ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಮಾರ್ಚ್

ಉಪ್ಪಳ: ಮುಸ್ಲಿಂ ಲೀಗ್ ಆಡಳಿತದ ವೈಫಲ್ಯ ಹಾಗೂ ದುರಾಡಳಿತದ ವಿರುದ್ದ ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬೆಳಿಗ್ಗೆ ಮಾರ್ಚ್ ನಡೆಸಲಾಯಿತು. ಕೈಕಂಬದಿAದ ಹೊರಟ ಮಾರ್ಚ್ ಪಂಚಾಯತ್ ಕಚೇರಿ ತನಕ ನಡೆಯಿತು. ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಉದ್ಘಾಟಿಸಿದರು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ರಾಮಚಂದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುSಂಡರಾದ ಸುನಿಲ್ ಕುಮಾರ್ ಅನಂತಪುರ, ವಸಂತ ಕುಮಾರ್ ಮಯ್ಯ, ಅನಿಲ್ …

ಕುಂಬಳೆ ಪಂ. ಗ್ರಾಮ ಬಂಡಿಗೆ ೬ರಂದು ಸಚಿವ ಆಂಟನಿರಾಜು ಚಾಲನೆ

ಕುಂಬಳೆ: ಕುಂಬಳೆ ಪರಿಸರದ ಸಂಚಾರ ಸಮಸ್ಯೆಗೆ ಪರಿಹಾರ ಕಾಣುವುದಕ್ಕಾಗಿ ಕೆಎಸ್‌ಆರ್‌ಟಿಸಿ ಯೊಂದಿಗೆ ಸಹಕರಿಸಿ ಕುಂಬಳೆ ಪಂಚಾಯತ್‌ನ ‘ಗ್ರಾಮ ಬಂಡಿ’ ಸಂಚಾರ ಆರಂಭಿಸಲಿದೆ ಎಂದು ಪಂ. ಆಡಳಿತಾಧಿಕಾರಿಗಳು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಈ ತಿಂಗಳ ೫ರಂದು ಬೆಳಿಗ್ಗೆ ೧೦ಕ್ಕೆ ಬಂಬ್ರಾಣದಲ್ಲಿ ಸಾರಿಗೆ ಸಚಿವ ಆಂಟನಿರಾಜು ಗ್ರಾಮ ಬಂಡಿಗೆ ಚಾಲನೆ ನೀಡುವರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯಲ್ಲಿ ಈ ರೀತಿಯಲ್ಲಿ ಬಸ್ ಸಂಚಾರ ಆರಂಭಿಸುವುದು ಪ್ರಥಮವಾಗಿ ಕುಂಬಳೆ ಪಂಚಾಯತ್ ಆಗಿದೆ ಎಂದು ಅಧ್ಯಕ್ಷೆ ಯು.ಪಿ. ತಾಹಿರ ಯೂಸಫ್ …

ಪಳ್ಳತ್ತಡ್ಕದಲ್ಲಿ ಪುರುಷೋತ್ತಮ ಯಾಗ ನ. ೧೯ರಂದು: ಆಮಂತ್ರಣಪತ್ರಿಕೆ ಬಿಡುಗಡೆ

ಬದಿಯಡ್ಕ: ನವಂಬರ್ ೧೯ ರಂದು ಪಳ್ಳತ್ತಡ್ಕ ಮುದ್ದು ಮಂದಿ ರದಲ್ಲಿ ಪುರುಷೋತ್ತಮ ಯಾಗ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗ, ಧನ್ವಂತರಿ ಪೂಜೆ, ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಬದಿಯಡ್ಕ ಗಣೇಶ ಮಂದಿರದಲ್ಲಿ ಬಿಡುಗಡೆಗೊಳಿಸ ಲಾಯಿತು. ಧಾರ್ಮಿಕ ಮುಂದಾಳು ಜಯದೇವ ಖಂಡಿಗೆ ಬಿಡುಗಡೆಗೊಳಿ ಸಿದರು. ಈ ವೇಳೆ ಯಾಗ ಸಮಿತಿಯ ಪದಾಧಿಕಾರಿಗಳಾದ ಪುಂಡರೀಕಾಕ್ಷ  ಬೆಳ್ಳೂರು, ನಾರಾಯಣ ಶೆಟ್ಟಿ ನೀರ್ಚಾಲು, ಬಾಲಕೃಷ್ಣ ನೀರ್ಚಾಲು, ಮಂಜುನಾಥ ಮಾನ್ಯ, ಲೋಹಿತಾಕ್ಷ ಬದಿಯಡ್ಕ, ಲಕ್ಷ್ಮಣ ಪ್ರಭು ಬದಿಯಡ್ಕ, ರಾಜನ್ ಮುಳಿಯಾರು, …

ಎಂಡೋಸಲ್ಫಾನ್: ೧೦೩೧ ಮಂದಿಯನ್ನು ಯಾದಿಯಲ್ಲಿ ಸೇರಿಸಲು ಆಗ್ರಹಿಸಿ ಕಲೆಕ್ಟ್ರೇಟ್ ಧರಣಿ ನಾಳೆ

ಕಾಸರಗೋಡು: ಯಾದಿಯಲ್ಲಿ ಸೇರಿಸಿ ವಿನಾಕಾರಣ ಹೊರತು ಪಡಿಸಿದ ೧೦೩೧ ಎಂಡೋಸಲ್ಫಾನ್ ಸಂತ್ರಸ್ತರನ್ನು ಮತ್ತೆ ಸೇರಿಸಬೇಕೆಂದು ಆಗ್ರಹಿಸಿ ನಾಳೆ ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸತ್ಯಾಗ್ರಹ ನಡೆಯಲಿದೆ. ಸತ್ಯಾಗ್ರಹವನ್ನು ಕವಿ ನಾರಾಯಣನ್ ಉದ್ಘಾಟಿಸುವರು. ಜನಪ್ರತಿನಿಧಿಗಳು, ವಿವಿಧ ರಾಜಕೀಯ, ಸಾಂಸ್ಕೃತಿಕ ಮುಖಂಡರು ಭಾಗವಹಿಸುವರು. ೨೦೧೭ ಎಪ್ರಿಲ್ ೫ರಿಂದ ೯ರವರೆಗೆ ಐದು ಸ್ಥಳಗಳಲ್ಲಾಗಿ ನಡೆದ ಪ್ರತ್ಯೇಕ ಮೆಡಿಕಲ್ ಕ್ಯಾಂಪ್‌ನಿಂದ ೧೯೦೫ ಎಂಡೋಸಲ್ಫಾನ್ ಸಂತ್ರಸ್ತರನ್ನು ಯಾದಿಯಲ್ಲಿ ಸೇರಿಸಲಾಗಿದ್ದರೂ ಯಾವುದೇ ಕಾರಣವಿಲ್ಲದೆ ಬಳಿಕ ೨೮೭ ಮಂದಿಯ ಯಾದಿಯಾಗಿ ಕಡಿಮೆ …

ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಂದ ಪ್ರಕರಣ: ಮಾವಿನಕಟ್ಟೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಸ್ನೇಹಿತ ಕಸ್ಟಡಿಗೆ

ಕುಂಬಳೆ: ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಲೆಗೈದ ಪ್ರಕರಣದ ಆರೋಪಿ ಯನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಇಂದು  ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಮರಣೋತ್ತರ ಪರೀಕ್ಷೆ ಬಳಿಕ ಆರೋ ಪಿಯ ಅಧಿಕೃತ ಬಂಧನ  ದಾಖಲಿಸ ಲಾಗುವುದು. ಈ ಹಿಂದೆ ಪೆರುವಾ ಡ್‌ನಲ್ಲಿ ವಾಸಿಸುತ್ತಿದ್ದ ಅಭಿಲಾಷ್ ಯಾನೆ ಹಬೀಬ್ ಯಾನೆ ಬಹಬಿ (೩೨) ಎಂಬಾತನನ್ನು ಕುಂಬಳೆ ಪೊ ಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ತನಿಖೆ ವೇಳೆ ಈತ ತಪ್ಪೊಪ್ಪಿಕೊಂ ಡಿದ್ದಾನೆಂದು ಸೂಚನೆಯಿದೆ. ಮೊನ್ನೆ ರಾತ್ರಿ ೧೧.೩೦ರ ವೇಳೆ …

ಆಟವಾಡುತ್ತಿದ್ದ ವೇಳೆ ಬಾವಿಗೆ ಬಿದ್ದು ಬಾಲಕ ಮೃತ್ಯು

ಕಾಸರಗೋಡು: ಆಟವಾಡುತ್ತಿದ್ದ ವೇಳೆ ಆಕಸ್ಮಾತ್ ಬಾವಿಗೆ ಬಿದ್ದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲಕ್ಕೆ ಸಮೀಪದ ಕುಣಿಯ ಹದಾದ್ ನಗರದ ಅಬ್ದುಲ್ ರಹ್ಮಾನ್ ಬಾಖಫಿ ಎಂಬವರ ಪುತ್ರ ಐದನೇ ತರಗತಿ ವಿದ್ಯಾರ್ಥಿ ಆಶಿಖ್ (೧೦) ಸಾವನ್ನಪ್ಪಿದ ದುರ್ದೈವಿ ಬಾಲಕ. ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ. ಈ ಬಾಲಕ ಆಟವಾಡುತ್ತಿದ್ದ ವೇಳೆ ಮನೆ ಪಕ್ಕದ ಬಾವಿಗೆ ಆಕಸ್ಮಾತ್ ಬಿದ್ದಿದ್ದಾನೆ. ಮನೆಯಿಂದ ಹೊರ ಹೋದ  ಬಾಲಕ ಹಿಂತಿರುಗದೆ ಇರುವುದನ್ನು ಗಮನಿಸಿದ ಮನೆಯವರು ಹುಡುಕಾಟದಲ್ಲಿ ತೊಡಗಿದಾಗ ಬಾಲಕ ಬಾವಿಗೆ …

ಕಾಸರಗೋಡಿಗೂ ಬಂದಿದ್ದ ಐಸಿಸ್ ಉಗ್ರ ಶಹನವಾಸ್ ಬಾಂಬ್ ಸ್ಫೋಟಕ್ಕೆ ಯೋಜನೆ ಹಾಕಿದ್ದ

ನವದೆಹಲಿ: ರಾಜಸ್ಥಾನದಿಂದ ನಿನ್ನೆ ಬಂಧಿತನಾದ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಶಹನವಾಸ್ ಅಲಿಯಾಸ್ ಶಾಫಿ ಉಸಾಮ  ಈ ಹಿಂದೆ ತನ್ನ ಸಹಚರರೊಂದಿಗೆ  ಉಡುಪಿ ಮೂಲಕ ಕಾಸರಗೋಡು ಮತ್ತು ಕಣ್ಣೂರಿಗೂ  ಸಂದರ್ಶಿಸಿದ್ದನು.   ಮಾತ್ರವಲ್ಲ ಕೇರಳದ ಪಶ್ಚಿಮ ಘಟ್ಟಕ್ಕೆ ಸೇರಿದ ಪ್ರದೇಶಗಳಲ್ಲಿ ತಮ್ಮ ಸಂಘಟನೆಯ ಐಸಿಸ್ ಧ್ವಜವನ್ನು ಸ್ಥಾಪಿಸಿ ಅಲ್ಲಿಂದ ಹಲವು  ಫೋ ಟೋಗಳನ್ನು ತೆಗೆದಿದ್ದನೆಂದು  ಎನ್‌ಐಎ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆ ಫೋಟೋಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ. ಮಾತ್ರವಲ್ಲ ಆತ ಕೇರಳದಲ್ಲೂ ಬಾಂಬ್ ಸ್ಫೋಟ ನಡೆಸಲು  ಯೋಜನೆ …

ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರ ಮೃತ್ಯು

ಉಪ್ಪಳ: ಬಸ್-ಸ್ಕೂಟರ್ ಮಧ್ಯೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಓರ್ವ ಮೃತಪಟ್ಟಿದ್ದಾರೆ. ಸೋಂಕಾಲು ಕೊಡಂಗೆ ರಸ್ತೆಯ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ವ್ಯಾಪಾರಿ ಮೆಹಮೂದ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್ [20] ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೋರ್ವ ಸವಾರ ಉಪ್ಪಳ ಬಳಿಯ ಮಣಿಮುಂಡ ನಿವಾಸಿ ಮಂಗಲ್ಪಾಡಿ ಪಂಚಾಯತ್ ಸದಸ್ಯ ಮಹಮೂದ್ ಎಂಬವರ ಪುತ್ರ ಮೊಹಮ್ಮದ್ ಮಾಝಿನ್ [24] ಗಂಭೀರ ಗಾಯಗೊಂಡು ತೀವ್ರ ನಿಗಾ ವಿಭಾಗ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮೊನ್ನೆ ರಾತ್ರಿ ಇಬ್ಬರು …

ಉಪ್ಪಳ ಬಳಿಯ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹಗೊಂಡು ಹೊಂಡ ಸೃಷ್ಟಿ: ವಾಹನ ಸಂಚಾರಕ್ಕೆ ಸಮಸ್ಯೆ

ಉಪ್ಪಳ: ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿರುವಂತೆ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಉಪ್ಪಳ ಬಳಿಯ ಹಿದಾಯತ್ ಬಜಾರ್‌ನಲ್ಲಿ ನಿರ್ಮಾಣ ಹಂತದ ಹೆದ್ದಾರಿ ರಸ್ತೆಯಲ್ಲಿ ವ್ಯಾಪಕ ಮಳೆ ನೀರು ಕಟ್ಟಿ ನಿಂತು ಹೊಂಡ ಸೃಷ್ಟಿಯಾಗುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದಾಗಿ ದೂರಲಾಗಿದೆ. ನೀರು ತುಂಬಿಕೊAಡ ರಸ್ತೆಯಿಂದ ನೂರಾರು ವಾಹನಗಳು ಆಮೆ ನಣಗೆಯಲ್ಲಿ ಸಂಚರಿಸಬೇಕಾಗುತ್ತಿದ್ದು, ಈ ವೇಳೆ ಭಾರೀ ಪ್ರಮಾಣದಲ್ಲಿ ದಟ್ಟಣೆ ಉಂಟಾಗುತ್ತಿದೆ. ಸಂಬAಧಪಟ್ಟ ಹೆದ್ದಾರಿ ಅಧಿಕಾರಿಗಳು ಹೊಂಡವನ್ನು ದುರಸ್ಥಿಗೊಳಿಸಿ ವಾಹನ ಸಂಚಾರ ಸುಗಮಗೊಳಿಸಲು ಒತ್ತಾಯಿಸಿದ್ದಾರೆ.

ಪ್ಲಸ್‌ಟು ವಿದ್ಯಾರ್ಥಿನಿಯ ಅಪಹರಣಯತ್ನ:ಕಾರಿಗೆ ತಡೆಯೊಡ್ಡಿ ದುಷ್ಕರ್ಮಿಗಳ ಸೆರೆಹಿಡಿದ ನಾಗರಿಕರು

ಹೊಸದುರ್ಗ: ಪ್ಲಸ್‌ಟು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಲು ಯತ್ನ ನಡೆದಿದ್ದು, ಘಟನೆ ಗಮನಕ್ಕೆ ಬಂದ ನಾಗರಿಕರು ದುಷ್ಕರ್ಮಿಗಳನ್ನು ಬೆನ್ನಟ್ಟಿ ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಯುವಕರನ್ನು ಸೆರೆಹಿಡಿದಿರುವುದನ್ನು ತಿಳಿದು ತಲುಪಿದ ಜನಪ್ರತಿನಿಧಿಯ ನೇತೃತ್ವದ ತಂಡ ಹಲ್ಲೆ ನಡೆಸಿರುವುದಾಗಿ ಆರೋಪವುಂಟಾಗಿದೆ.  ಹಲ್ಲೆಯಿಂದ ಗಾಯಗೊಂಡ ಇಬ್ಬರು ನೀಲೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬಾಲಕಿಯನ್ನು ಮೂವರ ತಂಡ ಕಾರಿನಲ್ಲಿ ಅಪಹರಿಸಿದೆ. ವಿಷಯ ತಿಳಿದು ತಲುಪಿದ ನಾಗರಿಕರು ಚಿರಪುರಂ ನಿವಾಸಿಗಳಾದ ಮೂವರನ್ನು ಓರ್ಚಾ ಎಂಬಲ್ಲಿ ಕಾರಿಗೆ ತಡೆಯೊಡ್ಡಿ ಸೆರೆಹಿಡಿದಿದ್ದಾರೆ. ಬಳಿಕ ಯುವಕರಿಗೆ  ತಕ್ಕ …