ಮಳೆ, ಗುಡುಗು: ವಿವಿಧೆಡೆ ನಾಶ, ಪರಪ್ಪದಲ್ಲಿ ಮನೆಗೆ ಸಿಡಿಲೆರಗಿ ಇಬ್ಬರಿಗೆ ಗಾಯ

ಕಾಸರಗೋಡು: ತುಲಾ ತಿಂಗಳಲ್ಲಿ  ಮಳೆ ತೀವ್ರಗೊಂಡಿರುವಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ನಾಶನಷ್ಟ ಉಂಟಾಗಿದೆ. ಗುಡುಗು ಮಿಂಚಿನೊಂದಿಗೆ ಸುರಿಯುವ ಮಳೆಯಿಂದ ನಾಶನಷ್ಟ ಉಂಟಾಗಿದ್ದು, ಮುಂದಿನ ಒಂದು ವಾರ ಇದೇ ರೀತಿ ಮಳೆ ಮುಂದುವರಿಯಬಹುದೆಂದು ಕೇಂದ್ರ ಹವಾಮಾನ ಇಲಾಖೆಯು ಸೂಚಿಸಿದೆ. ಮಿಂಚು, ಗಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮಲೆನಾಡು ವಲಯಗಳಲ್ಲಿ ಪ್ರಯಾಣಿಸುವವರು ಜಾಗ್ರತೆ ವಹಿಸಬೇಕೆಂದು ಸೂಚಿಸಲಾಗಿದೆ. ಬಂಗಾಳ ಆಳಸಮುದ್ರದಲ್ಲಿ ಗಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ನಾಳೆಯಿಂದ ಮುಂದಿನ ಎರಡು, ಮೂರು ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಮಳೆ ಹಾಗೂ ಗುಡುಗು ಮಿಂಚು ಸಂಭವಿಸುವ ಸಾಧ್ಯತೆಯಿದೆ. …

ರಾಜ್ಯದ ಜನತೆಗೆ ವಿದ್ಯುತ್ ಶಾಕ್

ಕಾಸರಗೋಡು:  ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಏರಿಸಲಾಗಿದೆ. ಆ ಮೂಲಕ ವಿದ್ಯುತ್ ಬಳಕೆದಾರರಿಗೆ ಶಾಕ್ ನೀಡಿದಂತಾಗಿದೆ. ಇದರಂತೆ ಗೃಹ ಬಳಕೆ ವಿದ್ಯುತ್‌ಗೆ ಯೂನಿಟ್‌ಗೆ ತಲಾ ೩೦ ಪೈಸೆಯಂತೆ ಹಾಗೂ ಉದ್ಯಮಗಳಿಗೆ ತಲಾ ೧೫ ಪೈಸೆಯಂತೆ  ರಾಜ್ಯ ವಿದ್ಯುತ್ ರೆಗ್ಯುಲೇಟರಿ ಆಯೋಗ ಹೆಚ್ಚಿಸಿ ಅಧಿಸೂಚನೆ ಜ್ಯಾರಿಗೊಳಿಸಿದೆ.  ಈ ಹೆಚ್ಚಳವನ್ನು ನವಂಬರ್ ಒಂದರಿಂದಲೇ ಅನ್ವಯಗೊಳಿಸಿ ಜ್ಯಾರಿಗೊಳಿಸಲಾಗಿದೆ. ವಿದ್ಯುತ್‌ಗೆ ಈ ವರ್ಷ ಯೂನಿಟ್ ಒಂದಕ್ಕೆ ತಲಾ ೪೦.೬ ಪೈಸೆಯಂತೆ ಹೆಚ್ಚಿಸುವಂತೆ ವಿದ್ಯುನ್ಮಂಡಳಿ ಆಯೋಗದೊಂದಿಗೆ ಕೇಳಿಕೊಂಡಿತ್ತು. ಆದರೆ ಅದನ್ನು ಅಂಗೀಕರಿಸದ ಆಯೋಗ ಮುಂದಿನ …

ಷರತ್ತುಗಳನ್ನು ಪಾಲಿಸದೆ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್‌ಗೆ ಬೀಗ

ಕಾಸರಗೋಡು: ಷರತ್ತುಗಳನ್ನು ಪಾಲಿಸದೆ ಕಾರ್ಯಾಚರಿಸುತ್ತಿದ್ದ ಮಸಾಜ್ ಕೇಂದ್ರವನ್ನು ಪೊಲೀಸರು ಮುಚ್ಚುಗಡೆಗೊಳಿಸಿದರು. ಕಾಸರಗೋಡು ಹಳೆ ಬಸ್ ನಿಲ್ದಾಣದ ಸಮೀಪದ ಬಹುಮಹಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕೇಂದ್ರವನ್ನು ನಗರ ಠಾಣೆ ಇನ್ಸ್‌ಪೆಕ್ಟರ್ ಪಿ. ಅಜಿತ್  ಕುಮಾರ್‌ರ ನೇತೃತ್ವದಲ್ಲಿ ಮುಚ್ಚುಗಡೆಗೊಳಿಸಲಾಗಿದೆ. ಮಸಾಜ್ ಸೆಂಟರ್ ಕಾರ್ಯಾಚರಿಸುವುದಕ್ಕೆ ಸಂಸ್ಥೆಗೆ ಪರವಾನಗಿ ಇದ್ದರೂ ಇತರ ನಿಬಂಧನೆಗಳನ್ನು ಪಾಲಿಸಲಾ ಗುತ್ತಿರಲಿಲ್ಲವೆಂದು ಸೂಚಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕಾನೂನು ಪ್ರಕಾರ ಮಸಾಜ್ ಕೇಂದ್ರ ಕಾರ್ಯಾ ಚರಿಸಬೇಕಿದ್ದರೆ ಲೈಸನ್ಸ್ ಹೊರತಾಗಿ ಮೆಡಿಕಲ್ ಪ್ರಮಾಣಪತ್ರ, ಮೆಡಿಕಲ್ ಕಾರ್ಡ್, ಡರ್ಮಟೋಲಜಿ ಎಂಬೀ ವಿಷಯಗಳಲ್ಲಿ ಜಿಲ್ಲಾ …

೧೦.೧೪ ಗ್ರಾಂ ಎಂಡಿಎಂಎ ವಶ: ಓರ್ವ ಸೆರೆ

ಕುಂಬಳೆ: ಬಂಬ್ರಾಣದ ಬಳಿ ಕಾಸರಗೋಡು ಎಕ್ಸೈಸ್ ಎನ್‌ಪೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ್ ಜೆ.ಎ.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಲ್ಲಿ ಸಾಗಿಸುತ್ತಿದ್ದ ೧೦.೧೪ ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಪತ್ತೆಹಚ್ಚಿ ವಶಪಡಿಸಿದೆ. ಈ ಸಂಬಂಧ ಬಾಯಿಕಟ್ಟೆಯ ಬತ್ತೇರಿ ನಿವಾಸಿ ಮೊಹಮ್ಮದ್ ಮುಸ್ತಫಾ ಯು.ಎಂ. (೩೩) ಎಂಬಾತನನ್ನು ಬಂಧಿಸಿ, ಕಾರನ್ನು ವಶಪಡಿಸಲಾಗಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಬಕಾರಿ ಪ್ರಿವೆಂಟಿವ್ ಫೀಸರ್‌ಗಳಾದ …

ಕರ್ನಾಟಕ ಮದ್ಯ ವಶ

ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ನೇತೃತ್ವದ ಅಬಕಾರಿ ತಂಡ ನೆಲ್ಲಿಕುಂಜೆ ಬಂಗರಗುಡ್ಡೆ ರೈಲು ಹಳಿ ಬಳಿ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಕರ್ನಾಟಕ ನಿರ್ಮಿತ ೮.೬೪ ಲೀಟರ್ ಮದ್ಯ (೧೮೦ ಎಂಎಲ್‌ನ ೪೫ ಪ್ಯಾಕೆಟ್) ವಶಪಡಿಸಿಕೊಂಡಿದೆ. ಈ ಸಂಬಂಧ ಬಂಗರಗುಡ್ಡೆಯ ಉಮೇಶ್ ನಾಯ್ಕ (೩೫) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿ ತಲೆಮರೆಸಿಕೊಂಡಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಕಾರ್ಯಾಚರಣೆ ಯಲ್ಲಿ ಅಬಕಾರಿ ಪ್ರಿವೆಂಟೀವ್ ಆಫೀಸರ್ ರಂಜಿತ್, ಸಿಇಒಗಳಾದ ಐ.ಬಿ. …

ಆನ್‌ಲೈನ್‌ನಲ್ಲಿ ಖರೀದಿಸಿದ್ದು ಪ್ಯಾಂಟ್, ಲಭಿಸಿದ್ದು ಹರಕಲು ಶರ್ಟ್

ಕುಂಬಳೆ: ಆನ್‌ಲೈನ್‌ನಲ್ಲಿ ಪ್ಯಾಂಟ್ ಬುಕ್ ಮಾಡಿದ ವ್ಯಕ್ತಿಗೆ ಲಭಿಸಿದ್ದು ಎರಡು ಹರಕಲು ಅಂಗಿ.  ಕುಂಬಳೆಯಲ್ಲಿ ಈ ಘಟನೆ ನಡೆದಿದೆ. ಭಾಸ್ಕರ ನಗರ ನಿವಾಸಿ ಅಶ್ರಫ್ ಎಂಬ ವರು ಆನ್‌ಲೈನ್ ಕಂಪೆನಿಯಲ್ಲಿ ಇನ್‌ಸ್ಟಾಗ್ರಾಂ ಮೂಲಕ ಎರಡು ಪ್ಯಾಂಟ್ ಬುಕ್ ಮಾಡಿದ್ದರು. ಅದಕ್ಕೆ ೯೯೯ ರೂ.ವನ್ನು ಪಾವತಿಸಿದ್ದರು. ದೆಹಲಿಯ ಫ್ಯಾಶನ್ ಸ್ಟ್ರೀಟ್‌ನಲ್ಲಿ ಕಚೇರಿ ಹೊಂದಿದ್ದ ಈ ಕಂಪೆನಿಯಿಂದ ಲಭಿಸಿದ್ದು ಎರಡು ಹರಿದ ಶರ್ಟ್ ಆಗಿದೆ. ಮೊನ್ನೆ ಇವರಿಗೆ ಪಾರ್ಸೆಲ್ ತಲುಪಿದ್ದು ನೋಡಿದಾಗ ಹರಿದ ಶರ್ಟ್ ಎಂದು ತಿಳಿದುಬಂದಿದೆ. ಈಬಗ್ಗೆ ಅಶ್ರಫ್ …

ಸಿಪಿಎಂನಿಂದ ಹಮಾಸ್ ಬೆಂಬಲ ಸಮಾವೇಶ ಮುಸ್ಲಿಂಲೀಗ್‌ಗೂ ಆಹ್ವಾನ; ಲೀಗ್ ತೀರ್ಮಾನ ನಾಳೆ

ಕಲ್ಲಿಕೋಟೆ: ಹಮಾಸ್‌ಗೆ ಬೆಂಬಲ ಪ್ರದರ್ಶಿಸಿ ನವಂಬರ್ ೧೧ರಂದು ಸಂಜೆ ೪ ಗಂಟೆಗೆ ಕಲ್ಲಿಕೋಟೆ  ಟ್ರೇಡ್ ಸೆಂಟರ್‌ನಲ್ಲಿ  ಸಮಾವೇಶ ನಡೆಸಲು ಸಿಪಿಎಂ ತೀರ್ಮಾನಿಸಿದೆ. ಅದರಲ್ಲಿ ಭಾಗವಹಿಸಲು ಯುಡಿಎಫ್‌ನ ಘಟಕ ಪಕ್ಷವಾದ ಮುಸ್ಲಿಂ ಲೀಗ್‌ಗೂ ಸಿಪಿಎಂ ಅಧಿಕೃತ ಆಹ್ವಾನ ನೀಡಿದೆ. ಈ ಸಮಾವೇಶಕ್ಕೆ ನಮ್ಮ ಪಕ್ಷಕ್ಕೆ ಆಹ್ವಾನ ನೀಡಿದ್ದು ಸ್ವಾಗತಾರ್ಹವಾಗಿದೆ   ಎಂದು  ಮುಸ್ಲಿಂ ಲೀಗ್ ನೇತಾರ ಹಾಗೂ ಸಂಸದ ಇ.ಟಿ. ಅಹಮ್ಮದ್ ಬಷೀರ್ ಹೇಳಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್ ಭಾಗವಹಿಸಬೇಕೇ ಯಾ ಬೇಡವೇ ಎಂಬ ಬಗ್ಗೆ  ಚರ್ಚಿಸಲು …

೨೫೦ ಗ್ರಾಂ ಗಾಂಜಾ ವಶ: ಬೈಕ್ ಸಹಿತ ಆರೋಪಿ ಸೆರೆ

ಕಾಸರಗೋಡು: ಚೆಂಗಳ ಇಂದಿರಾನಗರದಲ್ಲಿ ಕಾಸರಗೋಡು ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಅನು ಕುಮಾರ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೨೫೦ ಗ್ರಾಂ  ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಸಂಬಂಧ ಚೆಂಗಳ ರಹಮ್ಮತ್ ನಗರದ ಕೆ.ಎಂ.ಹೌಸ್‌ನ ನೌಶಾದ್ ಎಚ್ (೪೧) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಆತ ಸಂಚರಿಸುತ್ತಿದ್ದ ಬೈಕ್‌ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಬಳಿಕ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.

ವಿದ್ಯುತ್ ತಂತಿ ಮೇಲೆ ಮರಬಿದ್ದು ಸಂಚಾರ ಮೊಟಕು

ವಿದ್ಯಾನಗರ: ವಿದ್ಯಾನಗರ ಓಶಿಯನೆಸ್  ಹೌಸಿಂಗ್ ಅಪಾರ್ಟ್ ಮೆಂಟ್ ಬಳಿ   ಇಂದು ಬೆಳಿಗ್ಗೆ ಬಲ ವಾದ ಗಾಳಿಗೆ  ರಸ್ತೆ ಬದಿಯ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಸಾರಿಗೆ ಸಂಚಾರ ಮೊಟ ಕುಗೊಂಡಿದೆ. ವಿಷಯ ತಿಳಿದ ಕಾಸg ಗೋಡು ಅಗ್ನಿಶಾಮಕದಳ ಆಗಮಿಸಿ ಮರವನ್ನು ಕಡಿದು ಬದಿಗೆ ಸರಿಸಿ ಸಾರಿಗೆ ಸಂಚಾರ ಸುಗಮಗೊಳಿಸಿದರು.

ನಿವೃತ್ತ ಪೋಸ್ಟ್ ಮಾಸ್ಟರ್ ಮಹಾಲಿಂಗ ನಾಯ್ಕ್ ನಿಧನ

ಪೆರ್ಲ: ಸ್ವರ್ಗ ಮೊಳಕ್ಕಾಲು ನಿವಾಸಿ, ನಿವೃತ್ತ ಪೋಸ್ಟ್ ಮಾಸ್ಟರ್  ಕೃಷಿಕ ಮಹಾಲಿಂಗ ನಾಯ್ಕ ಎಂ (೭೫) ನಿನ್ನೆ ಸ್ವ-ಗೃಹದಲ್ಲಿ ನಿಧನರಾದರು. ಕರ್ನಾಟಕದ ವಿಟ್ಲ, ಪಾಣಾಜೆ, ಪುತ್ತೂರಿನಲ್ಲಿ ಪೋಸ್ಟ್ ಮಾಸ್ಟರ್  ಆಗಿ ಸೇವೆ ಸಲ್ಲಿಸಿದ ಇವರು ಧರ್ಮಸ್ಥಳ ಅಂಚೆ ಕಚೇರಿಯ ಸೇವೆಯ ಬಳಿಕ ನಿವೃತ್ತರಾಗಿದ್ದರು. ಮೃತರು ಪತ್ನಿ ಚಂದ್ರಾವತಿ, ಪುತ್ರಿಯರಾದ ಪ್ರೇಮ, ಜ್ಯೋತಿ, ಸ್ವಾತಿ, ಅಳಿಯಂದಿರಾದ ಪದ್ಮನಾಭ, ವಾಸುದೇವ, ಮೊಮ್ಮಕ್ಕಳಾದ ಧೃತಿ, ನಿಹಾಲ್, ಸಹೋದರ ಚನಿಯಪ್ಪ ನಾಯ್ಕ (ಕಾಸರಗೋಡು ನಿವೃತ್ತ ತಹಶೀಲ್ದಾರ್) ಹಾಗೂ ಅಪಾರ   ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ …