ತಾಲೂಕು ಆಸ್ಪತ್ರೆ ಅಭಿವೃದ್ಧಿ ಬುಡಮೇಲುಗೊಳಿಸಲು ಸಂಚು: ೧೮ರಂದು ಮಂಗಲ್ಪಾಡಿ ಜನಕೀಯ ವೇದಿಕೆಯಿಂದ ಸೂಚನಾ ಧರಣಿ

ಕುಂಬಳೆ: ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿಯನ್ನು ಬುಡಮೇ ಲುಗೊಳಿಸಲು ಕೆಲವು ಕೇಂದ್ರಗಳು ನಡೆಸುತ್ತಿರುವ ಯತ್ನವನ್ನು ವಿರೋಧಿಸಿ ಮಂಗಲ್ಪಾಡಿ ಜನಪರ ವೇದಿಕೆ ಪ್ರತಿಭ ಟನೆ ತೀವ್ರಗೊಳಿಸಲು ನಿರ್ಧರಿಸಿದೆ. ಇದರ ಅಂಗವಾಗಿ ಅಕ್ಟೋಬರ್ ೧೮ರಂದು ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಆಸ್ಪತ್ರೆ ಎದುರು ಧರಣಿ ನಡೆಸುವುದಾಗಿ ವೇದಿಕೆಯ ಪದಾಧಿ ಕಾರಿಗಳು ಕುಂಬಳೆ ಪ್ರೆಸ್ ಫಾರ್ಮ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ವೇದಿಕೆ ಕಳೆದ ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದೆ. ೨೦೨೦ …

ಅನಂತಪುರ ಉಳಿಸಿ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಕುಂಬಳೆ: ಅನಂತಪುರದಲ್ಲಿ ದುರ್ಗಂಧದಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿರುವುದನ್ನು ಪ್ರತಿಭಟಿಸಿ ಕೋಳಿ ತ್ಯಾಜ್ಯ ಸಂಸ್ಕರಣೆ ಘಟಕದ ವಿರುದ್ಧ ಕಳೆದ ಗಾಂಧಿ ಜಯಂತಿ ದಿನದಿಂದ ನಡೆಸುತ್ತಿರುವ ಅನಿರ್ದಿಷ್ಟ ಸತ್ಯಾಗ್ರಹ ಚಪ್ಪರಕ್ಕೆ ಎಂಡೋಸ ಲ್ಫಾನ್ ವಿರುದ್ಧ ಹೋರಾಟದ ಮುಂ ಚೂಣಿ ನಾಯಕ ಡಾ| ಮೋಹನ್ ಕುಮಾರ್ ಪಡ್ರೆ ಭೇಟಿ ನೀಡಿ ಸತ್ಯಾಗ್ರಹಿಗಳಿಗೆ ಬೆಂಬಲ ನೀಡಿದರು. ಸೇವ್ ಅನಂತಪುರ ವತಿಯಿಂದ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಹವ್ಯಕ ಪರಿಷತ್ ಕುಂಬಳೆ ವಲಯದ ಅಧ್ಯಕ್ಷರು, ಕಾರ್ಯದರ್ಶಿ  ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಬೆಂಬಲ ಸೂಚಿಸಿದರು.

ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಆರಂಭ

ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಹತ್ತು ದಿನಗಳ ತನಕ ನಡೆಯುವ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಆರಂಭಗೊAಡಿತು.ದೇವಸ್ಥಾನದ ಪಾತ್ರಿ ಪಾಂಗೋಡು ಪ್ರವೀಣ್ ನಾಯಕ್ ದೀಪ ಪ್ರಜ್ವಲನೆಗೈದು ದಸರಾ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ ನೀಡಿದರು. ಧಾರ್ಮಿಕ ಮುಖಂಡ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನರಗಸಭಾ ಸದಸ್ಯೆ ಸವಿತಾ ಟೀಚರ್, ಡಾ|ಮಂಜುಳಾ …

ದತ್ತೋಪಂಥ್ ಠೇಂಗಡಿ ಸ್ಮೃತಿ ದಿನಾಚರಣೆ

ಕಾಸರಗೋಡು: ಭಾರತದ ಪರಂಪರೆಗೆ ಅನುಸಾರವಾಗಿ ಕಾರ್ಮಿಕ ಸಂಘಟನೆಯನ್ನು ರೂಪಿಸಿದ ಭಗೀರಥನಾಗಿದ್ದಾರೆ ದಿ| ದತ್ತೋಪಂಥ್ ಠೇಂಗಡಿಯವರೆಂದು ನ್ಯಾಯವಾದಿ ಪಿ. ಮುರಳೀಧರನ್ ನುಡಿದರು. ಭಾರತೀಯ ಮಜ್ದೂರ್ ಸಂಘ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ ಠೇಂಗಡಿಯವರ ಸ್ಮೃತಿ ದಿನಾಚರಣೆ ಉದ್ಘಾಟಿಸಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಯಾಗಿರುವ ಮುರಳೀಧರನ್ ಪಿ. ನುಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ವಿ.ವಿ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪದಾಧಿಕಾರಿಗಳಾದ ಎಂ.ಕೆ. ರಾಘವನ್, ಟಿ. ಕೃಷ್ಣನ್, ಶ್ರೀನಿವಾಸನ್ ಕೆ.ಎ, ವಿಶ್ವನಾಥ ಶೆಟ್ಟಿ, ಗೀತಾ ಬಾಲಕೃಷ್ಣನ್ ವಿ.ಬಿ. ಸತ್ಯನಾಥ್, ಕೆ.ವಿ. …

ಮೀಂಜ ಪಂಚಾಯತ್ ಕೇರಳೋತ್ಸವ

ಮೀಂಜ: ಪಂಚಾಯತ್ ಮಟ್ಟದ ಕೇರಳೋತ್ಸವ ನಿನ್ನೆ ರಾತ್ರಿ ಕುಲೂರುನಲ್ಲಿ ಆರಂಭಗೊಂಡಿತು. ಹಗ್ಗಜಗ್ಗಾಟ ಪಂದ್ಯಾಟದೊಂದಿಗೆ ಸ್ಪರ್ಧೆ ಆರಂಭಗೊಂಡಿತು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರಸ್ವತಿ, ಬಾಬು ಕುಲೂರು, ಸದಸ್ಯ ಜನಾರ್ದನ ಪೂಜಾರಿ, ಬ್ಲೋಕ್ ಪಂಚಾಯತ್ ಸದಸ್ಯ ಕೆ.ವಿ. ಭಟ್, ಶಾಲಾ ಮೆನೇಜರ್ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪಂಚಾಯತ್ ಕಾರ್ಯದರ್ಶಿ ಸುರೇಶ ಎನ್.ಎ., ನಾರಾಯಣ ನಾಯ್ಕ ನಡುಹಿತ್ತಿಲು ವಿಶ್ವನಾಥ ಶೆಟ್ಟಿ ಉಮಿಕಳ, ಲೋಕೇಶ ಚಿನಾಲ, ಹರೀಶ ಶೆಟ್ಟಿ ಕಡಂಬಾರು ಭಾಗವಹಿಸಿದ್ದರು. …

ಸಚಿವೆ ವೀಣಾ ಜೋರ್ಜ್ ನಾಳೆ ಕಾಸರಗೋಡಿಗೆ

ಕಾಸರಗೋಡು: ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ಅವರು ನಾಳೆ ಕಾಸರಗೋಡಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಇದರಂತೆ ನಾಳೆ ಬೆಳಿಗ್ಗೆ ೮ ಗಂಟೆಗೆ ಸಚಿವೆ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ೯ಕ್ಕೆ ಕಾಸರಗೋಡು ಜನರಲ್ ಆಸ್ಪತ್ರೆ, ೯.೪೫ಕ್ಕೆ ಬೇಡಡ್ಕ ತಾಲೂಕು ಆಸ್ಪತ್ರೆ, ೧೧ಕ್ಕೆ ಕಳ್ಳಾರ್ ಪೂಡಂಕಲ್ಲಿನಲ್ಲಿರುವ ವೆಳ್ಳರಿಕುಂಡ್ ತಾಲೂಕು ಆಸ್ಪತ್ರೆ ಮತ್ತು ಮಧ್ಯಾಹ್ನ ೧೨.೧೫ಕ್ಕೆ ಹೊಸದುರ್ಗದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಂದರ್ಶಿಸುವರು. ಮಧ್ಯಾಹ್ನ ೧.೩೦ಕ್ಕೆ ಹೊಸದುರ್ಗ ಮಿನಿ ಸಿವಿಲ್ ಸ್ಪೇಷನ್‌ನಲ್ಲಿ ನಡೆಯುವ ಆರೋಗ್ಯ ಇಲಾಖೆಯ ಜಿಲ್ಲಾ …

ಸಮಾನಾಂತರ ಬಾರ್ ಬಗ್ಗೆ ದೂರು: ದಾಳಿ, ಮದ್ಯ ಸಹಿತ ಓರ್ವನ ಸೆರೆ

ಕಾಸರಗೋಡು: ನಗರದ ಬೀಚ್ ರಸ್ತೆಯಲ್ಲಿ ಸಮಾನಾಂತರ ಬಾರ್ ನಡೆಸುತ್ತಿರುವುದಾಗಿ ಲಭಿಸಿದ ದೂರಿನನ್ವಯ ಕಾಸರಗೋಡು ಅಬ ಕಾರಿ ರೇಂಜ್ ಕಚೇರಿಯ ಅಸಿ ಸ್ಟೆಂಟ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ನೇತೃತ್ವದ ಅಬಕಾರಿ ತಂಡ ಅಲ್ಲಿಗೆ ದಾಳಿ ನಡೆಸಿ ಭಾರತೀಯ ನಿರ್ಮಿತ ೫೪೦ ಮಿಲ್ಲಿ ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಈ ಸಂಬಂಧ ರಜನೀಶ್  (೩೬) ಎಂಬಾತನನ್ನು ಅಬಕಾರಿ ತಂಡ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ದಾಳಿ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ರಾಜೀ ವ್ ಎ.ವಿ, ಸಿಇಒಗಳಾದ ಮುರಳೀ …

ಪದವಿ ವಿದ್ಯಾರ್ಥಿನಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪದವಿ ವಿದ್ಯಾರ್ಥಿನಿ ನೇಣು ಬಿಗಿದು ಸಾವ ನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉದುಮ ಬಾರ ಎರೋಳ್ ಕುಂಡಿನ ಒಕ್ಕಲಿಗ ಕುಟುಂಬಕ್ಕೆ ಸೇರಿದ ಸಂಜೀವ ರಾಮಯ್ಯ ಶೆಟ್ಟಿ-ವಿಜಯಲತ ದಂಪತಿ ಪುತ್ರಿ ಚಟ್ಟಂಚಾಲ್ ಎಂಐಸಿ ಕಾಲೇಜಿನ ಬಿಎಸ್ಸಿ (ಮ್ಯಾತ್ಸ್) ತೃತೀಯ ವರ್ಷ ವಿದ್ಯಾರ್ಥಿನಿ ಮೇಘ (೨೦) ಸಾವನ್ನಪ್ಪಿದ ಯುವತಿ. ಈಕೆ ಮೊನ್ನೆ ಸಂಜೆ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪರೀಕ್ಷೆಯಲ್ಲಿ ಮೇಘಳಿಗೆ ನಿರೀಕ್ಷಿಸಿದಷ್ಟು ಅಂಕ ಲಭಿಸಿರಲಿಲ್ಲ. ಅದರಿಂದ ಆಕೆ ತೀವ್ರ ನೊಂದಿದ್ದಳೆಂದು   ಈ ಬಗ್ಗೆ ಮೇಲ್ಪರಂಬ ಪೊಲೀಸರಿಗೆ ನೀಡಿದ …

ಹೆತ್ತಬ್ಬೆಯನ್ನೇ ಹಲಗೆಯಿಂದ ಬಡಿದು ಕೊಂದ ಪುತ್ರ

ಕಾಸರಗೋಡು: ಮೊಬೈಲ್ ಫೋನ್ ಉಪಯೋಗದ ವಿಷಯದಲ್ಲಿ ಉಂಟಾದ ವಾಗ್ವಾದದಲ್ಲಿ ಪುತ್ರ ತನ್ನ ಹೆತ್ತಬ್ಬೆಗೆ ಹಲಗೆಯಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದು, ಬಳಿಕ ಚಿಕಿತ್ಸೆ ಮಧ್ಯೆ ಆಕೆ ಸಾವನ್ನಪ್ಪಿದ ಘಟನೆ ನಡೆದಿದೆ. ನೀಲೇಶ್ವರ ಕಣಿಚ್ಚಿರದ ದಿ| ರಾಜನ್‌ರ ಪತ್ನಿ ರುಕ್ಮಿಣಿ (೬೩) ಸಾವನ್ನಪ್ಪಿದ ಮಹಿಳೆ. ಇದಕ್ಕೆ ಸಂಬಂಧಿಸಿ  ಅವರ ಪುತ್ರ ಸುಜಿತ್ (೩೪)ನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮುಂಜಾನೆ  ಈ ಘಟನೆ ನಡೆದಿದೆ. ಮೊಬೈಲ್ ಫೋನ್ ಬಳಸುವುದಕ್ಕೆ ಸಂಬಂಧಿಸಿ ರುಕ್ಮಿಣಿ ಮತ್ತು ಪುತ್ರ ಸುಜಿತ್‌ನ ನಡುವೆ ಪರಸ್ಪರ …

ಬಸ್ ಢಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಆಟೋರಿಕ್ಷಾ

ಆಟೋರಿಕ್ಷಾ: ಇಬ್ಬರು ಮೃತ್ಯುಕಣ್ಣೂರು: ಬಸ್ ಢಿಕ್ಕಿ ಹೊಡೆದು ಮಗುಚಿ ಬಿದ್ದ ಆಟೋರಿಕ್ಷಾ ಬೆಂಕಿಗಾಹುತಿಯಾಗಿ ಇಬ್ಬರು ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಕೂತುಪರಂಬ ಬಳಿ ಸಂಭವಿಸಿದೆ. ಕೂತುಪರಂಬ ಪೂವಕುನ್ನುವಿನ ಅಭಿಲಾಶ್ (೩೬), ಸಜೀಶ್ (೩೦) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ತಲಶ್ಶೇರಿ ಭಾಗದಿಂದ ಬಂದ ಬಸ್ ಸಿ.ಎನ್.ಜಿ ಬಳಸಿ ಸಂಚರಿಸುವ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ  ಮಗುಚಿ ಬಿದ್ದು ಆಟೋರಿಕ್ಷಾಕ್ಕೆ ಬೆಂಕಿ ಹತ್ತಿಕೊಂಡಿದೆ. ತಲಶ್ಶೇರಿಯಿಂದ ಆಗಮಿಸಿದ ಅಗ್ನಿಶಾಮಕದಳ, ನಾಗರಿಕರು ಹಾಗೂ ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಆಟೋರಿಕ್ಷಾ ಅಭಿಲಾಶ್‌ರದ್ದಾಗಿದೆ. …