ಬೈಕ್ ಅಪಘಾತ: ಹಾವಿನ ಕಡಿತಕ್ಕೊಳಗಾದ ಮಧ್ಯವಯಸ್ಕ ಮೃತ್ಯು; ಸಂಬಂಧಿಕನಿಗೆ ಗಂಭೀರ ಗಾಯ
ಮುಳ್ಳೇರಿಯ: ಹಾವಿನ ಕಡಿತದಿಂದ ಗಂಭೀರ ಸ್ಥಿತಿಯಲ್ಲಿದ್ದ ಮಧ್ಯ ವಯಸ್ಕ ಬೈಕ್ ಅಪಘಾತಕ್ಕೀಡಾಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಇದೇ ವೇಳೆ ಅಪಘಾತಕ್ಕೀಡಾದ ಬೈಕ್ನ ಸವಾರ ಗಂಭೀರಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೆಳ್ಳೂರು ಬಳಿಯ ಅಡ್ವಳ ನಿವಾಸಿ ಕೃಷ್ಣನ್ (೫೫) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಪತ್ನಿಯ ಸಹೋದರಿಯ ಪುತ್ರ ರಮೇಶನ್ ಎಂಬವರು ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ ಮನೆ ಹಿತ್ತಿಲಿನಲ್ಲಿ ಮಡಲು ಕಡಿಯುತ್ತಿದ್ದಾಗ ಕೃಷ್ಣನ್ರಿಗೆ ಹಾವು ಕಚ್ಚಿದೆ. ಅಲ್ಪ ಹೊತ್ತಿನ ಬಳಿಕ …
Read more “ಬೈಕ್ ಅಪಘಾತ: ಹಾವಿನ ಕಡಿತಕ್ಕೊಳಗಾದ ಮಧ್ಯವಯಸ್ಕ ಮೃತ್ಯು; ಸಂಬಂಧಿಕನಿಗೆ ಗಂಭೀರ ಗಾಯ”