ಕೋಟೂರಿನಲ್ಲಿ ಬಸ್-ಬೈಕ್ ಢಿಕ್ಕಿ ಹೊಡೆದು ತಲೆಹೊರೆ ಕಾರ್ಮಿಕ ದಾರುಣ ಮೃತ್ಯು

ಮುಳ್ಳೇರಿಯ: ಕೋಟೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ  ತಲೆಹೊರೆ ಕಾರ್ಮಿಕನಾದ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬಸ್ ಹಾಗೂ ಬೈಕ್ ಢಿಕ್ಕಿ ಹೊಡೆದು ಈ ಅಪಘಾತವುಂಟಾಗಿದೆ. ಬೈಕ್ ಸವಾರನಾದ ರಾಜಪುರಂ ಬಳಿಯ ಕೊಟ್ಟೋಡಿ ಪುದಿಯ ಕಾಲನಿ ಪಯ್ಯಾರತ್ತ್ ವೀಡ್‌ನ ಪಿ. ಕಾರ್ತಿಕ್ (೪೩) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೮.೪೫ರ ವೇಳೆ ಇವರು ಸಂಚರಿಸುತ್ತಿದ್ದ ಬೈಕ್ ಹಾಗೂ ಬಸ್ ಢಿಕ್ಕಿ ಹೊಡೆದು ಅಪಘಾತ  ಸಂಭವಿಸಿದೆ. ಕಾನತ್ತೂರು ಭಾಗದಿಂದ ಆಗಮಿಸಿದ ಬೈಕ್ ಕೋಟೂರು ರಾಜ್ಯ …

೧೭೨ ಪ್ಯಾಕೆಟ್ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಅಡ್ಕತ್ತಬೈಲಿಗೆ ಸಮೀಪದ ಅರ್ಜಾಲ್ ರಸ್ತೆ ಪರಿಸರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ೧೭೨ ಪ್ಯಾಕೆಟ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅರ್ಜಾಲ್ ರಸ್ತೆ ಬಳಿಯ ಫೋರೆಸ್ಟ್ ಕಂಪೌಂಡಿನ ಸತೀಶ್ ಕೆ. (೩೦) ಎಂಬಾತನನ್ನು ಬಂಧಿಸಲಾಗಿದೆ.

ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕೋ-ಮಾ-ಲೀ ಮೈತ್ರಿಕೂಟ: ಪಕ್ಷಗಳಲ್ಲಿ ಸೃಷ್ಟಿಯಾದ ಅಸಹನೆ

ಮೀಯಪದವು: ರಾಜ್ಯದಲ್ಲಿ ಸಹಕಾರಿ ವಲಯವನ್ನು ಕೊಳ್ಳೆಹೊಡೆ ಯುವ ಸಿಪಿಎಂನೊಂದಿಗೆ ಜೊತೆಗೂಡಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿ ಆಹ್ವಾನ ನೀಡಿದಾಗ ಮೀಂಜ ಪಂಚಾಯತ್‌ನ ಮೀಯ ಪದವಿನಲ್ಲಿ ಕಾಂಗ್ರೆಸ್ ಮಾರ್ಕಿಸ್ಟ್ ಪಕ್ಷ, ಮುಸ್ಲಿಂಲೀಗ್‌ನೊಂದಿಗೆ ಸೇರಿ ಮೈತ್ರಿ ಮಾಡಿಕೊಂಡು ವಿರೋಧಪಕ್ಷವನ್ನು ಎದುರಿಸುತ್ತಿದೆ. ಈ ತಿಂಗಳ ೨೯ರಂದು ನಡೆಯುವ ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ  ಈ ಪಕ್ಷಗಳು ಮೈತ್ರಿಮಾಡಿಕೊಂಡು ಸ್ಪರ್ಧಿಸುತ್ತಿದೆ.  ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ನಮ್ಮ ಸಮರ್ಥರಾದ ಉಮೇದ್ವಾರರೆಂದು ಮೈತ್ರಿಕೂಟ ಹಕ್ಕುವಾದ ಮಂಡಿಸಿದೆ. ಇದೇ ವೇಳೆ …

ಪಾರ್ಕಿಂಗ್: ಡಿವೈಎಸ್ಪಿಯೊಂದಿಗೆ ವಾಗ್ವಾದಕ್ಕಿಳಿದ ಯುವಕನ ವಿರುದ್ಧ ಕೇಸು 

ಕಾಸರಗೋಡು: ವಾಹನ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಕಾರು ನಿಲ್ಲಿಸಿರುವುದನ್ನು ಪ್ರಶ್ನಿಸಿದ ಡಿವೈಎಸ್ಪಿಯೊಂದಿಗೆ ವಾಗ್ವಾದಕ್ಕಿಳಿದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಬೇವಿಂಜೆಯ ಮಾಹಿನ್ ಎಂಬಾತನ ವಿರುದ್ಧ ಕೇಸು ದಾಖಲಿಸಿದ್ದು, ಈತನನ್ನು ಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ನಿನ್ನೆ ಸಂಜೆ   ವಿದ್ಯಾನಗರ ಮಾಯಿಪ್ಪಾಡಿ ರಸ್ತೆ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಬಸ್ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವ ಸ್ಥಳದಲ್ಲಿ ನಿಲ್ಲಿಸಿದ್ದ ಕಾರನ್ನು ತೆರವುಗೊಳಿಸುವಂತೆ ಡಿವೈಎಸ್ಪಿ ಕೆ. ಸುಧಾಕರನ್  ತಿಳಿಸಿದಾಗ ಅವರೊಂದಿಗೆ ಮಾಹಿನ್ ವಾಗ್ವಾದಕ್ಕಿಳಿದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.

೫ ಕೋಟಿ ರೂ. ಭರವಸೆ ನೀಡಿ ಯುವತಿಯ ೩೮ ಲಕ್ಷ ರೂ. ಲಪಟಾವಣೆ

ಬಂದಡ್ಕ: ೫ ಕೋಟಿ ರೂಪಾಯಿ  ಸಾಲ  ನೀಡುವುದಾಗಿ ತಿಳಿಸಿ ಯುವತಿಯಿಂದ ೩೮ ಲಕ್ಷರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಕಾಸರಗೋಡು ಸಿಜೆಎಂ ನ್ಯಾಯಾಲಯದ ನಿರ್ದೇಶ ಪ್ರಕಾರ ಯುವತಿ ಒಳಗೊಂಡ ಮೂರು ಮಂದಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂದಡ್ಕ ಒಳಿಕ್ಕಪದಾಲ್ ಹೌಸ್‌ನ ನಸೀಮ ರಶೀದ್ (೪೧)ರ ದೂರಿನಂತೆ ಪಡ್ಪು ಪುಳಿಕ್ಕಲ್ ಹೌಸ್‌ನ ಸೋಳಿ ಜೋಸೆಫ್ (೫೨), ಮಾಣಿಮೂಲೆ ಕಾವ್ಯಾಡ್ ಹೌಸ್‌ನ ಜೋಸುಟ್ಟಿ ಮ್ಯಾಥ್ಯು (೫೫), ಕೊಲ್ಲಂ ಕುಳತ್ತುಪುಳದ ಶೀಬ (೪೬) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ೨೦೧೮ ಸೆಪ್ಟಂಬರ್ …

ಒಂದೇ ಕುಟುಂಬದ ನಾಲ್ವರನ್ನು ಕೊಡಲಿಯಿಂದ ಕಡಿದು ಕೊಲೆಗೈದ ಪ್ರಕರಣ: ವಿಚಾರಣೆ ಆರಂಭ

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ  ಪೈವಳಿಕೆ ಕನ್ಯಾಲದ ಒಂದೇ ಕುಟುಂಬ ನಾಲ್ವರನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ  ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ)ದಲ್ಲೇ ಆರಂಭಗೊಂಡಿದೆ. ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ  ಕನ್ಯಾಲ ಸುದೆಂಬಳದ ವಿಠಲ (೬೦), ಬಾಬು (೫೨), ಸದಾಶಿವ (೫೫) ಮತ್ತು  ದೇವಕಿ (೫೫) ಎಂಬವರನ್ನು ಸಾಮೂಹಿಕವಾಗಿ ಕಡಿದು ಕೊಲೆಗೈದ ಪ್ರಕರಣವಾಗಿದೆ ಇದು. ೨೦೨೦ ಆಗಸ್ಟ್ ೩ರಂದು ರಾತ್ರಿ ೮ ಗಂಟೆಗೆ ಇಡೀ ಊರನ್ನೇ ನಡುಗಿಸಿದ ಈ ಭೀಕರ …

ವೃದ್ಧೆಯನ್ನು ಕಟ್ಟಿಹಾಕಿ ೧೦ ಪವನ್ ಚಿನ್ನಾಭರಣ ದರೋಡೆ

ಕಣ್ಣೂರು: ವೃದ್ಧೆಯನ್ನು ಮನೆಯೊಳಗೆ ಕಟ್ಟಿಹಾಕಿದ ದರೋಡೆ ತಂಡವೊಂದು ಹತ್ತು ಪವನ್ ಚಿನ್ನಾ ಭರಣ ದೋಚಿದ ಘಟನೆ ಕಣ್ಣೂರಿನ ಪರಿಯಾರ ಎಂಬಲ್ಲಿ ನಡೆದಿದೆ. ಪರಿಯಾರ ಬಳಿಯ ಅಮ್ಮಾ ನಪಾರ ಎಂಬಲ್ಲಿರುವ ಡಾ| ಶಕೀರ್ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಡಾ| ಶಕೀರ್ ಹಾಗೂ ಪತ್ನಿ ನಿನ್ನೆ ರಾತ್ರಿ ೧೧ ಗಂಟೆ ವೇಳೆ ತಿರುವನಂತಪುರಕ್ಕೆ ತೆರಳಿದ್ದರು. ಅಂತರ ಮುಖವಾಡ ಧರಿಸಿದ ನಾಲ್ಕು ಮಂದಿ ತಂಡ ಮನೆಗೆ ನುಗ್ಗಿದೆ. ಮನೆಯಲ್ಲಿ ಡಾ| ಶಕೀರ್‌ರ  ಸಂಬಂಧಿಕೆಯಾದ ವೃದ್ಧೆ ಹಾಗೂ …

ವಿ.ಎಸ್‌ಗಿಂದು ೧೦೦ನೇ ಹುಟ್ಟುಹಬ್ಬ

ತಿರುವನಂತಪುರ: ಸಿಪಿಎಂನ ಹಿರಿಯ ನೇತಾರನೂ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಇಂದು ೧೦೦ನೇ ಹುಟ್ಟುಹಬ್ಬವನ್ನು ಆಚರಿಸುತ್ತಿ ದ್ದಾರೆ. ತಿರುವನಂತಪುರ ಬಾರ್ಟನ್ ಹಿಲ್ ಲಾ ಕಾಲೇಜು ಸಮೀಪ ಪುತ್ರ ಅರುಣ್ ಕುಮಾರ್‌ರ ಮನೆಯಲ್ಲಿ  ಕಳದ ನಾಲ್ಕು ವರ್ಷಗಳಿಂದ ವಿ.ಎಸ್. ಅಚ್ಯುತಾನಂದನ್  ವಿಶ್ರಾಂತಿಯಲ್ಲಿದ್ದಾರೆ. ವೈದ್ಯರುಗಳ ಕಠಿಣ ನಿರ್ಬಂಧವಿರುವುದರಿಂದ ಹುಟ್ಟುಹಬ್ಬ ಶುಭಾಶಯ ತಿಳಿಸಲು ಹೆಚ್ಚಿನ ಮಂದಿಗೆ ವಿ.ಎಸ್‌ರನ್ನು ಭೇಟಿ ಯಾಗಲು ಅನುಮತಿ ಯಿಲ್ಲವೆನ್ನ ಲಾಗಿದೆ. ೨೦೧೯ರ ಹುಟ್ಟು ಹಬ್ಬಾಚರಣೆ ಬಳಿಕ ಅಸ್ವಸ್ಥರಾದುದರಿಂದ ವಿ.ಎಸ್. ಪೂರ್ಣ ವಿಶ್ರಾಂತಿಯಲ್ಲಿರುವಂತೆ ವೈದ್ಯರುಗಳು ನಿರ್ದೇಶಿಸಿದ್ದಾರೆ. ಇದರಿಂದ ಅವರು …

ಉದ್ಯೋಗ ಭರವಸೆಯೊಡ್ಡಿ ಯುವತಿಯ ೧೦,೩೦,೨೦೦ ರೂ. ವಂಚನೆ

ಮಂಜೇಶ್ವರ: ತಾತ್ಕಾಲಿಕ ಉದ್ಯೋಗ ಭರವಸೆಯೊಡ್ಡಿ ಯುವತಿಯಿಂದ ೧೦,೩೦,೨೦೦ ರೂಪಾಯಿ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಹೊಸಬೆಟ್ಟು ವಿಲ್ಲೇಜ್‌ನಲ್ಲಿ ಗೋವಿಂದ ಪೈ  ಕಾಲೇಜು ಬಳಿಯ ಮಧುರಿಮ ವಿನೋದ್‌ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪರಿಚಯಗೊಂಡ ವ್ಯಕ್ತಿ ಹೆಚ್ಚು ವೇತನವುಳ್ಳ ತಾತ್ಕಾಲಿಕ ಉದ್ಯೋಗದ ಭರವಸೆಯೊಡ್ಡಿದ್ದಾನೆನ್ನಲಾಗಿದೆ. ಉದ್ಯೋಗಕ್ಕಾಗಿ ದೂರುದಾತೆ ಕಳೆದ ಜುಲೈ ೧ರಿಂದ ೧೩ವರೆಗಿನ ದಿನಗಳಲ್ಲಾಗಿ ೧೦,೩೦,೨೦೦ ರೂಪಾಯಿ ಪಾವತಿಸಿದ್ದಾಳೆ. ಆದರೆ ಅನಂತರ ಉದ್ಯೋಗದ ಯಾವುದೇ ಸಾಧ್ಯತೆ ಇಲ್ಲದಾದ್ದರಿಂದ ಯುವತಿ …

ಟಿಪ್ಪಣಿ ಬರೆದಿಟ್ಟು ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಪೊಯಿನಾಚಿ: ಸಾವಿಗೂ ಮೊದಲು ತನ್ನ ಬಗ್ಗೆ ಟಿಪ್ಪಣಿ ಬರೆದಿಟ್ಟು ನಿವೃತ್ತ ಮುಖ್ಯೋ ಪಾಧ್ಯಾಯ ನಿಧನಹೊಂದಿದರು. ಮೇಲ್ಬಾರದ ಕಾಮಲೇನ್ ವಲಿಯವೀಟಿಲ್   ಮುತ್ತು ನಾಯರ್ (೮೬) ನಿಧನ ಹೊಂದಿದವರು. ಇಂದು ಇವರು ತಾನು ಶಾಲೆಗಾಗಿ ಮಾಡಿದ ಸಾಧನೆ ಮತ್ತು ತಮ್ಮ ಕುಟುಂಬದ ಬಗ್ಗೆ ಮಾಹಿತಿ ಬರೆದಿಟ್ಟು ನಿಧನಹೊಂದಿದ್ದಾರೆ. ತಾನು ಮುಖ್ಯೋಪಾಧ್ಯಾಯ ನಾಗಿದ್ದು ಅರಮಂಗಾನ ಜಿಯುಪಿ ಶಾಲೆಯಲ್ಲಿ ಕುಡಿಯುವ ನೀರು ಇಲ್ಲವೆಂಬುದನ್ನು ತಿಳಿದು ನಿವೃತ್ತಿ ವೇಳೆ ಅಲ್ಲಿ ಕುಡಿಯುವ ನೀರು ವ್ಯವಸ್ಥೆ ಮಾಡಿದ್ದಾರೆ. ಇದು ತನ್ನ ಬದುಕಿನ ಸಾಧನೆಯೆಂದೂ ಅವರು ಬರೆದಿಟ್ಟಿದ್ದಾರೆ. …