ಶಬರಿಮಲೆ ಕ್ಷೇತ್ರ ಮುಖ್ಯ ಅರ್ಚಕರಾಗಿ ಪಿ.ಎನ್. ಮಹೇಶ್ ಆಯ್ಕೆ

ಶಬರಿಮಲೆ: ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಮುಖ್ಯ ಅರ್ಚಕರಾಗಿ ಮುವಾಟುಪುಳ ಪುತ್ತಿಲ್ಲತ್ತ್ ಮನದ ಪಿ.ಎನ್. ಮಹೇಶ್, ಮಾಳಿಗಪುರಂ ಮುಖ್ಯ ಅರ್ಚಕನಾಗಿ ತೃಶೂರು ವಡಕ್ಕೇಕಾಡ್‌ನ ನಿವಾಸಿ ಪಿ.ಜಿ. ಮುರಳಿ ಆಯ್ಕೆಗೊಂಡಿದ್ದಾರೆ. ಪಿ.ಎನ್. ಮಹೇಶ್ ಪ್ರಸ್ತುತ ತೃಶೂರು ಪಾರಮೇಕಾವ್ ಕ್ಷೇತ್ರದ ಮುಖ್ಯ ಅರ್ಚಕರಾಗಿದ್ದಾರೆ. ಮುಂದಿನ ಮಂಡಲ ಮಕರಜ್ಯೋತಿ ತೀರ್ಥಾಟನೆ ಕಾಲದಲ್ಲಿ ನೂತನ ಮುಖ್ಯ ಅರ್ಚಕರು ಪೂಜೆ ನಡೆಸಲಿದ್ದಾರೆ. ಪಂದಳ ಅರಮನೆಯ ವೈದೇಹ್ ವರ್ಮ ಹಾಗೂ ನಿರುಪಮ ಜಿ. ವರ್ಮ ಎಂಬೀ ಮಕ್ಕಳು ಚೀಟಿ ಎತ್ತುವ ಮೂಲಕ ಶಬರಿಮಲೆ ಹಾಗೂ ಮಾಳಿಗಪುರಂ …

ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ದಿನಾಂಕ ಅ. ೨೭ರಂದು

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಭೀತಿ ಸೃಷ್ಟಿಸಿದ್ದ ಕಾಸರ ಗೋಡು ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ, ಮೂಲತಃ ಕರ್ನಾಟಕದ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೮)ಯ ವರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು  ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ತೀರ್ಪಿನ ದಿನಾಂಕವನ್ನು ಈತಿಂಗಳ ೨೭ರಂದು ನ್ಯಾಯಾಲಯ ಪ್ರಕಟಿಸಲಿದೆ. ೨೦೧೭ ಮಾರ್ಚ್ ೨೧ರಂದು ಮುಂಜಾನೆ ಮೊಹಮ್ಮದ್ ರಿಯಾಸ್ ಮೌಲವಿಯವರನ್ನು ಹಲೆ ಸೂರ್ಲಿನ ಅವರ ವಾಸಕೇಂದ್ರದೊಳಗೆ ಇರಿದು ಬರ್ಭರವಾಗಿ ಕೊಲೆಗೈಯ್ಯಲಾಗಿತ್ತು.  ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರ ಬಳಿಯ ಅಜೀಶ್, …

ಅನಧಿಕೃತ ಮರಳು ಸಾಗಾಟ ಕೇಂದ್ರಗಳಿಗೆ ಪೊಲೀಸ್ ದಾಳಿ: ದೋಣಿಗಳ ನಾಶ

ಕಾಸರಗೋಡು: ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿರುವ ಕೇಂದ್ರಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರಗಿಸತೊಡಗಿದ್ದಾರೆ. ಇದರಂತೆ ಮೊಗ್ರಾಲ್ ಪುತ್ತೂರು ಪಂಚಾಯತ್‌ಗೊಳಪಟ್ಟ ಪ್ರದೇಶಗಳಲ್ಲಿ ಅಕ್ರಮವಾಗಿ ಕಾರ್ಯವೆಸಗುತ್ತಿರುವ ಮರಳು ಸಾಗಾಟ ಕೇಂದ್ರಗಳಿಗೆ ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದ ಪೊಲೀಸರು ಕ್ಷಿಪ್ರ ದಾಳಿ ನಡೆಸಿದ್ದಾರೆ. ಮಾತ್ರವಲ್ಲ ಅಕ್ರಮವಾಗಿ ಮರಳು ಸಾಗಿಸಲು ಬಳಸಲಾಗುತ್ತಿದ್ದ ೧೨ ದೋಣಿಗಳನ್ನು ಜೆಸಿಬಿ ಬಳಸಿ ಅಲ್ಲೇ ನಾಶಗೊಳಿಸಿದ್ದಾರೆ. ರಾತ್ರಿ ವೇಳೆ ಹೊಳೆಗಳಿಂದ ಅಕ್ರಮವಾಗಿ ಹೊಗೆ ಸಾಗಿಸಲಾಗು ತ್ತಿದೆ ಎಂಬ ಹಲವು ಗುಪ್ತ ದೂರುಗಳು ಲಭಿಸತೊಡಗಿವೆ. …

ಬೆಳ್ಳೂರಿನ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ: ೬ ಮಂದಿ ಸೆರೆ; ೨೭೪೬೦ ರೂ. ವಶ

ಮುಳ್ಳೇರಿಯ: ಬೆಳ್ಳೂರು ಜಿಎಚ್‌ಎಸ್‌ಎನ್ ಶಾಲಾ ಮೈದಾನದ ಬಳಿ ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ ಆದೂರು ಪೊಲೀಸ್ ಠಾಣೆಯ ಎಸ್‌ಐ ಕೆ. ಅನೂಪ್‌ರ ನೇತೃತ್ವದ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ೨೭೪೬೦ ರೂ. ವಶಪಡಿಸಲಾಗಿದೆ. ನಾಟೆಕಲ್ಲು ಹೌಸಿನ ರವಿ (೪೦), ರವಿ (೩೮), ನಾಟೆಕಲ್ಲು ಚಾಲ ಮೂಲೆ ಹೌಸಿನ ವಿಜಯ್ ಕುಮಾರ್ (೩೪), ಎನ್. ರೂಪೇಶ್ (೨೭)ಕುಂಬ್ಡಾಜೆಯ ನವೀನ್ ಕುಮಾರ್ (೨೭) ಮತ್ತು ಬೆಳ್ಳೂರು ಪಳ್ಳಪ್ಪಾಡಿಯ ಸುರೇಶ್ (೪೦) ಎಂಬವರನ್ನು ಈ ಸಂಬಂಧ …

ಜೊತೆಗೆ ವಾಸಿಸುತ್ತಿದ್ದ ಮಹಿಳೆಗೆ ಹಲ್ಲೆ: ಪೊಲೀಸ್ ವಿರುದ್ಧ ಕೇಸು

ಬದಿಯಡ್ಕ: ಜತೆಗೆ ವಾಸಿಸುತ್ತಿದ್ದ ವಿವಾಹಿತ ಮಹಿಳೆಗೆ ಹಲ್ಲೆಗೈದ ಆರೋಪದಂತೆ ಪೊಲೀಸ್ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆಯ ಸಿಪಿಒ, ತಿರುವನಂತಪುರ ನಿವಾಸಿಯಾದ ಬೈಜು (೩೮) ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಸ್ತುತ ನೀರ್ಚಾಲು ಬಳಿ ವಾಸಿಸುತ್ತಿರುವ ಬೈಜುವಿನ ಜೊತೆಗೆ ಎರಡು ಮಕ್ಕಳ ತಾಯಿಯಾದ ಮಹಿಳೆ ಕಳೆದೆರಡು ವರ್ಷಗಳಿಂದ ವಾಸಿಸುತ್ತಿದ್ದಾಳೆನ್ನಲಾಗಿದೆ. ಇದೇ ವೇಳೆ ಬೈಜು ತನಗೆ ಹಲ್ಲೆಗೈದಿರುವುದಾಗಿ ಆರೋಪಿಸಿ ಮಹಿಳೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಳು. ಈ  ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮಲಯಾಳಂ ಸಿನೆಮಾ ನಟ ಜೋನಿ ನಿಧನ

ಕೊಲ್ಲಂ: ಮಲಯಾಳಂ ಸಿನೆಮಾರಂಗದ ಖ್ಯಾತ ನಟ ಜೋನಿ (೭೧) ನಿಧನ ಹೊಂದಿದರು. ಖಳನಾಯಕ ಹಾಗೂ ಉತ್ತಮ ನಡತೆಯ ಪಾತ್ರ ಸೇರಿದಂತೆ ೧೫೦ರಷ್ಟು ಸಿನೆಮಾದಲ್ಲಿ ಜೋನಿ ಅಭಿನಯಿಸಿದ್ದಾರೆ. ಕಿರೀಟಂ, ಚೆಂಗೋಲ್, ಒರು ವಡಕನ್ ವೀರಗಾಥ, ಗಾಡ್ ಫಾದರ್, ನಾಡೋಡಿಕಾಟ್, ಇನ್ಸ್‌ಪೆಕ್ಟರ್ ಬಲರಾಮ್ ಇತ್ಯಾದಿ ಸಿನೆಮಾಗಳಲ್ಲಿ ಇವರ ಅಭಿನಯ ಪ್ರೇಕ್ಷಕರ ಭಾರೀ ಗಮನ ಸೆಳೆದಿತ್ತು. ೧೯೭೯ರಲ್ಲಿ ಬಿಡುಗಡೆಗೊಂಡ ‘ನಿತ್ಯವಸಂತಂ’ ಇವರು ಅಭಿನಯಿ ಸಿದ ಮೊದಲ ಚಿತ್ರವಾಗಿತ್ತು. ಕಳೆದ  ವರ್ಷ ಬಿಡುಗಡೆಗೊಂಡ ‘ಮೇ ಪಡಿಯೆನ್’ ಸಿನೆಮಾದಲ್ಲಿ ಇವರ ಜೇಕಬ್‌ರ ಪಾತ್ರ ಭಾರೀ …

ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆಗೈದ ಪ್ರಕರಣ: ತೀರ್ಪು ಇಂದು

ಕಾಸರಗೋಡು: ಪತ್ನಿಯನ್ನು ಕಟ್ಟಿಗೆ ತುಂಡಿನಿಂದ ತಲೆಗೆ ಹೊಡೆದು ಕೊಲೆಗೈದ ಪ್ರಕರಣದ ತೀರ್ಪನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಇಂದು ನೀಡಲಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಾಂಞಿರಡ್ಕ ಆಂಞಾಲಿಮೂಡು ನಿವಾಸಿ ಗೋಪಾಲಕೃಷ್ಣನ್ (೫೫)ಈ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ೨೦೧೯ ಡಿಸೆಂಬರ್ ೨ರಂದು ಕಾಞಿ ರಡ್ಕದಲ್ಲಿ ಪತ್ನಿ ಕಲ್ಯಾಣಿಯಮ್ಮ (೫೦)ರನ್ನು ಕೊಲೆಗೈದ ಆರೋ ಪದಂತೆ ಅಂಬಲತರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂ ಡಿದ್ದರು. ಮಾತ್ರವಲ್ಲ ತಾಯಿಯನ್ನು ಹೊಡೆಯುವುದನ್ನು ಕಂಡು ಅದನ್ನು ತಡೆಯಲು ಹೋದ ಪುತ್ರಿಗೂ ಹೊಡೆದು …

ಸಾಲ ಪಡೆದ ಐದು ಲಕ್ಷ ರೂಪಾಯಿ ಮರಳಿ ನೀಡಿದ ಡಿಸಿಸಿ ಅಧ್ಯಕ್ಷ

ಕೊಚ್ಚಿ: ಕೇರಳ ಕಾಂಗ್ರೆಸ್ ನೇತಾರ ಕಾನೂನಿನ ಮೊರೆ ಹೋಗುವುದರೊಂದಿಗೆ ಕಾಸರಗೋಡು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಸಾಲವಾಗಿ ಪಡೆದ ಐದು ಲಕ್ಷ ರೂಪಾಯಿಗಳನ್ನು ಮರಳಿ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಕ್ಕರಿಪುರ ಮಂಡಲದಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೇರಳ ಕಾಂಗ್ರೆಸ್ ನೇತಾರ ಎಂ.ಪಿ. ಜೋಸೆಫ್ ಅವರು ಫೈಸಲ್ ವಿರುದ್ಧ ನ್ಯಾಯಾಲಯವನ್ನು ಸಮೀಪಿಸಿದ್ದರು. ಕಳೆದ ನವೆಂಬರ್‌ನಲ್ಲಿ ಒಂದು ತಿಂಗಳ ಕಾಲಾವಧಿಗೆ ೧೦ ಲಕ್ಷ ರೂಪಾಯಿ  ಸಾಲವಾಗಿ ನೀಡಿರುವುದಾಗಿಯೂ, ಅದರಲ್ಲಿ ಐದು ಲಕ್ಷ ರೂಪಾಯಿ ಮರಳಿ ನೀಡದೆ ವಂಚಿಸಿರುವುದಾಗಿ ಆರೋಪಿಸಿ …

ಹೊಸಂಗಡಿ ರೈಲ್ವೇ ಗೇಟ್ ಪರಿಸರದ ಹಳಿ ಮಧ್ಯೆ ಪೊದೆ ಬೆಳೆದು ಸಂಚಾರ ಸಮಸ್ಯೆ: ರೈಲು ಹಳಿಯಲ್ಲಿ  ಅಪಾಯ ಸಂಚಾರ

ಮಂಜೇಶ್ವರ: ವಿವಿಧ ಕಡೆ ರೈಲ್ವೇ ಹಳಿಯ ಮದs್ಯ ಭಾಗದಲ್ಲಿ ಕಾಡು ಪೊದೆಗಳು ಬೆಳೆದು ಜನರ ಸಂಚಾರಕ್ಕೆ ಸ್ಥಳವಕಾಶ ಇಲ್ಲದಿರುವುದರಿಂದ ಹಳಿ ಮಧ್ಯೆಯಿಂದಲೇ ನಡೆದು ಹೋಗು ತ್ತಿರು ವುದು ಅಪಾಯಕ್ಕೆ ಕಾರಣವಾಗು ತ್ತಿದೆ. ಹೊಸಂಗಡಿ ರೈಲ್ವೇ ಗೇಟ್ ಸಮೀಪದ ರೈಲು ಹಳಿ ಮಧ್ಯ ಭಾಗ ಹಾಗೂ ಇಕ್ಕೆಡೆಗಳಲ್ಲಿ ಪೊದೆಗಳು ಬೆಳೆದು ಕೊಂಡು ಸ್ಥಳೀಯರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿ ರುವುದಾಗಿ ದೂರಲಾಗಿದೆ. ಈ ಪರಿಸರದ ರೈಲೇ ಹಳಿ ಇಕ್ಕೆಡೆಗಳಲ್ಲಿ ಹಲವಾರು ಮನೆಗಳು, ಬಾಡಿಗೆ ಮನೆಗಳು ಇದ್ದು, ದಿನನಿತ್ಯ ಕಾಲೇಜು ಹಾಗೂ …

ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ ೧೧೧ನೇ ಸ್ಥಾಪಕ ದಿನಾಚರಣೆ

ಕಾಸರಗೋಡು: ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ೧೧೧ನೇ ಸ್ಥಾಪಕ ದಿನಾಚರಣೆಯನ್ನು ಆರ್‌ಎಸ್‌ಎಸ್ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಕಾರ್ಯನಿರತ ಸಮಿತಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಬ್ಯಾಂಕ್ ಚಯರ್ ಮ್ಯಾನ್ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಯಾಂಕ್ ಸ್ಟಾಫ್ ಯೂನಿಯನ್ ಅಧ್ಯಕ್ಷ ನ್ಯಾಯವಾದಿ ಪಿ. ಮುರಳೀ ಧರನ್, ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮಾತನಾಡಿದರು. ಬ್ಯಾಂಕ್ ಸ್ಟಾಫ್ ಸದಸ್ಯರು, ಅಪ್ರೈಸರ್‌ಗಳು ದೈನಂದಿನ ಠೇವಣಿ ಸಂಗ್ರಹಗಾರರು ಭಾಗವಹಿಸಿದರು. ಉಪಾಧ್ಯಕ್ಷ ಮಾಧವ ಹೇರಳ ಸ್ವಾಗತಿಸಿ, ಬ್ಯಾಂಕ್ ಎಜಿಎಂಸಿ …