ಪಾದಯಾತ್ರೆ ನಡೆಸಿದ್ದಕ್ಕೆ ನಟ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲು: ‘ಜೈಲಿಗೆ ಹೋಗಲೂ ಸಿದ್ಧ’

ತೃಶೂರು: ತೃಶೂರಿನ ಕರುವಣ್ಣೂರು ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ವಂಚನೆಯನ್ನು ಪ್ರತಿಭಟಿಸಿ ಪಾದಯಾತ್ರೆ ನಡೆಸಿದ ಸಿನೆಮಾ ನಟ ಸುರೇಶ್ ಗೋಪಿ ಸೇರಿದಂತೆ ೫೦೦ ಬಿಜೆಪಿ ಕಾರ್ಯಕರ್ತರ ವಿರುದ್ಧ ತೃಶೂರು ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಾದಯಾತ್ರೆ ನಡೆಸುವ ಮೂಲಕ ಸಾರಿಗೆ ಅಡಚಣೆ ಉಂಟುಮಾಡಲಾಗಿದೆ ಇತ್ಯಾದಿ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ದಾಖಲಿಸಿಕೊಂಡ ಮಾತ್ರಕ್ಕೆ ನಾನು ಹೆದರಲಾರೆ. ಬೇಕಾಗಿದ್ದಲ್ಲಿ ಜೈಲಿಗೂ ಹೋಗಲು ಸಿದ್ಧ ಎಂದು ಕೇಸಿನ ಬಗ್ಗೆ ಸುರೇಶ್ ಗೋಪಿ ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾಂಕ್‌ನಿಂದ ವಂಚನೆಗೊಳಗಾದ …

ಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ ‘ಪುವೆಂಪು’ ಸಂಸ್ಮರಣೆ

ಬದಿಯಡ್ಕ: ಶಿವಳ್ಳಿ ಬ್ರಾಹ್ಮಣ ಸಭಾ ಏತಡ್ಕ ವಲಯ ಇದರ ಸಹಭಾಗಿತ್ವದಲ್ಲಿ ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನಂದು `ಪುವೆಂಪು ಸಂಸ್ಮರಣೆ’ ಕಾರ್ಯಕ್ರಮವನ್ನು ಬದಿಯಡ್ಕದ ಡಾ| ಶ್ರೀನಿಧಿ ಸರಳಾಯ ಅವರ ಬಾರಡ್ಕ ದಲ್ಲಿರುವ ನಿವಾಸದಲ್ಲಿ ಆಯೋಜಿಸ ಲಾಯಿತು. ಯಕ್ಷಗಾನ ಭಾಗವತ ಡಾ| ಸತೀಶ ಪುಣಿಂಚತ್ತಾಯ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭವಾ ಯಿತು. ವಲಯ ಕಾರ್ಯದರ್ಶಿ ಮಧು ಸೂದನ ಎಂ. ಸ್ವಾಗತಿಸಿ, ನಿರೂಪಣೆ ಮಾಡಿದರು. ಹರಿನಾರಾಯಣ ನಡು ವಂತಿಲ್ಲಾಯ ಹಾಗೂ ವಿಜಯರಾಜ ಪುಣಿಂಚತ್ತಾಯ ದೀಪಪ್ರಜ್ವಲನೆಗೈದರು. ಡಾ| ಶ್ರೀನಿಧಿ ಸರಳಾಯರು ಪುವೆಂಪು …

ನಾಲಂದ ಕಾಲೇಜಿನಲ್ಲಿ ಅಮೃತ ಕಲಶ ಯಾತ್ರೆ

ಪೆರ್ಲ: ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ‘ಮೇರಿ ಮಿಟ್ಟಿ ಮೇರಾ ದೇಶ್’ ಅಮೃತ ಕಲಶ ಯಾತ್ರೆಯನ್ನು ನಿನ್ನೆ ಮಧ್ಯಾಹ್ನ ಪ್ರಭಾರ ಪ್ರಾಂಶುಪಾಲ ಶಂಕರ ಖಂಡಿಗೆ ಉದ್ಘಾಟಿಸಿ ದರು. ಯೋಜನಾಧಿಕಾರಿ ಕಾವ್ಯಚಂದ್ರನ್ ಮಾರ್ಗದರ್ಶನ ನೀಡಿದರು. ಅಮೃತ ಕಲಶದಂಗವಾಗಿ ಸಸಿ ನೆಡಲಾಯಿತು.

ಇಸ್ರೇಲ್‌ನಂತಹ ವಿನಾಶ ಕಾಶ್ಮೀರದಲ್ಲೂ ಸಂಭವಿಸಬಹುದು-ಪಾಕಿಸ್ತಾನದ ಬೆದರಿಕೆ

ನವದೆಹಲಿ: ಇಸ್ರೇಲ್‌ನಲ್ಲಿ ಸಂಭವಿಸಿರುವ ವಿನಾಶವು ಮುಂದೆ ಕಾಶ್ಮೀರದಲ್ಲೂ ಸಂಭವಿಸಬಹುದೆಂದು ಪಾಕಿಸ್ತಾನ ಬೆದರಿಕೆ ಹಾಕಿದೆ. ಭಾರತದಲ್ಲಿ ಪಾಕಿಸ್ತಾನದ ಹೈ ಕಮಿಶನರ್ ಆಗಿದ್ದ ಅಬ್ದುಲ್ ಬಾಸಿತ್  ಈ ರೀತಿಯ ಬೆದರಿಕೆಯ ಮಾತು ಗಳನ್ನು ಆಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಬೇಕಾದರೆ ಪ್ಯಾಲೆಸ್ತೀನ್ ಸಮಸ್ಯೆಯನ್ನು ಪರಿಹರಿಸಬೇಕು. ನಾವು ದಕ್ಷಿಣ ಏಷ್ಯಾದಲ್ಲಿ ಶಾಂತಿ ಬಯಸುವುದಾದರೆ ಅದಕ್ಕೆ ಮೊದಲು ಕಾಶ್ಮೀರ ವಿಷಯವನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇ ಕಾಗಿದೆ. ಭಾರತ ಮತ್ತು ಇಸ್ರೇಲ್ ತಮ್ಮ ಆಕ್ರಮಣಗಳನ್ನು ತೊರೆಯಬೇಕಾಗಿ ಬರಲಿದೆಯೆಂದೂ ಭಾರತಕ್ಕೆ ಒಡ್ಡಿರುವ ಬೆದರಿಕೆ ಹೇಳಿಕೆಯಲ್ಲಿ ಬಾಸಿತ್ ಹೇಳಿ …

ಕಾರಿನಲ್ಲಿ ಬಂದ ತಂಡ ಯುವಕನನ್ನು ಅಪಹರಿಸಿ ಹಲ್ಲೆ: ಮೂವರು ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಕಾರಿನಲ್ಲಿ ಬಂದ ತಂಡವೊಂದು ಅಂಗಡಿಯಲ್ಲಿ ಕುಳಿತಿದ್ದ ಯುವಕನನ್ನು ಅಪಹರಿಸಿ ಆತನ ತಂದೆ ಮೇಲೂ ಹಲ್ಲೆ ನಡೆಸಿದ್ದು, ಪೊಲೀಸರ ಸಕಾಲಿಕ ಕಾರ್ಯಾಚರ ಣೆಯಿಂದ ಯುವಕನನ್ನು ರಕ್ಷಿಸಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಮೂವರನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಅಣಂಗೂರು ನಿವಾಸಿಗಳಾದ ಶಾಮು, ಇಯಾಚು ಅಲಿಯಾಸ್ ರಿಯಾಸ್ ಮತ್ತು ಜಂಶೀರ್ ಎಂಬಿವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಯುವಕನನ್ನು ಅಪಹರಿಸಲು ಬಳಸಿದ್ದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಟ್ಟತ್ತೋಡಿ ರಮ್ಲಾ ಮಂಜಿಲ್ ನಿವಾಸಿ …

ಕಾಞಂಗಾಡ್‌ನಿಂದ ಸ್ಕೂಟರ್ ಕಳವುಗೈದ ಮೊಗ್ರಾಲ್ ನಿವಾಸಿ ಬಂಧನ

ಕಾಸರಗೋಡು: ಕಾಞಂಗಾಡ್ ರೈಲ್ವೇ ನಿಲ್ದಾಣ ಪರಿಸರದಿಂದ ಸ್ಕೂಟರ್ ಕಳವುಗೈದ ಪ್ರಕರಣದಲ್ಲಿ ಆರೋಪಿ ಯಾದ ಮೊಗ್ರಾಲ್ ನಿವಾಸಿಯನ್ನು ಹೊಸದುರ್ಗ ಪೊಲೀಸರು ಸೆರೆಹಿಡಿದಿ ದ್ದಾರೆ. ಮೊಗ್ರಾಲ್ ಕೊಪ್ಪಳ ಹಸೀನ ಮಂಜಿಲ್‌ನ ಎಂ. ಮುಹಮ್ಮದ್ ಅನ್ಸಾರ್ (೫೭) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈ ತಿಂಗಳ ೭ರಂದು ಸ್ಕೂಟರ್  ಕಳವಿಗೀಡಾಗಿತ್ತು. ಮಂಗಳೂರಿನಲ್ಲಿ ವಿದ್ಯಾರ್ಥಿ ಯಾಗಿರುವ ಅದಿಂಞಾಲ್ ನಿವಾಸಿ ಅಶ್ಮಿಲ್ ರಹ್ಮತ್ತುಲ್ಲ ತನ್ನ ಸ್ಕೂಟರನ್ನು ಕಾಞಂಗಾಡ್ ರೈಲ್ವೇ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿ ತೆರಳಿದ್ದರು. ಅಂದು ಸಂಜೆ ಮರಳಿದಾಗ ಸ್ಕೂಟರ್ ಕಾಣೆಯಾಗಿತ್ತು. ವಿವಿಧೆಡೆ ಹುಡುಕಿದರೂ ಪತ್ತೆಯಾಗದ …

ಚರ್ಲಡ್ಕದಲ್ಲಿ ಹೋಟೆಲ್‌ಗೆ ಆಕ್ರಮಣ: ಆರೋಪಿ ಬಂಧನ

ಬದಿಯಡ್ಕ: ಚರ್ಲಡ್ಕದಲ್ಲಿ ಹೋಟೆ ಲ್‌ಗೆ ಅತಿ ಕ್ರಮಿಸಿ ನುಗ್ಗಿ ಮಾಲಕ ಹಾಗೂ ನೌಕರರ ಮೇಲೆ ಹಲ್ಲೆಗೈದು, ಹೋಟೆಲ್‌ನ ಗಾಜು ಪುಡಿಗೈದು ೫೦,೦೦೦ ರೂಪಾಯಿಗಳ ನಾಶನಷ್ಟ ಸೃಷ್ಟಿಸಿದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ನೆಲ್ಲಿಕಟ್ಟೆ ಬಳಿಯ ಚರ್ಲಡ್ಕದ ಸೈರಾಸ್ (೩೨) ಎಂಬಾತನನ್ನು ಬದಿಯಡ್ಕ ಎಸ್.ಐ ಪಿ.ಕೆ. ವಿನೋದ್ ಕುಮಾರ್ ಇಂದು ಮುಂಜಾನೆ ಬಂಧಿಸಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಈತ ಮನೆಗೆ ತಲುಪಿದ್ದಾನೆಂಬ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಮನೆಗೆ ತಲುಪಿ ಬಂಧಿಸಿದೆ. ಕಳೆದ ತಿಂಗಳ ೨೫ರಂದು …

ಉಂರ ವಿಸಾ ಭರವಸೆಯೊಡ್ಡಿ ವಂಚನೆ: ಲಕ್ಷಾಂತರ ರೂಪಾಯಿ, ಪಾಸ್‌ಪೋರ್ಟ್ ಪಡೆದು ಯುವಕ ಪರಾರಿ

ಕಾಸರಗೋಡು: ಉಂರ ವಿಸಾ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂಪಾಯಿ ಲಪಟಾ ಯಿಸಿ ಯುವಕ ತಲೆಮರೆಸಿಕೊಂಡಿ ದ್ದಾನೆ. ಘಟನೆಗೆ ಸಂಬಂಧಿಸಿ ಹಣ ನಷ್ಟಗೊಂಡ ಪರಪ್ಪ ಕ್ಲ್ಲಾಯಿ ಕ್ಕೋಡ್‌ನ  ಜಮೀಲ ಎಂಬವರ ದೂರಿನಂತೆ ಕ್ಲಾಯಿಕ್ಕೋಡ್‌ನ ಅಬ್ದುಲ್ ರೌಫ್ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ.  ಜಮೀಲರಿಗೆ ೮೦ ಸಾವಿರ ರೂಪಾಯಿ ಈತ ವಂಚಿಸಿದ್ದಾನೆನ್ನಲಾಗಿದೆ. ಇದೇ ರೀತಿಯಲ್ಲಿ ಅಬ್ದುಲ್ ರೌಫ್ ಹಲವರಿಂದ ಉಂರ ವಿಸಾ ಭರವಸೆಯೊಡ್ಡಿ ೮೦ ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂ. ವರೆಗೆ ಪಡೆದಿದ್ದಾನೆನ್ನಲಾಗಿದೆ. ಹಣ ನೀಡಿದವರಲ್ಲಿ  …

ರಶೀದ್ ಕೊಲೆ ಪ್ರಕರಣ: ಆರೋಪಿಯನ್ನು ಕಸ್ಟಡಿಗೆ ಪಡೆಯಲು ಪೊಲೀಸರು ನಾಳೆ ನ್ಯಾಯಾಲಯಕ್ಕೆ

ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲು ಹಾಕಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಶಾಂತಿಪಳ್ಳ ನಿವಾಸಿ ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೯)ನನ್ನು ಕೊಲೆಗೈದ ಪ್ರಕರಣದ ಆರೋಪಿ ಈ ಹಿಂದೆ ಪೆರುವಾಡ್‌ನಲ್ಲಿ ವಾಸಿಸುತ್ತಿದ್ದ ಅಭಿಲಾಷ್ ಯಾನೆ ಹಬೀಬ್ (೩೨)ನನ್ನು ಕಸ್ಟಡಿಗೆ ಪಡೆಯಲು ಕುಂಬಳೆ ಇನ್ಸ್‌ಪೆಕ್ಟರ್ ಇ. ಅನೂಪ್ ಕುಮಾರ್ ನಾಳೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲ ಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಕೊಲೆ ಕೃತ್ಯದಲ್ಲಿ ಅಥವಾ …

ಸಂದರ್ಶನ ವೇಳೆ ಅನುಚಿತ ವರ್ತನೆ ಶಾಲಾ ಮೆನೇಜರ್ ವಿರುದ್ಧ ಕೇಸು

ಕಾಸರಗೋಡು: ಅಧ್ಯಾಪಕ ಹುದ್ದೆಗೆ ನಡೆಸಿದ ಸಂದರ್ಶನಕ್ಕೆ ತಲುಪಿದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದಂತೆ ಶಾಲಾ ಮೆನೇಜರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬದಲ್ಲಿರುವ  ಖಾಸಗಿ ಶಾಲೆಯೊಂದರ ಮೆನೇಜರ್ ವಿರುದ್ಧ ಶಾಲೆಯ ಅಧ್ಯಾಪಿಕೆಯಾದ ೩೫ರ ಹರೆಯದ ಯುವತಿ ದೂರು ನೀಡಿದ್ದಾರೆ. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ  ಸಂದರ್ಶನಕ್ಕೆ ತಲುಪಿದಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರೆಂದು ತಿಳಿಸಿ ಯುವತಿ ಇತ್ತೀಚೆಗೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ.