“ಅ. ೭ರಂದು ಇಸ್ರೇಲ್ ಮೇಲೆ ನಡೆದದ್ದು ಭಯೋತ್ಪಾದಕ ದಾಳಿ” :ಶಶಿ ತರೂರ್ ಹೇಳಿಕೆ ವಿರುದ್ದ ಮುಗಿಬಿದ್ದ ಮುಸ್ಲಿಂಲೀಗ್

ಕಲ್ಲಿಕೋಟೆ: ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದು ಭಯೋತ್ಪಾದಕ ದಾಳಿಯಾಗಿದೆ ಯೆಂದು ಕಾಂಗ್ರೆಸ್ ನೇತಾರ, ತಿರುವನಂತಪುರ ಸಂಸದ ಶಶಿ ತರೂರ್ ನೀಡಿದ ಹೇಳಿಕೆ ಮುಸ್ಲಿಂ ಲೀಗ್‌ನ್ನು ಗರಂಗೊಳಿಸಿದ್ದು, ಅದರ ಹೆಸರಲ್ಲಿ ಮುಸ್ಲಿಂ ಲೀಗ್ ನೇತಾರರು   ಮಾತ್ರವಲ್ಲ ಹಲವು ಮುಸ್ಲಿಂ ಸಂಘಟನೆಗಳ ನೇತಾರರು   ಶಶಿ ತರೂರ್‌ರ ವಿರುದ್ಧ ಮುಗಿಬಿದ್ದಿದ್ದಾರೆ. ತನ್ನ ಹೇಳಿಕೆ ವಿರುದ್ಧ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ  ಅದರ ಸ್ಪಷ್ಟೀಕರಣ ನೀಡಿ ಶಶಿ ತರೂರ್ ರಂಗಕ್ಕಿಳಿದಿದ್ದು,  ಆ ಮೂಲಕ ಲೀಗ್‌ನ್ನು ಮತ್ತು ಮುಸ್ಲಿಂ ಸಂಘಟನೆಗಳ ಆಕ್ರೋಶವನ್ನು …

ಹಳಿ ಬದಲಾಗಿ ಸಂಚರಿಸಿದ ಮಾವೇಲಿ ಎಕ್ಸ್‌ಪ್ರೆಸ್: ತಪ್ಪಿದ ಭಾರೀ ದುರಂತ

ಹೊಸದುರ್ಗ:ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್ ರೈಲು ಹಳಿ ಬದಲಾಗಿ ಸಂಚರಿಸಿದುದು ಅಲ್ಪ ಹೊತ್ತು ಗೊಂದಲ ಹಾಗೂ ಆತಂಕಕ್ಕೆ ಕಾರಣವಾಯಿತು. ಕಾಞಂಗಾಡ್ ರೈಲ್ವೇ ನಿಲ್ದಾಣದಲ್ಲಿ ನಿನ್ನೆ ಸಂಜೆ ೬.೪೫ರ ವೇಳೆ ಈ ಘಟನೆ ನಡೆದಿದೆ. ಒಂದನೇ ಫ್ಲಾಟ್‌ಫಾಂಗೆ ತಲುಪಬೇಕಾಗಿದ್ದ ರೈಲು ಫ್ಲಾಟ್‌ಫಾಂ ಇಲ್ಲದ ಮಧ್ಯದ ಹಳಿಯಲ್ಲಿ ಸಂಚರಿಸಿತ್ತು. ಈ ಹೊತ್ತಿನಲ್ಲಿ ಅದೇ ಹಳಿಯಲ್ಲಿ ಬೇರೆ ರೈಲು ಇಲ್ಲದಿದ್ದುದರಿಂದ ಭಾರೀ ದುರಂತ ತಪ್ಪಿದೆ. ಇದೇ ರೈಲಿನಲ್ಲಿ ಪ್ರಯಾಣಿಕ ಬೇಕಾಗಿದ್ದವರು ಇದು ಬೇರೆ ರೈಲಾಗಿರಬಹುದೆಂದು ಭಾವಿಸಿದ್ದರು. ಆದರೆ ರೈಲು ಆಗಮಿಸಿದ …

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ದಾಳಿ

ದಿಲ್ಲಿ: ಜಮ್ಮು ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕೆಣಕಲು ಬಂದಿದ್ದು ಇದಕ್ಕೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡಿದೆ. ನಿನ್ನೆ ರಾತ್ರಿ ಜಮ್ಮು ಕಾಶ್ಮೀರದ ಆರ್ಣಿಯ ಎಂಬಲ್ಲಿ ಭಾರತೀಯ ಯೋಧರ ಮೇಲೆ ಪಾಕ್ ಸೇನೆ ಗುಂಡು ಹಾರಿಸಿದೆ. ತಕ್ಷಣ ಭಾರತೀಯ ಸೇನೆ ಕೂಡಾ ತಿರುಗೇಟು ನೀಡಿದೆ. ಎರಡೂ ಭಾಗದಿಂದ ಆಕ್ರಮಣ ಪ್ರತ್ಯಾಕ್ರಮಣ ಇಂದು ಮುಂಜಾನೆ ೩ ಗಂಟೆವರೆಗೆ ಮುಂದುವರಿದಿದೆ. ಪಾಕಿಸ್ತಾನ ಸೇನೆ ಮೋಟಾರ್ ಶೆಲ್‌ಗಳನ್ನು ಬಳಸಿ ಆಕ್ರಮಿಸಿದೆಯೆಂದು ಬಿಎಸ್‌ಎಫ್ ತಿಳಿಸಿದೆ. ಪಾಕಿಸ್ತಾನದ ಆಕ್ರಮಣದಿಂದ ಪ್ರದೇಶದ …

ಯುವಕನಿಗೆ ಹಲ್ಲೆ: ೫ ಮಂದಿಗೆ ಕೇಸು

ಕುಂಬಳೆ: ಮೊಗ್ರಾಲ್ ಬಣ್ಣಾತಂಪಡವ್ ನಿವಾಸಿ ಶಂಸು ಯಾನೆ ಪೂಚಕ್ಕಣ್ಣನ್ ಶಂಸು (೩೮) ಎಂಬವರಿಗೆ ಹಲ್ಲೆಗೈದು ಗಾಯಗೊಳಿಸಿದ ಆರೋಪದಂತೆ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್ ನಿವಾಸಿಗಳಾದ ಕುಂಞಹಮ್ಮದ್, ಫಾರೂಕ್, ನೌಶಾದ್, ಗಫೂರ್, ನೌಶಾದ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೧೮ರಂದು ಈ ಐದು ಮಂದಿ ತಂಡ ಶಂಸುರನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಿನ್ನೆ ಪೊಲೀಸರು ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಗರ್ಭಿಣಿ ಆತ್ಮಹತ್ಯೆಗೈದ ಪ್ರಕರಣ: ಪತಿ, ಅತ್ತೆಗೆ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಗರ್ಭಿಣಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಮತ್ತು ಅತ್ತೆಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾ ಧೀಶರಾದ ಎ. ಮನೋಜ್ ಅವರು ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕಾರ ಕಠಿಣ ಸಜೆ ಮತ್ತು ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಯುವತಿಯ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪತಿ ಮೊಗ್ರಾಲ್ ಪುತ್ತೂರು ಬೆದ್ರಡ್ಕ ಹೌಸಿಂಗ್ ಕಾಲನಿಯ ಸಾಧಿಕ್ ಸುಲೈಮಾನ್ (೩೬)ನಿಗೆ ನ್ಯಾಯಾಲಯ ಆರು ವರ್ಷ …

ಲಾರಿ ಢಿಕ್ಕಿ ಹೊಡೆದು ಗಾಯಗೊಂಡ ಸೈಕಲ್ ಸವಾರ ಮೃತ್ಯು

ಕಾಸರಗೋಡು: ನೀಲೇಶ್ವರ ಕರುವಾಚ್ಚೇರಿ ತೋಟದ ಬಳಿ ಮೀನು ಲಾರಿ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಸೈಕಲ್ ಸವಾರ ಕರುವಾಚ್ಚೇರಿಯ ಪಾಚ್ಚಂಗೈಯ ಕಣ್ಣನ್ ಎಂಬವರ ಪುತ್ರ ಸಿ.ಮನೋಹರನ್ (೬೭) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಗುರುವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಮೃತರು ಪತ್ನಿ ರತ್ನ, ಮಕ್ಕಳಾದ ರೇಷ್ಮಾ, ಭಕ್ತ, ಸಹೋದರ-ಸಹೋದರಿಯರಾದ ಕೃಷ್ಣನ್, ನಳಿನಿ, ಶ್ರೀಮತಿ, ರಮ, ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೊಯಂಬತ್ತೂರಿನಲ್ಲಿ ೭ ಜನ ಮೃತಪಟ್ಟ ಕುಟುಂಬದ ಸದಸ್ಯ ನಿಧನ

ಪೆರ್ಮುದೆ: ಇಲ್ಲಿನ ಚೇವಾರು -ಕಯ್ಯಾರು ಮಧ್ಯದ ಕುಡಾಲುಮೇರ್ಕಳ ಮಂಡೆಕಾಪು ನಿವಾಸಿ ದಿ| ಬೆಂಜಮಿನ್ ಮೊಂತೇರೋರವರ ಪುತ್ರ ಜೋನ್ ಜೋಸೆಫ್ ಮೊಂತೇರೋ (೫೫) ನಿನ್ನೆ ರಾತ್ರಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉದ್ಯಮಿಯಾಗಿರುವ ಇವರು  ಕೆಲವು ವರ್ಷಗಳ ಹಿಂದೆ ಕೊಯಂಬತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ೭ ಜನ ಮೃತಪಟ್ಟ ಕುಟುಂಬದ ಸದಸ್ಯರಾಗಿದ್ದಾರೆ. ತಾಯಿ ಮೇರಿ ಮೊಂತೇರೋ, ಪತ್ನಿ ವೆರೋಣಿಕ, ಮಕ್ಕಳಾದ ಜೋಯ್ಸನ್, ಸಲ್ಮಾನ್, ಸಹೋದರರಾದ ಡೆನ್ಸಿಲ್ ಮೊಂತೇರೋ, ಪ್ರಕಾಶ್‌ಚಂದ್ರ ಮೊಂತೇರೋ, ಪ್ರೇಮ್ ಪ್ರಕಾಶ್ ಮೊಂತೇರೋ …

ಸಹಕಾರಿ ಸಂರಕ್ಷಣೆ ಸಂಗಮ ನ.೫ರಂದು

ಕಾಸರಗೋಡು: ಸಹಕಾರಿ ವಲಯದ ವಿರುದ್ಧವಾದ ಅಪಪ್ರಚಾರ ಗಳನ್ನು ಪ್ರತಿರೋಧಿಸಲು ಸಹಕಾರಿ ನೌಕರರ ಕೋ-ಆರ್ಡಿನೇಶನ್ ಸಮಿತಿ ಯ ನೇತೃತ್ವದಲ್ಲಿ ನ.೫ರಂದು ಜಿಲ್ಲೆಯ ಎರಡು ಕೇಂದ್ರಗಳಲ್ಲಿ ಸಹಕಾರಿ ಸಂರ ಕ್ಷಣಾ ಸಂಗಮ ನಡೆಸಲಾಗುವುದು.  ಬೆಳಿಗ್ಗೆ ೧೦ಕ್ಕೆ ಕಾಸರಗೋಡು ಕೇರಳ ಬ್ಯಾಂಕ್ ನಲ್ಲಿ ನಡೆಯುವ ಸಂಗಮವನ್ನು ಕೋ-ಆರ್ಡಿನೇಶನ್ ಸಮಿತಿ ರಾಜ್ಯ ಅಧ್ಯಕ್ಷ ಇ.ಡಿ. ಸಾಬ, ಕಾಞಂಗಾಡ್ ವ್ಯಾಪಾರ ಭವನದಲ್ಲಿ ನಡೆಯುವ ಸಂಗಮವನ್ನು ಕೇರಳ ಬ್ಯಾಂಕ್ ಆಡಳಿತ ಸಮಿತಿ ಸದಸ್ಯ ಸಾಬು ಎಬ್ರಹಾಂ ಉದ್ಘಾಟಿಸುವರು. ಹಲವರು ಭಾಗವಹಿಸುವರು.

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಯಿಂದಾಗಿ ಕೇರಳ ವಾಟರ್ ಅಥೋರಿಟಿಯ ವಿತರಣಾ ಪೈಪ್‌ಗಳ ದುರಸ್ತಿ ಕಾರ್ಯನಿರ್ವಹಣೆಯಿಂದಾಗಿ ನಾಳೆ, 29 ರಂದು ಕಾಸರಗೋಡು ನಗರಸಭೆ, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಪಂಚಾ ಯತ್‌ಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮುಂಜಾಗ್ರತೆ ವಹಿಸಿ ವಾಟರ್ ಅಥೋರಿಟಿಯೊಂದಿಗೆ ಸಹಕರಿಸಬೇಕೆಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ಇಕ್ಕಟ್ಟಾದ ರಸ್ತೆಯಲ್ಲಿ ಕೆಟ್ಟುನಿಂತ ಬಸ್ : ಸಂಚಾರ ಮೊಟಕಾಗಿ ಜನರಿಗೆ ಸಮಸ್ಯೆ

ಉಪ್ಪಳ: ರಸ್ತೆ ಮಧ್ಯೆ ಬಸ್ ಹಾನಿಯಾಗಿ ನಿಂತುಹೋದ ಕಾರಣದಿಂದ ಈ ದಾರಿಯಾಗಿ ಸಂಚಾರ ಮೊಟಕುಗೊಂಡು ಸ್ಥಳೀಯರು ಸಂಕಷ್ಟಕ್ಕೀಡಾದ ಸ್ಥಿತಿ ಉಂಟಾಗಿತ್ತು. ನಿನ್ನೆ ಬೆಳಿಗ್ಗೆ ಕುರುಡಪದವು ಲಾಲ್‌ಬಾಗ್ ರಸ್ತೆಯ ಚಿಪ್ಪಾರಿನಲ್ಲಿ ಘಟನೆ ನಡೆದಿದೆ. ಕುರುಡಪದವುನಿಂದ ಉಪ್ಪಳ ಭಾಗಕ್ಕೆ ತೆರಳುವ ಬಸ್ ಚಿಪ್ಪಾರುನಲ್ಲಿ ಕೆಟ್ಟು  ನಿಂತಿದೆ. ರಸ್ತೆ ಇಕ್ಕಟ್ಟಾಗಿದ್ದು, ಬದಿಯಲ್ಲಿ ಕಾಡು ಪೊದೆಗಳಾವರಿಸಿ ರುವುದರಿಂ ದಾಗಿ ಇನ್ನೊಂದು ವಾಹನಕ್ಕೆ ಸಂಚರಿ ಸಲು ಅಸಾಧ್ಯವಾಗಿತ್ತು. ಇದರಿಂದಾಗಿ ಈ ದಾರಿಯಲ್ಲಿ ಸಂಚರಿಸುವ ಬಸ್ ಸಹಿತ ಇತರ ವಾಹನಗಳ ಸಂಚಾರ ಮೊಟಕುಗೊಂಡಿತು. ರೋಗಿಗಳು ಸಹಿತ …