ಕಾರಿನಲ್ಲಿ ಸಾಗಿಸುತ್ತಿದ್ದ ೧.೦೩೮ ಕಿಲೋ ಗಾಂಜಾ ವಶ: ಕಾಪಾ ಕೇಸ್ ಆರೋಪಿ ಸಹಿತ ಇಬ್ಬರ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸು ತ್ತಿದ್ದ ೧.೦೩೮ ಕಿಲೋ ಗ್ರಾಂ ಗಾಂಜಾ ವನ್ನು ಕಾಸರಗೋಡು ಎಕ್ಸೈಸ್ ಎನ್ ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಕ್ವಾಡ್‌ನ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ್ ಜಿ.ಎ.ರ ನೇತೃತ್ವದ ತಂಡ ಪತ್ತೆಹಚ್ಚಿ ವಪಡಿಸಿಕೊಂಡಿದೆ. ಸೀತಾಂಗೋಳಿಯಲ್ಲಿ ಅಬಕಾರಿ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಸ್ವಿಫ್ಟ್ ಕಾರನ್ನು ತಡೆದು ನಿಲ್ಲಿಸಿ ಅದನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಇದಕ್ಕೆ ಸಂಬಂ ಧಿಸಿ ಸೀತಾಂಗೋಳಿ ನಿವಾಸಿಗಳಾದ ಹನೀಫಾ ಬಿ.(೪೦) ಮತ್ತು ಅಬ್ದುಲ್ …

ಮತ್ತೆ ಕಳ್ಳರ ಹಾವಳಿ: ಭಜನಾ ಮಂದಿರ, ಮನೆ ಕಳವು

ಕಾಸರಗೋಡು: ಕಾಸರಗೋಡು ತಾಲೂಕಿನಲ್ಲಿ ಕಳ್ಳರ ಹಾವಳಿ ಮತ್ತೆ ತಲೆಯೆತ್ತಿದೆ. ಕುತ್ತಿಕ್ಕೋಲ್‌ನಲ್ಲಿ  ಭಜನಾ ಮಂದಿರ ಮತ್ತು ಮನೆಯೊಂದರಲ್ಲಿ ಕಳವು ನಡೆದಿದೆ. ಕುತ್ತಿಕ್ಕೋಲ್ ಪ್ಲಾವಿಲದ ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ಕಳ್ಳರು ನುಗ್ಗಿ ಅಲ್ಲಿನ ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಹಣ ದೋಚಿದ್ದಾರೆ. ಮಾತ್ರವಲ್ಲ ಅಲ್ಲೇ ಪಕ್ಕದ ಪುಳುವುಂಜಿ ನಿವಾಸಿ ವಿದೇಶದಲ್ಲಿರುವ ಪಿ. ದಿವಾಕರನ್ ಎಂಬವರ ತೆಕ್ಕಿಲ್ ಆಲಟ್ಟಿ ರಸ್ತೆ ಬಳಿಯ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲಾ ಮುರಿದು ಅದರಲ್ಲಿದ್ದ ೩೦೦೦ ರೂ. ನಗದು ಮತ್ತು ಒಂದು …

ಕರ್ನಾಟಕ ಮದ್ಯವಶ: ಓರ್ವ ಸೆರೆ

ಕಾಸರಗೋಡು: ಕೂಡ್ಲು ಮೀಪುಗುರಿ ಬಳಿ ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೧೮೦ ಎಂ.ಎಲ್‌ನ ೨೨ ಪ್ಯಾಕೆಟ್ ಮದ್ಯ ವಶಪಡಿ ಸಿಕೊಂಡಿದ್ದಾರೆ. ಎಸ್.ಐ. ಮಧುಸೂದನನ್ ಪಿ.ರ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿ ಕೂಡ್ಲು ರಾಮದಾಸನಗರ ಜೆ.ಪಿ ನಗರದ ಹರೀಶ್ (೪೭)  ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಅಂಗಡಿ ಮಾಲಕನ ಫೋನ್ ಕಳವುಗೈದ ಆರೋಪಿ ಸೆರೆ

ಕಾಸರಗೋಡು: ಸಾಮಗ್ರಿ ಖರೀದಿಸಲೆಂಬ ನೆಪವೊಡ್ಡಿ ಅಂಗಡಿಗೆ ತಲುಪಿ ಅಂಗಡಿಯ ಮಾಲಕನ ಮೊಬೈಲ್ ಫೋನ್ ಕಳವುಗೈದ ಆರೋಪಿ ಸೆರೆಗೀಡಾಗಿದ್ದಾನೆ.  ಕಣ್ಣೂರು ಅಳಿಕ್ಕೋಡ್‌ನ ಜಾಸಿಲ್ (೨೫) ಎಂಬಾತನನ್ನು ಬೇಕಲ ಠಾಣೆ ಇನ್‌ಸ್ಪೆಕ್ಟರ್  ಯು.ಪಿ. ವಿಪಿನ್ ಸೆರೆಹಿಡಿದಿದ್ದಾರೆ. ಬೇಕಲ ಬಳಿಯ ಚೇಟುಕುಂಡಿನಲ್ಲಿರುವ ಮದೀನ ಸುಪರ್ ಮಾರ್ಕೆಟ್ ಮಾಲಕ ಪೂಚಕ್ಕಾಡ್ ತೆಕ್ಕುಪುರದ ಮೊಹಮ್ಮದ್ ರಫೀಕ್‌ರ ೩೦ ಸಾವಿರ ರೂಪಾಯಿ ಮೌಲ್ಯದ  ಮೊಬೈಲ್ ಫೋನ್ ಕಳೆದ ತಿಂಗಳ ೧೮ರಂದು ಕಳವಿಗೀಡಾಗಿತ್ತು. ಅಂಗಡಿಯಿಂದ ಸಾಮಗ್ರಿ ಖರೀದಿಸಲೆಂದು ತಿಳಿಸಿ ತಲುಪಿದ ಆರೋಪಿ ಅಂಗಡಿ ಮಾಲಕನ ಗಮನ ಬೇರೆಡೆಗೆ …

ಬಿಜೆಪಿ ಕಾರ್ಯಕರ್ತ ನಿಧನ

ಅಣಂಗೂರು: ಬಿಜೆಪಿ ಮಾಜಿ ನಗರಸಭಾ ಸಮಿತಿ ಅಧ್ಯಕ್ಷ ಎ. ಸತೀಶ (೫೪) ನಿಧನಹೊಂದಿದರು. ಇವರು ಅಣಂಗೂರು ಶ್ರೀ ಶಾರದಾಂಬಾ ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿಯೂ, ಮಾಜಿ ಕಾರ್ಯದರ್ಶಿಯಾಗಿಯೂ,  ಆರ್‌ಎಸ್‌ಎಸ್ ಕಾರ್ಯಕರ್ತನೂ ಆಗಿದ್ದರು. ಕಾಞಂಗಾಡ್ ಚೆಮ್ಮಟಂವಯಲ್‌ನಲ್ಲಿ ಅಲ್ಯುಮಿನಿಯಂ ಫೈಬರ್ ಕೋಟಿಂಗ್ ಸಂಸ್ಥೆಯ ಮೆನೇಜರ್ ಆಗಿಕೆಲಸ ನಿರ್ವಹಿಸುತ್ತಿದ್ದರು. ಅಣಂಗೂರಿನ ಸ್ವ-ಗೃಹ ಮೂಕಾಂಬಿಕಾ ನಿವಾಸ್‌ನಲ್ಲಿ ನಿನ್ನೆ ರಾತ್ರಿ ಕುಸಿದುಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ಟಿ. ಕುಂಞಿರಾಮನ್-ಕಾರ್ತ್ಯಾಯಿನಿ ದಂಪತಿಯ ಪುತ್ರನಾದ ಮೃತರು ಪತ್ನಿ ಸುಲೋಚನ ಹಾಗೂ ಅಪಾರ …

ಕೆಲಸಕ್ಕೆ ತೆರಳುವ ಸಿದ್ಧತೆ ಮಧ್ಯೆ ಯುವಕ ಮೃತ್ಯು

ಕಾಸರಗೋಡು: ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಅನ್ಯರಾಜ್ಯ ಕಾರ್ಮಿಕ ರಕ್ತದೊತ್ತಡ ದಿಂ ದಾಗಿ ಮೃತಪಟ್ಟನು. ಪಶ್ಚಿಮ ಬಂಗಾಲದ ಮುರ್ಶಿದಾಬಾದ್ ನಿವಾಸಿಯೂ, ಚೆಮ್ನಾಡ್‌ನಲ್ಲಿ ವಾಸಿಸಿ   ನಿರ್ಮಾಣ ಕೆಲಸ  ನಡೆಸುತ್ತಿದ್ದ ಖಾಸಿಂ (೨೦) ಮೃತಪಟ್ಟ ಯುವಕ. ಎರಡು ವರ್ಷಗಳ  ಹಿಂದೆ  ಕೆಲಸಕ್ಕಾಗಿ  ಕೇರಳಕ್ಕೆ ತಲುಪಿದ ಖಾಸಿಂ ಎರಡು ತಿಂಗಳ ಹಿಂದೆ ಚೆಮ್ನಾಡ್‌ನ ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಸೇರಿದ್ದರ. ಇತರ ೧೦ ಮಂದಿ ಕಾರ್ಮಿಕರೊಂ ದಿಗೆ ಇವರು ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿದ್ದರ. ಇಂದು ಬೆಳಿಗ್ಗೆ  ಕೆಲಸಕ್ಕೆ ತೆರಳಲಿರುವ ಸಿದ್ಧತೆ ಮಧ್ಯೆ ಅಸ್ವಸ್ಥತೆ ಕಾಣಿಸಿಕೊಂಡಿರುವುದಾಗಿ …

ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮುಖ್ಯಮಂತ್ರಿ, ಪುತ್ರಿ ವಿರುದ್ಧ ರಿವಿಶನ್ ಅರ್ಜಿಯಲ್ಲಿ  ಅಮಿಕಸ್ ಕ್ಯೂರಿಯ ನೇಮಕ

ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪುತ್ರಿ ವೀಣಾ ತೆಕಂಡಿ ಹಾಗೂ ಉನ್ನತ ಅಧಿಕಾರಿಗಳು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ನಡೆಸಿದ್ದಾರೆಂಬ ಆರೋಪದಂತೆ ತನಿಖೆಗೆ ಆದೇಶಿಸಲು ನಿರಾಕರಿಸಿದ ವಿಜಿಲೆನ್ಸ್ ನ್ಯಾಯಾಲಯದ ನಿಲುವಿನ ವಿರುದ್ಧದ ದೂರಿನಲ್ಲಿ ಕೇರಳ ಹೈಕೋರ್ಟ್ ಅಮಿಕಸ್ ಕ್ಯೂರಿಯನ್ನು ನೇಮಿಸಿದೆ. ಈ ಪ್ರಕರಣದಲ್ಲಿ ದೂರುಗಾರನಾದ ಗಿರೀಶ್ ಬಾಬು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಮುಖ್ಯಮಂತ್ರಿಯ ಪುತ್ರಿ ಟಿ. ವೀಣಾರ ಮಾಲಕತ್ವದಲ್ಲಿರುವ ಬೆಂಗಳೂರಿನ ಟೆಕ್ನಾಲೋಜಿಕ್ ಸೊಲ್ಯುಶನ್ಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಗೆ ಸಿ.ಎಂ. ಆರ್.ಎಲ್ (ಕೊಚ್ಚಿನ ಮಿನರಲ್ಸ್ ಆಂಡ್ ರೀಟೈಲ್) ಕಂಪೆನಿ …

ಏಳನೇ ತರಗತಿ ವಿದ್ಯಾರ್ಥಿಯಿಂದ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ

ತಿರುವನಂತಪುರ: ೭ನೇ ತರಗತಿ ವಿದ್ಯಾರ್ಥಿಯೋರ್ವ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ರಿಗೆ ಫೋನ್ ಕರೆ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದಾನೆ. ಮಾತ್ರವಲ್ಲ ಹೀನಾಯವಾಗಿ ಬೈದಿದ್ದಾನೆ. ಆ ಬಗ್ಗೆ ತಿರುವನಂತಪುರ ಮ್ಯೂಸಿಯಂ ಪೊಲೀಸರು ನಡೆಸಿದ ತನಿಖೆಯಲ್ಲಿ ಹೀಗೆ ಬೆದರಿಕೆ ಸಂದೇಶ ಒಡ್ಡಿರು ವುದು ಎರ್ನಾಕುಳಂ ನಿವಾಸಿಯಾಗಿ ರುವ ಬಾಲಕನಾಗಿರು ವುದನ್ನು ಪತ್ತೆ ಹಚ್ಚಲಾಗಿದೆ. ನಿನ್ನೆ ಸಂಜೆ ೫ ಗಂಟೆಗೆ ಮುಖ್ಯ ಮಂತ್ರಿಗೆ ಬೆದರಿಕೆ ಫೋನ್ ಸಂದೇಶ ಬಂದಿದೆ. ಆ ಕೂಡಲೇ ನೀಡಲಾದ ದೂರಿನಂತೆ  ಪೊಲೀ ಸರು ತುರ್ತು     …

ನಾಪತ್ತೆಯಾದ ಕಾಲೇಜು ವಿದ್ಯಾರ್ಥಿಗಳು ಮುಂಬೈಯಲ್ಲಿ ಪತ್ತೆ

ಬದಿಯಡ್ಕ: ಕಾಲೇಜಿಗೆಂದು ತಿಳಿಸಿ ಮನೆಯಿಂದ ತೆರಳಿ ಬಳಿಕ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಮುಂಬೈಯಲ್ಲಿ ಪತ್ತೆಹಚ್ಚಲಾಗಿದೆ. ಕೇರಳ ಮುಸ್ಲಿಂ ಜಮಾಅತ್ ಪದಾಧಿಕಾರಿಗಳ ಸಹಾಯದೊಂದಿಗೆ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಊರಿಗೆ ತಲುಪಿಸಲು ಪ್ರಯತ್ನ ನಡೆಯುತ್ತಿದೆ. ಚೆಡೇಕಲ್, ಆಸಾದ್ ನಗರ, ಬದಿಯಡ್ಕ ನಿವಾಸಿಗಳಾದ ಮೂವರನ್ನು ಮೊನ್ನೆ ಮುಂಬೈಯ ಡೋಂಗ್ರಿಯಲ್ಲಿರುವ ಹೋಟೆಲೊಂ ದರ  ಸಮೀಪದಿಂದ ಪತ್ತೆಹಚ್ಚಲಾಗಿ ದೆ. ಈ ಮೂವರು ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.  ಐದು ದಿನಗಳ ಹಿಂದೆ ಕಾಲೇಜಿಗೆಂದು ತಿಳಿಸಿ ಹೋದ ಇವರು ಮರಳಿ ಮನೆಗಳಿಗೆ ತಲುಪಿರಲಿಲ್ಲ. ಮನೆಯವರು ನಡೆಸಿದ …

ಕಣ್ಣೂರಿನಲ್ಲಿ ೧.೨ ಕೋಟಿ ರೂಪಾಯಿ ಚಿನ್ನ ವಶ : ಇಬ್ಬರು ಕಾಸರಗೋಡು ನಿವಾಸಿಗಳ ಸಹಿತ ಮೂವರ ಸೆರೆ

ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಾಸರಗೋಡು ನಿವಾಸಿಗಳ ಸಹಿತ ಮೂವರಿಂದ ಒಟ್ಟು ೧.೨ ಕೋಟಿ  ರೂಪಾಯಿಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಅಬುದಾಬಿಯಿಂದ ಏರ್ ಇಂಡಿಯ ಎಕ್ಸ್‌ಪ್ರೆಸ್‌ನಲ್ಲಿ ಬಂದ ಕಾಸರಗೋಡು ಉದುಮ ನಿವಾಸಿ ಅಲ್ ಅಮೀನ್, ಶಾರ್ಜಾದಿಂದ ಏರ್‌ಇಂಡಿಯ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದ ತಳಂಗರೆ ನಿವಾಸಿ ರಫೀಕ್, ಅಬುದಾಬಿಯಿಂದ ಬಂದ ಕಲ್ಲಿಕೋಟೆ ಕೊಡುವಳ್ಳಿ ನಿವಾಸಿ ಜಂಶಾದ್ ಎಂಬಿವರಿಂದ ಚಿನ್ನವನ್ನು ವಶಪಡಿಸಲಾಗಿದೆ. ಉದುಮ ನಿವಾಸಿ ಅಲ್ ಅಮೀನ್‌ನಿಂದ ೨೭,೫೨,೦೮೮ ರೂಪಾಯಿ ಮೌಲ್ಯದ ೪೫೪.೧೪ ಗ್ರಾಂ …