉಳಿದೆಡೆ ಯಾವುದೇ ಮೃತದೇಹದ ಕುರುಹು ಲಭಿಸಿಲ್ಲವೆಂದು ತನಿಖಾ ತಂಡ ತಿಳಿಸಿದೆ.  ನಿನ್ನೆ ಬೆಳಿಗ್ಗಿನಿಂದ …

ತಲಪಾಡಿಯಿಂದ ತೂಮಿನಾಡು ವರೆಗಿನ ಸರ್ವೀಸ್ ರಸ್ತೆಯಲ್ಲಿ ತ್ಯಾಜ್ಯ ರಾಶಿ: ಸಾರ್ವಜನಿಕರಲ್ಲಿ ಆಕ್ರೋಶ

ಮಂಜೇಶ್ವರ: ಕಾಮಗಾರಿ ಪೂರ್ಣಗೊಂಡಿರುವ  ಹೆದ್ದಾರಿಯ ತಲಪಾಡಿಯಿಂದ ತೂಮಿನಾಡು ತನಕದ ಸರ್ವೀಸ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ದುರ್ಗಂಧದಿಂದ ಜನರು ಮೂಗು ಮುಚ್ಚಿ ಸಂಚರಿ ಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಕಂಬ, ಉಪ್ಪಳ ಗೇಟ್ ಪರಿಸರದಲ್ಲೂ ವ್ಯಾಪಕವಾಗಿ ತ್ಯಾಜ್ಯ ಕಂಡುಬರುತ್ತಿದ್ದು, ಈ ದಾರಿಯಾಗಿ ಶಾಲಾ ವಿದ್ಯಾರ್ಥಿಗಳು, ನೂರಾರು ವಾಹನಗಳು, ಕಾಲ್ನಡೆ ಮೂಲಕ ಜನರು ಸಂಚರಿಸುತ್ತಿದ್ದಾರೆ. ಪ್ಲಾಸ್ಟಿಕ್, ಆಹಾರ  ಅವಶಿಷ್ಟಗಳು, ಉಪಯೋಗ ಶೂನ್ಯವಾದ ವಿವಿಧ ವಸ್ತುಗಳ ಸಹಿತ ತ್ಯಾಜ್ಯ ರಾಶಿಯಲ್ಲಿ ಕಂಡುಬರುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಭೀತಿಯಿದ್ದು, ಸ್ಥಳೀಯ …

ವಿವಿಧ ಬೇಡಿಕೆ ಮುಂದಿಟ್ಟು ಕುಂಬಳೆಯಲ್ಲಿ ಆಟೋ ರಿಕ್ಷಾ ಕಾರ್ಮಿಕರಿಂದ ಪಂ. ಕಚೇರಿ ಮಾರ್ಚ್

ಕುಂಬಳೆ: ಆಟೋ ಕಾರ್ಮಿಕರ ಯೂನಿಯನ್ ಸಿಐಟಿಯು ಕುಂಬಳೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಪಂಚಾಯತ್‌ಗೆ ಮಾರ್ಚ್, ಧರಣಿ ನಡೆಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಎ. ರಹ್ಮಾನ್ ಉದ್ಘಾಟಿಸಿದರು. ಇರ್ಷಾದ್ ಚಾಕೊ ಅಧ್ಯಕ್ಷತೆ ವಹಿಸಿದರು. ಸಿಐಟಿಯು ಏರಿಯಾ ಕಾರ್ಯದರ್ಶಿ  ಪಿ.  ಇಬ್ರಾಹಿಂ, ಜಿ. ರತ್ನಾಕರನ್, ಪ್ರಸಾದ್ ಕುಮಾರ್, ಅಲಿಬಾಯ್, ಅಬ್ಬಾಸ್ ಮಾತನಾಡಿದರು. ಎಂ.ಸಿ. ದಿನೇಶನ್ ಸ್ವಾಗತಿಸಿದರು. ಅನಿಲ್ ಕುಂಬ್ಳೆ ರಸ್ತೆಯಿಂದ ಆರಂಭಿಸಿದ ಮೆರವಣಿಗೆಗೆ ಶರೀಫ್, ಅಬ್ದುಲ್ ಜಲೀಲ್, ಮೊಹಮ್ಮದ್ ರಾಫಿ, ಮೊಹಮ್ಮದ್ ಶರೀಫ್ ಮುಳಿಯಡ್ಕ ನೇತೃತ್ವ ನೀಡಿದರು. ಪಾರ್ಕಿಂಗ್ ನಂಬ್ರ …

ನಟ ಸಂತೋಷ್ ಬಾಲರಾಜ್ ನಿಧನ

ಬೆಂಗಳೂರು: ಅನಾರೋಗ್ಯ ತಗಲಿ ಚಿಕಿತ್ಸೆಯಲ್ಲಿದ್ದ ಸ್ಯಾಂಡಲ್‌ವುಡ್ ನಟ ಸಂತೋಷ್ ಬಾಲರಾಜ್ (38) ನಿಧನ ಹೊಂದಿದರು. ಹಳದಿ ಕಾಮಾಲೆ ರೋಗದಿಂದ ಬಳಲುತ್ತಿದ್ದರು. ಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕರಿಯ -2, ಕೆಂಪ, ಗಣಪ, ಬರ್ಕ್ಲಿ, ಸತ್ಯ ಮೊದಲಾದ ಸಿನಿಮಾಗಳಲ್ಲಿ ನಾಯಕನಟರಾಗಿ ಅಭಿನಯಿಸಿದ್ದರು.

ಅಡುಗೆ ಕೋಣೆಯೇ ಔಷಧಾಲಯ ಆಗಬೇಕು-ಕೊಂಡೆವೂರು ಶ್ರೀ

ಉಪ್ಪಳ: ಅಡುಗೆ ಕೋಣೆಯೇ ಔಷಧಾಲಯ ಆಗಿದ್ದ ಕಾಲವೊಂದು ನಮಗಿತ್ತು. ಆದರೆ ಈಗಿನ ಆಹಾರ ಪದ್ಧತಿಯಿಂದಾಗಿ ಔಷಧಾಲಯವನ್ನು ನಂಬಿಕೊಳ್ಳಬೇಕಾದ ಕೆಟ್ಟ ಪರಿಸ್ಥಿತಿ ಉಂಟಾಗಿದೆಯೆಂದು ಕೊಂಡೆವೂರು ಶ್ರೀ ಯೋಗಾನಂದ ಅಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಕೊಂಡೆವೂರು ಮಠದಲ್ಲಿ ನಡೆದ ಕರ್ಕಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಆಹಾರ ಪದ್ಧತಿಯಲ್ಲಿ ಜನಜಾಗೃತಿ ಮೂಡಿಸಲು ಕರ್ಕಟಕ ಮಾಸದಲ್ಲಿ ನಮ್ಮ ಪರಿಸರದಲ್ಲಿಯೇ ದೊರಕುವ ಗಿಡ, ಬಳ್ಳಿ, ಎಲೆಗಳನ್ನು ಬಳಸಿ ಔಷಧೀಯ ಗಂಜಿ ಎಂಬ ಕಾರ್ಯಕ್ರಮ ಕಳೆದ …

ಪತಿ ಮನೆಯಲ್ಲಿ ಯುವತಿ ನೇಣು

ಕಲ್ಲಿಕೋಟೆ: ಹಾಲುಶ್ಶೇರಿ ಪೂನೂರು ಎಂಬಲ್ಲಿ ಪತಿ ಗೃಹದಲ್ಲಿ ಯುವತಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಲ್ಲಿನ ಕರಿಂಗಾಳಿಮ್ಮಲ್‌ನಲ್ಲಿ ವಾಸಿಸುವ ಶ್ರೀಜಿತ್‌ರ ಪತ್ನಿ ಜಿಸ್ನಾ (24) ಮೃತಪಟ್ಟವರು. ಕಣ್ಣೂರು ಕೇಳಗಂ ನಿವಾಸಿಯಾಗಿದ್ದಾರೆ. ನಿನ್ನೆ ಸಂಜೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮನೆಮಂದಿ ಕಂಡಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಎರಡು ವರ್ಷದ ಮಗು ಮಾತ್ರವಿತ್ತೆನ್ನಲಾಗಿದೆ. ಪತಿಯ ತಂದೆ ಕೆಲಸ ಮುಗಿಸಿ ಹಿಂತಿರುಗಿದಾಗ ಜಿಸ್ನಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮೂರು ವರ್ಷದ ಹಿಂದೆ ಇವರ ವಿವಾಹ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿದೀಪ ಸ್ಥಾಪಿಸುವುದರಲ್ಲಿ ತಾರತಮ್ಯ- ಕಾಂಗ್ರೆಸ್ ಆರೋಪ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಕಲ್ಲಂಗೈಯಿಂದ ಸಿಪಿಸಿಆರ್‌ಐವರೆಗೆ ಬೀದಿ ದೀಪ ಸ್ಥಾಪಿಸುವುದರಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆಂದು ಕಾಂಗ್ರೆಸ್ ಮಂಡಲ ಸಮಿತಿ ಆರೋಪಿಸಿದೆ. ಈ ಭಾಗದಲ್ಲಿ ನಿರ್ಮಾಣ ಚಟುವಟಿಕೆ 95 ಶೇಕಡಾ ಪೂರ್ತಿಯಾದಾಗ ಕಲ್ಲಂಗೈಯಿಂದ ಕುಳಂಗರ ವರೆಗೆ ಬೀದಿ ದೀಪ ಸ್ಥಾಪಿಸಿಲ್ಲವೆಂದು, ಇದು ತಾರತಮ್ಯ ನೀತಿಯಾಗಿದೆ ಎಂದು ಕಾಂಗ್ರೆಸ್ ಸಮಿತಿ ಆಪಾದಿಸಿದೆ. ಈ ಬಗ್ಗೆ ಗುತ್ತಿಗೆದಾರರಲ್ಲಿ ವಿಚಾರಿಸಿದಾಗ ಜನವಾಸ ಕೇಂದ್ರವಲ್ಲದ ಪ್ರದೇಶವಾದ ಕಾರಣ ಬೀದಿ ದೀಪ ಸ್ಥಾಪಿಸದಿರುವುದು ಎಂದು ಉತ್ತರ ಲಭಿಸಿರುವುದಾಗಿ ಕಾಂಗ್ರೆಸ್ ಅಧಿಕಾರಿಗಳು ತಿಳಿಸಿದ್ದಾರೆ. …