ಜಿಲ್ಲೆಯ ಉತ್ತಮ ಕ್ಷೀರ ಸಂಘಗಳಿರುವ ಪ್ರಶಸ್ತಿ ವಿತರಣೆ

ಕಾಸರಗೋಡು: ಜಿಲ್ಲೆಯ ಆನಂದ್ ಮಾದರಿ ಕ್ಷೀರ ಸಂಘದ ಅಧ್ಯಕ್ಷರ ಸಭೆಯಲ್ಲಿ ವಿವಿಧ ಕ್ಷೀರ ಸಂಘಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಉತ್ತಮ ಗುಣಮಟ್ಟದ ಹಾಲು ಸಂಗ್ರಹಿಸಿದ ಸಂಘಕ್ಕಿರುವ ಪ್ರಶಸ್ತಿಯನ್ನು ಕುಂಬ್ಡಾಜೆ ಕ್ಷೀರ ಸಂಘಕ್ಕೂ, ಉತ್ತಮ ಬಲ್ಕ್ ಮಿಲ್ಕ್ ಕಲರ್ ಪ್ರಶಸ್ತಿಯನ್ನು ವರ್ಕಾಡಿ ಸಂಘಕ್ಕೂ, ಹೆಚ್ಚು ಮಿಲ್ಮಾ ಉತ್ಪನ್ನಗಳನ್ನು ಮಾರಾಟ ಮಾಡಿದ ಸಂಘಕ್ಕಿರುವ ಪ್ರಶಸ್ತಿಯನ್ನು ಕುಂಜತ್ತೂರು ಸಂಘಕ್ಕೂ ಹಸ್ತಾಂತರಿಸಲಾಯಿತು. ಈ ವೇಳೆ ಈ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿ ಗಳಾದ ಫಾರೂಕ್, ವೇಣುಗೋಪಾಲ್ ಭಟ್ (ಕುಂಬ್ಡಾಜೆ), ಎನ್. ಕೃಷ್ಣ ಮೂರ್ತಿ, ವಿ. ಸೌಮ್ಯ …

ಲೀಗ್ ಸದಸ್ಯ ರಾಜೀನಾಮೆ ಹಿಂದೆ ಸಿಪಿಎಂ ಪಿತೂರಿ- ಬಿಜೆಪಿ ಆರೋಪ

ಪೈವಳಿಕೆ: ಪಂಚಾಯತ್‌ನ ಎರಡನೇ ವಾರ್ಡ್ ಮುಸ್ಲಿಂ ಲೀಗ್ ಸದಸ್ಯೆಯನ್ನು ಸಿಪಿಎಂ ಆಮಿಷ ಒಡ್ಡಿ ರಾಜೀನಾಮೆ ನೀಡುವಂತೆ ಮಾಡಿದೆ ಎಂದು ಬಿಜೆಪಿ ಪಂ. ಸಮಿತಿ ಆರೋಪಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಕಳಂಕವೆಂದೂ ಬಿಜೆಪಿ ತಿಳಿಸಿದೆ. ರಾಜೀನಾಮೆಯ ಹಿಂದಿನ ಪಿತೂರಿಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್ ಅಧಿಕಾರಿಗಳನ್ನು ಬಿಜೆಪಿ ಆಗ್ರಹಿಸಿದೆ. ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಂ. ನೋರ್ತ್ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ …

ಕೇರಳ ರಾಜ್ಯೋತ್ಸವ: ನ. ೧ರಿಂದ ಒಂದು ವಾರ ಕೇರಳೀಯಂ ಮಹೋತ್ಸವ

ತಿರುವನಂತಪುರ: ಕೇರಳ ರಾಜ್ಯ ರೂಪುಗೊಂಡ ದಿನವಾದ ನವಂಬರ್ ೧ನ್ನು ಕೇರಳ ರಾಜ್ಯೋತ್ಸವನ್ನಾಗಿ ಪ್ರತೀ ವರ್ಷ ಆಚರಿಸಲಾಗುತ್ತಿದೆ ಅದರಂ ಗವಾಗಿ  ಈ ನವಂಬರ್ ೧ರಿಂದ ಮುಂದಿನ ಒಂದು ವಾರ ತನಕ ಕೇರಳೀಯಂ ಎಂಬ ಹೆಸರಲ್ಲಿ ಮಹೋತ್ಸವ ಕಾರ್ಯಕ್ರಮ ನಡೆಸಲು ರಾಜ್ಯ ಸರಕಾರ ತೀರ್ಮಾಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಇಚ್ಲಂಗೋಡು ಪಚ್ಚಂಬಳ ಉರೂಸ್ ಫೆ. ೪ರಿಂದ

ಬಂದ್ಯೋಡು: ಇಚ್ಲಂಗೋಡು ಪಚ್ಚಂಬಳ ಬಾವಫಕೀರ್ ಹಳ್‌ರಮಿ  ತಂಙಳ್‌ರ ಹೆಸರಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ೨೦೨೪ ಫೆಬ್ರವರಿ ೪ರಿಂದ ೧೮ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಅಂಗವಾಗಿ ಮಖಾಂ ಸಿಯಾರತ್ ನಡೆಸಲಾಯಿತು. ಜಮಾಅತ್ ಅಧ್ಯಕ್ಷ ಅನ್ಸಾರ್ ಶೆರೂಲ್ ಧ್ವಜಾರೋಹಣ ನಡೆಸಿದರು.ಪ್ರಾರ್ಥನೆಗೆ ಖತೀಬ್ ಇರ್ಶಾದ್ ಫೈಸಿ ನೇತೃತ್ವ ನೀಡಿದರು. ಮುದರಿಸ್ ಮುಹಿಯುದ್ದೀನ್ ಸಅದಿ ಚೇರೂರು, ಅಡ್ವೈಸರ್ ನ್ಯಾಯವಾದಿ ಮುಹಮ್ಮದ್ ಅನಸ್, ಜಮಾಅತ್ ಸೆಕ್ರೆಟರಿ ಮಹಮೂದ್ ಕುಟ್ಟಿ ಹಾಜಿ, ಕೋಶಾಧಿಕಾರಿ ಫಾರೂಕ್ ಪಚ್ಚಂಬಳ, ಉರೂಸ್ ಸಮಿತಿ ಕನ್ವೀನರ್ ಮೊಯ್ದೀನ್ ಕುಂಞಿಹಮ್ಮದ್ ಹಾಜಿ, …

ಬೈಕ್‌ನಲ್ಲಿ ಬಂದು ಆಯುರ್ವೇದ ಅಂಗಡಿ ಮಾಲಕಿಯ ಚಿನ್ನದ ಸರ ಎಗರಿಸಿದ ಆರೋಪಿ ಸೆರೆ

ಕಾಸರಗೋಡು: ಕಳೆದ ಮಾರ್ಚ್ ೨೬ರಂದು ಬೇಡಡ್ಕ ಪಡ್ಪು ಪೇಟೆಯಲ್ಲಿರುವ ಆಯುರ್ವೇದ  ಅಂಗಡಿ ಮಾಲಕಿ ತಂಗಮ್ಮ ಎಂಬವರ ಕುತ್ತಿಗೆಯಿಂದ ಮೂರು ಪವನ್‌ನ ಚಿನ್ನದಸರ ಎಗರಿಸಿ ಪರಾರಿಯಾದ ಪ್ರಕರಣದ ಆರೋಪಿಯನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಉದುಮ ಬಾರ ಮೀತಲ್ ಮಾಂಙಾಡ್‌ನ ಅಬ್ದುಲ್ ಮಾಲಿಕ್ (೨೬) ಬಂಧಿತ ಆರೋಪಿ. ಈತ ಬೈಕ್‌ನಲ್ಲಿ ಆಯುರ್ವೇದ ಅಂಗಡಿಗೆ ಬಂದು ಅಂಗಡಿ ಮಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಬಳಿಕ ಅದೇ ಬೈಕ್‌ನಲ್ಲಿ ಪರಾರಿಯಾ ಗಿದ್ದನು. ಆ ಪ್ರಕರಣಕ್ಕೆ ಸಂಬಂಧಿಸಿ  ಈತನನ್ನು ಬಂಧಿಸಲಾಗಿ ದೆಯೆಂದು ಪೊಲೀಸರು …

ನೆಲ್ಲಿಕಟ್ಟೆ ನಿವಾಸಿ ಯುವತಿ ಬೆಂಗಳೂರಿನಲ್ಲಿ ನಿಗೂಢ ರೀತಿಯಲ್ಲಿ ಸಾವು

ಬದಿಯಡ್ಕ: ನೆಲ್ಲಿಕಟ್ಟೆ ಬಳಿಯ ನಿವಾಸಿಯಾದ ಯುವತಿ ಬೆಂಗಳೂರಿನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೆಲ್ಲಿಕಟ್ಟೆ ಬಳಿಯ  ಸಾಲತ್ತಡ್ಕ ಎಂಬಲ್ಲಿನ ಅಬ್ದುಲ್ ಮುತ್ತಲೀಫ್ ಎಂಬವರ ಪುತ್ರಿ ಆಯಿಶತ್ ಶಾನಿಯ ಬಾನು (೧೭) ಮೃತ ಯುವತಿ. ಈಕೆ ಬೆಂಗಳೂ ರಿನ ಕಮಲನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಳು. ಅಲ್ಲಿ ಮೊನ್ನೆ ಆಕೆ ಮೃತಪಟ್ಟ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದೇ ವೇಳೆ ಸಾವಿನಲ್ಲಿ ನಿಗೂಢತೆ ಗಳಿರುವುದಾಗಿ ಹೇಳಲಾಗುತ್ತಿದ್ದು ಈ ಬಗ್ಗೆ ಬೆಂಗಳೂರು ಪೊಲೀಸರು  ಕೇಸು ದಾಖಲಿಸಿಕೊಂಡಿ ರುವುದಾಗಿ ತಿಳಿದುಬಂದಿದೆ. ಮೃತದೇಹವನ್ನು ಊರಿಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತಳು …

ವ್ಯಾಪಕಗೊಂಡ ಆನ್‌ಲೈನ್ ವಂಚನೆ: ಎರಡು ದಿನಗಳಲ್ಲಾಗಿ ಜಿಲ್ಲೆಯಲ್ಲಿ ನಾಲ್ಕು ಕೇಸು ದಾಖಲು

ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್ ಹಾಗೂ ಪಾರ್ಟ್‌ಟೈಮ್ ಉದ್ಯೋಗ ಎಂಬ ಹೆಸರಲ್ಲೂ ಹಣ ಲಪಟಾಯಿಸಲಾಗುತ್ತಿದೆ ಎಂಬ ದೂರಿನಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎರಡು ದಿನಗಳಲ್ಲಾಗಿ ನಾಲ್ಕು ಕೇಸುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ತಳಂಗರೆ ನಿವಾಸಿಯ ೧೩ ಲಕ್ಷ ರೂಪಾಯಿ ಈ ರೀತಿಯಲ್ಲಿ ನಷ್ಟಗೊಂಡಿದೆ. ಮೂವಿ ಫ್ಲಾಟ್‌ಫಾಮ್ ಎಂಬ ಕಂಪೆನಿಯಲ್ಲಿ ಪಾರ್ಟ್‌ಟೈಮ್ ಉದ್ಯೋಗ ನೀಡುವ ಭರವಸೆಯೊಡ್ಡಿ ಹಣ ಲಪಟಾಯಿಸಲಾಗಿದೆ. ಚಟ್ಟಂಚಾಲ್ ತೆಕ್ಕಿಲ್ ನಿವಾಸಿಯ ೧.೩೦ ಲಕ್ಷ ರೂಪಾಯಿಗಳನ್ನು ಹೆಚ್ಚಿನ ಬಡ್ಡಿ ನೀಡುವುದಾಗಿ ವಾಟ್ಸಪ್ ಮೂಲಕ ಮಾಹಿತಿ ನೀಡಿ ಲಪಟಾಯಿಸಲಾಗಿದೆ …

ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಕಾಸರಗೋಡು: ಮಂಜೇಶ್ವರ ವಿಧಾನಸಭೆಗೆ ನಡೆದ ಚುನಾವಣೆಗೆ ಸಂಬಂಧಿಸಿದ ಚುನಾವಣಾ  ತಕರಾರು ಪ್ರಕರಣವನ್ನು ರದ್ದುಪಡಿಸುವಂತೆ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಇತರರು  ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸುವ ದಿನಾಂಕವನ್ನು ನ್ಯಾಯಾಲಯ ಅಕ್ಟೋಬರ್ ೪ಕ್ಕೆ ನಿಗದಿಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನೇರವಾಗಿ ಹಾಜರಾಗುವಂತೆ ನ್ಯಾಯಾಲಯ ಕೆ. ಸುರೇಂದ್ರನ್ ಮತ್ತಿತರಿಗೆ ಆದೇಶ ನೀಡಿತ್ತು. ಆದರೆ ಅವರೆಲ್ಲ ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ.  …

ಕುಂಬಳೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ: ಪೊಲೀಸ್ ಲಾಠಿ ಪ್ರಯೋಗ

ಕುಂಬಳೆ: ಶಾಲಾ ಕ್ರೀಡಾ ಮೇಳ ನಡೆಯುತ್ತಿರುವ ಮಧ್ಯೆ ವಿದ್ಯಾರ್ಥಿಗಳು ಕಾದಾಟ ನಡೆಸಿದರು. ಮಾಹಿತಿ ತಿಳಿದು ತಲುಪಿದ ಪೊಲೀಸರು ಲಾಠಿ ಬೀಸಿದುದರಿಂದ ವಿದ್ಯಾರ್ಥಿಗಳು ಚದುರಿದರು. ನಿನ್ನೆ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿ ಘಟನೆ ನಡೆದಿದೆ. ಶಾಲೆಯಲ್ಲಿ ಕ್ರೀಡಾ ಮೇಳ ನಡೆಯುತ್ತಿದ್ದ ಮಧ್ಯೆ ಹೊರಗಿ ನಿಂದ ಬಂದ ವಿದ್ಯಾರ್ಥಿಗಳೊಂದಿಗೆ ವಾಗ್ವಾದ ಉಂಟಾಗಿದ್ದು, ಅದು ಬಳಿಕ ಘರ್ಷಣೆಗೆ ತಿರುಗಿದೆಯೆನ್ನಲಾಗಿದೆ. ವಿದ್ಯಾರ್ಥಿಗಳು ಗುಂಪು  ಘರ್ಷಣೆ ಯಲ್ಲಿ ತೊಡಗಿರುವುದರೊಂದಿಗೆ  ಪೊಲೀಸರು ತಲುಪಿ ಲಾಠಿ ಬೀಸಿ ವಿದ್ಯಾರ್ಥಿಗಳನ್ನು ಚದುರಿಸಿದರು. ಈ ವೇಳೆ ವಿದ್ಯಾರ್ಥಿಗಳು …

ಕಾರಿನಲ್ಲಿ ಸಾಗಿಸುತ್ತಿದ್ದ ೧೪೦ ಕಿಲೋ ತಂಬಾಕು ಉತ್ಪನ್ನ ವಶ

ಮಂಜೇಶ್ವರ: ಕಾರಿನಲ್ಲಿ ಕಾಸರಗೋಡಿನತ್ತ ಸಾಗಿಸುತ್ತಿದ್ದ ನಿಷೇಧಿತ ೧೪೦ ಕಿಲೋ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ಕೂಡ್ಲು ಫೌಸಿಯಾ ಮಂಜಿಲ್‌ನ ಇರ್ಫಾನ್ (೩೩) ಎಂಬಾತನನ್ನು ಬಂಧಿಸಲಾಗಿದೆ. ಈತ ಈ ಹಿಂದೆಯೂ ೯೦ ಕಿಲೋ ತಂಬಾಕು ಉತ್ಪನ್ನಗಳ ಸಹಿತ ಇದೇ ಚೆಕ್‌ಪೋಸ್ಟ್‌ನಲ್ಲಿ ಸೆರೆಗೀಡಾಗಿದ್ದನು. ಇದೀಗ ವಶಪಡಿಸಿಕೊಂಡ ತಂಬಾಕು ಉತನ್ನಗಳಿಗೆ ೨ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಎಂ. ಯೂನಸ್, ಪ್ರಿವೆಂಟಿವ್ ಆಫೀಸರ್ ಜನಾರ್ದನನ್ ಕೆ.ಎ., …