ಮಾವನ ತಲೆಗೆ ಹೊಡೆದು ಕೊಲೆ

ಕಾಸರಗೋಡು: ಅಳಿಯ ಮಾವನ ತಲೆಗೆ ಹೊಡೆದು ಕೊಲೆಗೈದ ಘಟನೆ ತೃಕ್ಕರಿಪುರ ಬಳಿ ಇಂದು ಬೆಳಿಗ್ಗೆ ನಡೆದಿದೆ. ತೃಕ್ಕರಿಪುರ ಪರುತ್ತಿಚ್ಚಾಲ್ ನಿವಾಸಿ ಕೇಳಪ್ಪನ್ ಎಂಬವರ ಪುತ್ರ ಬಾಲಕೃಷ್ಣನ್ (೫೪) ಎಂಬವರು ಕೊಲೆಗೈಯ್ಯಲ್ಪಟ್ಟ ವ್ಯಕ್ತಿ. ಇವರು ಇಂದು ಬೆಳಿಗ್ಗೆ ಮನೆಯಲ್ಲಿ  ತಲೆಗೆ ಏಟು ಬಿದ್ದು ಗಂಭೀರಾವಸ್ಥೆಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ನೀಡಿದರೂ  ಆ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತ ಬಾಲಕೃಷ್ಣನ್ ವೆಲ್ಡಿಂಗ್ ಕಾರ್ಮಿಕನಾ ಗಿದ್ದಾರೆ. ಪತ್ನಿಯೊಂದಿಗೆ  ವಿರಸಗೊಂಡು ಅವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.  …

ಜಪ್ತಿ ಮಾಡಿದ ಆರ್‌ಡಿಒರವರ ಜೀಪಿಗೆ ೬ ಲಕ್ಷ ರೂ.  ಮೌಲ್ಯ

ಹೊಸದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಮಹಿಳೆಯ ದೃಷ್ಟಿ ನಷ್ಟಗೊಂಡ ಪ್ರಕರಣದಲ್ಲಿ ಜಪ್ತಿ ಮಾಡಿದ ಕಾಞಂಗಾಡ್ ಆರ್‌ಡಿ ಒರವರ ಜೀಪ್‌ಗೆ ಮೋಟಾರು ವಾಹನ ಇಲಾಖೆ ದರ ನಿಗದಿಪಡಿಸಿರುವುದು ಆರು ಲಕ್ಷ ರೂಪಾಯಿ. ನಷ್ಟ ಪರಿಹಾರ ಮೊತ್ತಕ್ಕಾಗಿ ಇದನ್ನು ಮಾರಾಟ ಮಾಡಲಿರುವ ಮುಂದಿನ ಕ್ರಮ ಕೈಗೊಳ್ಳಬೇಕೆಂಬ ಅರ್ಜಿ ಯನ್ನು ನಾಳೆ ಪರಿಗಣಿಸಲಾಗುವುದು. ಚೆರುವತ್ತೂರು ಕಾಡಾಂ ಗೋಡ್‌ನ ಮಲ್ಲಕ್ಕರ ಕಮಲಾಕ್ಷಿಯವರ ಎಡಗಣ್ಣಿನ ದೃಷ್ಟಿ ನಷ್ಟಗೊಂಡ ಪ್ರಕರಣದಲ್ಲಿ ಹೊಸದುರ್ಗ ಸಬ್ ಕೋರ್ಟ್ ನ್ಯಾಯಾಧೀಶ ಎಂ.ಸಿ. ಬಿಜುರ ಜೀಪು ಜಪ್ತಿ ನಡೆಸಲಾಗಿದೆ. ಕಾಞಂಗಾಡ್ …

ಕುಖ್ಯಾತ ವಾಹನ ಕಳವು ಆರೋಪಿಗಾಗಿ ಲುಕೌಟ್ ನೋಟೀಸ್ ಜ್ಯಾರಿ

ಕಾಸರಗೋಡು: ಕದ್ದ ಟಿಪ್ಪರ್ ಲಾರಿಯನ್ನು ಹರಿಸಿ ಪೊಲೀಸರನ್ನು ಕೊಲೆಗೈಯ್ಯಲೆತ್ನಿಸಿದ ಕುಖ್ಯಾತ ವಾಹನ ಕಳವು ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ. ಚಟ್ಟಂಚಾಲ್ ತೆಕ್ಕಿಲ್ ನಂಬಿಡಿಪಳ್ಳಂ ಹೌಸ್‌ನ ಮೊಹಮ್ಮದ್ ರಂಝಾನ್ ಅಲಿಯಾಸ್ ರಂಝಾನ್ (೨೫) ಎಂಬಾತನ ಪತ್ತೆಗಾಗಿ ಚೀಮೇನಿ ಪೊಲೀಸರು ಈ ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದಾರೆ. ಈ ಆರೋಪಿಯ ವಿರುದ್ಧ ಕಾಸರಗೋಡು, ಕುಂಬಳೆ, ಮಂಜೇಶ್ವರ, ಬದಿಯಡ್ಕ, ಬೇಕಲ, ಹೊಸದುರ್ಗ, ಕಣ್ಣಾಪುರಂ ಮತ್ತು ವಡಗರ ಪೊಲೀಸ್ ಠಾಣೆಗಳಲ್ಲೂ ಹಲವು ಕೇಸುಗಳಿವೆ ಎಂದು ಲುಕೌಟ್ ನೋಟೀಸ್‌ನಲ್ಲಿ ತಿಳಿಸಲಾಗಿದೆ. ಕಳೆದ …

ಪುನರ್ ವಿಂಗಡಣೆ: ಲೋಕಸಭಾ ಕ್ಷೇತ್ರಗಳ ಸಂಖ್ಯೆ ೫೪೩ರಿಂದ ೭೫೩ಕ್ಕೇರಿಕೆ ಸಾಧ್ಯತೆ

ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗೆ ಕೇಂದ್ರ ಸರಕಾರ ಆರಂಭಿಕ ಚಾಲನೆ ನೀಡಿದೆ. ಆದರೆ ದಕ್ಷಿಣ ಭಾರತಕ್ಕೆ ಇದು ದೊಡ್ಡ ಆಘಾತ ನೀಡಲಿದೆಯೆಂಬ ದೂರುಗಳೂ ಇದರ ಜತೆಗೆ ಹುಟ್ಟಿ ಕೊಂಡಿದೆ. ಏಕೆಂದರೆ ಜನಸಂಖ್ಯಾ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗುತ್ತಿದೆ. ಹಾಗೆ ನಡೆದರೆ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು  ತೆಲಂ ಗಾನ ರಾಜ್ಯಗಳು ಸಂಕಷ್ಟಕ್ಕೆ ಸಿಲುಕ ಲಿವೆ ಎಂಬ ದೂರುಗಳು ಬರತೊಡಗಿದೆ. ಈಗಿನ ಲೆಕ್ಕಾಚಾರ ಪ್ರಕಾರ ಭಾರತದಲ್ಲಿ ಈಗ ಇರುವ ಜನಸಂಖ್ಯೆಯ …

ಕುಂಬಳೆ ಮಂಡಲ ಸಮಿತಿಯಿಂದ ದೀನ್ ದಯಾಳ್ ಸಂಸ್ಮರಣೆ ಉದ್ಘಾಟನೆ

ಕುಂಬಳೆ : ಬಿಜೆಪಿ ಕುಂಬಳೆ ಮಂ ಡಲ ಸಮಿತಿ ವತಿಯಿಂದ ಪಂಡಿತ ದೀನ್ ದಯಾಳ್ ಉಪದ್ಯಾಯರ ಜನ್ಮ ದಿನಾಚರಣೆ ಯನ್ನು ಅವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಕುಂಬಳೆ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೆ ಮುರಳೀಧರ ಯಾದ್ವೃ ಆ¥್ತ[ಟ್ಛಿ ಪಂಡಿತ ದಿನದಯಾ¼್ವ ಉಪಾಧ್ಯಯ ರವರ ಕುರಿತು ಮಾತನಾಡಿದರು . ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷ ಕೆ ರಮೇಶ …

ಸೊಸೈಟಿಯಲ್ಲಿ ಅಡವು ಇರಿಸಿದ ೨೮.೫ ಪವನ್ ಚಿನ್ನಾಭರಣ ನಾಪತ್ತೆ: ನಿವೃತ್ತ ಕಾರ್ಯದರ್ಶಿ ವಿರುದ್ಧ ಕೇಸು

ಬಂದಡ್ಕ:  ನಕಲಿ ಸಹಿ ಹಾಕಿ  ೨೮.೫ ಪವನ್ ಚಿನ್ನಾ ಭರಣವನ್ನು ವಶಪಡಿಸಿರುವುದಾಗಿ ದೂರಲಾಗಿದೆ. ಮಹಿಳೆಯ ದೂರಿನಂತೆ ಸೊಸೈಟಿಯ ನಿವೃತ್ತ ಕಾರ್ಯದರ್ಶಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುತ್ತಿಕ್ಕೋಲ್, ಪರಪ್ಪದ ಕುಂಞಂಬು ನಾಯರ್‌ರ ಪತ್ನಿ ಪಿ. ಇಂದಿರರ  ದೂರಿನಂತೆ ಕುತ್ತಿಕ್ಕೋಲ್ ಅಗ್ರಿಕಲ್ಚರಲ್ ಸೊಸೈಟಿ ಯ ನಿವೃತ್ತ ಕಾರ್ಯ ದರ್ಶಿ ಬೇತೂರುಪಾರದ ಮಣಿಕಂಠನ್‌ರ ವಿರುದ್ಧ ಕೇಸು ದಾಖಲಿಸಲಾಗಿದೆ. ೨೦೦೯ ಮಾರ್ಚ್‌ನಿಂದ ೨೦೧೮ ಅಗೋಸ್ತ್‌ವರೆಗಿರುವ ವಿವಿಧ ಕಾಲಾವಧಿಗಳಲ್ಲಿ ಅಡವು ಇರಿಸಿದ್ದ ಚಿನ್ನಾಭರಣವನ್ನು ತಾನು ತಿಳಿಯದೆ ನಕಲಿ ಸಹಿ ಹಾಕಿ ವಶಪಡಿಸಿರು …

ಅಂಗಳದಲ್ಲಿ ನಿಲ್ಲಿಸಲಾಗಿದ್ದ ಸೈಕಲ್ ಕಳವು: ಇಬ್ಬರ ಸೆರೆ

ಬೋವಿಕ್ಕಾನ: ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಗೇರ್ ಸೈಕಲ್ ಕಳವುಗೈದ ಘಟನೆ ಯೊಂದು ಬೋವಿಕ್ಕಾನದಲ್ಲಿ ನಡೆದಿದೆ. ಬೋವಿಕ್ಕಾನಕ್ಕೆ ಸಮೀಪದ ಮೊದಲಪ್ಪಾರ ನಿವಾಸಿ ಮೊದೀನ್ ಕುಂಞಿ ಎಂಬವರ ಮನೆ ಅಂಗಳದಿಂದ ಅವರ ಪುತ್ರ ಸಾಬೀತ್ತ್‌ನ ಸುಮಾರು ೨೦,೦೦೦ ರೂ. ಮೌಲ್ಯದ ಗೇರ್ ಸೈಕಲನ್ನು ಈ ರೀತಿ ಕಳವ ಗೈಯ್ಯಲಾಗಿದೆ. ಆ ಮನೆಯ ೨ ಅಂಗಳಕ್ಕೆ ಇಂಟರ್‌ಲಾಕ್ ಹಾಕಲಾಗುತ್ತಿತ್ತು. ಅದರಿಂದಾಗಿ ಸೈಕಲನ್ನು ಅಂಗಳದಿಂದ ಹೊರಕ್ಕೆ ಇರಿಸಲಾಗಿತ್ತು. ಮೊನ್ನೆ ಮುಂಜಾನೆ ಈ ಕಳವು ನಡೆದಿದೆ. ಆ ಬಗ್ಗೆ ಮನೆಯವರು ನೀಡಿದ ದೂರಿನಂತೆ ಆದೂರು …

ನಾರಂಪಾಡಿ ನಿವಾಸಿ ಹಾಗೂ ಪುತ್ರನನ್ನು ಕಟ್ಟಿಹಾಕಿ ದರೋಡೆ: ಬಾಡೂರಿನಲ್ಲಿ ಕರ್ನಾಟಕ ಪೊಲೀಸ್ ದಾಳಿ: ಓರ್ವ ವಶ

ಸೀತಾಂಗೋಳಿ: ನಾರಂಪಾಡಿ ನಿವಾಸಿ ಹಾಗೂ ಪುತ್ರನನ್ನು ಬೆದರಿಸಿ ಕಟ್ಟಿ ಹಾಕಿದ ಬಳಿಕ ಚಿನ್ನ ಮತ್ತು ಹಣ ದರೋಡೆಗೈದ ಪ್ರಕರಣದಲ್ಲಿ ಓರ್ವನನ್ನು  ಕರ್ನಾಟಕದ ಪ್ರತ್ಯೇಕ ತನಿಖಾ ತಂಡ ವಶಕ್ಕೆ ತೆಗೆದಿದೆ. ಬಾಡೂರು ಸಮೀಪ ನಿವಾಸಿಯಾಗಿರುವ, ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆನ್ನಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಲುಪಿದ ಪೊಲೀಸ್ ತಂಡ  ಸಾರ್ವಜನಿಕ ಸಂಸ್ಥೆಯೊಂದರಲ್ಲಿ ಕುಳಿತುಕೊಂಡಿದ್ದ ವೇಳೆ ಈತನನ್ನು ವಶಕ್ಕೆ ತೆಗೆದಿದೆ. ಈತನನ್ನು  ಸಮಗ್ರವಾಗಿ ವಿಚಾರಿಸಲಾಗುತ್ತಿದೆ.  ಈತಿಂಗಳ ಪ್ರಥಮ ವಾರದಲ್ಲಿ ನಾರಂಪಾಡಿಯ  ಕಸ್ತೂರಿ ರೈ, ಕರ್ನಾಟಕ …

ಬೃಹತ್ ಜೂಜಾಟ ತಂಡ ಸೆರೆ: ೧೦೭೯೮೦ ರೂ. ವಶ

ಕಾಸರಗೋಡು: ವೆಳ್ಳರಿಕುಂಡ್ ಪೇಟೆಯ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಬೃಹತ್ ಜೂಜಾಟ ಕೇಂದ್ರಕ್ಕೆ ವೆಳ್ಳರಿಕುಂಡ್ ಪೊಲೀಸರು ಠಾಣೆಯ ಇನ್ಸ್‌ಪೆಕ್ಟರ್  ಟಿ.ಕೆ. ಶಿಜುರ ನೇತೃತ್ವದ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ನಿರತರಾಗಿದ್ದ ೧೧ ಮಂದಿಯನ್ನು ಬಂಧಿಸಿದ್ದಾರೆ. ಈ ಜುಗಾರಿ ಅಡ್ಡೆಯಿಂದ ೧೦೭೯೮೦ ಕೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಈ ಕಾರ್ಯಾಚರಣೆ ನಡೆದಿದೆ. ಹೊಸುದರ್ಗ ಕುಶಾಲ್ ನಗರದ ಕೆ. ಜಾಸೀರ್ (೨೫) ವೆಳ್ಳರಿಕುಂಡ್ ಅಟ್ಟಪರಂಬದ ಸಜಿ ಜೋಸೆಫ್ (೪೬) ಹೊಸದುರ್ಗದ ಸೌತ್‌ನ ಪಿ. ಸಬೀರ್ (೩೨), ಕಳ್ಳಾರಿನ ಎಂ.ಸಿ. ಜೋಸ್ …

ಯುವಕನನ್ನು ಮದ್ಯ ಸಹಿತ ಸೆರೆ ಹಿಡಿದು ಪೊಲೀಸರ ವಶಕ್ಕೆ

ಕುಂಬಳೆ: ನಾಡಿನ ಶಾಂತಿ, ಸಮಾಧಾನವನ್ನು ನಾಶಪಡಿಸುವ ಮಾದಕ ಮಾಫಿಯಾ ತಂಡದ ವಿರುದ್ಧ ಕಠಿಣ ಕ್ರಮಗಳೊಂದಿಗೆ ಬಂದ್ಯೋಡು ಅಡ್ಕ ನಿವಾಸಿಗಳು ರಂಗಕ್ಕಿಳಿದಿದ್ದಾರೆ. ಮಾರಾಟಕ್ಕೆ  ಕೊಂಡು ಹೋಗುತ್ತಿದ್ದ ೩೧ ಪ್ಯಾಕೆಟ್ ಮದ್ಯ ಸಹಿತ ಯುವಕನನ್ನು ಸೆರೆಹಿಡಿ ದು  ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅಡ್ಕ ವೀರನಗರದ ಗಂಗಾಧರನ್ ಯಾನೆ ಗಣೇಶ್ (೨೩)ನನ್ನು ಸೆರೆಹಿಡಿಯಲಾಗಿದೆ. ಈತನ ವಿರುದ್ಧ ಕೇಸು ದಾಖಲಿಸಿ ಬಂಧಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಸಳೀಯರು ಈತನನ್ನು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿ ಸಿದ್ದರು. ಕಳೆದ ಎರಡು ದಿನದ ಹಿಂದೆ ಗಾಂಜಾದೊಂದಿಗೆ ಯುವಕನನ್ನು …