ನೆರೆಮನೆಯ ಛಾವಡಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಅಡೂರು: ಕೂಲಿ ಕಾರ್ಮಿಕನಾದ ಯುವಕ ನೆರೆಮನೆಯ ಛಾವಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಬಳಿಯ ಉರುಡೂರು ಚಂದನಕ್ಕಾಡ್ ಹೌಸ್‌ನ ದಿ| ಕುಂಞಿಕಣ್ಣನ್- ದಿ| ಮಾಧವಿ ದಂಪತಿಯ ಪುತ್ರ ಸತೀಶ್ ಟಿ. ಯಾನೆ ಬಿಜು (46) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಇವರು ಹಾಗೂ ಸಹೋದರಿ ಸೌಮಿನಿ ಮಾತ್ರವೇ ವಾಸಿಸುತ್ತಿದ್ದರು. ಸೌಮಿನಿ ನಿನ್ನೆ ಕೆಲಸಕ್ಕೆ ತೆರಳಿದ್ದು, ಸಂಜೆ ೫ ಗಂಟೆಗೆ ಮನೆಗೆ ಬಂದಾಗ ಸತೀಶ್ ಮನೆಯಲ್ಲಿರಲಿಲ್ಲ. ಇದರಿಂದ ನೆರೆಮನೆಗೆ ತೆರಳಿ ನೋಡಿದಾಗ ಅಲ್ಲಿ ಛಾವಡಿಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ …

ಸಹೋದರಿ ಮನೆಗೆಂದು ತಿಳಿಸಿ ಹೋದ ಯುವಕ ನಾಪತ್ತೆ

ಪೆರ್ಲ: ಸಹೋದರಿಯ ಮನೆಗೆಂದು ತಿಳಿಸಿ ಹೋದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೆರ್ಲ ಕಾಟುಕುಕ್ಕೆ ಅರೆಕ್ಕಡಿ ಎಂಬಲ್ಲಿನ ಜಯೇಶ್ (35) ನಾಪತ್ತೆಯಾದ ಬಗ್ಗೆ ದೂರಲಾಗಿದ್ದು, ಇದರಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ತಿಂಗಳ 9ರಂದು ಬೆಳಿಗ್ಗೆ 11 ಗಂಟೆಗೆ ಸಹೋದರಿಯ ಮನೆಗೆಂದು ತಿಳಿಸಿ ಜಯೇಶ್ ತೆರಳಿದ್ದರೆನ್ನ ಲಾಗಿದೆ. ಆದರೆ ಸಹೋದರಿಯ ಮನೆಗೆ ಅವರು ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆ ಎನ್ನಲಾಗಿದೆ. …

ಪೈವಳಿಕೆ: ಕಳವಿಗೀಡಾದ ಮನೆಯಲ್ಲಿ ಬೆರಳಚ್ಚು ತಜ್ಞರಿಂದ ತನಿಖೆ

ಪೈವಳಿಕೆ: ಪೈವಳಿಕೆ ಕಳಾಯಿ ಯಲ್ಲಿ 50,000 ರೂ. ಹಾಗೂ 25,000 ರೂ. ಮೌಲ್ಯದ ಸಿಸಿ ಟಿವಿ ಉಪಕರಣಗಳು ಕಳವಿಗೀಡಾದ ಮನೆ ಯಲ್ಲಿ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ನಿನ್ನೆ ತಪಾಸಣೆ ನಡೆಸಿದೆ. ಪೈವಳಿಕೆ ಕಳಾಯಿ ರಸ್ತೆಯ ಅಜೆಕ್ಕಳ ಎಂಬಲ್ಲಿನ ಅಶೋಕ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಆರೋ ಪಿಗಾಗಿ ಶೋಧ ನಡೆಸಲಾಗುತ್ತಿದೆ.ಈ ತಿಂಗಳ 7ರಂದು ರಾತ್ರಿ ಮನೆ ಯಿಂದ ಕಳವು ನಡೆದಿತ್ತು. ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿಅವರ ತಂದೆ ಮಾತ್ರವೇ …

ಮಂಜೇಶ್ವರ ಠಾಣೆಯ ಲಾಕಪ್‌ನಿಂದ ಪರಾರಿಯಾದ ವಾರಂಟ್ ಆರೋಪಿ ಸೆರೆ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಲಾಕಪ್‌ನಿಂದ ಪರಾರಿಯಾದ ವಾರಂಟ್ ಆರೋಪಿಯನ್ನು ಬಂಧಿಸಲಾಗಿದೆ. ಹೊಸಬೆಟ್ಟು ಸಲ್ಮಾ ಮಂಜಿಲ್‌ನ  ಸಿದ್ದಿಕ್ ಸಾರಿಕ್ ಪರ್ಹಾನ್ (29) ಎಂಬಾತನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.  ಸೋಮವಾರ ಮುಂಜಾನೆ ಈತ ಲಾಕಪ್‌ನಿಂದ ಪರಾರಿಯಾಗಿದ್ದನು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಆರೋಪಿ ಮುಂಬೈಗೆ ಪರಾರಿಯಾಗಿ ದ್ದಾನೆಂಬ ಬಗ್ಗೆ ಪ್ರಚಾರವುಂ ಟಾಗಿತ್ತು. ಆದರೆ ಅದನ್ನು ನಂಬದ ಪೊಲೀಸರು ಆರೋಪಿ ಮಂಜೇಶ್ವರ ಭಾಗದಲ್ಲೇ ಇದ್ದಾನೆಂದು ಖಚಿತಪಡಿಸಿ ಶೋಧ ಮುಂದುವರಿಸಿದ್ದರು. ಈ ವೇಳೆ ಆರೋಪಿಯನ್ನು ಮಂಜೇಶ್ವರ ದಿಂದಲೇ …

ನೀರ್ಚಾಲು: ಬೈಕ್ ಢಿಕ್ಕಿ ಹೊಡೆದು ಲಾಟರಿ ಏಜೆಂಟ್ ಮೃತ್ಯು

ನೀರ್ಚಾಲು: ನೀರ್ಚಾಲಿನಲ್ಲಿ ಬೈಕ್ ಢಿಕ್ಕಿ  ಹೊಡೆದು ಗಂಭೀರ ಗಾಯಗೊಂ ಡಿದ್ದ ಲಾಟರಿ ಏಜೆಂಟ್ ಮೃತಪಟ್ಟರು. ಕಣ್ಣೂರು ಆಲಕ್ಕೋಡ್  ಕಾಪಿಮಲೆ ಹೌಸ್‌ನ ಸಾಜು ಜೋರ್ಜ್ (61) ಮೃತಪಟ್ಟ ವ್ಯಕ್ತಿ. ಸೋಮವಾರ ರಾತ್ರಿ 8 ಗಂಟೆ ವೇಳೆ ನೀರ್ಚಾಲು ವಿ.ಎಂ.ನಗರದಲ್ಲಿ ಅಪಘಾತ ಸಂಭವಿಸಿತ್ತು. ಸಾಜು ಜೋರ್ಜ್ ರಸ್ತೆ ದಾಟುತ್ತಿದ್ದ ವೇಳೆ ತಲುಪಿದ ಬೈಕ್ ಅವರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ …

ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣಗೊಂಡು ತಿಂಗಳುಗಳು ಕಳೆದರೂ ತೆರೆಯಲು ಕ್ರಮವಿಲ್ಲ: ಕುಂಬಳೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ

ಕುಂಬಳೆ: ಸಾರ್ವಜನಿಕರ ಸೌಕರ್ಯ ಕ್ಕಾಗಿ ಕುಂಬಳೆ ಪೇಟೆಯಲ್ಲಿ ಸ್ಥಾಪಿಸಿದ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಉದ್ಘಾಟನೆಗೊ ಳ್ಳದೆ ಉಳಿದುಕೊಂಡಿದೆ. ಕುಂಬಳೆ ಪೇಟೆಯ ಅನಿಲ್ ಕುಂಬ್ಳೆ ರಸ್ತೆಯಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳು ಕಳೆಯಿತು. ಆದರೆ ಅದನ್ನು ಉದ್ಘಾಟಿಸಿ ಸಾರ್ವಜನಿಕರ ಅಗತ್ಯಕ್ಕೆ ತೆರೆದುಕೊಡಲು ಕ್ರಮ ಉಂಟಾಗಿಲ್ಲ. ಕುಂಬಳೆ ಪಂಚಾಯತ್ ಫಂಡ್‌ನಿಂದ 40 ಲಕ್ಷ ರೂಪಾಯಿ ವ್ಯಯಿಸಿ ಈ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಪೇಟೆಗೆ ತಲುಪುವ ಸಾರ್ವಜನಿಕರಿಗೆ ಶೌಚಾಲಯ ಸೌಕರ್ಯವಿಲ್ಲವೆಂಬ ಆರೋಪ ತೀವ್ರಗೊಂಡ ಹಿನ್ನೆಲೆಯಲ್ಲಿ …

ಸಾರಿಗೆ ಕಾನೂನು ಉಲ್ಲಂಘನೆ: ಕುಂಬಳೆಯಲ್ಲಿ 15ರಷ್ಟು ದ್ವಿಚಕ್ರ ವಾಹನಗಳ ವಶ

ಕುಂಬಳೆ: ವಾಹನ ಅಪ ಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಕಾನೂ ನು ಉಲ್ಲಂಘಿ ಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳತೊಡಗಿದ್ದಾರೆ. ಇದರಂತೆ ಬಂದ್ಯೋಡು ಪೇಟೆಯಲ್ಲಿ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  15ರಷ್ಟು ದ್ವಿಚಕ್ರ ವಾಹನಗಳನ್ನು ವಶಪಡಿಸಲಾಗಿದೆ. ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದವರನ್ನು ಸೆರೆಹಿಡಿಯಲಾಗಿದೆ.  ವಾಹನಗಳನ್ನು ಕಸ್ಟಡಿಗೆ ತೆಗೆದು ಠಾಣೆಗೆ ತಲುಪಿಸಲಾಗಿದೆ. ಡ್ರೈವಿಂಗ್ ಲೈಸನ್ಸ್ ಇಲ್ಲದವರು, ಪ್ರಾಯಪೂರ್ತಿ ಯಾಗದವರು ವಾಹನ ಚಲಾಯಿಸು ವುದರಿಂದ ಅಪಘಾತಗಳು ಹೆಚ್ಚುತ್ತಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ  ಪೊಲೀಸರು ಕಾರ್ಯಾ ಚರಣೆಯನ್ನು …

ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ

ಮಂಜೇಶ್ವರ: ವರ್ಕಾಡಿ ಅಗ್ರಿಕಲ್ಚರಿಸ್ಟ್  ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ಮಜೀರ್‌ಪಳ್ಳದಲ್ಲಿನ ನೂತನ ಕಟ್ಟಡದ ಉದ್ಘಾಟನೆಯನ್ನು ನಿನ್ನೆ ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿ ಕೌಂಟರ್ ಉದ್ಘಾಟನೆ ಮಾಡಿದರು. ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಕುದುರು ಧ್ವಜಾರೋಹಣ ನೆರವೇರಿಸಿ ಸ್ವಾಗತಿಸಿದರು. ಠೇವಣಿ ಸ್ವೀಕಾರವನ್ನು ಕೋ ಓಪರೇಟಿವ್ ಸೊಸೈಟಿ ಡೆಪ್ಯುಟಿ ರಿಜಿಸ್ಟ್ರಾರ್ ಚಂದ್ರನ್ ವಿ. ನಿರ್ವಹಿಸಿದರು. ಕೆ.ಆರ್ ಜಯಾನಂದ ಸಾಲ ವಿತರಣೆ ಮಾಡಿದರು.ಕೋ ಆಪರೇಟಿವ್ ಸೊಸೈಟಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಜನರಲ್ ರವೀಂದ್ರ ಎ. …

ಕೇರಳ ಆಶಾವರ್ಕರ್ಸ್ ಸಂಘ್ ಜಿಲ್ಲಾ ಸಮ್ಮೇಳನ ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕು- ಬಿಎಂಎಸ್

ಕಾಸರಗೋಡು: ಆಶಾ ಕಾರ್ಯ ಕರ್ತೆಯರನ್ನು ಸರಕಾರಿ  ನೌಕರರಾಗಿ ಅಂಗೀಕರಿಸಿ ಅರ್ಹವಾದ ಸೌಲಭ್ಯಗಳನ್ನು ನೀಡಬೇಕು ಎಂದು ಬಿಎಂಎಸ್ ಕೇರಳ ಆಶಾವರ್ಕರ್ಸ್ ಸಂಘ್ ಆಗ್ರಹಿಸಿದೆ. ಆಶಾ ಕಾರ್ಯಕರ್ತೆಯರಿಗೆ ಲಭಿಸಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡಬೇಕೆಂದು ಒತ್ತಾಯಿಸಲಾಯಿತು. ಜಿಲ್ಲಾ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಕೇರಳ ಆಶಾ ವರ್ಕರ್ಸ್ ಸಂಘ್  ಜಿಲ್ಲಾಧ್ಯಕ್ಷೆ ಜಯಲಕ್ಷ್ಮಿ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಶುಭ ಕೋರಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಿತಿಯ ನೂತನ ಪದಾಧಿಕಾರಿಗಳನ್ನು …

ಪಾಸ್ಟರ್‌ಗಳ ಪ್ರಾರ್ಥನೆಯಲ್ಲಿ ಪಾಕಿಸ್ತಾನ ಪತಾಕೆ ಉಪಯೋಗ ವಿರುದ್ಧ ಕೇಸು

ಕೊಚ್ಚಿ: ಉದಯಂಪೇರೂರುನಲ್ಲಿ ಪಾಸ್ಟರ್‌ಗಳು ಆಯೋಜಿಸಿದ ಪ್ರಾರ್ಥ ನಾ ಕಾರ್ಯಕ್ರದಲ್ಲಿ ಪಾಕಿಸ್ತಾನದ ಪತಾಕೆ ಉಪಯೋಗಿಸಿರುವುದರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಶಗಳ ಕ್ಷೇಮಕ್ಕಾಗಿ ನಡೆಸಿದ ಪ್ರಾರ್ಥನೆಗಳ ಮಧ್ಯೆ ಪಾಕಿಸ್ತಾನದ ಪತಾಕೆ ಉಪಯೋಗಿಸಿರುವುದರ ವಿರುದ್ಧ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕುಟ್ಟನ್ ನೀಡಿದ ದೂರಿನಲ್ಲಿ ಕೇಸು ದಾಖಲಿಸ ಲಾಗಿದೆ. ಕಾರ್ಯಕ್ರಮ ಆಯೋಜಿಸಿದ ಪಾಸ್ಟರ್ ಹಾಗೂ ಸಭಾಂಗಣದ ಮಾಲಕನಾದ ದೀಪು ಜೇಕಬ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪಾಕಿಸ್ತಾನ್ ಧ್ವಜವನ್ನು ವಶಪಡಿಸಲಾಗಿದೆ. ಆದರೆ ದುರುದ್ದೇಶ ಪೂರಿತವಾದ ಕ್ರಮ ಇದಲ್ಲವೆಂದು, ಕಳೆದ ಒಂದೂವರೆ ವರ್ಷದಿಂದ …