ರಶೀದ್ ಕೊಲೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಗೆ

ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ಬೈಕ್‌ನಲ್ಲಿ ಕೊಂ ಡೊಯ್ದು ಮದ್ಯಪಾನಗೈದ ಬಳಿಕ ತಲೆಗೆ ಕಲ್ಲು ಹಾಕಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಪೊಲೀಸರ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಪೆರುವಾಡ್‌ನಲ್ಲಿ ವಾಸಿಸುತ್ತಿದ್ದ ಅಭಿಲಾಷ್ ಯಾನೆ ಹಬೀಬ್ (೩೨) ಎಂಬಾತನನ್ನು ಮೂರು ದಿನಗಳ ಕಾಲಕ್ಕೆ ಕುಂಬಳೆ  ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್‌ರ ಕಸ್ಟಡಿಗೆ ಬಿಟ್ಟು ಕೊಡಲಾಗಿದೆ. ಅಭಿಲಾಷ್ ಯಾನೆ ಹಬೀಬ್ ಶಾಂತಿಪಳ್ಳದ ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೮)ನನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ಈ ತಿಂಗಳ ೧ರಂದು ರಾತ್ರಿ ಸಮೂಸ ರಶೀದ್ …

ನೌಕರರ ಕೊರತೆ: ಮಂಗಲ್ಪಾಡಿ ಪಂ. ಕಚೇರಿ ಮುಂಭಾಗ ಆಡಳಿತ ಸಮಿತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ನೌಕರರ ಕೊರತೆಯಿಂದ ಸಮಸ್ಯೆ ಉಂಟಾಗಿದ್ದು, ಶೀಘ್ರ ನೌಕರರನ್ನು ನೇಮಕ ಮಾಡಬೇಕೆಂದು  ಆಗ್ರಹಿಸಿ ಐಕ್ಯರಂಗದ ಪಂ. ಸದಸ್ಯರು ಇಂದು ಬೆಳಿಗ್ಗೆ ಪಂ. ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಕಚೇರಿ ಮುಂಭಾಗ ಚಪ್ಪರ ನಿರ್ಮಿಸಿ   ಮುಷ್ಕರ ನಡೆಸಲಾಗುತ್ತಿದೆ.  ಪಂ. ಕಚೇರಿಗೆ ನೌಕರರ ನೇಮಕಾತಿ ಆಗುವವರೆಗೂ ಮುಷ್ಕರ ಮುಂದುವರಿಸುವುದಾಗಿ ಪಂ. ಅಧ್ಯಕ್ಷೆ ಫಾತಿಮತ್ ರುಬಿನಾ ತಿಳಿಸಿದ್ದಾರೆ. ಇದೇ ಬೇಡಿಕೆ ಮುಂದಿಟ್ಟು ಕಳೆದೆರಡು ದಿನಗಳಲ್ಲಿ ಬಿಜೆಪಿ ಹಾಗೂ ಆಡಳಿತ ಸಮಿತಿ ಸದಸ್ಯರು ಪಂ. ಕಚೇರಿ ದಿಗ್ಬಂಧನ ನಡೆಸಿದ್ದರು. …

ಮಂಗಲ್ಪಾಡಿ ಪಂ. ಕಚೇರಿಯಲ್ಲಿ ನೌಕರರ ಕೊರತೆ: ಮತ್ತೆ ಬೀಗ ಜಡಿದ ಸದಸ್ಯರು

ಉಪ್ಪಳ: ಮಂಗಲ್ಪಾಡಿ ಪಂ ಚಾಯತ್ ಕಚೇರಿಯಲ್ಲಿ ಉದ್ಯೋ ಗಸ್ಥರನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿ ಸದಸ್ಯರಿಂದ ಪ್ರತಿಭಟನೆ ಮುಂದುವರಿಯುತ್ತಿದ್ದು, ನಿನ್ನೆ ಕೂಡಾ ಬೀಗ ಜಡಿಯಲಾಗಿದೆ. ಬುಧವಾರ ಪಂಚಾಯತ್ ಬಿಜೆಪಿ ಸದಸ್ಯರು ಬೀಗ ಜಡಿದು ಪ್ರತಿಭಟನೆ ನಡೆಸಿ ದ್ದರು. ಬಳಿಕ ಮೇಲಾಧಿಕಾರಿಗಳು ಗುರುವಾರ ಪರಿಹಾರ ಉಂಟು ಮಾಡುವ ಭರವಸೆಯನ್ನು ನೀಡಲಾದ ಬಳಿಕ ಬೀಗವನ್ನು ತೆರಯಲಾಗಿದೆ. ನಿನ್ನೆ ಮಧ್ಯಾಹ್ನ ಜಿಲ್ಲಾ ಅಸಿಸ್ಟೆಂಟ್ ಡೈರೆಕ್ಟರ್ ತಲುಪಿ ಚಚೆð ನಡೆಸಿದ ರೂ ನೌಕರರ ನೇಮಕಕ್ಕೆ ಯಾವುದೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗದ ಕಾರಣ ಅಧಿಕಾರಿಯನ್ನು ಸಹಿ …

ಕ್ವಾರ್ಟರ್ಸ್‌ನಿಂದ ಭಾರೀ ಪ್ರಮಾಣದ ಪಾನ್ ಮಸಾಲೆ ವಶ: ಓರ್ವ ಸೆರೆ

ಕುಂಬಳೆ: ಕ್ವಾರ್ಟರ್ಸ್‌ನಲ್ಲಿ ದಾಸ್ತಾನಿರಿಸಿದ್ದ ೮೮೧೬ ಪ್ಯಾಕೆಟ್ ನಿಷೇಧಿತ ಪಾನ್ ಮಸಾಲೆಯನ್ನು ಕುಂಬಳೆ ಇನ್‌ಸ್ಪೆಕ್ಟರ್ ಇ. ಅನೂಪ್ ನೇತೃತ್ವದ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಅಡ್ಕಬೈದಲ ಎಂಬಲ್ಲಿರುವ ಕ್ವಾರ್ಟರ್ಸ್ ನಿಂದ ಪಾನ್ ಮಸಾಲೆ ವಶಪಡಿಸಲಾಗಿದೆ.  ಈ ಸಂಬಂಧ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಬದರುಲ್ ಮುನೀರ್ (೪೦) ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕ್ವಾರ್ಟರ್ಸ್ ಕೇಂದ್ರೀಕರಿಸಿ ಪಾನ್ ಮಸಾಲೆ ಮಾರಾಟ ನಡೆಯುತ್ತಿದೆಯೆಂಬ ಗುಪ್ತ ಮಾಹಿತಿ  ಲಭಿಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕ್ವಾರ್ಟರ್ಸ್‌ನಲ್ಲಿ ಬಚ್ಚಿಡಲಾಗಿದ್ದ ಪಾನ್ ಮಸಾಲೆ ಪತ್ತೆಯಾಗಿದೆ. …

ಕಲ್ಲಿಕೋಟೆಯಲ್ಲಿ ಅಪೂರ್ವ ಮಲೇರಿಯಾ ಪತ್ತೆ

ಕಲ್ಲಿಕೋಟೆ: ಕಲ್ಲಿ ಕೋಟೆಯಲ್ಲಿ ಅಪೂರ್ವ ರೀತಿಯ ಮಲೇರಿಯಾ ಜ್ವರ ಪತ್ತೆಯಾಗಿದೆ. ಕಲ್ಲಿಕೋಟೆ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಯುವಕನಿಗೆ ಪ್ಲಾಸ್ಮೋಡಿಯಂ ವೈರಲ್ ಮಲೇರಿಯಾ ದೃಢೀಕರಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೋಗ ಪತ್ತೆಯಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.  ಕುನ್ನುಮಂಗಲಂ ನಿವಾಸಿಯಾದ ಯುವಕ ಕೆಲಸ ಅಗತ್ಯಕ್ಕಾಗಿ ಈ ಹಿಂದೆ ಮುಂಬಯಿಗೆ ತೆರಳಿದ್ದರು. ಅಲ್ಲಿಂದ ಈ ರೋಗ ಇವರಿಗೆ ಹರಡಿದೆಯೇ ಎಂಬ ಶಂಕೆ ಉಂಟಾಗಿದೆ ಎನ್ನಲಾಗುತ್ತಿದೆ

ಸಿಡಿಲು ಬಡಿದು ಮನೆಗೆ ಹಾನಿ

ವರ್ಕಾಡಿ: ತಲೆಕ್ಕಿ ಕೂಡುರಸ್ತೆ ನಿವಾಸಿ ಮೊಯ್ದೀನ್ ಕುಂಞಿ (ಮೋನು) ಅವರ ಮನೆಗೆ ಸಿಡಿಲು ಬಡಿದು ವ್ಯಾಪಕ ಹಾನಿಯುಂಟಾಗಿದೆ. ಮೊನ್ನೆ ರಾತ್ರಿ ಉಂಟಾದ ಸಿಡಿಲಿನ ಆಘಾತದಿಂದ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್  ಉಪಕರಣಗಳು ಹಾನಿಗೊಂಡಿವೆ. ಅದೃಷ್ಟವಶಾತ್ ಮನೆ ಮಂದಿ ಅಪಾಯ ದಿಂದ ಪಾರಾಗಿದ್ದಾರೆ. ಪಂಚಾಯತ್ ಅಧ್ಯಕ್ಷೆ ಭಾರತಿ, ಬ್ಲಾಕ್ ಪಂ. ಸದಸ್ಯ ಮೊದಲಾದವರು ಭೇಟಿ ನೀಡಿದರು.

ಎರಿಯಾಲ್‌ನಲ್ಲಿ ಎತ್ತರದ ರಸ್ತೆ: ಸ್ಥಳೀಯರಿಗೆ ಸಂಚಾರ ಸಮಸ್ಯೆ

ಎರಿಯಾಲ್: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಂಗವಾಗಿ ಎರಿಯಾಲ್ ಸೇತುವೆ ಬಳಿ ಸರ್ವೀಸ್ ರಸ್ತೆ ಸೇತುವೆಗೆ ಸಂಪರ್ಕಿಸುತ್ತಿರುವುದರಿಂದಾಗಿ ರಸ್ತೆಯ ಎತ್ತರ ಹೆಚ್ಚಾಗುತ್ತಿದೆ. ಇದರಿಂದ ಸಮೀಪದ ಮಸೀದಿ ಸಹಿತ ಹತ್ತರಷ್ಟು  ಕುಟುಂಬಗಳಿಗೆ ಸಂಕಷ್ಟ ತರಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಭೂಮಿ ಹಾಗೂ ಮಸೀದಿಯನ್ನು ಬಿಟ್ಟುಕೊಟ್ಟು ಹೊಸತಾಗಿ ಮಸೀದಿ ನಿರ್ಮಿಸಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಆದರೆ ಹೊರತಾಗಿ ನಿರ್ಮಿಸಿದ ಮಸೀದಿ ರಸ್ತೆ ಎತ್ತರವಾದ ಕಾರಣ ತಗ್ಗಾಗಲಿದೆ. ಇದರಿಂದಾಗಿ ಈ ಮಸೀದಿಗೆ ತಲುಪುವವರಿಗೆ ಸಮಸ್ಯೆಯಾಗಲಿದೆ. ಅಲ್ಲದೆ ಮಳೆಗಾಲದಲ್ಲಿ ನೀರು ಮಸೀದಿಯೊಳಗೆ ನುಗ್ಗಲಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳಲ್ಲಾಗಿ …

ಹೃದಯಾಘಾತ: ಯುವಕ ಮೃತ್ಯು

ಮಂಜೇಶ್ವರ: ಹೃದಯ ಘಾತದಿಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮೀಯಪದವು ಅಮ್ಮೆನಡ್ಕ ನಿವಾಸಿ ಗಿಲ್‌ಬರ್ಟ್ ಡಿ ಸೋಜಾ ರವರ ಪುತ್ರ ಗ್ಲೇನ್ ಡಿ ಸೋಜಾ [32] ಮೃತಪಟ್ಟ ವ್ಯಕ್ತಿ. ಇವರು ವರ್ಕಾಡಿ ಸಮೀಪದಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ ಅವರಿಗೆ ಹೃದಯಘಾತ ಉಂಟಾಗಿದ್ದು, ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಕೊಲ್ಲಿಯಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದರು. ಮೃತರು ತಂದೆ, ತಾಯಿ ಪ್ಲೋಸಿ, …

ಕೇರಳ ಕೋ ಆಪರೇಟಿವ್ ಎಂಪ್ಲಾಯೀಸ್ ಫ್ರಂಟ್ ರಾಜ್ಯ ಸಮ್ಮೇಳನ ನಾಳೆಯಿಂದ

ಕಾಸರಗೋಡು: ಕೇರಳ ಕೋ ಆಪರೇಟಿವ್ ಎಂಪ್ಲಾಯೀಸ್ ಫ್ರಂಟ್ ರಾಜ್ಯ ಸಮ್ಮೇಳನ ಅ. ೧೪, ೧೫ರಂದು ಕಳನಾಡು ಕೆ.ಎಚ್.ಹಾಲ್‌ನಲ್ಲಿ ನಡೆಯಲಿದೆ. ೧೪ರಂದು ಬೆಳಿಗ್ಗೆ ೯.೩೦ಕ್ಕೆ ಧ್ವಜಾರೋಹಣ, ೧೦ಕ್ಕೆ ಸಮ್ಮೇಳನವನ್ನು ವಿಪಕ್ಷ ನೇತಾರ ವಿ.ಡಿ. ಸತೀಶನ್ ಉದ್ಘಾಟಿಸುವರು. ಸಂಘಟಕ ಸಮಿತಿ ಚೆಯರ್‌ಮೆನ್ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸುವರು. ಕೆ.ಸಿ.ಇ.ಎಫ್ ರಾಜ್ಯ ಅಧ್ಯಕ್ಷ ವಿನಯ ಕುಮಾರ್ ಪಿ.ಕೆ, ಪ್ರಾಸ್ತಾವಿಕ ಭಾಷಣ ಮಾಡುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡುವರು. ಶಾಸಕ ಎನ್.ಎ. ನೆಲ್ಲಿಕುನ್ನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯನ್, …

ಜಿಲ್ಲಾ ಪಂಚಾಯತ್‌ನ ಜೈವಿಕ ವೈವಿಧ್ಯ ಪುರಸ್ಕಾರ ವಿತರಣೆ  ನಾಳೆ

ಕಾಸರಗೋಡು: ಜಿಲ್ಲಾ ಪಂಚಾಯತ್‌ನ ಜೈವಿಕ ವೈವಿಧ್ಯ ಪುರಸ್ಕಾರಗಳ ವಿತರಣೆ ನಾಳೆ ನಡೆಯಲಿದೆ. ಎರಿಂಞಿಪ್ಪುಳ ಪೊಲಿಯಂತುರುತ್ತ್ ಇಕೋ ವಿಲ್ಲೇಜ್ ನಲ್ಲಿ ನಡೆಯುವ ಜೈವಿಕ ವೈವಿಧ್ಯ ಕಾರ್ಯಾಗಾರದಲ್ಲಿ ಸಚಿವ ಅಹಮ್ಮದ್ ದೇವರ್‌ಕೋವಿಲ್ ಪುರಸ್ಕಾರಗಳನ್ನು ವಿತರಿಸುವರೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ. ಜಿಲ್ಲೆಯ ಉತ್ತಮ ಹಸಿರು ಕೃಷಿಕ ರಿಗಿರುವ ಪುರಸ್ಕಾರಕ್ಕೆ ನೀಲೇಶ್ವರ ಕಡಿಂಞಿಮೂಲೆಯ ವಿ.ವಿ. ದಿವಾಕರನ್ ಆಯ್ಕೆಗೊಂಡಿದ್ದಾರೆ. ಉದುಮದ ಕೆ.ವಿ. ಅಭಯ್  ಪ್ರತ್ಯೇಕ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ. ಜಿನೋ ಸೇವಿಯರ್ ಪುರಸ್ಕಾರಕ್ಕೆ ಕಣ್ಣಾಲಯಂ ನಾರಾಯಣನ್, ರವೀಂದ್ರನ್ ಕೊಡಕ್ಕಾಡ್ ಆಯ್ಕೆಗೊಂಡಿದ್ದಾರೆ. ನೂರಕ್ಕೂ …