ಗಾಂಜಾ ಸಹಿತ ಸೆರೆಗೀಡಾದ ಯುವಕ ಗಂಟೆಗಳೊಳಗೆ ಬಿಡುಗಡೆ: ನಾಗರಿಕರಿಗೆ ಬೆದರಿಕೆಯೊಡ್ಡಿದಾಗ ವಾರಂಟ್ ಪ್ರಕರಣದಲ್ಲಿ ಬಂಧನ

ಕುಂಬಳೆ: ಎರಡು ಪ್ಯಾಕೆಟ್ ಗಾಂಜಾ ಸಹಿತ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಯುವಕ ಗಂಟೆಗಳೊಳಗೆ ಬಿಡುಗಡೆಗೊಂಡನು. ಮರಳಿ ಬಂದು ನಾಗರಿಕರಿಗೆ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ವಾರಂಟ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಬಂದ್ಯೋಡು ಅಡ್ಕ ಜಂಕ್ಷನ್‌ನ ಬಾಡಿಗೆ ಮನೆಯಲ್ಲಿ ವಾಸಿಸುವ ಫಯಾಸ್ (೨೬) ಎಂಬಾತನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿ ದ್ದಾರೆ. ಮೊನ್ನೆ ರಾತ್ರಿ ಫಯಾಸ್‌ನನ್ನು ಎರಡು ಪ್ಯಾಕೆಟ್ ಗಾಂಜಾ ಸಹಿತ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಆದರೆ ಗಾಂಜಾ ಸಣ್ಣ ಪ್ರಮಾಣದಲ್ಲಿದೆಯೆಂದು ತಿಳಿಸಿ ಆತನನ್ನು ಪೊಲೀಸರು ಗಂಟೆಗಳೊಳಗೆ ಬಿಡುಗಡೆಗೊಳಿಸಿದ್ದಾರೆ. ಅನಂತರ …

ಅಡೂರು ನಿವಾಸಿ ಮಂಗಳೂರಿನ ಹೆಡ್ ಕಾನ್‌ಸ್ಟೇಬಲ್ ಚಂದ್ರ ನಿಧನ

ಅಡೂರು: ಅಪರಾಧ ಪ್ರಕರಣ ಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ನಿಷ್ಣಾತ ರಾಗಿದ್ದ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅಡೂರು ನಿವಾಸಿ ಚಂದ್ರ ಅಡೂರು (೪೯) ಅಸೌಖ್ಯದಿಂದ ನಿಧನ ಹೊಂದಿ ದರು. ಕಳೆದ ಮೂರು ತಿಂಗಳಿಂದ ಅಸೌಖ್ಯ ಬಾಧಿಸಿ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಜ್ವರ ಉಲ್ಭಣಗೊಂಡ ಕಾರಣ ಕಂಕನಾಡಿ ಆಸ್ಪತ್ರೆಗೂ, ಬಳಿಕ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ನಿಧನ ಸಂಭವಿಸಿದೆ. ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ವರ್ಷಗಳಿಂದ ಹೆಡ್‌ಕಾನ್‌ಸ್ಟೇಬಲ್ …

ಉಳಿಯತ್ತಡ್ಕ ಬಳಿಯ ಇನ್ನೊಂದು ಮನೆಯಲ್ಲಿ ಕಳವು

ಕಾಸರಗೋಡು: ಉಳಿಯತ್ತಡ್ಕ ಸಮೀಪದ ಶಿರಿಬಾಗಿಲಿನಲ್ಲಿ ಗಲ್ಫ್ ಉದ್ಯೋಗಿ ಅಬ್ದುಲ್ ಹ್ಯಾರಿಸ್ ಎಂಬವರ ಮನೆಯಿಂದ ೬.೫ ಪವನ್ ಚಿನ್ನದ ಒಡವೆ ಮತ್ತು ೪೦೦೦ ರೂ. ನಗದು ಕಳವುಗೈದ ಬೆನ್ನಲ್ಲೇ ಅಲ್ಲಿಗೆ ಸಮೀಪದ ಇನ್ನೊಂದು ಮನೆಯಲ್ಲೂ ಕಳವು ನಡೆದಿದೆ. ಉಳಿಯತ್ತಡ್ಕಕ್ಕೆ ಸಮೀಪದ ಮಂಜತ್ತಡ್ಕದ ಸೈನಬಾ ಮೊಯ್ದೀನ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಇವರು ಮೊನ್ನೆ ಮನೆಗೆ ಬೀಗ ಜಡಿದು ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ನಿನ್ನೆ ಮನೆಗೆ ಹಿಂತಿರುಗುವುದರೊಳಗೆ ಮನೆಯಲ್ಲಿ ಕಳವು ನಡೆದಿದೆ. ಮನೆಯ ಬಾಗಿಲ ಬೀಗ ಮುರಿದು …

ಬಾಲಕಿಯ ದೇಹಸ್ಪರ್ಶಿಸಿ ಕಿರುಕುಳ: ವೃದ್ಧನ ವಿರುದ್ಧ ಕೇಸು

ಕುಂಬಳೆ: ಬಸ್ ಇಳಿದು ಮನೆಗೆ ನಡೆದುಹೋಗುತ್ತಿದ್ದ ೧೫ರ ಹರೆಯದ ಬಾಲಕಿಯನ್ನು ತಡೆದು ನಿಲ್ಲಿಸಿ ದೇಹಸ್ಪರ್ಶಿಸಿದ ಆರೋಪದಂತೆ ೬೦ರ ಹರೆಯದ ವೃದ್ಧನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ವಿದ್ಯಾರ್ಥಿನಿ ಮೊನ್ನೆ ಸಂಜೆ ಶಾಲೆಬಿಟ್ಟು ಮನೆಗೆ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ವಿಷಯವನ್ನು ಬಾಲಕಿ ಮನೆಯವರಲ್ಲಿ ತಿಳಿಸಿದ್ದಾಳೆ.  ಬಳಿಕ ಮನೆಯವರು ಪೊಲೀಸ್ ಠಾಣೆಗೆ ತಲುಪಿ ನೀಡಿದ ದೂರಿನಂತೆ ಕಂಡರೆ ಗುರುತುಹಚ್ಚಬಹುದಾದ ವ್ಯಕ್ತಿ ವಿರುದ್ದ ಕೇಸು ದಾಖಲಿಸಲಾಗಿದೆ.

ಚೆರ್ಕಳ ಬಳಿ ಚಿರತೆಕಾಟ

ಚೆರ್ಕಳ: ಚೆರ್ಕಳ ವಿಕೆಪಾರ ದಲ್ಲಿ ನಿನ್ನೆ ರಾತ್ರಿ ಚಿರತೆಯ ಸಾದೃಶ್ಯ ಹೊಂದಿದ ಪ್ರಾಣಿಯೊಂದು ಆ ದಾರಿಯಾಗಿ ಸಂಚರಿಸುವುದನ್ನು ಸ್ಥಳೀಯರು ಕಂಡಿದ್ದಾರೆ.  ಆ ಬಗ್ಗೆ ಅವರು ನೀಡಿದ ಮಾಹಿತಿಯಂತೆ ಅರಣ್ಯಪಾಲಕರು ಸ್ಥಳಕ್ಕಾಗಮಿಸಿ  ಶೋಧ ಆರಂಭಿಸಿ ದ್ದಾರೆ. ಆ ಪರಿಸರದ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸತೊಡಗಿದ್ದಾರೆ.  ನಿನ್ನೆ ರಾತ್ರಿ ಗೋಚರಿಸಿದ್ದು ಚಿರತೆಯಾಗಿದೆಯೇ ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಆ ಹಿನ್ನೆಲೆಯಲ್ಲಿ ಶೋಧ ಇನ್ನೂ ಮುಂದುವರಿಯುತ್ತಿದೆಯೆಂದು ಅರಣ್ಯಪಾಲಕರು ತಿಳಿಸಿದ್ದಾರೆ.

ಮಟ್ಕಾ: ಓರ್ವ ಸೆರೆ

ಕಾಸರಗೋಡು: ಚೆರ್ಕಳ ಪೇಟೆಯಲ್ಲಿ ಮಟ್ಕಾ ಜೂಜಾಟ ಕೇಂದ್ರವೊಂದಕ್ಕೆ ವಿದ್ಯಾನಗರ ಪೊಲೀಸರು ನಿನ್ನೆ ದಾಳಿ ನಡೆಸಿ ಓರ್ವನನ್ನು ಸೆರೆಹಿಡಿದಿದ್ದಾರೆ. ಚೆರ್ಕಳದ ರವಿ (೫೪) ಎಂಬಾತ ಬಂಧಿತನಾದ ವ್ಯಕ್ತಿ. ಆತನಿಂದ ೯೬೦ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿರ್ಮಾಣ ಕಾರ್ಮಿಕ ನಿಧನ

ಕುಂಬಳೆ: ಬಿಎಂಎಸ್ ಮುಖಂಡ ಕುಂಟಂಗೇರಡ್ಕ ನಿವಾಸಿ, ನಿರ್ಮಾಣ ಕಾರ್ಮಿಕ ನಳಿನಾಕ್ಷ ಗಟ್ಟಿ (೬೪) ನಿಧನ ಹೊಂದಿದರು. ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಬಿಎಂಎಸ್ ಕುಂಬಳೆ ವಲಯ ಮಾಜಿ ಕಾರ್ಯದರ್ಶಿಯಾಗಿ, ನಿರ್ಮಾಣ ಕಾರ್ಮಿಕ ಸಂಘದ ಮಾಜಿ ಜಿಲ್ಲಾ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಅವಿವಾಹಿತರಾ ಗಿದ್ದಾರೆ. ಮೃತರು ಸಹೋದರರಾದ ವಿಶ್ವನಾಥ, ಬಾಲಕೃಷ್ಣ, ಸಹೋದರಿಯರಾದ ಯಶವಂತಿ, ಸುಂದರಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಎಂಎಸ್ ಕುಂಬಳೆ ವಲಯ ಕೋಶಾಧಿಕಾರಿ ಐತ್ತಪ್ಪ ನಾರಾಯಣಮಂಗಲ, ಜಿಲ್ಲಾ ಮುಖಂಡ ಟಿ. …

ಏಷ್ಯನ್ ಗೇಮ್ಸ್ ಅನಾವರಣಕ್ಕೆ ಕ್ಷಣಗಣನೆ

ಹಾಂಗ್ಝೂ: ಏಷ್ಯನ್ ಗೇಮ್ಸ್‌ನ ಅನಾವರಣಕ್ಕೆ ಚೀನಾದ ಹಾಂಗ್ಝೂ ನಲ್ಲಿ ಕ್ಷಣಗಣನೆ ಆರಂಭಗೊಂಡಿದೆ. ಇಂದು ಸಂಜೆ ೫.೩೦ಕ್ಕೆ ಹಾಂಗ್ಝೂ ಲಿಂಪಿಕ್ಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಅದ್ದೂರಿಯ ಸಮಾರಂಭದಲ್ಲಿ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭ ಎರಡು ಗಂಟೆ ಕಾಲ ಮುಂದುವರಿಯಲಿದೆ.ಕ್ರೀಡಾ ಕೂಟ ೧೫ ದಿನಗಳ ತನಕ ಮುಂದುವರಿಯಲಿದೆ. ಇದರಲ್ಲಿ ಭಾರತ ದಾಖಲೆಯ ೬೫೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

ಫೋನ್ ಕರೆ ಬಂದ ಬೆನ್ನಲ್ಲೇ ಯುವಕನಿಗೆ ಒಂದೂವರೆ ಲಕ್ಷ ರೂ. ನಷ್ಟ

ಕಾಸರಗೋಡು: ಸಾಲ ಬೇಕೇ ಎಂದು ಕೇಳಿ ಫೋನ್ ಕರೆ ಬಂದ ಬೆನ್ನಲ್ಲೇ ಯುವಕನಿಗೆ ಒಂದೂವರೆ ಲಕ್ಷ ರೂಪಾಯಿ ನಷ್ಟಗೊಂಡ ಘಟನೆ ನಡೆದಿದೆ. ತೆಕ್ಕಿಲ್ ಬೆಂಡಿಚ್ಚಾಲ್‌ನ ಬಿ.ಎ. ಹಾರೀಸ್‌ರ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳೆದ ಜುಲೈ ೧೩ರಂದು ಹಾರೀಸ್‌ರ ಫೋನ್‌ಗೆ ಕರೆಯೊಂದು ಬಂದಿದ್ದು, ಸಾಲ ಬೇಕೇ ಎಂದು ಕೇಳಲಾಗಿದೆ. ಅನಂತರ ದೂರುದಾರನ ಖಾತೆಯಿಂದ ಹಲವು ಬಾರಿಯಾಗಿ ೧,೬೬,೯೯೦ ರೂಪಾಯಿ ವಿವಿಧ ಯುಪಿಐ ವ್ಯವಹಾರಗಳ ಮೂಲಕ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆನ್‌ಲೈನ್ ವಂಚನೆಗಳ …

ಪುಣ್ಯ ಕ್ಷೇತ್ರಗಳ ಪುನರುದ್ಧಾರಕ್ಕೆ ಹಿಂದೂಗಳು ಸಂಕಲ್ಪ ತೊಡಬೇಕು-ಸುಬ್ರಹ್ಮಣ್ಯನ್ ಸ್ವಾಮಿ

ಮಂಜೇಶ್ವರ: ಅಯೋಧ್ಯೆ, ಮಥುರಾ, ಕಾಶೀ ಹಿಂದುಗಳ ಪರಮಪವಿತ್ರ ದೇವಾಲಯಗಳಾಗಿವೆ. ಅಯೋಧ್ಯೆಯ ಬಳಿಕ ಉಳಿದೆರಡು ಕ್ಷೇತ್ರಗಳ ಅಭಿವೃದ್ಧಿಗೂ ಹಿಂದೂಗಳು ಸಮರ್ಥ ಸೇವೆ ಸಲ್ಲಿಸಬೇಕು ಎಂದು  ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ, ವಿರಾಟ್ ಹಿಂದೂ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ರಹ್ಮಣ್ಯನ್ ಸ್ವಾಮಿ ನುಡಿದಿದ್ದಾರೆ. ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿ ತಿಯ ನೇತೃತ್ವದಲ್ಲಿ ಜಿಲ್ಲಾ  ಕಾರ್ಯಾ ಲಯ ಹೊಸಂಗಡಿ ಪ್ರೇರಣಾದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಅಶ್ವತ್ಥೋಪನ ಯನ, ವಿವಾಹೋತ್ಸವ, ಸಾಮೂಹಿಕ ಶ್ರೀ ಅಶ್ವತ್ಥನಾರಾಯಣ ಪೂಜೆಯ ಅಂಗವಾಗಿ ಮೊನ್ನೆ ನಡೆದ …