ಅನಧಿಕೃತ ಸಂಕ ನಿರ್ಮಾಣ ಮುರಿದು ತೆಗೆಯಲು ಕ್ರಮ: ಮೊಗ್ರಾಲ್‌ಪುತ್ತೂರಿನಲ್ಲಿ ಬಿಜೆಪಿ ಹೋರಾಟಕ್ಕೆ ಜಯ

ಮೊಗ್ರಾಲ್‌ಪುತ್ತೂರು: ಮೊಗ್ರಾಲ್ ಪುತ್ತೂರು ಪಂಚಾಯತ್‌ಗೊಳಪಟ್ಟ ಅಕ್ಕರ ಕೊಲ್ಲಮೆ ತೋಡಿನ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿರುವ ಸಂಕವನ್ನು ಮುರಿಯುವಂತೆ ಆಗ್ರಹಿಸಿ ಬಿಜೆಪಿ ನಡೆಸಿದ ಹೋರಾಟಕ್ಕೆ ಮೊದಲ ಗೆಲುವು ಉಂಟಾಗಿದೆ. ಬಿಜೆಪಿ ವಾರ್ಡ್ ಸದಸ್ಯ ಪ್ರಮೀಳಾ ಮಜಾಲ್‌ರ ನೇತೃತ್ವದಲ್ಲಿ ಮೊನ್ನೆ ಪಂಚಾಯತ್ ಕಚೇರಿ ಮುಂದೆ ಹೋರಾಟ ನಡೆಸಲಾಗಿತ್ತು. ಅನಧಿಕೃತವಾಗಿ ನಿರ್ಮಿಸಲಾಗಿ ರುವ ಪ್ರಸ್ತುತ ಸಂಕವನ್ನು ಮುಂದಿನ ಏಳು ದಿನಗಳೊಳಗೆ ಮುರಿದು ತೆಗೆಯಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂದು ಮೊಗ್ರಾಲ್ ಪುತ್ತೂರು ಪಂಚಾಯತ್ ಕಾರ್ಯದರ್ಶಿ ವಾರ್ಡು ಬಿಜೆಪಿ ಸದಸ್ಯೆ ಯರೂ, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ …

ಉಪ್ಪಳ: ೩೩ ಕೆವಿ ಸಬ್ ಸ್ಟೇಶನ್‌ಗೆ ಅಗತ್ಯದ ಸ್ಥಳ ಶೀಘ್ರ ಪತ್ತೆ-ಶಾಸಕ

ಉಪ್ಪಳ: ದಿನದಿಂದ ದಿನಕ್ಕೆ ಬೆಳವಣಿಗೆಯಲ್ಲಿರುವ ಉಪ್ಪಳ ಪೇಟೆಯ ಹಾಗೂ ಪರಿಸರ ಪ್ರದೇಶಗಳಲ್ಲಿ ವಿದ್ಯುತ್ ಉಪಯೋಗ ಹೆಚ್ಚಾಗುತ್ತಿರುವ ಕಾರಣ ೩೩ ಕೆವಿ ಸಬ್ ಸ್ಟೇಶನ್ ಸ್ಥಾಪಿಸಲು ಬೇಕಾಗಿ ರುವ ಸ್ಥಳವನ್ನು ಕಂಡುಕೊಳ್ಳಲು ನವಂಬರ್‌ನಲ್ಲಿ ಮಂಗಲ್ಪಾಡಿ ಪಂಚಾಯತ್‌ನಲ್ಲಿ ಸರ್ವಪಕ್ಷ ಸಭೆ ನಡೆಸುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಮಂಜೇಶ್ವರ ವಿಧಾನಸಭಾ ಮಂಡಲದ ಕೆ.ಎಸ್.ಇ.ಬಿ ಚಟು ವಟಿಕೆಗಳ ಬಗ್ಗೆ ಶಾಸಕರು ನಡೆಸಿದ ಸಭೆಯಲ್ಲಿ ಅವರು ಮಾತನಾಡು ತ್ತಿದ್ದರು. ಸೀತಾಂಗೋಳಿಯಲ್ಲಿ ಸಬ್ ಸ್ಟೇಶನ್‌ಗೆ ಬೇಕಾದ ಸ್ಥಳದ ಬಗ್ಗೆ ತೀರ್ಮಾನವಾಗಿದ್ದು, ಮಂಜೇಶ್ವರ, ಪೊಸೋಟು ಪ್ರದೇಶದ …

೫.೫೦ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ: ೧೦ ಮಂದಿ ಸೆರೆ

ಬೆಂಗಳೂರು: ಬೃಹತ್ ಡ್ರಗ್ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ೧೫ ದಿನಗಳಿಂದ ಡ್ರಗ್ ಸಾಗಾಟಗಾರರ ಚಟುವಟಿಕೆ ಬಗ್ಗೆ ಸಿಸಿಬಿ ಹದ್ದಿನ ಕಣ್ಣಿರಿಸಿದ್ದು, ನಿನ್ನೆ ಇವರನ್ನು ಬಂಧಿಸಲಾಗಿದೆ. ೮ ಮಂದಿ ವಿದೇಶಿಗಳು ಸೇರಿ ೧೦ ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ೫.೫೦ ಕೋಟಿ  ರೂ. ಮೌಲ್ಯದ ಮಾದಕ ಪದಾರ್ಥಗಳನ್ನು  ವಶಪಡಿಸಲಾಗಿದೆ. ಈ ಮಾದಕಪದಾರ್ಥಗಳನ್ನು ಐಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ನೀಡಲು ಸಾಗಿ ಸಲಾಗಿದೆಯೆಂದು  ಆರೋಪಿಗಳು ತಿಳಿಸಿದ್ದಾರೆ. ಬಂಧಿತರಿಂದ ಎಂಡಿಎಂಎ ಕ್ರಿಸ್ಟಲ್ ೩,೮೦೬ ಮಾತ್ರೆ, ೫೦ ಗ್ರಾಂ ಕೊಕ್ಕೆನ್, ೫ ಕಿಲೋ …

ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪೀಠಾರೋಹಣದ ತೃತೀಯ ವಾರ್ಷಿಕೋತ್ಸವ

ಬದಿಯಡ್ಕ: ಎಡನೀರು ಮಠದ ಶ್ರೀ ಸ್ಚಚಿದಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣದ ತೃತೀಯ ವಾರ್ಷಿಕೋತ್ಸವ ಗುರುವಾರ ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಿತು. ಗಣಪತಿ ಹೋಮ, ಭಜನಾ ಸಂಕೀರ್ತನೆ, ಮಹಾಪೂಜೆ ಜರಗಿತು. ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಅವರ ಶಿಷ್ಯೆಯರಿಂದ ನೃತ್ಯ ನಮನ ಪ್ರಸ್ತುತಗೊಂಡಿತು. ಶಿಕ್ಷಣ ತಜ್ಞ ಮತ್ತು ಸಾಹಿತಿ ಡಾ. ಕೆ. ಇ. ರಾಧಾಕೃಷ್ಣ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಹಿರಿಯ ನೃತ್ಯಗುರು …

ಮುಳ್ಳೇರಿಯ: ಕೃಷಿ ಸಮ್ಮಾನ್ ನಿಧಿ ಖಾತೆ ತೆರೆಯಲು ಅವಕಾಶ

ಮುಳ್ಳೇರಿಯ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಫಲಾನುಭವಿಗಳಾದ ಕೃಷಿಕರು ಅಧಾರ್ ಸಿಡ್ ಮಾಡಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಕಾರಡ್ಕ ಕೃಷಿ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಿರುವ ಅರ್ಜಿ ಕೃಷಿ ಭವನದಿಂದ ಲಭಿಸುವುದು. ಖಾತೆ ತೆರೆಯಲು ಅಧಾರ್ ಕಾರ್ಡ್‌ನ ಪ್ರತಿ ಪಾನ್ ಕಾರ್ಡ್‌ನ ಪ್ರತಿ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ತರಬೇಕಾಗಿದೆ.

ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆದುರಾದ ತನಿಖೆ ತೀವ್ರಗೊಳಿಸುವುದಾಗಿ ಜಿಲ್ಲಾಧಿಕಾರಿ

ಕಾಸರಗೋಡು: ಸರಕಾರಿ ಇಲಾಖೆಗಳನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದಕ್ಕೂ, ಸಾರ್ವಜನಿಕರಿಗೆ ಸರಕಾರದಿಂದ ದಕ್ಷತೆಯ ಸೇವೆ ಲಭ್ಯಗೊಳಿ ಸುವುದಕ್ಕೂ  ಕ್ರಮ ಕೈಗೊಳ್ಳಲಾಗು ವುದೆಂದು ಜಿಲ್ಲಾಧಿಕಾರಿ ಇಂಬಶೇಖರ್ ನುಡಿದರು. ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಮೂಲಕ ಜ್ಯಾರಿಗೊಳಿಸಲಾಗುತ್ತಿರುವ ಜಿಲ್ಲಾ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲಾ ಸರಕಾರಿ ಕಚೇರಿಗಳಲ್ಲೂ ವಿಜಿಲೆನ್ಸ್‌ನ ನಂಬ್ರ ಪ್ರದರ್ಶಿಸಬೇಕು, ಭ್ರಷ್ಟಾಚಾರ ರಹಿತ ಉತ್ತಮ ಭವಿಷ್ಯಕ್ಕಾಗಿ ವಿವಿಧ ಇಲಾಖೆಗಳು ಸಭೆ ಸೇರಬೇಕೆಂದೂ   ಮುಂದಿನ ವಿಜಿಲೆನ್ಸ್ ಸಭೆಯಲ್ಲಿ ಅದರ ಮಿನಿಟ್ಸ್ ಹಾಜರುಪಡಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. ಬಡವರಾಗಿದ್ದಾರೆ ಸರಕಾರಿ ಆಸ್ಪತ್ರೆ …

ಪುರುಷೋತ್ತಮ ಯಾಗ ಸಮಿತಿಯಿಂದ ಕಣಿಪುರ ಕ್ಷೇತ್ರದಲ್ಲಿ ಪ್ರಾರ್ಥನೆ

ಕುಂಬಳೆ: ಬದಿಯಡ್ಕ ಪಳ್ಳತ್ತಡ್ಕದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗದ ಯಶಸ್ವಿಗಾಗಿ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು. ಮಾರ್ಗದರ್ಶನ ಮಂಡಳಿಯ ರಘುನಾಥ ಪೈ ಕುಂಬಳೆ, ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು, ಯಾಗ ಸಮಿತಿಯ ಕೋಶಾಧಿಕಾರಿ ಮಂಜುನಾಥ್ ಮಾನ್ಯ, ಭಜನಾ ಸಮಿತಿಯ ಬಾಲಕೃಷ್ಣ ನೀರ್ಚಾಲು, ಧಾರ್ಮಿಕ ಮುಂದಾಳು ಪ್ರಭಾಕರ, ಪ್ರದೀಪ್ ಕೃಷ್ಣನಗರ ಕುಂಬಳೆ, ರೋಷನ್ ಕಳತ್ತೂರು ಸಹಿತ ಹಲವರು ಪಾಲ್ಗೊಂಡಿದ್ದರು.

ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸತ್ತಿದ್ದ ೩೩.೨೪ ಲಕ್ಷ ರೂ. ವಶ: ಇಬ್ಬರು ಕಸ್ಟಡಿಗೆ

ಕಾಸರಗೋಡು: ನಗರದಲ್ಲಿ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ೩೩.೨೪ ಲಕ್ಷ ರೂ.ವನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಡಿವೈಎಸ್‌ಪಿ ಪಿ.ಕೆ. ಸುಧಾಕರನ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಮತ್ತು ಎಸ್‌ಐ ಅಖಿಲ್‌ರ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಹಣ ಕೈವಶವಿರಿಸಿಕೊಂಡಿದ್ದ ಚೌಕಿ ಅಜಾದ್ ನಗರದ ಮೊಹಮ್ಮದ್ (೫೧) ಮತ್ತು ಚೌಕಿ ಕುನ್ನಿಲ್‌ನ ಸುಲೈಮಾನ್ ಅಹಮ್ಮದ್ (೫೩) ಎಂಬಿಬ್ಬರನ್ನು ಪೊಲೀಸರು …

ಅರ್ಧಕಿಲೋ ಚಿನ್ನ ಸಹಿತ ಸೆರೆ

ಕೊಚ್ಚಿ:  ಒಳ ಉಡುಪಿನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ೪೯೯.೯೦ ಗ್ರಾಂ ಚಿನ್ನವನ್ನು ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಮ್ಸ್ ಇಂಟೆಲಿ ಜೆನ್ಸ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅಬುದಾಬಿ ಯಿಂದ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಮಲಪ್ಪುರಂ ನಿವಾಸಿ  ಮುಹಮ್ಮದ್  ರಶೀಂ ಎಂಬಾತನ ವಿರುದ್ಧ ಈ ಸಂಬಂಧ ಕೇಸು ದಾಖಲಿಸಲಾಗಿದೆ.

ಕಾಪಾ ಪ್ರಕಾರ ಜೈಲು ಸೇರಿ ಬಿಡುಗಡೆಗೊಂಡಾತನ ವಿರುದ್ಧ ಮತ್ತೆ ಕಾಪಾ ಹೇರಿಕೆ, ಬಂಧನ

ಕಾಸರಗೋಡು: ಕಾಪಾ ಕಾನೂನು ಪ್ರಕಾರ ಬಂಧಿತನಾಗಿ ಜೈಲು ಸೇರಿದ ಬಳಿಕ ಬಿಡುಗಡೆಗೊಂಡ ಆರೋಪಿ ವಿರುದ್ಧ ಕಾಸರಗೋಡು ಪೊಲೀಸರು ಮತ್ತೆ ಕಾಪಾ ಹೇರಿ ಆತನನ್ನು ಬಂಧಿಸಿದ್ದಾರೆ. ಕಾಸರಗೋಡು ಬಟ್ಟಂಪಾರೆ ನಿವಾಸಿ ಮಹೇಶ್ (೩೨) ಬಂಧಿತ ವ್ಯಕ್ತಿ. ಹಲವು ಪ್ರಕರಣದಲ್ಲಿ ಆರೋಪಿಯಾಗಿ ರುವ ಈತನ ವಿರುದ್ದ ಪೊಲೀಸರು ಈ ಹಿಂದೆ ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿ ನಂತರ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಕೂಡಿ ಹಾಕಲಾ ಗಿತ್ತು. ಬಳಿಕ ಆತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದನು. ಆ ಬಳಿಕ ಸೆಪ್ಟಂಬರ್ ೩೦ರಂದು …