ಕಾಡಾನೆ ತುಳಿತಕ್ಕೆ ಓರ್ವ ಬಲಿ: ಜನರು ಭೀತಿಯಲ್ಲಿ

ಕಣ್ಣೂರು: ಕಣ್ಣೂರಿಗೆ ಸಮೀಪದ ಉಳಿಕ್ಕಲ್‌ನಲ್ಲಿ ಕಾಡಿನಿಂದ ಊರಿಗೆ ಇಳಿದು ಭೀತಿ ಸೃಷ್ಟಿಸಿರುವ ಕಾಡಾನೆ ಯೊಂದು ಜನರ ಮೇಲೆರಗತೊಡಗಿದ್ದು, ಅದರ ತುಳಿತಕ್ಕೆ ಒಳಗಾಗಿ ಓರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉಳಿಕ್ಕಲ್ ನೆಲ್ಲಿಕಾಂ ಪೊಯಿಲ್ ನಿವಾಸಿ ಆ ದೃಶ್ಶೇರಿ ಜೋಸ್ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಅಲ್ಲೇ ಪಕ್ಕದ ಇಗರ್ಜಿಯೊಂದರ ಹಿತ್ತಿಲಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಶರೀರವಿಡೀ ನುಚ್ಚುನೂರಾಗಿ ಕೈ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಡಾನೆ ಹಾವಳಿ ಪ್ರದೇಶದಲ್ಲಿ ಜೋಸ್‌ರನ್ನು ಆ ಪರಿಸರದ ಓರ್ವರು ನಿನ್ನೆ ಕಂಡಿದ್ದರು.  ಅಲ್ಲಿ …

ಕುಂಬಳೆ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಅನಿಶ್ಚಿತತೆಯಲ್ಲಿ: ಶೌಚಾಲಯಕ್ಕಾಗಿ ತುರ್ತು ಬೇಡಿಕೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್ ಎಂಬ ಪಂಚಾಯತ್‌ನ ಕನಸು ಯೋಜನೆಗೆ ವಿವಿಧ ಕಾರಣಗಳು ತಿರುಗೇಟಾಗುತ್ತಿವೆ. ಒಂದು ಕಡೆ ಕೆಎಸ್‌ಟಿಪಿ ರಸ್ತೆ ನಿರ್ಮಾಣ, ಮತ್ತೊಂದು ಕಡೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಾಗ ಬಸ್ ನಿಲ್ದಾಣ ನಿರ್ಮಿಸಲು ಸಮಸ್ಯೆ ಕಂಡು ಬಂದಿದೆ. ಜೊತೆಗೆ ಸ್ಥಳವೂ ಲಭ್ಯವಿಲ್ಲದ ಕಾರಣ ನಿರ್ಮಾಣಕ್ಕೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮಗಳೂ ಇದುವರೆಗೆ ಉಂಟಾಗಿಲ್ಲ. ಈ ಮಧ್ಯೆ ಕುಂಬಳೆ ಪೇಟೆಯಲ್ಲಿ ಆಧುನಿಕ ರೀತಿಯಲ್ಲಿರುವ ಶೌಚಾ ಲಯ …

ವಿಮಾನದಲ್ಲಿ ನಟಿಯೊಂದಿಗೆ ಅನುಚಿತ ವರ್ತನೆ-ದೂರು

ಕೊಚ್ಚಿ: ವಿಮಾನದಲ್ಲಿ  ಸಿನಿಮಾ ನಟಿಯೊಂದಿಗೆ ಸಹಪ್ರಯಾಣಿಕ ನೋರ್ವ ಅನುಚಿತವಾಗಿ ವರ್ತಿಸಿದ ಬಗ್ಗೆ ದೂರುಂಟಾಗಿದೆ. ತೃಶೂರು ನಿವಾಸಿಯಾದ ನಟಿ ಈ ಬಗ್ಗೆ ನೆಡುಂಬಾಶ್ಶೇರಿ ಪೊಲೀಸ್ ಠಾಣೆಯ ಲ್ಲಿ ದೂರು ನೀಡಿದ್ದಾರೆ.  ಏರ್ ಇಂಡಿಯಾದ ಮುಂಬಯಿ-ಕೊಚ್ಚಿ ವಿಮಾನದಲ್ಲಿ ನಟಿಗೆ ಸಹಪ್ರಯಾಣಿ ಕನಿಂದ ಕೆಟ್ಟ ಅನುಭವವುಂಟಾಗಿರು ವುದಾಗಿ ದೂರಲಾಗಿದೆ. ವ್ಯಕ್ತಿಯಿಂದ ಕೆಟ್ಟ ವರ್ತನೆ ಉಂಟಾದುದರಿಂದ ನಟಿ ಸೀಟ್ ಬದಲಾಯಿಸಿದ್ದಾರೆ. ಮೊದಲು ಇ ಮೈಲ್ ಮೂಲಕ ನೆಡುಂಬಾಶ್ಶೇರಿ ಪೊಲೀಸರಿಗೆ ನಟಿ ದೂರು ನೀಡಿದ್ದಾರೆ. ಆದರೆ ನೇರವಾಗಿ ಹಾಜರಾಗಿ ದೂರು ನೀಡುವಂತೆ ಪೊಲೀಸರು ತಿಳಿಸಿದ …

ಬಿಹಾರದಲ್ಲಿ ರೈಲು ಅಪಘಾತ:ನಾಲ್ಕು ಸಾವು, ಹಲವರಿಗೆ ಗಂಭೀರ; ಬುಡಮೇಲು ಕೃತ್ಯ ಶಂಕೆ

ಪಾಟ್ನಾ: ನವದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನಿಂದ ಕಾಮಾಖ್ಯಕ್ಕೆ ತೆರಳುತ್ತಿದ್ದ ನೋರ್ತ್ ಈಸ್ಟ್ ಎಕ್ಸ್‌ಪ್ರೆಸ್ ರೈಲು ನಿನ್ನೆ ರಾತ್ರಿ ೧೦ ಗಂಟೆ ಸುಮಾರಿಗೆ ಅಪಘಾತಕ್ಕೀ ಡಾಗಿದೆ. ಇದು ಒಂದು ಬುಡಮೇಲು ಕೃತ್ಯವಾಗಿದೆಯೆಂಬ ಶಂಕೆಯೂ ಜತೆಗೆ ಉಂಟಾಗಿದೆ. ಈ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿ ದೆಯೆಂದು ವೈದ್ಯರು ತಿಳಿಸಿದ್ದಾರೆ. ಬಕ್ಸರ್ ಜಂಕ್ಷನ್‌ನಿಂದ ಹೊರಟ ಕೆಲ ಹೊತ್ತಿನಲ್ಲೇ ರಘುನಾಥಪುರ ರೈಲು ನಿಲ್ದಾಣದ ಪೂರ್ವಿ  ಗುಮ್ಚಿ ಬಳಿ ನೋರ್ತ್ ಈಸ್ಟ್ ಎಕ್ಸ್‌ಪ್ರೆಸ್‌ನ ೨೧ ಬೋಗಿಗಳು …

ಮೀಯಪದವುನಲ್ಲಿ ಉದ್ಯೋಗ ಖಾತರಿ ಕಾರ್ಮಿಕರ ಪ್ರತಿಭಟನೆ

ಮಂಜೇಶ್ವರ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿ ಸುವ ಕ್ರಮವನ್ನು ಕೊನೆಗೊಳಿಸಬೇಕು, ಹೆಚ್ಚಿಸಿದ ಮಜೂರಿಯನ್ನು ಕೂಡಲೇ ವಿತರಿಸಬೇಕು, ಕಡಿತಗೊಳಿಸಿದ ಲೇಬರ್ ಬಜೆಟ್ ಪುನರ್ ಸ್ಥಾಪಿಸಬೇಕು, ಕೇಂದ್ರ ಸರಕಾರ ಉದ್ಯೋಗ ಖಾತರಿ ಯೋಜನೆ ಅವಗಣನೆ ಕೊನೆಗೊಳಿಸ ಬೇಕು ಮುಂತಾದ ಬೇಡಿಕೆಯನ್ನು ಮುಂದಿಟ್ಟುಕೊಂಡು ಎನ್‌ಆರ್‌ಇಜಿ ಯೂನಿಯನ್ ನೇತೃತ್ವದಲ್ಲಿ ಮೀಯ ಪದವಿನಲ್ಲಿ  ಪ್ರತಿಭಟನೆ ನಡೆಸಲಾ ಯಿತು. ಸಂಘಟನೆಯ ಜಿಲ್ಲಾ ಕಾರ್ಯ ದರ್ಶಿ ಟಿ.ಎಂ.ಎ. ಕರೀಂ ಉದ್ಘಾಟಿಸಿ ದರು. ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಕಮಿಟಿ ಅಧ್ಯಕ್ಷೆ ಸರಸ್ವತಿ, …

ರಾಜ್ಯದಲ್ಲಿ ವ್ಯಾಪಾರ ನೀತಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಆಗ್ರಹ

ಕಾಸರಗೋಡು: ಸಣ್ಣ ವ್ಯಾಪಾರ ವಲಯದಲ್ಲಿ ಬಹುರಾಷ್ಟ್ರ ಕಂಪೆನಿಗಳ ನುಸುಳುವಿಕೆ ಹಾಗೂ ಆನ್‌ಲೈನ್ ವ್ಯಾಪಾರ ಸಹಿತ ಕೇರಳದ ವ್ಯಾಪಾರಿ ಗಳು ಇಂದು ಎದುರಿಸುತ್ತಿರುವ ಸಂದಿ ಗ್ಧತೆಗಳು ಬಹಳವಾಗಿದ್ದು, ಸಣ್ಣ ವ್ಯಾಪಾರಿಗಳು ನೆಲೆ ನಿಲ್ಲಲು ಕೇರಳದಲ್ಲಿ ವ್ಯಾಪಾರ ನೀತಿ ಉಂಟಾಗಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕೌನ್ಸಿಲ್ ಸಭೆ  ಆಗ್ರಹಿಸಿದೆ. ಈ ರೀತಿಯ ಸವಾಲುಗಳನ್ನು  ಎದುರಿಸಲು ಬೇಕಾದ ಅಧ್ಯಯನ ಗಳನ್ನು ನಡೆಸಲು, ಸಣ್ಣ ವ್ಯಾಪಾರಿ ಗಳಿಗೆ ಆಧುನಿಕ ಮೆನೇಜ್ ಮೆಂಟ್ ತಿಳುವಳಿಕೆ ನೀಡುವುದಕ್ಕೆ  ಈ ವಲಯದ ತಜ್ಞರನ್ನು, …

ಪಳ್ಳತ್ತಡ್ಕದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗ ಯಶಸ್ಸಿಗೆ ಅಡೂರು ಕ್ಷೇತ್ರದಲ್ಲಿ ಪ್ರಾರ್ಥನೆ

ಬದಿಯಡ್ಕ: ಕುಂಬಳೆ ಸೀಮೆಯ ಪ್ರತೀ ಕುಟುಂಬದ ಸದಸ್ಯರಿಗೆ ಆರೋಗ್ಯ ವೃದ್ಧಿ ಕುಟುಂಬದ ಸಂಪತ್ತು ವೃದ್ಧಿ, ಮಕ್ಕಳ ವಿದ್ಯಾ ಬುದ್ಧಿ ಸಂಸ್ಕಾರ ವೃದ್ಧಿ, ಹಾಗೂ ಸೀಮೆಯ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕಿ ಮಾದರಿ ಸೀಮೆಯನ್ನಾಗಿ ಮಾಡುವ ಉದ್ದೇಶ ದೊಂದಿಗೆ ಸೀಮೆಯ ಅಡೂರು, ಮಧೂರು, ಕಣಿಪುರ ಕ್ಷೇತ್ರದ ಎಲ್ಲಾ ದೇವರ ಅನುಗ್ರಹ, ನಾಲ್ಕು ದೈವಸ್ಥಾನ ಗಳ ದೈವಗಳ ಸರ್ವಾನುಗ್ರಹ ಪ್ರಾಪ್ತವಾಗಲಿ ರಾಮನಾಮ ಜಪ ಧನ್ವಂತರಿ ಪೂಜೆ ಪುರುಷೋತ್ತಮ ಯಾಗದಿಂದ ಸೀಮೆಯ ಎಲ್ಲರೂ ಪ್ರಭು ಶ್ರೀರಾಮಚಂದ್ರನAತೆ ಪುರು ಷೋತ್ತಮ ಗುಣವನ್ನು ಸಂಪಾದಿಸುವ …

ಬಿ.ವಿ. ಕಕ್ಕಿಲ್ಲಾಯರಿಗೆ ಕರ್ನಾಟಕ ಸಮಿತಿ ಗೌರವಾರ್ಪಣೆ

ಕಾಸರಗೋಡು : ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ ಬಿ.ವಿ.ಕಕ್ಕಿಲ್ಲಾಯ ಅವರು 80ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಗೌರವಾರ್ಪಣೆ ಸಮಿತಿಯ ನಗರದ ಕಚೇರಿಯಲ್ಲಿ ನಡೆಯಿತು. ಹಿರಿಯ ಮುಂದಾಳು ಐ.ವಿ.ಭಟ್ ಅಭಿನಂದನೆ ನಡೆಸಿದರು. ವಕೀಲ ಕೆ.ಮುರಳೀಧರ ಬಳ್ಳುಕ್ಕರಾಯ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡ ಕನ್ನಡ ಹೋರಾಟದಲ್ಲಿ ಬಿ.ವಿ.ಕಕ್ಕಿಲ್ಲಾಯರ ಕೊಡುಗೆ, ಬೇವಿಂಜೆ ಕಕ್ಕಿಲ್ಲಾಯ ಮನೆತನದ ದೇಣಿಗೆ ಇತ್ಯಾದಿಗಳನ್ನು ಸಮಾರಂಭದಲ್ಲಿ ನೆನಪಿಸ ಲÁಯಿತು. ಸಾಮಾಜಿಕ ಕಾರ್ಯಕರ್ತೆ ಆಯಿಷಾ ಎ.ಎ.ಪೆರ್ಲ ಅಭಿನಂದನೆ ಭಾಷಣ ಮಾಡಿದರು. ವಿವಿಧ ವಲಯಗಳ ಸಾಧಕರಾದ ಕೆ.ನಾರಾಯಣ ಗಟ್ಟಿ, ಟಿ.ಶಂಕರನಾರಾಯಣ ಭಟ್, ಕಾಸರಗೋಡು …

ಕಿದೂರು ಶ್ರೀ ದುರ್ಗಾಪರಮೇಶ್ವರೀ ಮಠದಲ್ಲಿ ನವರಾತ್ರಿ ಉತ್ಸವ ೧೯ರಂದು

ಕುಂಬಳೆ: ಕಿದೂರು ಶ್ರಾವಣಕೆರೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮಠದಲ್ಲಿ ನವರಾತ್ರಿ ಉತ್ಸವ ಈ ತಿಂಗಳ 19ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ 8ರಿಂದ ಗಣಹೋಮ, 8.30ಕ್ಕೆ ಶ್ರೀ ದೇವರಿಗೆ ನವಕಾಭಿಷೇಕ, 9.30ಕ್ಕೆ ಚಂಡಿಕಾ ಹೋಮ, 11.30ಕ್ಕೆ ಚಂಡಿಕಾ ಹವನದ ಪೂರ್ಣಾಹುತಿ, ಮಧ್ಯಾಹ್ನ ಉಪ್ಪಳ ಕೆ.ಎನ್.ಎಚ್ ಆಸ್ಪತ್ರೆಯ ಡಾ. ಪ್ರಭಾಕರ ಹೊಳ್ಳ ರವರಿಗೆ ಸನ್ಮಾನ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 1.30ಕ್ಕೆ ವಿಷ್ಣು ಬಳಗ ಮಜಿಬೈಲು ಇವರಿಂದ ‘ಕದಂಬ ಕೌಶಿಕ್’ ಕಥಾಭಾಗದ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ವಿವಿಧ ತಂಡದಿAದ …

ಕೇರಳ ಪೊಲೀಸ್ ಕಬಡ್ಡಿ ಪಟುಗಳಿಗೆ ಸ್ವಾಗತ

ಕಾಸರಗೋಡು: ಹರಿಯಾ ಣದಲ್ಲಿ ನಡೆದ ೭೨ನೇ ಪೊಲೀಸ್ ರಸಲಿಂಗ್ ಕ್ಲಸ್ಟರ್ ವಿಭಾಗದಲ್ಲಿ ಕಬಡ್ಡಿಯಲ್ಲಿ ಸ್ಪರ್ಧಿಸಿ ಕೇರಳಕ್ಕೆ ಅಭಿಮಾನ ತಂದ ಕೇರಳ ಪೊಲೀಸ್ ಕಬಡ್ಡಿ ತಂಡಕ್ಕೆ ಜಿಲ್ಲಾ ಪೊಲೀಸ್ ಹಾಗೂ ಕೆಪಿಎ ರೈಲ್ವೇ ಪೊಲೀಸ್ ಘಟಕದ ಜಂಟಿ ಆಶ್ರಯದಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಸ್ವಾಗತ ನೀಡಲಾಯಿತು. ಕೆ.ಪಿ.ಒ.ಎ ಜಿಲ್ಲಾಧ್ಯಕ್ಷ,ಕಾಸರಗೋಡು ಸರ್ಕಲ್ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ಕ್ರೀಡಾ ತಾರೆಗಳನ್ನು ಸ್ವಾಗತಿಸಿದರು. ಕೆ.ಪಿ.ಒ.ಎ ರಾಜ್ಯ ಜೊತೆ ಕಾರ್ಯ ದರ್ಶಿ ಪಿ.ಪಿ. ಮಹೇಶ್, ಕೆ.ಪಿ.ಎ. ಜಿಲ್ಲಾಧ್ಯಕ್ಷ ಒ. ರಾಜ್ ಕುಮಾರ್, ಕಾರ್ಯದರ್ಶಿ  ಎ.ಪಿ. …