ಜುಗಾರಿ ತಂಡದಿಂದ ಯುವಕನಿಗೆ ಹಲ್ಲೆ: ಆರೋಪಿಗಳ ವಿರುದ್ಧ ಪೊಲೀಸ್ ಕ್ರಮವಿಲ್ಲವೆಂದು ಕುಟುಂಬ ಆರೋಪ
ಕುಂಬಳೆ: ಕುಬಣೂರಿನಲ್ಲಿ ಜೂಜಾಟ ತಂಡದ ಆಕ್ರಮಣಕ್ಕೆ ತುತ್ತಾಗಿ ಬೆನ್ನೆಲುಬಿಗೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಯುವಕನಿಗೆ ನೀತಿ ಲಭ್ಯಗೊಳಿಸಬೇಕೆಂದು ಕುಟುಂಬ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋ ಷ್ಠಿಯಲ್ಲಿ ಆಗ್ರಹಿಸಿದೆ. ಬೇಟೆಗಾರರ ತಂಡದ ವ್ಯಕ್ತಿಯೆಂದು ಆರೋಪಿಸಿ ಆರಿಕ್ಕಾಡಿಯ ಫಾರ್ಮಸಿ ನೌಕರ ಸುನಿಲ್ಗೆ ಏಳು ಮಂದಿಯ ತಂಡ ಹಲ್ಲೆ ನಡೆಸಿತ್ತು. ಗಾಯಾಳು ಸುನಿಲ್ನಿಂದ ಕುಂಬಳ ಪೊಲೀಸರು ಹೇಳಿಕೆ ದಾಖಲಿಸಿದ್ದರು. ಆದರೆ ಬಳಿಕ ಯಾವುದೇ ಕ್ರಮ ಆರೋಪಿಗಳ ವಿರುದ್ಧ ಕೈಗೊಳ್ಳಲಿಲ್ಲವೆಂದು ಕುಟುಂಬ ಆರೋಪಿಸಿದೆ. ಜುಗಾರಿ ತಂಡದ ದಬ್ಬಾಳಿಕೆ ಕುಬಣೂರು ಹಾಗೂ ಪರಿಸರದಲ್ಲಿ ನಡೆಯುತ್ತಿದ್ದು, …
Read more “ಜುಗಾರಿ ತಂಡದಿಂದ ಯುವಕನಿಗೆ ಹಲ್ಲೆ: ಆರೋಪಿಗಳ ವಿರುದ್ಧ ಪೊಲೀಸ್ ಕ್ರಮವಿಲ್ಲವೆಂದು ಕುಟುಂಬ ಆರೋಪ”