ಅಡಿಕೆ ಖರೀದಿ, ಮಾರಾಟಕ್ಕೆ ಟೆಂಡರ್ ಅಕ್ಟೋಬರ್ ೨೧ರಂದು ನೀರ್ಚಾಲಿನಲ್ಲಿ ಆರಂಭ

ಬದಿಯಡ್ಕ: ನೀರ್ಚಾಲಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘ ನೀರ್ಚಾಲು ಸಂಸ್ಥೆಯು ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಕೃಷಿಕ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವ ಧ್ಯೇಯದೊಂದಿಗೆ ಚಾಲಿ ಅಡಿಕೆಯ ಟೆಂಡರು ಖರೀದಿ ವ್ಯವಸ್ಥೆಯನ್ನು ಆರಂಭಿಸುತ್ತಿದೆ. ಈ ನೂತನ ವ್ಯವಸ್ಥೆಯು ಅಕ್ಟೋಬರ್ 21ರಂದು ಆರಂಭಗೊಳ್ಳಲಿದೆ. ಮುಂದೆ ಪ್ರತೀ ಗುರುವಾರದಂದು ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 1 ಗಂಟೆಯ ತನಕ ಟೆಂಡರು ಪ್ರಕ್ರಿಯೆ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಟೆಂಡರು ದರ …

ಕೇರಳೋತ್ಸವ ಸ್ಪರ್ಧೆ ನಡೆಸದೆ ವರ್ಕಾಡಿಯಲ್ಲಿ ಯುವಜನರಿಗೆ ವಂಚನೆ-ಯೂತ್‌ಲೀಗ್

ವರ್ಕಾಡಿ: ವರ್ಕಾಡಿ ಪಂ ಚಾಯತ್ ಕೇರಳೋತ್ಸವ ನಡೆಸದೆ ಪಂಚಾಯತ್‌ನ ಯುವಜನಾಂಗದ ಕಲಾ ಸಾಮರ್ಥ್ಯವನ್ನು ಪ್ರೋತ್ಸಾ ಹಿಸಲಿರುವ ಅವಕಾಶವನ್ನು ಇಲ್ಲದಂತೆ ಮಾಡಿದೆಯೆಂದು ಯೂತ್ ಲೀಗ್ ಪಂ. ಸಮಿತಿ ಆರೋಪಿಸಿದೆ. ಕೇರಳದ ಎಲ್ಲಾ ಪಂಚಾಯತ್‌ಗಳಲ್ಲೂ ಕೇರಳೋತ್ಸವವನ್ನು ಪಂಚಾಯತ್ ಮಟ್ಟದಲ್ಲಿ ನಡೆಸಿ ಬ್ಲೋಕ್ ಪಂಚಾಯತ್‌ಮಟ್ಟದ ಸ್ಪರ್ಧೆಗೆ  ಆಯ್ಕೆ ಮಾಡುವಾಗ ವರ್ಕಾಡಿ ಪಂ.ನಲ್ಲಿ ಸ್ಪರ್ಧೆ ನಡೆಸದೆ ಕಳೆದ ವರ್ಷದ ಸ್ಪರ್ಧಾ ವಿಜೇತರನ್ನು ಬ್ಲೋಕ್ ಸ್ಪರ್ಧೆಗೆ ಕಳುಹಿಸಲು ತೀರ್ಮಾನಿಸಿರುವುದಾಗಿ  ಯೂತ್ ಲೀಗ್ ಆರೋಪಿಸಿದೆ. ಪಂಚಾಯತ್‌ನ ಈ ಯುವಜನ ವಂಚನೆ ವಿರುದ್ಧ ಪ್ರತಿಭಟಿಸಲು ಯೂತ್ ಲೀಗ್ …

ಉಪ್ಲೇರಿ: ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ: ಉಪ್ಲೇರಿ ವಾಂತಿ ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಕೋಲೋತ್ಸವ 2024 ಜನವರಿ 21ರಂದು ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಸನ್ನಿಧಿಯಲ್ಲಿ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ದೀಪ ಪ್ರಜ್ವಲನೆಗೆÀÆಳಿಸಿ ಬಿಡುಗಡೆ ಮಾಡಿದರು. ಪಂಚಾಯತ್ ಸದಸ್ಯ ಈಶ್ವರ ಮಾಸ್ತರ್ ಪೆರಡಾಲ ಅಧ್ಯಕ್ಷತೆ ವಹಿಸಿದರು. ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಉದಯಕೇಶವ ಭಟ್ ಅತಿಥಿಯÁಗಿ ಭಾಗವಹಿಸಿದರು. ಜಿಶನ್ ವಾಂತಿ ಚಾಲು ಪ್ರಾರ್ಥನೆ ಮಾಡಿದರು. ಗೋಪಾಲಕೃಷ್ಣ ಕುಲಾಲ್ …

ಸುಕುಮಾರ ಆಲಂಪಾಡಿಯವರ ಜ್ಯೋತಿಷ ಸಾರಕೋಶ ಕೃತಿ ಬಿಡುಗಡೆ 

ಮಂಗಳೂರು: ಜ್ಯೋತಿಷ ಶಾಸ್ತ್ರ ಸನಾತನ ಋಷಿ ಪರಂಪರೆಯಲ್ಲಿ ಬೆಳಗಿದ ಶಾಸ್ತ್ರ. ವೇದಗಳ ಕಾಲದಲ್ಲಿ  ಕಾಲಗಣನೆಯನ್ನು ತಿಳಿಸುವ ವೇದಾಂಗ ಜ್ಯೋತಿಷ ಮುಂದೆ ಹಲವಾರು ಚಿಂತನೆಗಳನ್ನು ಒಳಗೊಂಡು ಆಧುನಿಕ ಸ್ವರೂಪವನ್ನು ಪಡೆಯಿತು.  ಜ್ಯೋತಿಷವನ್ನು ಕುರಿತು ಸಮಗ್ರ ದೃಷ್ಟಿಕೋನದಿಂದ ಕೂಡಿದ  ‘ಜ್ಯೋತಿಷ ಸಾರಕೋಶ’ ಒಂದು ಮಾದರಿ ಪಠ್ಯವಾಗಿದೆ. ಜ್ಯೋತಿಷ ಶಾಸ್ತ್ರವನ್ನು ಕುರಿತು ಸುಕುಮಾರ ಆಲಂಪಾಡಿಯವರು ಕಳೆದ ಅನೇಕ ವರ್ಷಗಳಿಂದ  ಮಾಡಿದ ಅಧ್ಯಯನ, ಅಲೋಚನೆ ಗಳು  ಈ ಕೃತಿಯಲ್ಲಿ ಸಾಕಾರಗೊಂ ಡಿದೆ ಎಂದು ಪ್ರಸಿದ್ಧ ವೈದಿಕ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ| ಸತ್ಯಕೃಷ್ಣ …

ಕಾರ್ಮಾರು ಮಹಾವಿಷ್ಣು ಕ್ಷೇತ್ರದ ದಾರಂದ ಮುಹೂರ್ತ ೨೨ರಂದು

ಮÁನ್ಯ: ಜೀರ್ಣೋದ್ಧಾರ ಗೊಳ್ಳುತ್ತಿರುವ ಕಾರ್ಮಾರು ಮಹಾವಿಷ್ಣು ಕ್ಷೇತ್ರದ ಗರ್ಭಗುಡಿಯ ದಾರಂದ ಮಹೂರ್ತ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಅಕ್ಟೋಬರ್ ೨೨ರಂದು ಜರಗಲಿದೆ. ಅಂದು ಬೆಳಗ್ಗೆ ೯ರಿಂದ ವಿವಿಧ ಭಜನಾ ತಂಡಗಳಿAದ ಭಜನೆ ನಂತರ ೧೧.೦೮ರಿಂದ ಮಹಾವಿಷ್ಣು ದೇವರ ಗರ್ಭಗುಡಿಗೆ ದಾರಂದ ಇಡುವುದು ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳ ವರು ಆಶೀರ್ವಚನ ನೀಡಲಿರುವರು. ಮಂಗಳೂರಿನ ಉದ್ಯಮಿ ಮಧು ಸೂದನ ಆಯರ್, ನಾರಾಯಣ ಮಾಸ್ಟರ್ …

ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ: ೫೦೦ ಮಂದಿ ಬಲಿ

ಗಾಜಾಪಟ್ಟಿ: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಇಂದಿಗೆ ೧೨ನೇ ದಿನಕ್ಕೆ ಕಾಲಿರಿಸಿದೆ. ಈಮಧ್ಯೆ ಇಸ್ರೇಲ್ ಸೇನೆ ಪ್ಯಾಲೆಸ್ತಿನ್ ಆಸ್ಪತ್ರೆ ಮೇಲೆ ವಾಯು ದಾಳಿ ನಡೆಸಿದ ಪರಿಣಾಮ ೫೦೦ ಮಂದಿ ಸಾವನ್ನಪ್ಪಿ ದ್ದಾರೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಅದನ್ನು ಇಸ್ರೇಲ್ ಸೇನೆ ಬಲವಾಗಿ ನಿರಾಕರಿಸಿದೆ. ಕ್ಷಿಪಣಿ ದಾಳಿಗೊಳಗಾದ ಆಸ್ಪತ್ರೆಯಲ್ಲಿ  ರೋಗಿಗಳು ಮತ್ತು ನಿರಾಶ್ರಿತರೂ ಒಳಗೊಂಡಂತೆ ಸುಮಾರು ೪೫೦೦ ಮಂದಿ  ಇದ್ದರು. ಆಸ್ಪತ್ರೆಯ ಒಂದು ಭಾಗ ಕ್ಷಿಪಣಿ ದಾಳಿಯಿಂದ ಪೂರ್ಣವಾಗಿ ನಾಶಗೊಂಡಿದೆ. ಆದರೆ, ನಾವು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ. …

ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗ ಧರಣಿ

ಮಂಗಲ್ಪಾಡಿ: ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿ ಯನ್ನು ಬುಡಮೇಲುಗೊಳಿಸಲು ಕೆಲವು ಕೇಂದ್ರಗಳಿಂದ ಯತ್ನ ನಡೆಯು ತ್ತಿದೆಯೆಂದು ಆರೋಪಿಸಿ ಮಂಗಲ್ಪಾಡಿ ಜನಪರ ವೇದಿಕೆ ಇಂದು ಬೆಳಿಗ್ಗೆ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದೆ. ಧರಣಿಯನ್ನು ಏಮ್ಸ್ ಜನಪರ ಒಕ್ಕೂಟ ಅಧ್ಯಕ್ಷ  ಗಣೇಶ ಅರಮಂಗಾನಂ ಉದ್ಘಾಟಿಸಿದರು. ಜನಪರ ವೇದಿಕೆ ಮಂಗಲ್ಪಾಡಿ ಇದರ ಅಧ್ಯಕ್ಷ ಕರೀಂ ಪೂನ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಸತ್ಯನ್ ಸಿ. ಉಪ್ಪಳ, ಸಲೀಂ ಚೌಕಿ, ಮೊಹಮ್ಮದ್ ಕೈಕಂಬ, ಸಿದ್ದಿಖ್ ಕೈಕಂಬ, ಮೊಹಮ್ಮದ್ ಸೀಗಂದಡಿ, ಅಶಾಖ್ ಮೂಸಾಕುಂಞಿ, …

ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ:  ತಂಙಳ್, ಖಮರುದ್ದೀನ್‌ರ ಸೊತ್ತುಗಳ ಮುಟ್ಟುಗೋಲು ಕ್ರಮ ಅಂತಿಮ ಹಂತದಲ್ಲಿ

ಕಾಸರಗೋಡು: ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದಲ್ಲಿ ಕಂಪೆನಿಯ ಹಾಗೂ ಆರೋಪಿಗಳ ಸೊತ್ತುಗಳನ್ನು  ಮುಟ್ಟುಗೋಲು ಹಾಕಿ ಕೊಳ್ಳಲಿರುವ ಸರಕಾರದ ಆದೇಶವನ್ನು ಜ್ಯಾರಿಗೊಳಿ ಸುವ ಕ್ರಮ ಅಂತಿಮ ಹಂತದಲ್ಲಿದೆ. ಕಣ್ಣೂರು ಜಿಲ್ಲಾಧಿಕಾರಿ ಯವರ ನೇತೃತ್ವದಲ್ಲಿ  ಇದಕ್ಕೆ ಬೇಕಾದ ಕ್ರಮ ಮುಂದುವರಿಯುತ್ತಿದೆ. ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ   ರಾಜ್ಯ ಮಟ್ಟದ ಕಾಂಪಿಟೆಂಟ್ ಅಧಿಕಾರಿಯಾದ ಫಿನಾನ್ಸ್ ಸೆಕ್ರೆಟರಿ  ಸಂಜಯ್ ಎಂ. ಕೌಲ್ ತಿಂಗಳುಗಳ ಹಿಂದೆ ಆದೇಶ ಹೊರಡಿಸಿದ್ದರು. ಕಂಪೆನಿಯ ಮೆನೇಜಿಂಗ್ ಡೈರೆಕ್ಟರ್ ಹಾಗೂ  ಮುಸ್ಲಿಂ ಲೀಗ್ ನೇತಾರನಾಗಿದ್ದ ಚಂದೇರದ ಟಿ.ಕೆ. ಪೂಕೋಯ …

ಒಂದು ವಾರ ಹಿಂದೆ ಮಗುವಿಗೆ ಜನ್ಮ ನೀಡಿದ ತಾಯಿ ನಿಧನ

ಮಂಜೇಶ್ವರ: ಒಂದು ವಾರದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಕೀರ್ತೇಶ್ವರ ನಿವಾಸಿ ಅಜೇಯ್ ಎಂಬವರ ಪತ್ನಿ ನವ್ಯಶ್ರೀ (೨೭) ನಿನ್ನೆ ಮಧ್ಯಾಹ್ನ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ತಿಂಗಳ ೧೧ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಮೊದಲ ಹೆರಿಗೆ ನಡೆದಿತ್ತು. ೧೫ರಂದು ರಕ್ತದೊತ್ತಡ ಕಡಿಮೆಯಾಗಿ  ಗಂಭೀರಾವಸ್ಥೆಗೆ ತಲುಪಿದುದರಿಂದ ಅಲ್ಲ್ಲಿಂದ ವೆನ್ಲಾಕ್ ಆಸ್ಪತ್ರೆಯ ಐಸಿ ವಿಭಾಗಕ್ಕೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಮೃತಪಟ್ಟಿದ್ದಾರೆ. ಇವರ ವಿವಾಹ ಕಳೆದ …

ಕುಂಕುಮ ಕೇಸರಿ ವಶ: ಪರವನಡ್ಕ ನಿವಾಸಿ ಸೆರೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಅಲ್ಲಿನ ಏರ್‌ಪೋರ್ಟ್ ಪೊಲೀಸರು ನಡೆಸಿದ ಕಾರ್ಯಾಚ gಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೨ ಕಿಲೋ ಕುಂಕುಮ ಕೇಸರಿಯನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಕಳನಾಡು ಪರವನಡ್ಕ ನಿವಾಸಿ ಅಹಮ್ಮದ್ ಸಾಬೀರ್ (೩೭) ಎಂಬಾತನನ್ನು ಸೆರೆಹಿಡಿದು ಬಳಿಕ ಮಾಲು ಸಹಿತ ಆತನನ್ನು ಕಸ್ಟಮ್ಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಅಹಮ್ಮದ್ ಸಾಬೀರ್ ದುಬಾಯಿಯಿಂದ ವಿಮಾನದಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅಲ್ಲಿ ಕಸ್ಟಮ್ಸ್  ತಪಾಸಣೆಗೊಳಗಾಗಿ  ವಿಮಾನ ನಿಲ್ದಾಣದಿಂದ ಹೊರಗೆ ಬಂದಿದ್ದನು. …