೧೯ ದಿನಗಳ ಹಿಂದೆ ವಿವಾಹವಾದ ಯುವತಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಹತ್ತೊಂಬತ್ತು ದಿನಗಳ ಹಿಂದೆಯಷ್ಟೇ  ವಿವಾಹವಾದ ಯುವತಿ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉಕ್ಕಿನಡ್ಕದ ಜಾಫರ್ ತಾಜು ದ್ದೀನ್ ಎಂಬವರ ಪತ್ನಿ ಉಮೈರಾ ಬಾನು (೨೨) ಸಾವನ್ನಪ್ಪಿದ ಯುವತಿ. ನಿನ್ನೆ ಬೆಳಿಗ್ಗೆ ಗಂಟೆ ೧೧- ೧೧.೧೦ರ ಮಧ್ಯೆ ಘಟನೆ ನಡೆದಿದೆಯೆಂದು  ಬದಿಯಡ್ಕ ಪೊಲೀಸರು ಈ ಬಗ್ಗೆ ದಾಖ ಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ನಿನ್ನೆ ಬೆಳಿಗ್ಗೆ ಕುಟುಂಬದ ಇತರ ಸದಸ್ಯರು ಮನೆಯಿಂದ ಹೊರಹೋಗಿದ್ದರು. ಆಗ ಉಮೈರಾ ಬಾನು ಹಾಗೂ ಪತಿ ಜಾಫರ್ ತಾಜುದ್ದೀನ್ ಮಾತ್ರವೇ …

ಡ್ರೈವಿಂಗ್ ಕಲಿಯಲು ಹೋದ ಯುವತಿ ನಾಪತ್ತೆ

ಬದಿಯಡ್ಕ: ಡ್ರೈವಿಂಗ್ ಕಲಿಯಲೆಂದು ತಿಳಿಸಿ ಮನೆಯಿಂದ ಹೋದ ಯುವತಿ ನಾಪತ್ತೆಯಾಗಿರು ವುದಾಗಿ ದೂರಲಾಗಿದೆ. ಕುಂಬ್ಡಾಜೆ ಗೋಸಾಡ ಪಾತ್ತಿಮೂಲ ನಿವಾಸಿ ಸಿ.ಎಚ್. ಅಬೂಬಕರ್‌ರ ಪುತ್ರಿ ಫಾತಿಮತ್ ಸಾನಿಯ (೧೮) ನಾಪತ್ತೆಯಾದ ಯುವತಿ. ಬದಿಯಡ್ಕದ ಖಾಸಗಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ಈಕೆ ನ. ೧ರಂದು ಬೆಳಿಗ್ಗೆ ಹೋಗಿದ್ದಾಳೆ. ಆದರೆ ಅನಂತರ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕರ್ತವ್ಯ ವೇಳೆ ರೈಲ್ವೇ ನೌಕರ ರೈಲು ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ರೈಲು ಹಳಿ ಪರಿಶೀಲನೆ ನಡೆಸುತ್ತಿದ್ದಾಗ ರೈಲ್ವೇ ಟ್ರಾಕ್‌ಮೆನ್ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ. ಆಂಧ್ರ ಪ್ರದೇಶ ನಿವಾಸಿ ಪಾಗ್ವೋಟಿ ನವೀನ್ (೨೫) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೯.೧೫ರ ವೇಳೆ ಘಟನೆ ನಡೆದಿದೆ. ಮುಟ್ಟಂನಿಂದ ಕುಂಬಳೆ ವರೆಗಿನ ರೈಲ್ವೇ ಹಳಿಯ ವಿಚಾರಣೆ ಹೊಣೆಗಾರಿಕೆ ನವೀನ್‌ಗಾಗಿತ್ತು. ಇಂದು ಬೆಳಿಗ್ಗೆ ಶಿರಿಯ ಸೇತುವೆ ಸಮೀಪದಲ್ಲಿ ಹಳಿ ಪರಿಶೀಲಿಸುತ್ತಿದ್ದಾಗ ಮಂಗಳೂರಿಗೆ ತೆರಳುತ್ತಿದ್ದ ಚೆನ್ನೈ ಸೂಪರ್ ಫಾಸ್ಟ್ ರೈಲು ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು …

ನೇಪಾಳದಲ್ಲಿ ಪ್ರಬಲ ಭೂಕಂಪ ಕನಿಷ್ಠ ೧೨೯ ಮಂದಿ ಸಾವು

ಕಾಠ್ಮಂಡು: ಭಾರತದ ನೆರೆ ರಾಷ್ಟ್ರವಾದ ನೇಪಾಳದಲ್ಲಿ ನಿನ್ನೆ ತಡರಾತ್ರಿ ಪ್ರಬಲ ಭೂ ಕಂಪವಾಗಿದ್ದು, ಅದರಲ್ಲಿ ಕನಿಷ್ಠ ೧೨೯ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ನೂರಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ ೬.೪ ತೀವ್ರತೆಯ ಭೂಕಂಪ ದಾಖಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ನೇಪಾಳದ ಜನಸಾಂದ್ರತೆ ಕಡಿಮೆ ಇರುವ ರಿಮೋಟ್ ಪ್ರದೇಶದಲ್ಲಿ  ನಿನ್ನೆ ರಾತ್ರಿ ೧೧.೪೭ರ ವೇಳೆಗೆ ಈ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದು …

ಹಿರಿಯ ವ್ಯಾಪಾರಿ ನಿಧನ

ಉಪ್ಪಳ: ಬಂದ್ಯೋಡು ಬಳಿಯ ಕರವೂರು ನಿವಾಸಿ ಬಂದ್ಯೋಡ್‌ನಲ್ಲಿ ನಿತ್ಯಾನಂದ ಸ್ಟೋರ್‌ನ ಮಾಲಕ ವಿಠಲ ಶೆಟ್ಟಿ (೬೮) ನಿಧನರಾದರು. ನಿನ್ನೆ ರಾತ್ರಿ ಸುಮಾರು ೧೦ ಗಂಟೆಯ ವೇಳೆ ಉಸಿರಾಟದ ತೊಂದರೆ ಉಂಟಾಗಿದ್ದು, ಬಂದ್ಯೋಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಮೃತರು ಪತ್ನಿ ಶೋಭಾ, ಮಕ್ಕಳಾದ ಸಂದೀಪ್, ಸುದೀಪ್, ಸೊಸೆಯಂದಿ ರಾದ ಭವ್ಯ, ಶುಭ, ಸಹೋದರ, ಸಹೋದರಿಯರಾದ ಶಂಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಗಿರಿಜ, ವಸಂತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. …

ಬಸ್ ಸ್ಕೂಟರ್ ಢಿಕ್ಕಿ: ಯುವಕ ದಾರುಣ ಮೃತ್ಯು

 ಬೋವಿಕ್ಕಾನ: ಖಾಸಗಿ ಸ್ ಮತ್ತು ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರನಾದ ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೋವಿಕ್ಕಾನ ಬಳಿ ನಿನ್ನೆ ನಡೆದಿದೆ. ಪಡನ್ನಕ್ಕೆ ಸಮೀಪದ ಕೊನ್ನಕ್ಕಾಡ್ ಅಶೋಕಚ್ಚಾಲಿನ ಕಳತ್ತುವಾದುಕಲ್ ಶರತ್ ದಾಮೋದರನ್ (೨೬) ಸಾವನ್ನಪ್ಪಿದ ದುರ್ದೈವಿ. ಬೋವಿಕ್ಕಾನ-ಕಾನತ್ತೂರು ರಸ್ತೆಯ ಚಿಪ್ಲಿಕಯ ಭಜನಾ ಮಂದಿರ ಬಳಿ ಈ ಅಫಘಾತ ಸಂಭವಿಸಿದೆ.  ಕಾಸರಗೋಡಿನಿಂದ ಕುತ್ತಿಕ್ಕೋಲ್‌ಗೆ ಸಂಚರಿಸುತ್ತಿದ್ದ ಬಸ್ ಮತ್ತು ಶರತ್ ಚಲಾಯಿಸುತ್ತಿದ್ದ ಸ್ಕೂಟರ್ ಪರಸ್ಪರ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಶರತ್‌ನನ್ನು ಊರವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ …

ದೇವಸ್ವಂ ಮಂಡಳಿಗೆ ಆರು ಕೋಟಿ ನಷ್ಟ: ಶಬರಿಮಲೆಯಲ್ಲಿ ರಾಶಿ ಬಿದ್ದಿರುವ ಅರವಣ ಪ್ರಸಾದ ತೆರವುಗೊಳಿಸಲು ಸುಪ್ರೀಂಕೋರ್ಟ್ ಅನುಮತಿ

ಪತ್ತನಂತಿಟ್ಟ: ೬.೬೫ ಲಕ್ಷ ಟಿನ್ ಅರವಣ ಪ್ರಸಾದವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ರಾಜ್ಯ ಸರಕಾರದೊಂದಿಗೆ ಅವಲೋಕನ ನಡೆಸಿ ಇದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ತಿರುವಿದಾಂಕೂರ್ ದೇವಸ್ವಂ ಬೋರ್ಡ್‌ಗೆ ನ್ಯಾಯಾಧೀಶ ಎ.ಎಸ್.ಬೋಪಣ್ಣ ಅಧ್ಯಕ್ಷರಾಗಿರುವ  ವಿಭಾಗೀಯ ಪೀಠ ನಿರ್ದೇಶಿಸಿದೆ. ಕೀಟನಾಶಕ ಸೇರಿಕೊಂಡಿ ದೆಯೆಂಬ ದೂರಿನಂತೆ   ೬.೬೫ ಲಕ್ಷ ಟಿನ್ ಪ್ರಸಾದವನ್ನು ಈರೀತಿ ತೆರವುಗೊಳಿಸಬೇಕಾಗಿ ಬಂದಿದೆ.  ಇದರಿಂದ ಆರು ಕೋಟಿ ರೂಪಾಯಿ ದೇವಸ್ವಂ ಮಂಡಳಿಗೆ ನಷ್ಟವುಂಟಾಗಿದೆ. ದೇವಸ್ವಂ ಬೋರ್ಡ್ ನೀಡಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಗಣಿಸಿ ಈ ತೀರ್ಪು ನೀಡಿದೆ. …

ಆರೋಪಿಯ ಸೆರೆ ಹಿಡಿಯಲು ಹೋದ  ಪೊಲೀಸರ ಮೇಲೆ ಗುಂಡು ಹಾರಾಟ

ಕಣ್ಣೂರು: ಆರೋಪಿಯನ್ನು ಸೆರೆ ಹಿಡಿಯಲು ಹೋದ ಪೊಲೀಸರ ಮೇಲೆ ಗುಂಡು ಹಾರಿಸಿದ ಘಟನೆ ಕಣ್ಣೂರಿನ ಚಿರಕ್ಕಲ್ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ೧೦ ಗಂಟೆ ವೇಳೆ ಘಟನೆ ನಡೆದಿದೆ. ತಮಿಳುನಾಡು ನಿವಾಸಿಗೆ ಅಕ್ರಮಿಸಿದ ಪ್ರಕರಣದಲ್ಲಿ ಆರೋಪಿಯಾದ ರೋಶನ್ ಎಂಬಾತನನ್ನು  ಸೆರೆ ಹಿಡಿಯಲು ವಳಪಟ್ಟಣಂ ಎಸ್.ಐ. ನಿತಿನ್‌ರ ನೇತೃತ್ವದ ಪೊಲೀಸರು ಚಿರಕ್ಕಲ್ ಚಿರದಲ್ಲಿರುವ ಆರೋಪಿಯ ಮನೆಗೆ ತೆರಳಿದ್ದಾರೆ. ಎರಡಂತಸ್ತಿನ ಮನೆಯ ಹಿಂಭಾಗದ ಮೆಟ್ಟಿಲಿನ ಮೂಲಕ ಮೇಲಕ್ಕೇರಿದ ಪೊಲೀಸರು …

ಸಂಕನಿರ್ಮಾಣಕ್ಕಾಗಿ ತೋಡಿದ ಹೊಂಡದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ರಸ್ತೆಮಧ್ಯೆ ಸಂಕ ನಿರ್ಮಿಸಲೆಂದು ತೋಡಲಾದ ನೀರು ತುಂಬಿದ ಹೊಂಡದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹೊಸದುರ್ಗ ಅಲಾಮಿಪಳ್ಳಿ ಬಸ್ ನಿಲುಗಡೆ ಕೇಂದ್ರದ ಬಳಿ ರಾಜ್ಯ  ಹೆದ್ದಾರಿ ಮಧ್ಯೆ ಸಂಕ ನಿರ್ಮಿಸಲೆಂದು ತೋಡಿದ್ದ  ಮಳೆ ನೀರು ತುಂಬಿದ ಹೊಂಡದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತನನ್ನು ಹೊಸದುರ್ಗ ಕೊವ್ವಲ್‌ಪಳ್ಳಿಯ ನಿಧೀಶ್ (೩೫) ಎಂದು ಗುರುತಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿಧೀಶ್ ಹೊಸದುರ್ಗ ಮದ್ಯಬಾರ್ ಹೋಟೆಲ್‌ವೊಂದರ ಕಾರ್ಮಿಕನಾಗಿದ್ದಾರೆ. ಹೊಸದುರ್ಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಗಗನಕ್ಕೆ: ಸಂಕಷ್ಟಕ್ಕೀಡಾದ ಜನತೆ

ಕಾಸರಗೋಡು:  ರಾಜ್ಯದಲ್ಲಿ ಸಾರ್ವಜನಿಕ ಮಾರುಕಟ್ಟೆಯಲ್ಲಿ ನಿತ್ಯೋಪಯೋಗ ಸಾಮಗ್ರಿಗಳ ಬೆಲೆಯೇರಿಕೆ ತೀವ್ರಗೊಂಡಿದ್ದು, ಜನರು ಸಂಕಷ್ಟ ಅನುಭವಿಸುವಂತಾಗಿದೆ. ಜನಸಾಮಾನ್ಯರು ಹೆಚ್ಚಾಗಿ ಆಶ್ರಯಿಸು ತ್ತಿದ್ದ ಮಾವೇಲಿ ಸ್ಟೋರ್, ಸಪ್ಲೈಕೋ, ಸೂಪರ್ ಮಾರ್ಕೆಟ್‌ಗಳಲ್ಲೂ ರಿಯಾಯಿತಿ ಬೆಲೆಯಲ್ಲಿ ಲಭಿಸುವ ಸಾಮಗ್ರಿಗಳಿಗೆ ಕ್ಷಾಮ ಉಂಟಾಗಿದ್ದು, ಇದೇ ಸಂದರ್ಭದಲ್ಲಿ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯೇರಿಕೆ ಯಾಗಿರುವುದು ಜನರಿಗೆ ತೀವ್ರ ಹೊಡೆತವಾಗಿ ಪರಿಣಮಿಸಿದೆ. ಉತ್ತರಭಾರತದಲ್ಲಿ ಬೆಳೆಯ ಕೊಯ್ಲು ಕೊನೆಗೊಂಡಿದ್ದು, ಇದರಿಂದ ಅಲ್ಲಿಂದ ಆಹಾರ ಸಾಮಗ್ರಿಗಳು ರಾಜ್ಯಕ್ಕೆ ತಲುಪತೊಡಗಿದೆ. ಈ ರೀತಿ ಹೊರ ರಾಜ್ಯಗಳಿಂದ  ಸಾಮಗ್ರಿ ಇಲ್ಲಿಗೆ ತಲುಪುವಾಗ ಬೆಲೆಯಲ್ಲಿ ಕಡಿತ …