ಕೊಲೆ ಆರೋಪಿಯನ್ನು ಕೊಂದ ಪ್ರಕರಣ: ಬಂಧಿತ ಆರೋಪಿಯನ್ನು ಮತ್ತೆ ಕಸ್ಟಡಿಗೆ ಪಡೆಯಲು ಪೊಲೀಸರಿಂದ ಅರ್ಜಿ

ಕುಂಬಳೆ: ಕುಂಬಳೆಗೆ   ಮಾವಿನಕಟ್ಟೆಯ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಮೂಲತಃ ಕುಂಬಳೆ ಶಾಂತಿಪಳ್ಳ ನಿವಾಸಿ ಹಾಗೂ ಕೊಲೆ ಪ್ರಕರಣವೊಂದರ ಆರೋಪಿಯೂ ಆಗಿರುವ ಅಬ್ದುಲ್ ರಶೀದ್ ಯಾನೇ ಸಮೂಸ ರಶೀದ್ (೩೮)ನನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನದಿಂದ ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಾಗುವುದೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಅದರಂತೆ ಆರೋಪಿಯನ್ನು ತಮ್ಮ ಕಸ್ಟಡಿಗೆ ನೀಡುವಂತೆ ಕೋರಿ ನಾಳೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨)ಕ್ಕೆ ಅರ್ಜಿ ಸಲ್ಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ ೧ರ ರಾತ್ರಿ …

ನಟ ಶಿಯಾಸ್ ಕರೀಮ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಡಿಗೆ: ಚಂದೇರ ಪೊಲೀಸರಿಂದ ಬಂಧನ ಸಾಧ್ಯತೆ

ಚೆನ್ನೈ: ಮಾನಭಂಗ ಪ್ರಕರಣ ದಲ್ಲಿ ಆರೋಪಿಯಾದ ನಟ ಶಿಯಾಸ್ ಖರೀಂನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಡಿಗೆ ತೆಗೆ ಯಲಾಗಿದೆ. ಕೊಲ್ಲಿಯಿಂದ ಹಿಂತಿ ರುಗಿ ಬಂದ ಈತನನ್ನು ಕಸ್ಟಮ್ಸ್ ಸಹಾಯದೊಂದಿಗೆ ಸೆರೆ ಹಿಡಿಯ ಲಾಗಿದೆ. ಕೊಲ್ಲಿಯಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಈತನನ್ನು ಕಸ್ಟಮ್ಸ್ ತಡೆದು ನಿಲ್ಲಿಸಿ ಚಂದೇರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಂದೇರ ಪೊಲೀಸ್ ತಂಡ ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿ ಈತನನ್ನು ಬಂಧಿಸಲಿದೆ. ಮಾನಭಂಗ ಪ್ರಕರಣ ದಲ್ಲಿ ಆರೋಪಿಯಾದ ನಟನ ವಿರುದ್ಧ ಲುಕೌಟ್ ನೋಟೀಸ್ ಹೊರಡಿಸಲಾಗಿತ್ತು. …

ಆಟೋ-ಕಾರು ಢಿಕ್ಕಿ ನಾಲ್ವರಿಗೆ ಗಾಯ

ಕುಂಬಳೆ:  ಕಾರು ಹಾಗೂ ಆಟೋರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಆಟೋ ಚಾಲಕನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಕುಂಬಳೆ ಪೆಟ್ರೋಲ್ ಬಂಕ್ ಸಮೀಪ ಅಪಘಾತ ಸಂಭವಿಸಿದೆ. ಆಟೋ ಚಾಲಕ ದೇವಿನಗರ ನಿವಾಸಿ ಮುರಳಿ (೩೫)ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಚೆಟ್ಟಂಗುಳಿ ನಿವಾಸಿಗಳಾದ ಅಬ್ದುಲ್ಲ (೬೭), ಮೊಹಮ್ಮದ್ ಹಾಜಿ (೮೧), ಅಬ್ದು (೫೫)ರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ಮೇಲಿನ ವಿಚಾರಣೆ ಪೂರ್ಣ; ತೀರ್ಪು ಅ.೧೦ಕ್ಕೆ

ಕಾಸರಗೋಡು: ಮಂಜೇಶ್ವರ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಲಂಚ ಸ್ವೀಕರಿಸಲಾಗಿದೆ ಎಂದು ಆರೋಪಿಸಿ ನೀಡಲಾದ ದೂರಿನಂತೆ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣವನ್ನು ರದ್ದುಪಡಿಸುವಂತೆ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತು ಇತರ ನಾಲ್ವರು ಸಲ್ಲಿಸಿರುವ ಅರ್ಜಿ ಮೇಲಿನ ವಿಚಾರಣೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ನಿನ್ನೆ ಪೂರ್ಣಗೊಂಡಿದೆ. ಇದರ ತೀರ್ಪನ್ನು ನ್ಯಾಯಾಲಯ ಅಕ್ಟೋಬರ್ ೧೦ಕ್ಕೆ ಮೀಸಲಿರಿಸಿದೆ. ಪ್ರಸ್ತುತ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿರುವ ಹಿನ್ನೆಯಲ್ಲಿ ಈ ಪ್ರಕರಣದ ವಿಚಾರಣೆ …

ಬೆದ್ರಂಪಳ್ಳದ ಅಧ್ಯಾಪಕನ ಮನೆಯಿಂದ ಮತ್ತೆ ಕಳವಿಗೆ ಯತ್ನ: ಆರೋಪಿಗಳ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆ

ಪೆರ್ಲ: ಕಾಸರಗೋಡು ಜಿಎಚ್‌ಎಸ್‌ಎಸ್‌ನ ಅಧ್ಯಾಪಕ, ಬೆದ್ರಂಪಳ್ಳದ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಮತ್ತೆ ಕಳವಿಗೆ ಯತ್ನ ನಡೆದಿದ್ದು, ಕಳ್ಳರ ದೃಶ್ಯಗಳು ಅಲ್ಲೇ ಪಕ್ಕದ ಮನೆಯೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿದೆ. ಬದಿಯಡ್ಕ ಪೊಲೀಸರು ಅದನ್ನು ವಶಪಡಿಸಿಕೊಂಡು ಅದರ ಜಾಡು  ಹಿಡಿದು ಕಳ್ಳರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಸಿಸಿ ಟಿವಿಯಲ್ಲಿ  ಮೂವರ ದೃಶ್ಯಗಳು ಗೋಚರಿಸಿವೆ. ಅವರು ಮುಖವಾಡ ಧರಿಸಿಕೊಂಡಿದ್ದರು.  ನಿನ್ನೆ ರಾತ್ರಿ ೧.೪೨ಕ್ಕೆ ಈ ಕಳ್ಳರು ಬಂದು ಬಳಿಕ ೧.೫೩ಕ್ಕೆ ಹಿಂತಿರುಗುವ ದೃಶ್ಯವೂ ಅದರಲ್ಲಿ ಪತ್ತೆಯಾಗಿದೆ. …

ರಿಯಾಸ್ ಮೌಲವಿ ಕೊಲೆ ಪ್ರಕರಣದ ವಿಚಾರಣೆ ಪೂರ್ಣ: ಈ ತಿಂಗಳಲ್ಲೇ ತೀರ್ಪು ಸಾಧ್ಯತೆ

ಕಾಸರಗೋಡು: ಕಾಸರಗೋಡು ನಗರದ ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೩೦)ರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ. ಇದರಿಂದಾಗಿ ಈ ಪ್ರಕರಣದ ತೀರ್ಪು ಬಹುತೇಕ ಈ ತಿಂಗಳೊಳ ಗಾಗಿ ಹೊರಬರುವ ಸಾಧ್ಯತೆ ಇದೆ. ಕಾಸರಗೋಡು ಕೇಳುಗುಡ್ಡೆ ಅಯ್ಯಪ್ಪ ನಗರದ ಅಜೀಶ್ ಅಲಿಯಾಸ್ ಅಪ್ಪು (೨೬), ಕೇಳುಗುಡ್ಡೆಯ ನಿತಿನ್ (೨೫) ಮತ್ತು ಕೇಳುಗುಡ್ಡೆಯ ಅಖಿಲೇಶ್ (೩೦) ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಕೊಲೆ ನಡೆದ …

ಸಮುದ್ರದಲ್ಲಿ ಸ್ನಾನಕ್ಕಿಳಿದ ಯುವಕ ಅಲೆಗೆ ಸಿಲುಕಿ ಸಾವು

ಕಾಸರಗೋಡು: ಸ್ನೇಹಿತ ರೊಂದಿಗೆ ಸಮುದ್ರದಲ್ಲಿ ಸ್ನಾನಕ್ಕಿಳಿದ ಯುವಕ ಸಮುದ್ರದ ಬಲವಾದ ಅಲೆಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪಡನ್ನಕ್ಕಾಡ್ ನಿವಾಸಿ ನದೀಂ ಇಸ್ಮಾಯಿಲ್ (೩೩) ಸಾವನ್ನಪ್ಪಿದ ದುರ್ದೈವಿ. ನೀಲೇಶ್ವರಕ್ಕೆ ಸಮೀಪದ ಮರಕ್ಕಾಪು ಬೀಚ್‌ನಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ. ಸಮುದ್ರದ ಅಲೆಗೆ ಸಿಲುಕಿದ ನದೀಂ ಇಸ್ಮಾಯಿಲ್‌ನನ್ನು ಇತರ ಸ್ನೇಹಿತರು ಮತ್ತು ಊರವರು ಸೇರಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಪ್ರಾಣ ಉಳಿಸಲು ಸಾಧ್ಯಾಗಲಿಲ್ಲ. ಪಡನ್ನಕ್ಕಾಡ್ ನಶಕ್ತಿ ರಸ್ತೆಯ ತಸ್ನಿ ಮಂಜಿಲ್‌ನ ಎನ್.ಕೆ. ಇಸ್ಮಾಯಿಲ್ ಹಾಜಿ-ಸುಬೈದಾ ದಂಪತಿ …

ವಿಮಾನ ನಿಲ್ದಾಣದಲ್ಲಿ ೧೫೧೭ ಗ್ರಾಂ ಚಿನ್ನ ವಶ ಕುಂಬಳೆ ನಿವಾಸಿ ಸೆರೆ

ಕಣ್ಣೂರು: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶಾರ್ಜಾದಿಂದ ತಲು ಪಿದ ಕುಂಬಳೆ ನಿವಾಸಿ ಸಲ್ಮಾನ್ ಫರೀದ್‌ನಿಂದ  ೧೫೧೭ಗ್ರಾಂ ಚಿನ್ನ ವಶಪಡಿಸಲಾಗಿದೆ. ಇದರ ಮೌಲ್ಯ ೮೭.೭೫ ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಶಾರ್ಜಾದಿಂದ ತಲುಪಿದ ಈತ ಎರಡು ಟ್ರೋಲಿ ಬ್ಯಾಗ್‌ಗಳಲ್ಲಿ ಚಿನ್ನಕ್ಕೆ ಮೆಕ್ಯೂರಿ  ಲೇಪ ಹಚ್ಚಿ ಬಚ್ಚಿಟ್ಟಿದ್ದನು. ಸಂಶಯ ತೋರಿದ ಡಿಆರ್‌ಐಎ ಹಾಗೂ ಕಸ್ಟಮ್ಸ್ ನಡೆಸಿ ತಪಾಸಣೆಯಲ್ಲಿ ಚಿನ್ನ ಪತ್ತೆಹಚ್ಚಲಾಗಿದೆ.

ಬಾಲಕನಿಗೆ ಸಲಿಂಗರತಿ ಕಿರುಕುಳ: ಮದ್ರಸಾ ಅಧ್ಯಾಪಕ ಸೆರೆ

ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕನಿಗೆ ಸಲಿಂ ಗರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಅಧ್ಯಾಪಕ ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಪೆರಿಯ ಕುಣಿಯ ನಿವಾಸಿ ಹಾಗೂ ಪಡನ್ನದ ಮದ್ರಸವೊಂದರ ಅಧ್ಯಾಪಕ ಎನ್.ಎ. ಮೊಹಮ್ಮದ್ ಶಾಹೀದ್ (೨೭) ಬಂಧಿತನಾದ ಆರೋಪಿ.‘ಸಕಾತ್’ ಪಡೆಯಲೆಂದು  ಬಂದ ಬಾಲಕನೋರ್ವನಿಗೆ ಕಳೆದ ಎಪ್ರಿಲ್ ೮ರಂದು ಈ ಅಧ್ಯಾಪಕ ಪಡನ್ನದಲ್ಲಿರುವ ಆತನ ಕೊಠಡಿ ಯೊಳಗೂ, ನಂತರ ಎ.೧೯ರಂದು ಕಾಸರಗೋಡು ರೈಲು ನಿಲ್ದಾಣ ಪರಿಸರದ ಕೊಠಡಿಯೊಂದಕ್ಕೆ ಕರೆಸಿ ಅಲ್ಲೂ ಸಲಿಂಗರತಿ ಕಿರುಕುಳ ನೀಡಿ ರುವುದಾಗಿ ಆ …

ಬಿಲ್ಲುಗಾರಿಕೆ: ಭಾರತಕ್ಕೆ ಚಿನ್ನ

ಹ್ಯಾಂಗ್‌ಚೌ: ೨೦೨೩ರ ಏಷ್ಯನ್ ಗೇಮ್ಸ್‌ನಲ್ಲಿ  ಭಾರತಕ್ಕೆ ೧೯ನೇ ಚಿನ್ನದ ಪದಕ ಲಭಿಸಿದೆ. ಬಿಲ್ಲು ಎಸೆತ ಸ್ಪರ್ಧೆಯಲ್ಲಿ ಮಹಿಳೆಯರ ಕಾಂಪೌಂಡ್ ಟೀಂ ವಿಭಾಗದಲ್ಲಿ ಜ್ಯೋತಿರೇಖಾ, ಅತಿಥಿ ಗೋಪಿಚಂದ್‌ಸ್ವಾಮಿ, ಫರ್ನೀತ್ ಕೌರ್ ಎಂಬಿವರು ಸೇರಿದ ತಂಡಕ್ಕೆ ಚಿನ್ನ  ಲಭಿಸಿರುವುದು. ಫೈನಲ್ ಸ್ಪರ್ಧೆಯಲ್ಲಿ  ಚೈನೀಸ್ ತಾಯ್‌ಪೇಯ್ ತಂಡವನ್ನು ೨೩೦-೨೨೯ ಎಂಬ ಸ್ಕೋರ್‌ನಿಂದ  ಹಿಂದಿಕ್ಕಿ ಭಾರತ ತಂಡ ಕಿರೀಟ ಗಳಿಸಿದೆ. ಪ್ರಥಮ ಸುತ್ತಿನಲ್ಲಿ  ಹಾಗೂ ಮೂರನೇ ಸುತ್ತಿನಲ್ಲಿ ಹಿಂದಿದ್ದ ಭಾರತ ಮತ್ತೆ ಪುಟಿದೆದ್ದಿದೆ. ಇದರೊಂದಿಗೆ ಭಾರತಕ್ಕೆ ೧೯ ಚಿನ್ನ ಮತ್ತು ೩೧ ಬೆಳ್ಳಿ, …