ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಇಬ್ಬರು ಮಕ್ಕಳು ಮೃತ್ಯು

ಇಡುಕ್ಕಿ: ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕುಮಳಿ ಸಮೀಪ ಸಂಭವಿಸಿದೆ. ವಂಡನ್‌ಮೇಡ್ ರಾಜಕ್ಕಂಡಂ ನಾಯರ್ ಸಿಟಿ ಚೆಂಬರ್‌ಶೇರಿಯ ಕನಕಾಧರನ್ (೫೭), ಮಕ್ಕಳಾದ ವಿಷ್ಣು (೩೧), ವಿನೀತ್ (೨೪) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿನ್ನೆ ಅಪರಾಹ್ನ ೩ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ಅಪರಾಹ್ನ ಉಂಟಾದ ಗಾಳಿ ಮಳೆ ವೇಳೆ ಏಲಕ್ಕಿ ತೋಟದಲ್ಲಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮಳೆ ನಿಂತ ಬಳಿಕ …

ದೇಶದಲ್ಲೇ ಅತೀ ಹೆಚ್ಚು ಪ್ರಾಯದ ಸಾಕ್ಷರತಾ ಪರೀಕ್ಷೆ ಬರೆದ ಕಾರ್ತ್ಯಾಯಿನಿ ಅಮ್ಮ ನಿಧನ

ಆಲಪ್ಪುಳ: ಅಕ್ಷರ ಲಕ್ಷಂ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ನೊಂದಿಗೆ ಉತ್ತೀರ್ಣರಾದ ಮುಟ್ಟಂ ಚಿಟ್ಟೂರು ಪಡೀಟದ ಕಾರ್ತ್ಯಾ ಯಿನಿ ಅಮ್ಮ (೧೦೧) ನಿಧನ ಹೊಂದಿದರು. ಇವರು ದೇಶದಲ್ಲೇ ಅತೀ ಹೆಚ್ಚು ಪ್ರಾಯದ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾದವರಾ ಗಿದ್ದಾರೆ. ೪೦ ಸಾವಿರ ಮಂದಿ ಬರೆದ ಅಕ್ಷರಲಕ್ಷಂ ಪರೀಕ್ಷೆಯಲ್ಲಿ ೯೮ ಶೇ. ಅಂಕಗಳೊಂದಿಗೆ ಇವರು ಪ್ರಥಮ ರ‍್ಯಾಂಕ್ ಗಳಿಸಿದ್ದರು. ಮನೆ ಬಳಿಯ ಕಣಿಚ್ಚನೆಲ್ಲೂರು ಎಲ್‌ಪಿ ಶಾಲೆಯಲ್ಲಿ ೨೦೧೭ರಲ್ಲಿ ಇವರು ಅಕ್ಷರಲಕ್ಷಂ ಪರೀಕ್ಷೆ ಬರೆದಿದ್ದಾರೆ. ೨೦೧೮ರಲ್ಲಿ ಇವರಿಗೆ ನಾರಿಶಕ್ತಿ ಪುರಸ್ಕಾರ ಲಭಿಸಿತ್ತು. ಸಾಕ್ಷರತಾ …

ಸೋಂಕಾಲ್‌ನಲ್ಲಿ ದಿನಪೂರ್ತಿ ಉರಿಯುತ್ತಿರುವ ಮಿನಿಮಾಸ್ಟ್ ಲೈಟ್

ಉಪ್ಪಳ: ಕೆಲವು ಕಡೆ ಬೀದಿ ದೀಪವಿದ್ದರೂ ಉರಿಯದೆ ಕತ್ತಲೆಯಿಂದ ಸಮಸ್ಯೆಗೀಡಾಗು ತ್ತಿರುವ ಘಟನೆ ನಡೆಯುತ್ತಿದೆ. ಆದರೆ ಸೋಂಕಾಲು ಮಸೀದಿ ಬಳಿಯ ಬಸ್ ನಿಲ್ದಾಣ ಪರಿಸರ ದಲ್ಲಿ ಸ್ಥಾಪಿಸಲಾದ ಮಿನಿಮಾಸ್ಟ್ ದೀಪ ರಾತ್ರಿ ಹಗಲೂ ಉರಿಯುತ್ತಿರುವ ದೃಶ್ಯ ಕಂಡುಬAದಿದೆ. ಇದರಿಂದ ಪಂಚಾಯತ್‌ಗೆ ವಿದ್ಯುತ್ ಬಿಲ್‌ನ ಹೊರೆ ಅಧಿಕವಾಗುವ ಸಾದ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ದೀಪದ ಕಂಬದಲ್ಲಿ ಅಳವಡಿಸಿದ ಪ್ಯೂಸ್ ಹಾನಿಗೀಡಾಗಿರುವುದೇ ಹಗಲು ಹೊತ್ತಿನಲ್ಲಿ ಉರಿಯಲು ಕಾರಣ ವೆನ್ನಲಾಗಿದೆ. ಈ ಹಿಂದೆ ಒಂದು ತಿಂಗಳ ತನಕ ನಿರಂತರವಾಗಿ ಹಗಲು …

ಸಂಶಯ: ಕಣ್ಣೂರು ನಿವಾಸಿ ಕುಂಬಳೆಯಲ್ಲಿ ಸೆರೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಂಶಯ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ನಾವೂರು ನಿವಾಸಿ ರಂಜಿತ್ ಕುಮಾರ್ (೨೧) ಎಂಬಾತನನ್ನು ನಿನ್ನೆ ರಾತ್ರಿ ಎಸ್‌ಐ ವಿ.ಕೆ. ಅನೀಶ್ ಸೆರೆಹಿಡಿದಿದ್ದಾರೆ. ತನಿಖೆಗೊಳಪಡಿಸಿದ ಬಳಿಕ ಬಿಡುಗಡೆಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆದ್ಯತಾ ರೇಶನ್ ಕಾರ್ಡ್: ಅರ್ಜಿ ಸಲ್ಲಿಸಲು ೨೦ರ ವರೆಗೆ ಅವಕಾಶ

ಕಾಸರಗೋಡು: ವಿನಾಯಿತಿ ಮಾನದಂಡಗಳಲ್ಲಿ ಒಳಗೊಳ್ಳದ ಕುಟುಂಬಗಳ ಸಾರ್ವಜನಿಕ ವಿಭಾಗದ ರೇಷನ್ ಕಾರ್ಡ್ಗಳನ್ನು ಆದ್ಯತಾ ವಿಭಾಗಕ್ಕೆ ಬದಲಾಯಿಸಲು ಅರ್ಜಿಗಳನ್ನು ಆನ್‌ಲೆÊನ್ ಮೂಲಕ ಮಾತ್ರ ಸ್ವೀಕರಿಸಬೇಕು ಎಂಬ ಸರ್ಕಾರದ ನಿರ್ದೇಶನದ ಮೇರೆಗೆ ಆದ್ಯತಾ ವಿಭಾಗದಲ್ಲಿ, ಜಿಲ್ಲೆಯಲ್ಲಿ ಅರ್ಹರಾದ (೧೦೦೦ ಸ್ಕ್ವೇರ್ ಫೀಟ್ ಮನೆ, ನಾಲ್ಕು ಚಕ್ರ ವಾಹನ, ಒಂದು ಎಕರೆ ಗಿಂತ ಹೆಚ್ಚು ಜಮೀನು, ಎಂಬೀ ಯಾವುದಾದರೂ ಒಂದು ನಿರ್ದಿಷ್ಟ ಮಾನದಂಡ ಹೊಂದಿರುವ ಅರ್ಜಿಯನ್ನು ಸ್ವೀಕರಿಸುವುದಿಲ್ಲ) ಆದ್ಯತಾರಹಿತ ರೇಷನ್ ಕಾರ್ಡ್ ಮಾಲೀಕರಿಗೆ ಅರ್ಜಿಗಳನ್ನು ಆನ್‌ಲÉÊನ್ ಮೂಲಕ ಅಕ್ಟೋಬರ್ ೨೦ ರವರೆಗೆ …

ಅಪೂರ್ವ ರೋಗ ಬಾಧಿಸಿ ಯುವತಿ ಸಂಕಷ್ಟದಲ್ಲಿ ಚಿಕಿತ್ಸೆಗಾಗಿ ದಾನಿಗಳ ಸಹಾಯ ಯಾಚಿಸುವ ಬಡ ಕುಟುಂಬ

ಅಡೂರು: ಮೂವತ್ತು ವರ್ಷ ಗಳಿಂದ ರೋಗ ಬಾಧಿಸಿ ಸಂಕಷ್ಟ ಎದುರಿಸುತ್ತಿರುವ ಯುವತಿ ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ. ದೇಲಂಪಾಡಿ ಪಂಚಾಯತ್‌ನ ಚಾಪೆಕಲ್ಲು ನಿವಾಸಿಯಾದ ಪುರುಷೋತ್ತಮ ಎಂಬವರ ಪತ್ನಿ ಚಾಂದಿನಿ ಮಾರಕ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದಾರೆ. ಈಗಾಗಲೇ ಹಲವು ಶಸ್ತ್ರಚಿಕಿತ್ಸೆ ನಡೆಸಿದ್ದು, ಕೃತಕ ಶ್ವಾಸೋಚ್ವಾಸ ನಡೆಸಲಾಗುತ್ತಿದೆ. ದೆಹಲಿಯ ಏಮ್ಸ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಚಾಂದಿನಿಗೆ ಅಪೂರ್ವರೋಗ ಬಾಧಿಸಿರುವುದು ತಿಳಿದು ಬಂದಿದೆ. ರೋಗ ವಾಸಿ ಯಾಗಬೇಕಾದರೆ  ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ೫೦ ಲಕ್ಷ ರೂಪಾಯಿ ಖರ್ಚು ತಗಲಬಹು …

ಒಳ ರಸ್ತೆಯ ವಿವಿಧೆಡೆ ತ್ಯಾಜ್ಯ ರಾಶಿ: ದುರ್ವಾಸನೆಯಿಂದ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹೆದ್ದಾರಿಯಲ್ಲಿ ತ್ಯಾಜ್ಯ ತೆರವುಗೊಳಿಸಿ ಸಿಸಿ ಕ್ಯಾಮರ ಇರಿಸಿದ ಬಳಿಕ ಈಗ ಒಳ ರಸ್ತೆಗಳಲ್ಲಿ ತ್ಯಾಜ್ಯ ಉಪೇಕ್ಷಿ ಸುವುದು ವ್ಯಾಪಕಗೊಂಡಿದ್ದು, ದುರ್ವಾಸನೆಯಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ. ನಯಬಜಾರ್ ಒಳ ರಸ್ತೆಯ ಕುದುಕೋಟಿ, ಮಣ್ಣಂಗುಳಿ ಮೈದಾನ ರಸ್ತೆ, ಪತ್ವಾಡಿ ಸಹಿತ ವಿವಿಧ ಪ್ರದೇಶಗಳ ಒಳರಸ್ತೆಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಉಪೇಕ್ಷಿಸ ಲಾಗಿದ್ದು, ಮಳೆಗೆ ಕೊಳೆತು ದುರ್ವಾಸನೆ ಬೀರುತ್ತಿದೆ. ಮಾರಕ ರೋಗಕ್ಕೆ ಕಾರಣವಾಗುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಈ ಹಿಂದೆ ಉಪ್ಪಳದಿಂದ ಬಂದ್ಯೋಡು ತನಕ ಹೆದ್ದಾರಿ ಬದಿಯಲ್ಲಿ …

‘ಅರಣ್ಯ ಹಕ್ಕು ಕಾನೂನು ೨೦೦೬’ ವಿಚಾರಗೋಷ್ಠಿ

ಕಾಸರಗೋಡು: ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಆಯೋ ಜಿಸಿದ ಅರಣ್ಯ ಹಕ್ಕು ಕಾನೂನು ೨೦೦೬ ವಿಚಾರಗೋಷ್ಠಿಯನ್ನು ಜಿಲ್ಲಾ ಪಂ. ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಅರಣ್ಯಕ್ಕೆ ಹೊಂದಿಕೊಂಡು ವಾಸಿಸುವ ಪರಿಶಿಷ್ಟ ಪಂಗಡದವರಿಗೆ ಅರಣ್ಯ ಹಕ್ಕು ಕಾನೂನಿನ ಸೌಲಭ್ಯಗಳೆಲ್ಲ ಲಭಿಸುವುದಾಗಿ ಪಿ. ಬೇಬಿ ಬಾಲಕೃಷ್ಣನ್ ನುಡಿದರು. ಕೊಡುಂಗಲ್ಲೂರು ಎಂ.ಇ.ಎಸ್. ಅಸ್ಮಾಬಿ ಕಾಲೇಜು ಅಸಿಸ್ಟೆಂಟ್ ಪ್ರೊ. ಡಾ. ಕೆ.ಎಚ್. ಅಮಿತಾಬಚ್ಚನ್ ಅರಣ್ಯ ಹಕ್ಕು  ಕಾನೂನಿನ ಬಗ್ಗೆ ವಿಷಯ ಮಂಡಿಸಿದರು. ಜಿಲ್ಲಾ ಯೋಜನಾ  ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದು, …

ಮುಂಡೋಳು ಕ್ಷೇತ್ರದಲ್ಲಿ ನವರಾತ್ರಿ ಪೂಜೆ

ಮುಳ್ಳೇರಿಯ: ಕಾರಡ್ಕ ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾಪರಮೇಶ್ವರಿ ಶಾಸ್ತಾರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಈ ತಿಂಗಳ ೧೫ರಿಂದ ೨೪ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನವರಾತ್ರಿ ಉತ್ಸವದಂಗವಾಗಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವಿಶೇಷ ಪೂಜೆ, ಸಂಜೆ ವಿವಿಧ ತಂಡಗಳಿಂದ ಭಜನೆ ನಡೆಯಲಿದೆ. ಜೊತೆಗೆ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಹಾನವಮಿಯಂದು ಆಯುಧ ಪೂಜೆ, ವಾಹನ ಪೂಜೆ ನಡೆಯಲಿದೆ. ವಿದ್ಯಾದಶಮಿಯಂದು ಮಕ್ಕಳಿಗೆ ವಿದ್ಯಾರಂಭ ಮಾಡಲು ಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.  ನವರಾತ್ರಿಯ ವಿಶೇಷ ದಿನಗಳಲ್ಲಿ ಕ್ಷೇತ್ರದ ಪ್ರಧಾನ …

ಪೈವಳಿಕೆ ವಿಲೇಜ್ ಕಚೇರಿಗೆ ಜಿಲ್ಲಾಧಿಕಾರಿ ಸಂದರ್ಶನ

ಉಪ್ಪಳ: ಜಿಲ್ಲಾಧಿಕಾರಿಯವರ ಗ್ರಾಮ ಅದಾಲತ್‌ನ ಅಂಗವಾಗಿ ಜಿಲ್ಲಾಧಿಕಾರಿ ಇಂಬಶೇಖರ್ ನಿನ್ನೆ ಅಪರಾಹ್ನ ಪೈವಳಿಕೆ ಗ್ರಾಮ ಕಚೇರಿ ಸಂದರ್ಶಿಸಿ ಜನರಿಂದ ದೂರು ಸ್ವೀಕರಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಸದಸ್ಯರಾದ ಅಬ್ದುಲ್ಲ ಕೆ., ಸುನೀತ ವಲ್ಟಿ ಡಿ’ಸೋಜ, ಶ್ರೀನಿವಾಸ ಭಂಡಾರಿ, ಸೀತಾರಾಮ ಶೆಟ್ಟಿ, ರಹಮತ್ ರಹಿಮಾನ್, ಜನಕೀಯ ಸಮಿತಿ ಸದಸ್ಯರಾದ ಅಜೀಜ್ ಕಳಾಯಿ, ಅಂದುಂಞಿ ಹಾಜಿ ಚಿಪ್ಪಾರ್, ರೇಖಾ ಚಿಪ್ಪಾರ್, ಪೈವಳಿಕೆ ಗ್ರಾಮಾಧಿಕಾರಿ ಮೊಯ್ದೀನ್ ಕುಂಞಿ ಬಿ., ವಿಶೇಷ ಗ್ರಾಮಾಧಿಕಾರಿ ನವ್ಯ ಎ.ಆರ್., ಸಹಾಯಕ ಗ್ರಾಮಾಧಿಕಾರಿ ಶ್ರೀಜಿತ್ ಆರ್., …