ಕುಂಬಳೆ ಪಂ. ಗ್ರಾಮ ಬಂಡಿಗೆ ಸಚಿವ ಆಂಟನಿ ರಾಜು ಚಾಲನೆ
ಕುಂಬಳೆ: ಕುಂಬಳೆ ಪಂಚಾಯತ್ನ ಗ್ರಾಮ ಪ್ರದೇಶಗಳ ಪ್ರಯಾಣ ಸಮಸ್ಯೆಗೆ ಪರಿಹಾರ ಕಾಣುವ ಅಂಗವಾಗಿ ಕೆಎಸ್ಆರ್ಟಿಸಿಯೊಂದಿಗೆ ಸಹಕರಿಸಿ ಗ್ರಾಮ ಪಂಚಾಯತ್ ಆರಂಭಿಸಿದ ‘ಗ್ರಾಮ ಬಂಡಿ ಸರ್ವೀಸ್’ ನ ಉದ್ಘಾಟನೆಯನ್ನು ರಾಜ್ಯ ಸಾರಿಗೆ ಖಾತೆ ಸಚಿವ ಆಂಟನಿ ರಾಜು ಇಂದು ಬೆಳಿಗ್ಗೆ ನಿರ್ವಹಿಸಿದರು. ಬಂಬ್ರಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಆಂಟನಿ ರಾಜು ಧ್ವಜ ಹಾರಿಸುವ ಮೂಲಕ ಗ್ರಾಮ ಬಂಡಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷೆ ತಾಹಿರ ಯೂಸಫ್, ಪಂ. ಸದಸ್ಯರು, ಸ್ಥಾಯೀ …