ವಾಲಿಕೊಂಡು ಅಪಾಯ ಭೀತಿಗೆ ಕಾರಣವಾದ ವಿದ್ಯುತ್ ಕಂಬಗಳು: ಬದಲಿಸಲು ಊರವರ ಒತ್ತಾಯ

ಉಪ್ಪಳ: ಹಲವು ವರ್ಷಗಳಿಂದ ವಾಲಿ ಕೊಂಡಿರುವ ವಿದ್ಯುತ್ ಕಂಬವೊAದು ಯಾವುದೇ ಕ್ಷಣದಲ್ಲಿ ಕುಸಿದು ಅನಾಹುತ ಸಂಭವಿಸಬಹು ದೆಂದು ಊರವರು ತಿಳಿಸಿದ್ದಾರೆ. ಈ ರೀತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ವಿದ್ಯುತ್ ಸೆಕ್ಷನ್ ವ್ಯಾಪ್ತಿಗೊಳಪಟ್ಟ ಪ್ರತಾಪನಗರದ ಒಳರಸ್ತೆಯಲ್ಲಿ ಆತಂಕ ಉಂಟು ಮಾಡುತ್ತಿರುವ ಎರಡು ವಿದ್ಯುತ್ ಕಂಬ ಇದೆ. ಈ ಹಿಂದೆ ನೀರು ಹರಿಯುವ ಚರಂಡಿಯಲ್ಲಿ ಕಂಬವನ್ನು ಸ್ಥಾಪಿಸಲಾಗಿದೆ. ಮಳೆ ನೀರು ಹರಿದು ಕಂಬ ಒಂದು ಭಾಗಕ್ಕೆವಾಲಿ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಮಳೆ, ಗಾಳಿಗೆ …

ಆಪರೇಷನ್ ಅಜಯ್ ಎರಡನೇ ಬ್ಯಾಚ್‌ನಲ್ಲಿ ೨೩೫ ಮಂದಿ ಭಾರತೀಯರು ತಾಯ್ನಾಡಿಗೆ

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧದಿಂದಾಗಿ ಇಸ್ರೇಲ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ಎgಡನೇ ಬ್ಯಾಚ್‌ನಲ್ಲೂ ೨೩೫ ಮಂದಿ  ಇಂದು ಬೆಳಿಗ್ಗೆ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಂತ ಸುರಕ್ಷಿತವಾಗಿ ಬಂದಿಳಿದಿದೆ. ಆಪರೇಶನ್ ಅಜಯ್ ಕಾರ್ಯಾ ಚರಣೆಯಂತೆ ಮೊದಲ ಬ್ಯಾಚ್‌ನಲ್ಲಿ ನಿನ್ನೆ ಒಟ್ಟು ೨೧೨ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿತ್ತು. ಎರಡನೇ ಬ್ಯಾಚ್‌ನಲ್ಲಿ ಇಂದು ಬೆಳಿಗ್ಗೆ ತಾಯ್ನಾಡಿಗೆ ಆಗಮಿಸಿದ ೨೩೫ ಮಂದಿ ಭಾರತೀ ಯರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವ ರಾಜ್‌ಕುಮಾರ್ …

ಕೊರಕೋಡು ಮಾರಿಗುಡಿಯಲ್ಲಿ ನವರಾತ್ರಿ ಉತ್ಸವ ನಾಳೆಯಿಂದ

ಕಾಸರಗೋಡು: ಕೊರಕೋಡು ಆರ್ಯ ಕಾತ್ಯಾಯಿನಿ ಶ್ರೀ ಮಹಾದೇವಿ ದೇವಸ್ಥಾನದಲ್ಲಿ  (ಮಾರಿಗುಡಿ) ನಾಳೆಯಿಂದ ೨೪ರವರೆಗೆ ನವರಾತ್ರಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನವರಾತ್ರಿ ದಿನಗಳಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ದರ್ಶನ, ರಾತ್ರಿ ಪೂಜೆ ನಡೆಯಲಿದೆ. ನಾಳೆ ಬೆಳಿಗ್ಗೆ ಭಂಡಾರ ಆಗಮನ, ಶುದ್ದಿಕಲಶ, ಚಂಡಿಕಾಹೋಮ ಪ್ರಾರಂಭ, ಪೂರ್ಣಾಹುತಿ, ೧೭ರಂದು ರಾತ್ರಿ ೯ಕ್ಕೆ ತುಪ್ಪಸೇವೆ, ೧೮ರಂದು ರಾತ್ರಿ ೮.೩೦ಕ್ಕೆ ಹೂವಿನ ಪೂಜೆ, ೧೯ರಂದು ರಾತ್ರಿ ೮.೩೦ರಿಂದ ದೊಂದಿಸೇವೆ, ೨೦ರಂದು ಸಂಜೆ ೬ರಿಂದ ದುರ್ಗಾನಮಸ್ಕಾರ ಪೂಜೆ, ೨೧ರಂದು ಸಂಜೆ ೬ಕ್ಕೆ …

ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬಹುಮಹಡಿ ಕಟ್ಟಡ ಉದ್ಘಾಟನೆ ೧೬ರಂದು

ಕುಂಬಳೆ: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿರ್ಮಾಣ ಪೂರ್ತಿಯಾದ ಬಹು ಮಹಡಿ ಕಟ್ಟಡವನ್ನು ಈ ತಿಂಗಳ ೧೬ರಂದು ಅಪರಾಹ್ನ ೨.೩೦ಕ್ಕೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಉದ್ಘಾಟಿಸು ವರು. ಈ ಬಗ್ಗೆ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪದಾಧಿ ಕಾರಿಗಳು ತಿಳಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿ ತ್ತಾನ್ ಮುಖ್ಯ ಅತಿಥಿಯಾಗಿರುವರು. ೫ ತರಗತಿ ಕೊಠಡಿಗಳಂತೆ ಮೂರು ಮಹಡಿಗಳಲ್ಲಾಗಿ ಕಟ್ಟಡ ನಿರ್ಮಿಸಲಾಗಿದೆ. …

ಕ್ಷೇತ್ರಗಳು ಭಕ್ತಜನ ಸೌಹಾರ್ದ ಕೇಂದ್ರಗಳಾಗಬೇಕು- ಎಂ.ಆರ್. ಮುರಳಿ

ಕುಂಬಳೆ: ಕ್ಷೇತ್ರಗಳು ಭಕ್ತಜನರ ಸೌಹಾರ್ದ ಸ್ಥಳಗಳಾಗಿ ಬದಲಾಗ ಬೇಕೆಂದು ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್. ಮುರಳಿ ನುಡಿದರು. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಹೊಸ ಸೇವಾ ಕೌಂಟರ್ ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು. ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸಿದರೆ ಕ್ಷೇತ್ರಗಳು ಪೂರ್ಣತೆಗೆ ತಲಪುವುದಾಗಿ ಅವರು ನುಡಿದರು. ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿ ರುವ ಕಣಿಪುರ ಕ್ಷೇತ್ರದಲ್ಲಿ ನಡೆದಿರುವುದು ಮಾದರಿಯಾಗಿಸಬಹುದಾದ ನವೀಕರಣೆ ಚಟುವಟಿಕೆಗಳಾಗಿದೆ ಎಂದು ಎಂ.ಆರ್. ಮುರಳಿ ನುಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುನಾಥ ಪೈ …

ಗುಜರಾತ್ ಹೈಕೋರ್ಟ್‌ನ ವಕೀಲೆ ಕಾಸರಗೋಡು ನಿವಾಸಿ ರೈಲು ಪ್ರಯಾಣ ಮಧ್ಯೆ ನಿಗೂಢ ನಾಪತ್ತೆ

ಕಾಸರಗೋಡು: ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಕಾಸರಗೋಡು ನಿವಾಸಿ ರೈಲು ಪ್ರಯಾಣ ಮಧ್ಯೆ   ನಿಗೂಢ  ರೀತಿಯಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ಕಾಸರಗೋಡು ಚಿತ್ತಾರಿಕ್ಕಲ್ ನಿವಾಸಿ ನ್ಯಾಯವಾದಿ ಶೀಜಾ ಗಿರೀಶ್ ನಾಯರ್ (೪೯)  ಎಂಬವರು  ನಾಪತ್ತೆಯಾದ ವ್ಯಕ್ತಿ. ಕೇಸೊಂದರ ಅಗತ್ಯಕ್ಕಾಗಿ  ಶೀಜಾ ಗಿರೀಶ್ ನಾಯರ್ ಕಳೆದ ಸೋಮವಾರ ಬೆಳಿಗ್ಗೆ ೭.೧೦ಕ್ಕೆ ಗುಜರಾತ್‌ನ ಅಹಮ್ಮದಾಬಾದ್‌ನಿಂದ ಗುಜರಾತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬೈಗೆಂದು ಪ್ರಯಾಣ ಹೊರಟಿದ್ದರು. ಮಂಗಳವಾರ ನಾನು ಅಹಮ್ಮ ದಾಬಾದ್‌ಗೆ ಹಿಂತಿರುಗುವುದಾಗಿ ಅವರು ಮನೆಯವರಲ್ಲಿ ತಿಳಿಸಿದ್ದರು. ಸೋಮವಾರ ಮಧ್ಯಾಹ್ನ ೧೨.೩೦ಕ್ಕೆ …

ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣ ಕಾಯ್ದೆ ಉಲ್ಲಂಘನೆ ವ್ಯಾಪಕ: ವಿಜಿಲೆನ್ಸ್‌ನಿಂದ ತನಿಖೆ

ಕಾಸರಗೋಡು: ಸರಕಾರ ಜನರಿಂದ ಶುಲ್ಕ ವಸೂಲು ಮಾಡಲು ಕಾನೂನು ಕ್ರಮಗಳನ್ನು  ಕಡ್ಡಾಯಗೊಳಿಸುತ್ತಿರುವಾಗಲೇ ಸರಕಾರದ ಮರೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು  ಕೊಳ್ಳೆ, ಕಾನೂನು ಉಲ್ಲಂಘನೆ ನಡೆಸುತ್ತಿರುವುದು ವ್ಯಾಪಕಗೊಂಡಿದೆ. ಪೊಲೀಸ್‌ನ ವಿಜಿಲೆನ್ಸ್ ವಿಭಾಗ ಸ್ಥಳೀಯಾಡಳಿತ ಸಂಸ್ಥೆಗಳ ಕಾನೂನು ವಿರುದ್ಧ ಚಟುವಟಿಕೆಗಳು ಹಾಗೂ ಭ್ರಷ್ಟಾಚಾರಗಳನ್ನು ಪತ್ತೆಹಚ್ಚಿದೆ. ಕಟ್ಟಡಗಳು ಹಾಗೂ ವ್ಯಾಪಾರ ಸಂಸ್ಥೆಗಳನ್ನು ನಿರ್ಮಿಸಲು ಸರಿಯಾದ  ನಿಯಮ, ಕಾಯ್ದೆ, ವ್ಯವಸ್ಥೆಗಳನ್ನು ಸರಕಾರ ಕಡ್ಡಾಯಗೊಳಿಸುತ್ತಿರುವಾಗಲೇ ಜಿಲ್ಲೆಯ ಹಲವು ಸ್ಥಳೀಯಾಡಳಿತ ಸಂಸ್ಥೆಗಳು ಅದನ್ನು  ಉಲ್ಲಂಘಿಸುತ್ತಿರುವುದಾಗಿ ವಿಜಿಲೆನ್ಸ್ ಪತ್ತೆಹಚ್ಚಿದೆ. ಇಂತಹ ಚಟುವಟಿಕೆಗಳು ನಾಡಿನ ಸುಗಮ ಪುರೋಗತಿ ಹಾಗೂ ಭವಿಷ್ಯದ …

ತಿರುವನಂತಪುರದಿಂದ ಅಪಹರಣಗೈದ ವ್ಯಾಪಾರಿಯನ್ನು ಮೊಗ್ರಾಲ್ ರೆಸಾರ್ಟ್‌ನಲ್ಲಿ ದಿಗ್ಬಂಧನ: ಆರೋಪಿಗಳನ್ನು ಬೆನ್ನಟ್ಟಿ ಸೆರೆ

ಮೊಗ್ರಾಲ್: ವ್ಯಾಪಾರ ಸಂಬಂಧ ತರ್ಕದ ಹಿನ್ನೆಲೆಯಲ್ಲಿ ಯುವಕನನ್ನು ಅಪಹರಣಗೈದು ತಂದು ಮೊಗ್ರಾಲ್‌ನ ಖಾಸಗಿ ರೆಸಾರ್ಟ್‌ನಲ್ಲಿ ದಿಬ್ಗಂಧನ ದಲ್ಲಿರಿಸಿದ ತಂಡವನ್ನು ಪೊಲೀಸರು ಗಂಟೆಗಳೊಳಗಾಗಿ ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಈ ಘಟನೆ ನಡೆದಿದೆ. ಸೆರೆಗೀಡಾದವರು ತಿರುವನಂತಪುರ ಆಟಿಂಗಲ್ ನಿವಾಸಿಗಳಾಗಿದ್ದಾರೆ. ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ. “ತನ್ನ ಪತಿಯನ್ನು ಮೂರು ಮಂದಿ ತಂಡ ಕಾರಿನಲ್ಲಿ ಅಪಹರಿಸಿಕೊಂಡೊ ಯ್ದಿದೆ ಎಂಬ ದೂರಿನೊಂದಿಗೆ ಓರ್ವೆ ಯುವತಿ ಆಟಿಂಗಲ್ ಪೊಲೀಸ್ ಠಾಣೆಗೆ ತಲುಪಿದ್ದಳು. ಯುವಕನನ್ನು ಅಪಹರಣಗೈಯ್ಯಲು ಬಳಸಿದ ಕಾರಿನ ನಂಬ್ರವನ್ನು ಪೊಲೀಸರಿಗೆ ನೀಡಲಾಗಿತ್ತು. …

ಇಸ್ರೇಲ್-ಹಮಾಸ್ ಯುದ್ಧ ಹಿನ್ನೆಲೆ: ದಿಲ್ಲಿಯಲ್ಲಿ ಆರಾಧನಾಲಯಗಳಿಗೆ ಬಿಗಿ ಭದ್ರತೆ

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಅತೀ ಭೀಕರವಾದ ರೀತಿಯಲ್ಲಿ ಮುಂದುವರಿ ಯುತ್ತಿರು ವಂತೆಯೇ ಒಂದೆಡೆ ಇಸ್ರೇಲ್‌ನ್ನು ಬೆಂಬಲಿಸಿ  ಮತ್ತು ಇನ್ನೊಂದೆಡೆ ಪ್ಯಾಲಸ್ತೀನ್‌ಗೆ ಬೆಂಬಲ ನೀಡಿ ಭಾರತದ ವಿವಿಧೆಡೆಗಳಲ್ಲಿ ಮೆರವಣಿಗೆ  ನಡೆಯುತ್ತಿರುವಂತೆಯೇ   ದಿಲ್ಲಿಯಲ್ಲಿ ಆರಾಧನಾಲಯಗಳಿಗೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಇದರಲ್ಲಿ ದೇವಸ್ಥಾನಗಳಿಗೆ ಇನ್ನಷ್ಟು ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರತಿಭಟನೆ ಹೆಸರಲ್ಲಿ  ಕೆಲವು ಮತೀಯ ಮೂಲಭೂತವಾದಿ ಶಕ್ತಿಗಳು ಆರಾಧನಾಲಯಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿ ನೀಡಿದ್ದು, ಆ ಹಿನ್ನೆಲೆಯಲ್ಲಿ ಆರಾಧನಾಲಯಗಳಿಗೆ …

ಮಾಹಿತಿ ಹಕ್ಕು ಕಾರ್ಯಕರ್ತ ಸುಬ್ರಹ್ಮಣ್ಯ ನಾಯಕ್ ನಿಧನ

ಕುಂಬಳೆ: ಭ್ರಷ್ಟಾಚಾರ ವಿರುದ್ಧ ಹೋರಾಡಿದ ಕುಂಬಳೆ ಮಾಹಿತಿ ಹಲ್ಲು ಕಾರ್ಯಕರ್ತ, ಕಂಚಿಕಟ್ಟೆ ದುರ್ಗಾಂಭಾ ರಸ್ತೆಯ ಸುಬ್ರಹ್ಮಣ್ಯ ನಾಯಕ್ (೬೫) ನಿಧನಹೊಂದಿದರು. ಇಂದು ಮುಂಜಾನೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾ ಸಹಕಾರಿ ಆಸ್ಪತ್ರೆಗೂ ಬಳಿಕ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿ ಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ  ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬದಿಯಡ್ಕದಲ್ಲಿ ಸಂಸ್ಥೆಯೊಂದನ್ನು ನಡೆಸಿದ್ದರು.  ಭ್ರಷ್ಟಾಚಾರದ ವಿರುದ್ಧ ನಿಲುವು ಹೋರಾಟ ನಡೆಸುತ್ತಿದ್ದ ಇರು ಅಧಿಕಾರಿಗಳಿಗೆ, ರಾಜಕೀಯದವರಿಗೆ ಕಣ್ಣಿನ ಕಸವಾಗಿದ್ದರು. ಭ್ರಷ್ಟಾಚಾರ …