ಡಿಸಿಸಿ ಅಧ್ಯಕ್ಷರ ವಿರುದ್ಧ ಕೇರಳ ಕಾಂಗ್ರೆಸ್ ನೇತಾರ ನ್ಯಾಯಾಲಯಕ್ಕೆ

ಹೊಸದುರ್ಗ: ಸಾಲ ನೀಡಿದ ಹತ್ತು ಲಕ್ಷ ರೂಪಾಯಿ ಮರಳಿ ನೀಡದೆ ಅಮಾನ್ಯ ಚೆಕ್ ನೀಡಿ ವಂಚಿಸಲಾಯಿ ತೆಂಬ ದೂರಿನಂತೆ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಮಾಜಿ ಸಚಿವ ಕೆ.ಎಂ. ಮಾಣಿಯವರ ಮಗಳ ಪತಿಯೂ ಕೇರಳ ಕಾಂಗ್ರೆಸ್ ನೇತಾರನೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಕ್ಕರಿಪುರ ಮಂಡಲದ ಯುಡಿಎಫ್  ಅಭ್ಯರ್ಥಿಯಾಗಿದ್ದ ಎಂ.ಪಿ. ಜೋಸೆಫ್ ಕಾಕನಾಡ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ನ್ಯಾಯಾಲಯ ಡಿಸೆಂಬರ್ ೧೯ರಂದು ಹಾಜರಾಗಬೇ ಕೆಂದು ತಿಳಿಸಿ ಸಮನ್ಸ್ …

ನಿತ್ಯಾನಂದ ಪಾಲಿಟೆಕ್ನಿಕ್ ಪ್ರಾಂಶುಪಾಲ, ಉಪನ್ಯಾಸಕ ನೇಮಕಾತಿ ರದ್ದು

ಹೊಸದುರ್ಗ: ಕಾಞಂಗಾಡ್‌ನ ಸ್ವಾಮಿ ನಿತ್ಯಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ, ಉಪನ್ಯಾಸಕರ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ಪ್ರಾಂಶುಪಾಲ ಸೆಬಾಸ್ಟಿಯನ್ ಥೋಮಸ್, ಇಲೆಕ್ಟ್ರಿಕಲ್ ಲೆಕ್ಚರರ್ ಶೈಜಿ ಜೋಸ್, ಟ್ರೇಡ್ಸ್ ಮೆನ್ ರಾಹುಲ್, ವಾಚ್‌ಮೆನ್ ಜಿತೇಶ್ ಎಂಬಿವರ ನೇಮಕಾತಿಯನ್ನು ಎಐಸಿಟಿಇ ರದ್ದುಗೊಳಿಸಿದೆ.  ಶ್ರೀ ನಿತ್ಯಾನಂದ ವಿದ್ಯಾಕೇಂದ್ರದ ಅಧೀನದಲ್ಲಿ  ನಿತ್ಯಾನಂದ ಪಾಲಿಟೆಕ್ನಿಕ್ ಕಾಲೇಜು ಕಾರ್ಯಾಚರಿಸುತ್ತಿದೆ. ೨೦೨೧ರಲ್ಲಿ ಮೆನೇಜ್‌ಮೆಂಟ್‌ನಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೆಕ್ರೆಟರಿ ಟಿ. ಪ್ರೇಮಾನಂದನ್ ಹಾಗೂ ಇತರ ಪದಾಧಿಕಾರಿಗಳನ್ನು ಅವಗಣಿಸಿ ಪಾಲಿಟೆಕ್ನಿಕ್ ಕಾಲೇಜಿನ ಅಂದಿನ ಗವರ್ನಿಂಗ್ ಬೋರ್ಡ್ ಚೆಯರ್ ಮೆನ್ ಕೆ.ಎಲ್. ನಿತ್ಯಾನಂದ  ಹೋಡೆ …

ಸರ್ವೀಸ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಅಪರಿಮಿತ ವೇಗ ಆರೋಪ

ಕುಂಬಳೆ:  ಅಗಲ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸ್ಪರ್ಧಾ ಸಂಚಾರ ಹಾಗೂ ಅಪರಿಮಿತ ವೇಗ ದ್ವಿಚಕ್ರ ವಾಹನ ಸೇರಿದಂತೆ ಇತರ ಸಣ್ಣ ವಾಹನ ಪ್ರಯಾಣಿಕರಿಗೆ, ಕಾಲ್ನಡೆ ಸಂಚಾರಿಗಳಿಗೆ ಬೆದರಿಕೆ ಸೃಷ್ಟಿಸುತ್ತಿದೆಯೆಂದು ದೂರಲಾಗಿದೆ. ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊಸ  ಬಸ್ ನಿಲ್ದಾಣಕ್ಕೆ ತೆರಳದೆ ಸರದಿ ಸಾಲಿನಂತೆ ಮಂಗಳೂರಿಗೆ ಸಮಯಕ್ರಮವನ್ನು ತಪ್ಪಿಸಿ ಬರುವ ಸಾರಿಗೆ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ಸಂಚರಿಸುತ್ತಿವೆ. ಇದೇ ವೇಳೆ ಇತರ ಬಸ್‌ಗಳನ್ನು  ಹಿಂದಿಕ್ಕಲು ಚರಂಡಿಯ ಸ್ಲ್ಯಾಬ್‌ನ ಮೇಲೂ ಹತ್ತಿ ಸಾಗುತ್ತಿದ್ದು, ಇದು …

ಯುವಕನಿಗೆ ಆಕ್ರಮಿಸಿ ಬೈಕ್ ಅಪಹರಣ

ಹೊಸದುರ್ಗ: ಯುವಕನಿಗೆ ಆಕ್ರಮಿಸಿ ಬೈಕ್ ಅಪಹರಿಸಿರುವುದಾಗಿ ದೂರ ಲಾಗಿದೆ. ಪಡನ್ನಕ್ಕಾಡ್ ಅಂದವಪ್ಪಣ ಕರುವಳದ ಬಿ.ಎಸ್. ಹನೀಫ (೫೨)ರ ದೂರಿನಂತೆ  ಕರುವಳ ನಿವಾಸಿಗಳಾದ ಶ್ರೀಹರಿ, ನಾಸರ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ೧೦.೪೫ರ ವೇಳೆ  ಹನೀಫ್‌ರಿಗೆ ಹಲ್ಲೆಗೈದು ತಂಡ ಅವರ ಬೈಕ್‌ನ್ನು ಅಪಹರಿಸಿಕೊಂಡೊಯ್ದಿರುವುದಾಗಿ ದೂರಲಾಗಿದೆ.

ಎರಡು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಗೆ ಚಾಲನೆ

ಪುತ್ತಿಗೆ: ಪಂಚಾಯತ್‌ನ ಬಾಡೂರು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಜ್ಯಾರಿಗೊಳಿಸುವ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯ ನಿರ್ಮಾಣ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಮೂಲಕ ವಿವಿಧ ವಿಧಾನಸಭಾ ಮಂಡಲಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಹಿಂದುಳಿದಿರುವ, ೩೦ ಅಥವಾ ಅದಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುವ ಕಾಲನಿಗಳ ಸಮಗ್ರ ಅಭಿವೃದ್ಧಿ ಉದ್ದೇಶಿಸಿ ಜ್ಯಾರಿಗೊಳಿಸುವ ಯೋಜನೆ ಯಾಗಿದೆ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆ. ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಜಿ.ಪಂ. …

ಕೆ.ಕೆ. ಸ್ವಾಮಿಕೃಪಾರಿಗೆ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ ಪ್ರದಾನ

ಬದಿಯಡ್ಕ: ಮೊಗೇರ ಸರ್ವೀಸ್ ಸೊಸೈಟಿಯ ಕೃಷ್ಣನ್ ಕೆ.ಕೆ. ಸ್ವಾಮಿಕೃಪಾ ಅವರಿಗೆ ನವದೆಹಲಿ ಆಂಧ್ರ ಭವನ ಸಭಾಂಗಣದಲ್ಲಿ ರಾಷ್ಟಿçÃಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾನುವಾರದಂದು ಜರಗಿದ ಸಮಾರಂಭದಲ್ಲಿ ಬಿಎಸ್‌ಎ ರಾಷ್ಟ್ರೀಯ ಅಧ್ಯಕ್ಷ ನಲ್ಲ ರಾಧಾಕೃಷ್ಣನ್ ಪ್ರಶಸ್ತಿ ವಿತರಿಸಿದರು.ಸಮಾಜ ಕಲ್ಯಾಣ ಇಲಾಖೆ ಹಾಗೂ ಉದ್ಯೋಗ ಮತ್ತು ಎಸ್.ಸಿ. ಎಸ್.ಟಿ. ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವ ರಾಜ್ ಕುಮಾರ್ ಆನಂದ್‌ಜಿ, ಕರೋಲ್‌ಬಾಗ್ ಶಾಸಕ ವೆಂಕಟೇಶ ರವಿಜಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಮೊಗೇರ್ ಸರ್ವೀಸ್ ಸೊಸೈಟಿ ಕಾಸರಗೋಡು …

ಮಕ್ಕಳಿಗೆ ಸನಾತನ ಸಂಸ್ಕೃತಿ ಅರಿವು ಮೂಡಿಸಬೇಕು-ಡಾ| ಸುಮತಿ ನಾಯಕ್

ಕಾಸರಗೋಡು: ಹಬ್ಬಗಳ ಆಚರಣೆ ಮೂಲಕ ಸನಾತನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸುವುದು ಹಿಂದೆAದಿಗಿAತ ಇಂದು ಹೆಚ್ಚು ಅಗತ್ಯ ವಾಗಿದೆ. ಒಗ್ಗೂಡಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಬಲಿಷ್ಠವಾದ ಭಾರತ ನಿರ್ಮಾಣ ಸಾಧ್ಯ ಎಂದು ಖ್ಯಾತ ನೇತ್ರ ತಜ್ಞೆ ಡಾ|ಸುಮತಿ ನಾಯಕ್ ಹೇಳಿದರು.ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಆಯೋಜಿಸಿದ ಕಾಸರಗೋಡು ದಸರಾ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಹಿರಿಯ …

ನಯಬಜಾರ್ ಲಯನ್ಸ್ ಕ್ಲಬ್‌ನಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ

ಉಪ್ಪಳ: ಶ್ರೀ ಕ್ಷೇತ್ರç ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಮಂಜೇಶ್ವರ, ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣ ಸಮಿತಿ ಇವರ ಆಶ್ರಯದಲ್ಲಿ ತಲಪಾಡಿ ವಲಯದ ದುರ್ಗಾ ಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರ ಮತ್ತು ಪ್ರಗತಿಬಂಧು ಪೈ-ಸಹಾಯ ಸಂಘಗಳ ಒಕ್ಕೂಟ ಇದರ ಸಹಯೋಗದೊಂದಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ನಯಾಬಜಾರ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆ ಯಿತು. ಲಯನ್ಸ್ ಕ್ಲಬ್ …

ಬದಿಯಡ್ಕದಲ್ಲಿ ಕೇರಳ ಮರಾಟಿ ಯುವಜನ ವೇದಿಕೆ ಉದ್ಘಾಟನೆ

ಬದಿಯಡ್ಕ: ಕೇರಳ ಮರಾಟಿ ಯುವಜನವೇದಿಕೆ ಬದಿಯಡ್ಕ ಕಾಸರಗೋಡು ಇದರ ಉದ್ಘಾಟನೆ ಭಾನುವಾರ ಬದಿಯಡ್ಕದಲ್ಲಿ ಜರಗಿತು. ಪ್ರೊಫೆಸರ್ ರಾಮ ನಾಯ್ಕ್ ಪುತ್ತೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತ ನಾಡಿದರು. ಯುವಜನತೆ ಸಂಘಟಿತ ರಾದರೆ ಮಾತ್ರ ಸಮಾಜ ಬಲಿಷ್ಠವಾ ಗಲು ಸಾಧ್ಯವಿದೆ. ಊರಿನ ಯುವಕ ರೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕು ಎಂದು ಕರೆಯಿತ್ತರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ್, ಕೇರಳ ಮರಾಟಿ ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ …

ಹಂದಿಗಳ ಕಾಟದಿಂದ ತೊಳಲಾಡುತ್ತಿರುವ ಬಂಬ್ರಾಣದ ರೈತರು: ಕೃಷಿ ಜಮೀನುಗಳಿಗೆ ರಕ್ಷಣೆ ನೀಡಲು ಒತ್ತಾಯ

ಕುಂಬಳೆ: ಹಂದಿಗಳ ಹಿಂಡು ಗದ್ದೆಗೆ ನುಗ್ಗಿ ಹಾನಿ ಮಾಡುವುದರಿಂದ ಬಂಬ್ರಾಣ ಗದ್ದೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿಯ ಸುಮಾರು ೫೦೦ ಎಕರೆ ಭತ್ತದ ಕೃಷಿ ಬಿಕ್ಕಟ್ಟಿನಲ್ಲಿದೆ. ಸಮಸ್ಯೆ ಬಗೆಹರಿಸಲು ತಂತಿ ಬೇಲಿ ಅಳವಡಿಸಿ ರೈತರರಕ್ಷಣೆ ಮಾಡಬೇಕು ಎಂದು ಬಂಬ್ರಾಣ ಭತ್ತ ಉತ್ಪಾದಕ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಈ ಪ್ರದೇಶದಲ್ಲಿ ಸಮುದಾಯ ಅರಣ್ಯ ಇಲಾಖೆ ಅಧೀನದಲ್ಲಿರುವ ವಿಂಡ್ ಫಾರಂನಲ್ಲಿ ಬೀಡು ಬಿಟ್ಟಿರುವ ಹಂದಿಗಳ ಹಿಂಡು ಬೆಳೆಗಳನ್ನು ನಾಶಪಡಿಸುತ್ತಿವೆ. ಗದ್ದೆಗಳಲ್ಲಿ ಎಡೆ ಬೆಳೆಗಳಾಗಿ ವರ್ಷಗಳ ಹಿಂದೆ ಮೆಣಸು, ವಿವಿಧ ರೀತಿಯ …