ತುಳುನಾಡಿನ  ಮತಸೌಹಾರ್ದ ಪುರಸ್ಕಾರಕ್ಕೆ ಜೆ.ಎಸ್. ಸೋಮಶೇಖರ ಆಯ್ಕೆ

ಕಾಸರಗೋಡು:  ದುಬಾಯಿ ಕೆ.ಎಂ. ಸಿ.ಸಿ. ಎಣ್ಮಕಜೆ ಪಂಚಾಯತ್ ಸಮಿತಿಯ ತುಳುನಾಡು ಮತಸೌಹಾರ್ದ ಪುರಸ್ಕಾರ ಘೋಷಿಸಲಾಗಿದೆ. ಮಾಜಿ ಸಚಿವ, ದೀರ್ಘಕಾಲ ಮಂಜೇಶ್ವರ ಶಾಸಕರಾಗಿದ್ದ ಚೆರ್ಕಳಂ ಅಬ್ದುಲ್ಲರ ಹೆಸರಿನಲ್ಲಿ ತುಳುನಾಡಿನ ಮತಸೌಹಾರ್ದ ಪುರಸ್ಕಾರಕ್ಕೆ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಆಯ್ಕೆಯಾಗಿದ್ದಾರೆ. ನಾಡಿನಲ್ಲಿ ಮತಸೌಹಾರ್ದತೆ ಆಶಯಗಳನ್ನು ಎತ್ತಿ  ಹಿಡಿಯಲು, ಸಮಾಜದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸಲು ಅವರು ನೀಡಿದ ನಾಯಕತ್ವ ಕೊಡುಗೆಯನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಪಂಚಾಯತ್ ಆಡಳಿತದಲ್ಲಿ ಕ್ರಿಯಾತ್ಮಕವಾದ ನಿಲುವು, ಸಹಕಾರ, ಶಿಕ್ಷಣ, ಸಾಮಾಜಿಕ ಸೇವಾರಂಗದಲ್ಲಿ ಗಮನಾರ್ಹವಾದ ಚಟುವಟಿಕೆಗಳನ್ನು ಅವರು ನಡೆಸುತ್ತಿರುವುದಾಗಿ …

ಮಂಜೇಶ್ವರ: ವಿಜ್ಞಾನೋತ್ಸವ ಉದ್ಘಾಟನೆ

ಮಂಜೇಶ್ವರ: ‘ವಿದ್ಯಾರ್ಥಿಗಳ ವೈಜ್ಞಾನಿಕ,ತಂತ್ರಜ್ಞಾನ, ಸಾಮಾಜಿಕ,ಮತ್ತು ಕಲಾನೈಪುಣ್ಯ ಪ್ರತಿಭೆಗಳನ್ನು ಒರೆಗೆ ಹಚ್ಚುವ ಹಾಗೂ ಗುರುತಿಸುವ ವಿಜ್ಞಾ ನೋತ್ಸವ ನಮ್ಮ ದೇಶದ ಭವಿಷ್ಯದ ವಿಜ್ಞಾನಿಗಳನ್ನಾಗಿದೆ ರೂಪಿಸುವುದು. ಶಾಸ್ತ್ರೋತ್ಸವ ಎಂದಾಗ ನೆನಪಾಗುವುದು ನಮ್ಮ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಅವರನ್ನು ಗ್ರಾಮೀಣ ಪ್ರತಿಭೆ ಯಾದ ಅವರು ವಿಜ್ಞಾನಿಯಾಗಿ ಬೆಳೆದು ಬಂದ ಬಗೆ ಬೆರಗು ಮೂಡಿ ಸುವಂತದ್ದು ಅಂತಹ ವಿಜ್ಞಾನಿಗಳ ರೂಪೀಕರಣಕ್ಕೆ ಇಂತಹ ಸ್ಪರ್ಧೆಗಳು ವೇದಿಕೆಯಾಗಲಿವೆ ಎಂದು ಎ.ಕೆ.ಎಂ ಅಶ್ರಫ್ ನುಡಿದರು. ಅವರು ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಆರಂಭಗೊAಡ ಮಂ ಜೇಶ್ವರ ಉಪಜಿಲ್ಲಾ ಮಟ್ಟದ …

ಮಂಜೇಶ್ವರ ಮಂಡಲ ಕಾಂಗ್ರೆಸ್: ನೂತನ ಮಂಡಲ ಅಧ್ಯಕ್ಷರ ವಿರುದ್ಧ ಸಭೆಯಲ್ಲಿ ಪ್ರತಿಭಟನೆ

ಮಂಜೇಶ್ವರ: ನಿನ್ನೆ ಜರಗಿದ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಹೊಸತಾಗಿ ನೇಮಕಮಾಡಿದ ಮಂಡಲ ಅಧ್ಯಕ್ಷರ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲಾಯಿತು. ಹೊಸ ಅಧ್ಯಕ್ಷರ ಬಗ್ಗೆ ವಿರೋಧ ವ್ಯಕ್ತಪಡಿಸಿ ಈ ಹಿಂದೆ ಡಿಸಿಸಿಗೆ ತಿಳಿಸಿದ್ದರೂ ಇದುವರೆಗೂ ಯಾವುದೇ ಪರಿಹಾರ ಉಂಟಾಗದ ಬಗ್ಗೆಯೂ ಸಭೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಲಾಯಿತು. ಕೆಪಿಸಿಸಿ ಹೇಳಿದ ನ.೫ರ ಮುಂಚಿತ ಮಂಡಲ ಸಮಸ್ಯೆಗಳಿಗೆ  ಪರಿಹಾರ ಉಂಟಾಗದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದೆಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.

ಕಾನೂನುಬಾಹಿರವಾಗಿ ಮೀನುಗಾರಿಕೆ: ಬೋಟ್ ವಶ, ದಂಡ ಹೇರಿಕೆ

ಕಾಸರಗೋಡು: ಜಿಲ್ಲೆಯ ಸಮುದ್ರ ತೀರ ಪ್ರದೇಶದಲ್ಲಿ ಟ್ರೋಲ್ ಬಲೆ ಬಳಸಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕಣ್ಣೂರು ಅಳತ್ತಿಲಂ ಸುಬ್ರಹ್ಮಣ್ಯ ಎಂಬವರ ಮಾಲಕತ್ವದಲ್ಲಿರುವ ಮೀನು ಗಾರಿಕಾ ಬೋಟ್ ವಶಪಡಿಸಲಾಗಿದೆ. ಫಿಶರೀಸ್ ಮರೈನ್ ಎನ್‌ಫೋ ರ್ಸ್‌ಮೆಂಟ್ ವಿಭಾಗದವರು ಬೇಕಲ ಕರಾವಳಿ ಪೊಲೀಸರ ಸಹಾಯ ದೊಂದಿಗೆ  ನಿನ್ನೆ ಕಾರ್ಯಾಚರಣೆ ನಡೆಸಿದ್ದಾರೆ. ಹೀಗೆ ವಶಪಡಿಸಲಾದ ಬೋಟ್‌ಗೆ ಬಳಿಕ ಜುಲ್ಮಾನೆ ಹೊರಿಸಲಾಯಿತು.

ಶಾಲಾ ವಾಹನಗಳ ಮೇಲೆ ನಿಗಾ

ಕಾಸರಗೋಡು: ಶಾಲಾ ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಅಪರಿಮಿತವಾಗಿ ಹತ್ತಿಸಿಕೊಂಡು ಹೋಗುತ್ತಿರುವುದನ್ನು ಪರಿಶೀಲಿಸಲು ಆರ್‌ಡಿಒ ಸಬ್ ಕಲೆಕ್ಟರ್ ಎಂಬಿವರಿಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನಿರ್ದೇಶ ನೀಡಿದ್ದಾರೆ. ಶಾಲಾ ಸಮಯಗಳಲ್ಲಿ ಟಿಪ್ಪರ್ ಲಾರಿಗಳ ಪ್ರಯಾಣ ಕ್ರಮೀಕರಣ ಪರಿಶೀಲಿಸುವಂತೆಯೂ ಮೋಟಾರ್ ವಾಹನ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ.

ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಐಪಿ ಮೊಟಕು : ಶಾಸಕರಿಂದ ಸಚಿವೆಗೆ ಪತ್ರ

ಉಪ್ಪಳ: ದಿನಂಪ್ರತಿ ಹಲವಾರು ರೋಗಿಗಳು ಚಿಕಿತ್ಸೆಗಾಗಿ ತಲುಪುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಸಾಕಷ್ಟು ಡಾಕ್ಟರ್‌ಗಳಿಲ್ಲವೆಂಬ ಕಾರಣದಿಂದ ಐಪಿ, ತುರ್ತು ವಿಭಾಗ ನಿಲ್ಲಿಸಲಿರುವ ಆರೋಗ್ಯ ಇಲಾಖೆಯ ಯತ್ನ ಪ್ರತಿಭಟನಾರ್ಹವೆಂದು ಮಂಜೇಶ್ವರ ತಾಲೂಕು ಆಸ್ಪತ್ರೆ ಬಗ್ಗೆ ಸರಕಾರ ತೋರುವ ಅವಗಣನೆ ಕೊನೆಗೊಳಿಸಬೇಕೆಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ರಾತ್ರಿ ಕಾಲದಲ್ಲಿ ಸೇವೆ ಮೊಟಕುಗೊಳಿಸಲಿರುವ ಯತ್ನವನ್ನು ಹೊರತುಪಡಿಸಬೇಕೆಂದು ಆಗ್ರಹಿಸಿ ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್‌ರಿಗೂ, ಆರೋಗ್ಯ ಇಲಾಖೆ ನಿರ್ದೇಶಕ ಡಾ| ರೀನಾ ಕೆ.ಜೆಯವರಿಗೂ ಶಾಸಕರು ಪತ್ರ ರವಾನಿಸಿದ್ದಾರೆ. ಅಲ್ಲದೆ ದೂರವಾಣಿ …

ಅಕ್ರಮ ದಾಸ್ತಾನು, ಕಾಳಸಂತೆ ಪತ್ತೆಗೆ ಸ್ಪೆಷಲ್ ಬ್ರಾಂಚ್ ರಂಗಕ್ಕೆ

ಕಾಸರಗೋಡು: ಬೆಲೆಯೇರಿಕೆ ಪರಾಕಾಷ್ಠೆಗೇರಿರುವ  ವೇಳೆಗಳಲ್ಲಿ ಸಾಧಾರಣವಾಗಿ ನಡೆಯುತ್ತಿರುವ ಕಾಳಸಂತೆ ಮತ್ತು ಅಕ್ರಮ ದಾಸ್ತಾನನ್ನು ಪತ್ತೆಹಚ್ಚಲು  ಕೇರಳ ಪೊಲೀಸ್ ಇಲಾಖೆಯ ಸ್ಪೆಷಲ್ ಬ್ರಾಂಚ್ (ಗುಪ್ತಚರ ವಿಭಾಗ) ಪೊಲೀಸರು ಇನ್ನು ಗುಪ್ತವಾಗಿ ತನಿಖೆ ನಡೆಸುವರು. ಇದಕ್ಕಾಗಿ ಗುಪ್ತಚರ ವಿಭಾಗದ ಪ್ರತ್ಯೇಕ ತಂಡಕ್ಕೆ ರೂಪು ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ  ಡಾ. ಶೇಖ್ ದರ್ವೇಶ್ ಸಾಹೀಬ್ ಅವರು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಗಾರಿಗಳಿಗಿ ನಿರ್ದೇಶ ನೀಡಿದ್ದಾರೆ. ಹೀಗೆ ಸ್ಪೆಷಲ್ ಬ್ರಾಂಚ್‌ನವರು ನಡೆಸುವ  ಗುಪ್ತ ವರದಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು.  …

ನವಜೀವನ ಶಾಲಾ ವಿದ್ಯಾರ್ಥಿಗಳಿಂದ ವಿಜಯೋತ್ಸವ ಮೆರವಣಿಗೆ

ಬದಿಯಡ್ಕ: ಪೆರಡಾಲ ನವ ಜೀವನ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಕುಂಬಳೆ ಉಪಜಿಲ್ಲಾ ವಿಜ್ಞಾ ನೋತ್ಸವದಲ್ಲಿ ಅತಿಥೇಯ ನವಜೀವನ ಶಾಲೆಯು ೬೩೧ ಅಂಕಗಳೊಂದಿಗೆ ಪ್ರಥಮಸ್ಥಾನದಲ್ಲಿ ಸಮಗ್ರ ಪ್ರಶಸ್ತಿಗೆ ಪಾತ್ರವಾಗಿದ್ದು, ಸೋಮವಾರ ವಿದ್ಯಾರ್ಥಿಗಳಿಂದ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಮ್ಮ ಟ್ರೋಫಿಗಳೊಂದಿಗೆ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಮಾಧವನ್ ಭಟ್ಟಾತಿರಿ, ಮುಖ್ಯೋಪಾಧ್ಯಾಯಿನಿ ಮಿನಿ ಟೀಚರ್, ರಕ್ಷಕ ಶಿಕ್ಷಕ ಸಂಘ, ಮಾತೃಸಮಿತಿ, ಶಾಲಾ ಸಿಬ್ಬಂದಿ ವರ್ಗ, ಅಧ್ಯಾಪಕರುಗಳಾದ ಪ್ರಸಾದ್  ಕೆ, ನಾರಾಯಣ ಆಸ್ರ, ರಾಜೇಶ್ ಅಗಲ್ಪಾಡಿ, ನಿರಂಜನ ರೈ …

ಕಳಮಶ್ಶೇರಿ ಸರಣಿ ಬಾಂಬ್ ಸ್ಫೋಟ:  ಮೃತರ ಸಂಖ್ಯೆ ೩ಕ್ಕೇರಿಕೆ: ೧೮ ಮಂದಿ ಚಿಂತಾಜನಕ

ಕೊಚ್ಚಿ: ಕಳಮಶ್ಶೇರಿಯ ಯಾಹೋಮಯನ  ವಲಯ ಸಮಾವೇಶದ ವೇಳ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಈಗ  ೩ಕ್ಕೇರಿದೆ. ಈ ಸ್ಫೋಟದಲ್ಲಿ ಕನಿಷ್ಠ ೫೨ ಮಂದಿ ಗಾಯಗೊಂಡಿದ್ದು, ಅವರಲ್ಲಿ ೧೨ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ೧೨ ವರ್ಷದ ಬಾಲಕಿಯೂ ಒಳಗೊಂಡಿದ್ದಾಳೆ.  ತೊಡುಪುಳ ಕಾಳಿಯಾರ್‌ಕುಳದ ದಿ. ಪುಷ್ಪನ್ ಎಂಬವರ ಪತ್ನಿ ಕುಮಾರಿ (೫೩) ಸ್ಫೋಟ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಚಿಕಿತ್ಸೆಯಲ್ಲಿದ್ದ ಪೆರುಂಬಾವೂರು ಉರಿಜಾಲ್ ವಾಟ್ಟೋಳಿಪ್ಪಾಡಿ ಪುಳಿಕ್ಕಲ್ ವೀಟಿಲ್ ಲಿಯೋನಾ ಪೌಲೋಸ್ (೫೫) ಎಂಬವರು ನಿನ್ನೆ ರಾತ್ರಿ …

ಕಳಮಶ್ಶೇರಿ ಸರಣಿ ಬಾಂಬ್ ಸ್ಫೋಟ: ಎನ್‌ಐಎ ತನಿಖೆ ಆರಂಭ

ಎರ್ನಾಕುಳಂ: ಕಳಮಶ್ಶೇರಿ ಕನ್ವೆನ್ಶನ್ ಹಾಲ್‌ನಲ್ಲಿ ನಿನ್ನೆ ಬೆಳಿಗ್ಗೆ ಆರಂಭಗೊಂಡಿದ್ದ ಕ್ರಿಶ್ಚಿಯನ್ ಉಪಪಂಗಡದವರೆಂದೇ ಕರೆಸಿಕೊಳ್ಳುತ್ತಿದ್ದ ಯಹೋವನ ಸಮುದಾಯದ ಮೂರು ದಿನಗಳ ಧಾರ್ಮಿಕ ವಿಚಾರ ಸಂಕೀರ್ಣದ ವೇಳೆ ಉಂಟಾದ ಸರಣಿ ಬಾಂಬ್ ನಡೆಸಿದ್ದು ನಾನೇ ಆಗಿದ್ದೇನೆ ಎಂದು ಸ್ವಯಂ ಘೋಷಿಸಿಕೊಂಡು ಚೆಲವನ್ನೂರು  ವೇಲಿಕಗತ್ತ್ ವೀಟಿಲ್‌ನ ಮಾರ್ಟಿನ್ ಡೊಮಿನಿಕ್ (೫೨) ಎಂಬಾತ ಪೊಲೀಸರ ಮುಂದೆ ಸ್ವಯಂ ಆಗಿ ಶರಣಾಗಿದ್ದಾನೆ. ಶರಣಾಗುವ ಮೊದಲು ಆತ ತನ್ನ ಫೇಸ್ ಬುಕ್‌ನಲ್ಲೂ ಈ ವಿಷಯ ತಿಳಿಸಿದ್ದನು. ಬಳಿಕ ಆತ ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಸ್ಫೋಟಕ್ಕೆ …