ಕೇರಳೀಯಂ: ಅಡುಗೆ ಸ್ಪರ್ಧೆಯಲ್ಲಿ ಎಸ್‌ಟಿಎಸ್ ಪ್ರಥಮ

ಕಾಸರಗೋಡು: ನ. ೧ರಿಂದ ೭ರ ವರೆಗೆ ತಿರುವನಂತಪುರದಲ್ಲಿ ನಡೆಯುವ ಕೇರಳೀಯ ಕಾರ್ಯ ಕ್ರಮದ ಪ್ರಚಾರಾರ್ಥ ಜಿಲ್ಲಾ ಕುಟುಂಬಶ್ರೀ ಮಿಶನ್ ನೇತೃತ್ವದಲ್ಲಿ ವಿಶ್ವ ಆಹಾರ ದಿನದಂದು ಆಯೋ ಜಿಸಿದ ಅಡುಗೆ ಸ್ಪರ್ಧೆಯಲ್ಲಿ ಎಸ್‌ಟಿಎಸ್ ಕಾಸರಗೋಡು ಜಯಗಳಿಸಿದೆ. ಸತ್ಕಾರ ಮಡಿಕೈ ದ್ವಿತೀಯ ಸ್ಥಾನ ಹಾಗೂ ಇರಲ್ ಕಾಸರಗೋಡು ತೃತೀಯ ಸ್ಥಾನ ಪಡೆದಿದೆ. ಕಲೆಕ್ಟರೇಟ್‌ನ ಆವರಣದಲ್ಲಿ ನಡೆದ ಕಾರ್ಯಕ್ರಮ ವನ್ನು ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲೆಯ ೧೦ ಕುಟುಂಬಶ್ರೀ ಘಟಕಗಳ ಮಧ್ಯೆ …

ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾ ಸಹಿತ ಓರ್ವ ಸೆರೆ: ಇನ್ನೋರ್ವ ಪರಾರಿ

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾ ಸಹಿತ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇನ್ನೋರ್ವ ಓಡಿ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ೧೦.೩೦ರ ವೇಳೆ ಬಾಯಿಕಟ್ಟೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಣ್ಣೂರು ಕೂತುಪರಂಬ ಕಣ್ಣವಂ ನಿವಾಸಿಯೂ ಈಗ ತೃಕ್ಕರಿಪುರದಲ್ಲಿ ವಾಸಿಸುವ ರೈಫ್ ಬಶೀರ್ (೩೧) ಎಂಬಾತ ಸೆರೆಗೀಡಾಗಿದ್ದಾನೆ. ಓಡಿ ಪರಾರಿಯಾದ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ. ಕಾಞಂಗಾಡ್ ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್‌ಗೆ ಲಭಿಸಿದ ಗುಪ್ತ ಮಾಹಿತಿ ಆಧಾರದಲ್ಲಿ ಗಾಂಜಾ ಬೇಟೆ ನಡೆಸಲಾಗಿದೆ. …

ಬಸ್‌ನಲ್ಲಿ ಮಗುವನ್ನು ಮರೆತು ಮನೆಗೆ ಮರಳಿದ ದಂಪತಿ: ಪ್ರಯಾಣಿಕನ ಸಮಯಪ್ರಜ್ಞೆಯಿಂದ ಹೆತ್ತವರ ಮಡಿಲು ಸೇರಿದ ಮಗು

ಕುಂಬಳೆ: ರಾತ್ರಿ ಹೊತ್ತಿನಲ್ಲಿ ಮೂವರು ಮಕ್ಕಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ ದಂಪತಿ ಒಂದು ಮಗುವನ್ನು ಮರೆತು ಬಸ್‌ನಲ್ಲಿ  ಬಿಟ್ಟು ಇಳಿದು ಮನೆಗೆ ತೆರಳಿದ್ದು, ಕೊನೆಗೆ ಪ್ರಯಾಣಿಕನ ಸಮಯಪ್ರಜ್ಞೆಯಿಂದ ಮಗು ಹೆತ್ತವರ ಕೈ ಸೇರಿದ ಘಟನೆ ನಡೆದಿದೆ.ನಿನ್ನೆ ರಾತ್ರಿ ೭ ಗಂಟೆಗೆ ಉಪ್ಪಳದಿಂದ ದಂಪತಿ ಹಾಗೂ ಮೂವರು ಮಕ್ಕಳು ಬಸ್‌ಗೆ ಹತ್ತಿದ್ದಾರೆ. ಅವರು ಬಂದ್ಯೋಡು ಬಳಿಯ ಮುಟ್ಟಂಗೆ ಟಿಕೆಟ್ ಪಡೆದಿದ್ದರು. ಇದೇ ವೇಳೆ ಬಸ್‌ನಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಅವರಿಗೆ ಕುಳಿತುಕೊಳ್ಳಲು ಸೀಟು ಸಿಗಲಿಲ್ಲ. ಇದರಿಂದ ಒಂದು ಮಗುವನ್ನು ಸೀಟಿನಲ್ಲಿ …

ಬೈಕ್ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

ಮಂಜೇಶ್ವರ: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಹೊಡೆದು ಚಿಕಿತ್ಸೆಯಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಹೊಸಂಗಡಿ ಎ.ಕೆ.ಜಿ ಮಂದಿರ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿಗಾರ್ [67] ಮೃತಪಟ್ಟವರು. ಈ ತಿಂಗಳ 10 ರಂದು ಸಂಜೆ 7ಗಂಟೆಗೆ ಅಂಗಡಿಪದವುನಲ್ಲಿ ರಸ್ತೆ ದಾಟುತ್ತಿದ್ದಾಗ ಕಡಂಬಾರ್ ಭಾಗದಿಂದ ಹೊಸಂಗಡಿ ಭಾಗಕ್ಕೆ ತೆರಳುತ್ತಿದ್ದ ಬೈಕ್ ಡಿಕ್ಕಿಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ರಾತ್ರಿ ಮೃತಪಟ್ಟರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಹೊಸಂಗಡಿಯಲ್ಲಿ ಪತ್ರಿಕೆ ವಿತರಕರಾಗಿದ್ದರು. ಮಂಜೇಶ್ವರ …

ದೆಹಲಿ, ಉತ್ತರಾಖಂಡದಲ್ಲಿ ಮತ್ತೆ ಪ್ರಬಲ ಭೂಕಂಪ

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಉತ್ತರಾಖಂಡ್ ಎಂಬೆಡೆಗಳಲ್ಲ್ಲಿ ಇಂದು ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ್ದು ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಎನ್.ಸಿ. ಪ್ರದೇಶ್ ನೋಯ್ಡ, ಗುರುಗ್ರಾಮ, ಗಾಜಿಯಾ ಬಾದ್‌ನಲ್ಲಿಯೂ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ೪.೨ ತೀವ್ರತೆ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ದೆಹಲಿ ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಇದರ ಬೆನ್ನಲ್ಲೇ ಇಂದು ಮತ್ತೆ ಭೂಕಂಪ ಸಂಭವಿಸಿರುವುದು ಜನರನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ. …

ಸಿಡಿಲಿನ ಆಘಾತ : ಶ್ರೀ ಕೊರಗಜ್ಜ ದೈವದ ಗುಡಿ, ಮನೆಗೆ ಹಾನಿ

ಬದಿಯಡ್ಕ: ಇಂದು ಮುಂಜಾನೆ ಉಂಟಾದ ಸಿಡಿಲಿನ ಆಘಾತದಿಂದ ಮನೆ ಹಾಗೂ ಶ್ರೀ ಕೊರಗಜ್ಜ ದೈವದ ಗುಡಿಗೆ ಹಾನಿಯುಂಟಾಗಿದೆ. ಬದಿಯಡ್ಕ ಬಳಿಯ ಕಾಡಮನೆ ಮುಚ್ಚಿರ್ ಕವೆ ಎಂಬಲ್ಲಿ ಈ ಘಟನೆ ನಡೆದಿದೆ. ಮುಚ್ಚಿರ್ ಕವೆಯ ಲ್ಲಿರುವ ಶ್ರೀ ಕೊರಗಜ್ಜ ದೈವದ ಗುಡಿಗೆ ಉಂಟಾದ ಸಿಡಿಲಿನ ಆಘಾತದಿಂದ ಅಡಿಪಾಯಕ್ಕೆ ಹಾನಿಯುಂಟಾಗಿದೆ. ಅಪ ಘಾತದ ಕಲ್ಲುಗಳು ಪುಡಿಯಾಗಿ ಸಮೀಪದಲ್ಲಿ ಹೊಂಡ ಸೃಷ್ಟಿಯಾಗಿದೆ. ಗುಡಿಯ ಸಮೀಪದಲ್ಲಿರುವ ಬಾಬು ಎಂಬವರ ಮನೆಗೂ ಸಿಡಿಲಿನ ಆಘಾತದಿಂದ ಹಾನಿಯುಂ ಟಾಗಿದೆ. ಮನೆಯ ವಯರಿಂಗ್, ಇಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ …

ಗುಜರಿ ಸಾಮಗ್ರಿ ಖರೀದಿಗೆ ತಲುಪಿ ಡ್ರಿಲ್ಲಿಂಗ್ ಯಂತ್ರ ಕಳವು: ಇಬ್ಬರು ಕೈಯ್ಯಾರೆ ಸೆರೆ

ಕಾಸರಗೋಡು: ಗುಜರಿ ಸಾಮಗ್ರಿಗಳನ್ನು ಖರೀದಿಸಲು ತಲುಪಿದ ಇಬ್ಬರು ಮನೆಯ ಬಳಿ ಇರಿಸಿದ್ದ ಡ್ರಿಲ್ಲಿಂಗ್ ಯಂತ್ರವನ್ನು ಕಳವುಗೈದ ಘಟನೆ ನಡೆದಿದೆ.  ಈ ಬಗ್ಗೆ ಕೂಡಲೇ ಅರಿವಿಗೆ ಬಂದ ಮನೆಯವರು ಕಳ್ಳರನ್ನು ಕೈಯ್ಯಾರೆ ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಚಟ್ಟಂಚಾಲ್ ಬಳಿಯ ಬೆಂಡಿಚ್ಚಾಲ್  ಬಾಲನಡ್ಕ ನಿವಾಸಿಯೂ ಈಗ ಮಧೂರು ಬಳಿಯ ಪಟ್ಲ ಕುರುಪ್ಪನಡ್ಕದಲ್ಲಿ ವಾಸಿಸುವ ಮುಜೀಬ್ ರಹ್ಮಾನ್ (೨೬) ಹಾಗೂ  ಪ್ರಾಯ ಪೂರ್ತಿಯಾಗದ ಬಾಲಕನನ್ನು ಸೆರೆಹಿಡಿದು ಬೇಡಗಂ ಪೊಲೀ ಸರಿಗೆ ಹಸ್ತಾಂತರಿಸಲಾಗಿದೆ. ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಮುಜೀಬ್ ರಹ್ಮಾನ್‌ಗೆ …

ಚಿಕಿತ್ಸೆಯಲ್ಲಿದ್ದ ಪುತ್ರ ಸಾವಿನ ಆಘಾತದಿಂದ ತಾಯಿ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಅಸೌಖ್ಯ ದಿಂದ ಚಿಕಿತ್ಸೆಯಲ್ಲಿದ್ದ ಪುತ್ರನ ಸಾವಿನ ವಿಷಯ ತಿಳಿದ ತಾಯಿಯೂ ಆಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ನಗರದ ಕೊರಕ್ಕೋಡು ನಾಗರಕಟ್ಟೆ ನಿವಾಸಿ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಯ ಆಫೀಸ್ ಅಸಿಸ್ಟೆಂಟ್ ಸಿಬ್ಬಂದಿ ಮಂಜುನಾಥ (೩೬) ಎಂಬವರನ್ನು ಅಸೌಖ್ಯದ ನಿಮಿತ್ತ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಆ ವಿಷಯ ತಿಳಿದ ಅವರ ತಾಯಿ ಸುಂದರಿ (೫೬) ತೀವ್ರ ಮಾನಸಿಕ ಆಘಾತಕ್ಕೊಳಗಾಗಿ ಅಲ್ಲೇ ಕುಸಿದು …

ಮನೆಗೆ ಅಕ್ರಮವಾಗಿ ನುಗ್ಗಿ ಯುವಕನಿಗೆ ಇರಿತ : ಕಾಸರಗೋಡು ಚಿನ್ನ ಕಳ್ಳಸಾಗಾಟದಾರರ ಕೈವಾಡ ಶಂಕೆ

ಕಾಸರಗೋಡು: ವಯನಾಡು  ಜಿಲ್ಲೆಯ ಕಲ್ಪೆಟ್ಟ ಮೀನಂಗಾಡಿಗೆ ಸಮೀಪದ ಕರಣಿಯ ಮನೆಯೊಂದಕ್ಕೆ ಅಕ್ರಮಿಗಳ ತಂಡವೊಂದು ಮುಂಜಾನೆ ಅಕ್ರಮವಾಗಿ ನುಗ್ಗಿ ಯುವಕನನ್ನು ಇರಿದು ಗಂಭೀರ ಗಾಯಗೊಳಿಸಿದ್ದು, ಇದು ಕಾಸರಗೋಡಿನ ಚಿನ್ನ ಕಳ್ಳಸಾಗಾ ಟದಾರರ ಕೃತ್ಯವಾಗಿದೆಯೆಂಬ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕರಣಿ ನಿವಾಸಿ ಅಸ್ಕರ್ ಅಲಿ (೨೮) ಎಂಬಾತನ ಮೇಲೆ ಈತಿಂಗಳ ೧೨ರಂದು ಮುಂಜಾನೆ ಮುಖವಾಡ ಧರಿಸಿ ಬಂದ ಐವರು ಅಕ್ರಮಿಗಳ ತಂಡ ಮನೆ ಬಾಗಿಲು ಒಡೆದು ಒಳನುಗ್ಗಿ ಈ ದಾಳಿ ನಡೆಸಿದೆ. ಆ ವೇಳೆ ಅಸ್ಕರ್ ಅಲಿ ಮತ್ತು …

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್. ಗಿಲ್ ನಿಧನ

ನವದೆಹಲಿ:  ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಮನೋಹರ್ ಸಿಂಗ್ ಗಿಲ್ ಅವರು ಅನಾರೋಗ್ಯದಿಂದ ದಕ್ಷಿಣ ದೆಹಲಿ ಯ ಸಾಕೇತ್‌ನಲ್ಲಿರುವ ಡಿಮ್ಯಾಕ್ಸ್ ಆಸ್ಪತ್ರೆಯಲ್ಲಿ    ನಿಧನಹೊಂದಿ ದ್ದಾರೆ.  ನಾಳೆ ಅವರ ಅಂತ್ಯಕ್ರಿಯೆ ನಡೆಸಲಾಗುವುದೆಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ೧೯೨೬ ಡಿಸೆಂಬರ್‌ನಿಂದ ೨೦೦೧ ಜೂನ್ ತನಕ ಎಂ.ಎಸ್ ಗಿಲ್ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ  ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅವರು ಕಾಂಗ್ರೆಸ್ ಸರಕಾರದಲ್ಲಿ ಯುವ  ವ್ಯವಹಾರಗಳನ್ನು ಮತ್ತು ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. …