ಸುಳ್ಳು ಕೇಸುಗಳ ಮೂಲಕ ಬಿಜೆಪಿ ನೇತಾರರನ್ನು ಸಿಲುಕಿಸುವ ಯತ್ನ ಫಲಿಸದು-ಕೆ. ಸುರೇಂದ್ರನ್

ಕಾಸರಗೋಡು: ಸುಳ್ಳು ಕೇಸು ಗಳನ್ನು ದಾಖಲಿಸುವ ಮೂಲಕ ಬಿಜೆಪಿ ನೇತಾರರನ್ನು ಸಿಲುಕಿಸ ಬಹುದೆಂದು ಯಾರೂ ಭಾವಿಸುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಮಂಜೇಶ್ವರ ಚುನಾವಣೆ ಪ್ರಕರಣಕ್ಕೆ  ಸಂಬಂಧಿಸಿ ನಿನ್ನೆ ನ್ಯಾಯಾಲಯ ದಿಂದ ಜಾಮೀನು ಲಭಿಸಿದ ಬಳಿಕ ಅವರು ಪತ್ರಕರ್ತ ರೊಂದಿಗೆ  ಮಾತನಾಡುತ್ತಿದ್ದರು. ಮಂಜೇಶ್ವರ ಪ್ರಕರಣ ರಾಜಕೀಯ ದ್ವೇಷ ತೀರಿಸಲು ಸಿಪಿಎಂನವರು ಮಾಡಿದ ಕುತಂ ತ್ರವಾಗಿದೆಯೆಂದೂ ಸುರೇಂದ್ರನ್ ಆರೋಪಿಸಿದ್ದಾರೆ. ಈಗ ದಾಖ ಲಿಸಿಕೊಂಡಿರುವ ಪ್ರಕರಣ ಗಳಿಂದ ಬಿಜೆಪಿಯನ್ನು ಇಲ್ಲದಾಗಿಸ ಬಹುದೆಂದು ಯಾರೂ ಭಾವಿಸು ವುದು …

ದಾಂಪತ್ಯ ಸಮಸ್ಯೆ: ಪತ್ನಿಯನ್ನು ಕತ್ತುಕೊಯ್ದು ಕೊಲೆಗೈದ ಪತಿ

ಹೊಸದುರ್ಗ: ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಪತ್ನಿಯನ್ನು ಕುತ್ತಿಗೆ ಕೊಯ್ದು ಕೊಲೆಗೈದ ಘಟನೆ ಪಯ್ಯನ್ನೂರು ಸಮೀಪ ನಡೆದಿದೆ. ಪಯ್ಯನ್ನೂರು ಸಮೀಪ ಕಾಂಕೋಲ್ ಪಾಪ್ಪರಟ್ಟಿ ಬೊಮ್ಮರಡಿ ಕಾಲನಿಯ ವಿ.ಕೆ. ಪ್ರಸನ್ನ (೩೫) ಎಂಬಾಕೆ ಕೊಲೆಗೈಯ್ಯಲ್ಪಟ್ಟ ಯುವತಿ. ಘಟನೆ ಬಳಿಕ ಪತಿ ವಳ್ಳಿಕ್ಕಡಿಯನ್ ಶಾಜಿ (೪೦) ಪಯ್ಯನ್ನೂರು ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ. ಪ್ರಸನ್ನ ಹಾಗೂ ಶಾಜಿಯ ದಾಂಪತ್ಯದಲ್ಲಿ ವಿರಸವುಂಟಾಗಿದ್ದು, ಇದರಿಂದ ಎರಡು ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಬೊಮ್ಮರಡಿ ಕಾಲನಿಯ ಮನೆಗೆ …

ಆಟದ ವೇಳೆ ಘರ್ಷಣೆ: ಮೂವರ ವಿರುದ್ಧ ನರಹತ್ಯಾ ಯತ್ನ ಪ್ರಕರಣ ದಾಖಲು

ಕಾಸರಗೋಡು: ಕ್ರಿಕೆಟ್ ಆಟ  ನಡೆಯುತ್ತಿದ್ದ ವೇಳೆ ಲೈಟ್ ಆಫ್ ಮಾಡಿದ ಹೆಸರಲ್ಲಿ ಉಂಟಾದ ಘರ್ಷಣೆಯಲ್ಲಿ ಪ್ರಸ್ತುತ ಕ್ರೀಡಾಂಗಣದ ವಾಚ್‌ಮ್ಯಾನ್ ಮೇಲೆ ಒಂದು ತಂಡ ಹಲ್ಲೆ ನಡೆಸಿದ ಘಟನೆ ಉಳಿಯತ್ತಡ್ಕದಲ್ಲಿ ನಡೆದಿದೆ. ಉಳಿಯತ್ತಡ್ಕದ ಗ್ರೀನ್ ಫೀಲ್ಡ್ ಟರ್ಫ್ ಕೋರ್ಟ್‌ನಲ್ಲಿ ಮೊನ್ನೆ ರಾತ್ರಿ ಆಟ ನಡೆಯುತ್ತಿತ್ತು. ಆಗ ಯಾರೋ ಅದರ ವಿದ್ಯುತ್ ಸಂಪರ್ಕವನ್ನು ಆಫ್ ಮಾಡಿದ್ದರು. ಅದನ್ನು ತಾನು ಪ್ರಶ್ನಿಸಿದಾಗ ಮೂವರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪ್ರಸ್ತುತ ಕ್ರೀಡಾಂಗಣದ ವಾಚ್‌ಮ್ಯಾನ್ ಪಟ್ಲದ ಇಲ್ಯಾಸ್ (೩೬) ಪೊಲೀಸರಿಗೆ ನೀಡಿದ …

ಭೀಕರ ಅಪಘಾತ: ೧೩ ಮಂದಿ ಸ್ಥಳದಲ್ಲೇ ಮೃತ್ಯು

ಚಿಕ್ಕಬಳ್ಳಾಪುರ: ಸಿಮೆಂಟ್ ಬಲ್ಕರ್‌ಗೆ ಟಾಟಾ ಸುಮೋ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ  ದುರಂತದಲ್ಲಿ ಮಗು ಸಹಿತ ೧೩ ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ೭ ಗಂಟೆಗೆ ಊರನ್ನೇ ನಡುಗಿಸಿದ ದುರಂತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿ ಚಿತ್ರಾವತಿ ಬಳಿ ಅಪಘಾತ ಸಂಭವಿಸಿದೆ. ಟಾಟಾ ಸುಮೋ ಆಂಧ್ರ ಪ್ರದೇಶದಿಂದ ಬೆಂಗಳೂರಿನತ್ತ ತೆರಳುತ್ತಿತ್ತು. ಈ ವಾಹನದಲ್ಲಿದ್ದ ೧೩ ಮಂದಿ ಕೂಡಾ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗು, ಮೂವರು ಮಹಿಳೆಯರು, ಎಂಟು ಮಂದಿ ಪುರುಷರು ಒಳಗೊಂಡಿದ್ದಾರೆ. ಇವರ ಪೈಕಿ ೬ …

ಮಿಲಿಟರಿ ಅಧಿಕಾರಿಯೆಂದು ತಿಳಿಸಿ ಚೆಮ್ನಾಡ್ ನಿವಾಸಿಯ ೭ ಲಕ್ಷ ರೂ. ಲಪಟಾವಣೆ

ಕಾಸರಗೋಡು: ರೈಲ್ವೇಯಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ವ್ಯಕ್ತಿಯೋರ್ವ ಚೆಮ್ನಾಡ್ ನಿವಾಸಿಯಾದ ಯುವಕನಿಂದ ೭ ಲಕ್ಷ ರೂಪಾ ಯಿ ಪಡೆದು ವಂಚಿಸಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿಯನ್ನು ಹುಡುಕಿಕೊಂಡು ಮೇಲ್ಪರಂಬ ಪೊಲೀಸರು ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಮಿಲಿಟರಿ ಅಧಿಕಾರಿ ಯೆಂದು ಸಾಮಾಜಿಕ ತಾಣಗಳ ಮೂಲಕ ಪರಿಚಯಗೊಂಡ ಉತ್ತರ ಪ್ರದೇಶ ನಿವಾಸಿ ಚೆಮ್ನಾಡ್ ನಿವಾಸಿ ಯುವಕನ ೭ ಲಕ್ಷ ರೂ. ಲಪಟಾಯಿಸಿದ್ದಾನೆ. ಹಣ ಪಡೆದುಕೊಂಡ ಬಳಿಕ ಪ್ರವೇಶ ಪರೀಕ್ಷೆಗೆಂದು ತಿಳಿಸಿ ಯುವಕನನ್ನು ಚೆನ್ನೈಗೆ ಬರುವಂತೆ ತಿಳಿಸಿದ್ದನು. ಆದರೆ ಅಲ್ಲಿಗೆ ತಲಪಿದ ಬಳಿಕವೇ …

ಸಿನಿಮಾವನ್ನು ಗೋತಾ ಮಾಡಿಸುವ ರೀತಿಯ ರಿವ್ಯೂ ವಿರುದ್ಧ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು

ಕಾಸರಗೋಡು: ಸಿನಿಮಾ ಬಿಡುಗಡೆಗೊಂಡ ಬೆನ್ನಲ್ಲೇ ಅದನ್ನು ಕಳಪೆ ಮಾದರಿಯಾಗಿ ಚಿತ್ರೀಕರಿಸುವ ರೀತಿಯಲ್ಲಿ   ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿ ಆ ಮೂಲಕ ಸಿನಿಮಾವನ್ನು  ಹೆಚ್ಚಿಗೆ ಗಳಿಕೆಯಲ್ಲಿ ಗೋತಾ ಗೊಳಿಸುವಂತೆ ಮಾಡುವವರ ವಿರುದ್ಧ ರಾಜ್ಯ ಪೊಲೀಸರು ಕಾನೂನ ಕ್ರಮ ಜರಗಿಸತೊಡಗಿದ್ದಾರೆ.  ಇದಕ್ಕೆ ಸಂಬಂಧಿಸಿ ಇಡೀ ರಾಜ್ಯದಲ್ಲೇ ಇದೇ ಪ್ರಥಮ ಎಂಬಂತೆ ಎರ್ನಾಕುಳಂ ಸೌತ್ ಪೊಲೀಸರು ಎಂಟು ಯೂಟ್ಯೂಬ್‌ಗಳ ವಿರುದ್ದ  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಫೇಸ್ ಬುಕ್‌ನ ವಿರುದ್ಧವೂ ಕೇಸು ದಾಖಲಿಸಲಾಗಿದೆ. ‘ರೋಹನ್ ಮಗನ್ ಕೋರಾ’ ಎಂಬ ಮಲಯಾಳಂ ಸಿನಿಮಾದ ನಿರ್ದೇಶಕ …

ಐಎನ್‌ಎಲ್ ರಾಷ್ಟ್ರೀಯ ಕೋಶಾಧಿಕಾರಿ ನಿಧನ

ಕಾಸರಗೋಡು: ಇಂಡ್ಯನ್ ನೇಶನಲ್ ಲೀಗ್ ರಾಷ್ಟ್ರೀಯ ಕೋಶಾ ಧಿಕಾರಿ, ರಾಜ್ಯ ಉಪಾಧ್ಯಕ್ಷರಾಗಿದ್ದ ಡಾ| ಎ.ಎ. ಅಮೀನ್ (೬೭) ನಿಧನಹೊಂದಿದರು. ನಿನ್ನೆ ಮಧ್ಯಾಹ್ನ ಕೊಲ್ಲಂ ಓಚ್ಚಿರದಲ್ಲಿ ಮನೆಯಲ್ಲಿ ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಫೌಸೀನ್, ಮಕ್ಕಳಾದ ಡಾ| ಫಯಾಸ್, ಫಾದಿಲ್ ಅಮೀನ್ (ನೇಶನಲ್ ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ), ಸೊಸೆಯಂದಿರಾದ ಸುನು ಫಯಾಸ್, ನಿಹಾನ್ ಫಾದಿಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬದಿಯಡ್ಕ ಪಂ. ಕಚೇರಿ ಮುಂಭಾಗ ವ್ಯಾಪಾರಿಗಳ ಧರಣಿ

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಹಾಗೂ ನೀರ್ಚಾಲು ಘಟಕಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳೊಂದಿಗೆ ಬದಿಯಡ್ಕ ಪಂಚಾಯತ್ ಮುಂಭಾಗ ಧರಣಿ ನಡೆಸಲಾಯಿತು.ಪ್ಲಾಸ್ಟಿಕ್ ನಿಷೇಧದ ಹೆಸರಲ್ಲಿ ವ್ಯಾಪಾರಿಗಳನ್ನು ಪೀಡಿಸುವ ಹಾಗೂ ಅತಿಯಾದ ದಂಡ ಪಾವತಿಸುವುದರ ವಿರುದ್ಧ, ವ್ಯಾಪಾರ ಸಂಸ್ಥೆಗೆ ಬರುವಂತಹ ವ್ಯಾಪಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆ ಗೊಳಿಸುವ ಸಲುವಾಗಿ, ಬಸ್ ನಿಲ್ದಾಣದ ಸಮೀಪ ರಸ್ತೆ ವಿಭಾಜಕದ ಮದ್ಯ ಭಾಗದಲ್ಲಿ ದ್ವಿಚಕ್ರ, ಹಾಗೂ ತ್ರಿಚಕ್ರ ವಾಹನಗಳಿಗೆ ರಸ್ತೆ ದಾಟುವ ಸಲುವಾಗಿ ಸೂಕ್ತ ವ್ಯವಸ್ಥೆ, ಅನಧಿಕೃತ ವ್ಯಾಪಾರವನ್ನು …

ಸಾರ್ವಜನಿಕರಿಗೆ ಉಪಟಳ: ವ್ಯಕ್ತಿ ಸೆರೆ

ಉಪ್ಪಳ: ಉಪ್ಪಳ ಬಸ್ ನಿಲ್ದಾಣ ದಲ್ಲಿ ನಿನ್ನೆ ಮಧ್ಯಾಹ್ನ ಸಾರ್ವಜನಿಕರಿಗೆ ಉಪಟಳ ನೀಡುವ ರೀತಿಯಲ್ಲಿ ವರ್ತಿಸುತ್ತಿದ್ದ ಆರಿಕ್ಕಾಡಿ ಪರಿಸರ ನಿವಾಸಿ ಇಬ್ರಾಹಿಂ (೫೩)ನನ್ನು ಮಂಜೇಶ್ವರ ಸಿಐ ರಜೀಶ್  ಬಂಧಿಸಿದ್ದಾರೆ. ಅಮಲು ಪದಾರ್ಥ ಸೇವಿಸಿ ಸಾರ್ವಜ ನಿಕರಿಗೆ ಉಪಟಳ ನೀಡಿದ ಹಿನ್ನೆಲೆಯಲ್ಲಿ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ.

ಕೊನೆಗೂ ನೂರುದ್ದೀನ್‌ರ ಮನೆಗೆ ರಸ್ತೆ ರೆಡಿ: ರೋಗಿಯಾದ ತಾಯಿಯನ್ನು ಹೊತ್ತೊಯ್ಯಬೇಕಾದ ಸ್ಥಿತಿ ಇನ್ನಿಲ್ಲ

ಬದಿಯಡ್ಕ: ಮನೆಗೆ ರಸ್ತೆ ಮಂಜೂರು ಮಾಡಬೇಕೆಂಬ ಪಳ್ಳತ್ತಡ್ಕದ ನೂರುದ್ದೀನ್‌ರ ಹಲವು ವರ್ಷಗಳ ಬೇಡಿಕೆಗೆ  ಕೊನೆಗೂ ಪರಿಹಾರವುಂ ಟಾಗಿದೆ. ರೋಗಿಯಾದ ತಾಯಿಯನ್ನು ಇನ್ನು ಹೊತ್ತುಕೊಂಡು ಹೋಗಬೇ ಕಾಗಿಲ್ಲ. ರಸ್ತೆಗಾಗಿ ನೂರುದ್ದೀನ್ ಅದಲಿಬದಲಿ ಪಂಚಾ ಯತ್ ಆಡಳಿತ ಸಮಿತಿಯಲ್ಲೂ, ಜನಪ್ರತಿನಿಧಿಗಳಲ್ಲೂ ಬೇಡಿಕೊಂ ಡರೂ ಫಲವುಂಟಾಗಿರಲಿಲ್ಲ. ಈಗಿನ ಪಂ. ಸದಸ್ಯೆ ನೂರುದ್ದೀನ್‌ರ ಕುಟುಂಬದ ಸಂಕಷ್ಟ ಕಂಡು  ಮರುಗಿ ಪರಿಹಾರ ಕಂಡುಕೊಂಡಿದ್ದಾರೆ. ಬದಿಯಡ್ಕ ಪೆರ್ಲ ರಸ್ತೆಯ ಪಳ್ಳತ್ತಡ್ಕ ರೇಶನ್ ಅಂಗಡಿ ಬಳಿಯಲ್ಲಿ ನೂರು ದ್ದೀನ್ ಸ್ವಂತ ಸ್ಥಳದಲ್ಲಿ ರಸ್ತೆ ನಿರ್ಮಿ ಸಿರುವುದು. ಈ …