ಮನೆಯಿಂದ ೧.೭೫ ಲಕ್ಷ ರೂ. ಮೌಲ್ಯದ ಅಡಿಕೆ ಕಳವು: ಇಬ್ಬರ ಸೆರೆ

ಮಂಜೇಶ್ವರ: ಮನೆಗೆ ಕಳ್ಳರು ನುಗ್ಗಿ ೧,೭೫,೦೦೦ ರೂ. ಮೌಲ್ಯದ ಆರು ಗೋಣಿ ಚೀಲಗಳಲ್ಲಿ ತುಂಬಿಸಿಡ ಲಾಗಿದ್ದ ಅಡಿಕೆ ಕಳವುಗೈದಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಾಂಪೌಂಡ್‌ನ ರೆಹ್ಮಾನ್ ಸಹೀಂ ಎಂಬವರು  ಈ ಬಗ್ಗೆ ದೂರು ನೀಡಿದ್ದು ಅದರಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಪ್ಟಂಬರ್ ೫ಮತ್ತು ೬ರ ನಡುವಿನ  ಸಮಯದಲ್ಲಿ ಕಳ್ಳರು ತಮ್ಮ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿ ಕೊಠಡಿಯೊಳಗಿರಿಸಲಾಗಿದ್ದ ಅಡಿಕೆ ಕಳವಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ರೆಹ್ಮಾನ್ ಸಹೀಂ ತಿಳಿಸಿದ್ದಾರೆ. …

ಮಂಜೇಶ್ವರ ಪೊಲೀಸರ ಆಕ್ರಮಣ ಪ್ರಕರಣದಲ್ಲಿ ಕೊಲ್ಲಿಗೆ ಪರಾರಿಯಾದ ಆರೋಪಿಯ ಪತ್ತೆಗಾಗಿ ಲುಕ್‌ಔಟ್ ನೋಟೀಸ್ ಸಿದ್ಧ

ಮಂಜೇಶ್ವರ: ರಾತ್ರಿ ಕಾಲ ಪಟ್ರೋಲಿಂಗ್ ಮಧ್ಯೆ ಮಂಜೇಶ್ವರ ಎಸ್‌ಐ ಹಾಗೂ ಪೊಲೀಸರನ್ನು ಆಕ್ರಮಿಸಿದ ಪ್ರಕರಣದಲ್ಲಿ ಪ್ರಥಮ ಆರೋಪಿಯಾದ ಬಳಿಕ ಕೊಲ್ಲಿಗೆ ಪರಾರಿಯಾದ ಯುವಕನಿಗಾಗಿ ಪೊಲೀಸರು ಲುಕ್‌ಔಟ್ ನೋಟೀಸು ಸಿದ್ಧಪಡಿಸಿದ್ದಾರೆ. ಈ ವರದಿಯನ್ನು ಕೂಡಲೇ ಇಂಟರ್‌ಪೋಲ್‌ಗೆ ಹಸ್ತಾಂತರಿಸಲಾಗುವುದು. ಉಪ್ಪಳ ನಿವಾಸಿಯಾದ ರಶೀದ್ ಕೊಲ್ಲಿಗೆ ಪರಾರಿಯಾದ ವ್ಯಕ್ತಿ.   ಕಳೆದ ಆದಿತ್ಯವಾರ ಮುಂಜಾನೆ ಉಪ್ಪಳ ಹಿದಾಯತ್ ನಗರದಲ್ಲಿ ಮಂಜೇಶ್ವರ ಎಸ್‌ಐ ಪಿ. ಅನೂಬ್ ಹಾಗೂ ಸಿವಿಲ್ ಪೊಲೀಸ್ ಆಫೀಸರ್ ಕಿಶೋರ್‌ರ ವಿರುದ್ಧ ಆಕ್ರಮಣ ನಡೆಸಲಾಗಿತ್ತು. ಈ ವೇಳೆ ಗುಂಪುಗೂಡಿ ನಿಂತವರಲ್ಲಿ ಅಲ್ಲಿಂದ …

ಕಾರು ಮಗುಚಿ ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣ :ಕ್ರೈಂ ಬ್ರಾಂಚ್‌ನಿಂದ ಪೊಲೀಸರಿಗೆ ಕ್ಲೀನ್ ಚಿಟ್

ಕಾಸರಗೋಡು: ಪೊಲೀಸರು ಹಿಂಬಾಲಿಸುತ್ತಿದ್ದ ಮಧ್ಯೆ  ಕಾರು ಮಗುಚಿ ಬಿದ್ದು ಅಂಗಡಿಮೊಗರು ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿ ಮೊಹಮ್ಮದ್ ಫರ್ಹಾಸ್ (೧೭) ಸಾವನ್ನಪ್ಪಿದ ಘಟನೆಯಲ್ಲಿ ಪೊಲೀಸರ ವತಿಯಂದ ಯಾವುದೇ ರೀತಿಯ ಲೋಪದೋ ಷಗಳು ಉಂಟಾಗಿಲ್ಲ ವೆಂದು ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಕ್ರೈಂ ಬ್ರಾಂಚ್ ತಂಡ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗೆ ಸಲ್ಲಿಸಿದ ಪ್ರಾಥ ಮಿಕ ತನಿಖಾ ವರದಿಯಲ್ಲಿ ತಿಳಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ಕುಟುಂಬ ನೀಡಿದ ದೂರು ಮತ್ತು ಅಪಘಾತಕ್ಕೀಡಾದ ಕಾರಿನಲ್ಲಿದ್ದ ಇತರ ವಿದ್ಯಾರ್ಥಿಗಳು …

ನಕಲಿ ಮಂತ್ರವಾದ ಕೇಂದ್ರಕ್ಕೆ ಹಾನಿ: ಮಂತ್ರವಾದಿ ಸೆರೆ

ಹೊಸದುರ್ಗ: ಕಣ್ಣೂರು ಕೂತುಪರಂಬ ಬಳಿಯ ನಕಲಿ ಮಂತ್ರವಾದ ಕೇಂದ್ರವನ್ನು ಡಿವೈಎಫ್‌ಐ ನೇತೃತ್ವದಲ್ಲಿ  ಹಾನಿಗೊಳಿಸಲಾಗಿದೆ. ಕುಟ್ಟಿಚಾತನ್ ಮಂತ್ರವಾದ ಹೆಸರಲ್ಲಿ ಇಲ್ಲಿ ನಕಲಿ ಚಿಕಿತ್ಸೆ, ಮಂತ್ರವಾದ ನಡೆಯುತ್ತಿದ್ದುದಾಗಿ ಆರೋಪಿಸಲಾಗಿದೆ. ಕೇಂದ್ರದಲ್ಲಿ ಚಾತನ್ ಜಯೇಶ್  ಅಲಿಯಾಸ್ ಜಯನ್ (೪೪) ಎಂಬ ವ್ಯಕ್ತಿ ಮಂತ್ರವಾದ ನಡೆಸುತ್ತಿದ್ದು ಈತನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಸೆರೆಹಿಡಿದಿದ್ದರು. ಕಲಿಕೆಯಲ್ಲಿ ಹಿಂದುಳಿದಿರುವ ೧೬ರ ಹರೆಯದ ವಿದ್ಯಾರ್ಥಿನಿಯನ್ನು ಇಲ್ಲಿಗೆ ಕರೆತರಲಾಗಿತ್ತು. ಈ ಬಾಲಕಿಗೆ ಈತ ಮಂತ್ರವಾದ  ಹೆಸರಲ್ಲಿ ಕಿರುಕುಳ ನೀಡಿದ ಬಗ್ಗೆ ತಿಳಿದುಬಂದ ಹಿನ್ನೆಲೆಯಲ್ಲಿ ಬಾಲಕಿಗೆ ಕೌನ್ಸಿಲಿಂಗ್ ನಡೆಸಲಾಗಿತ್ತು. …

ಬೈಕ್‌ನಲ್ಲಿ ಬಂದು ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಬೈಕ್‌ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣದ ಆರೋಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಕಳನಾಡು ನಿವಾಸಿ ಹಾಗೂ ಈಗ ಮೇಲ್ಪರಂಬ ಕೂವತ್ತೊಟ್ಟಿಯಲ್ಲಿ ವಾಸಿಸುತ್ತಿರುವ ಶಮ್ನಾಸ್ ಅಲಿ ಯಾಸ್ ಮೊಹಮ್ಮದ್ ಶಮ್ನಾಸ್ (೩೨) ಬಂಧಿತ ಆರೋಪಿ. ಈತ ಕಳೆದ ಜುಲೈ ೨೬ರಂದು ಪರಿಯಾರಂ  ಪಿಲಾತ್ತರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಣೇಶ ಎಂಬವರ ಪತ್ನಿ ಶ್ರೀಜಾ (೩೯) ಎಂಬವರ ಕುತ್ತಿಗೆಯಿಂದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದು ಎಗರಿಸಿದ ಪ್ರಕರಣದ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬೇರೊಂದು …

ಹೋಟೆಲ್ ಕೊಠಡಿಯಲ್ಲಿ ದಂಪತಿ ನೇಣು ಬಿಗಿದು ಆತ್ಮಹತ್ಯೆ

ತಿರುವನಂತಪುರ: ಇಲ್ಲಿನ ಆಡಂಬರ ಹೊಟೇಲ್‌ನಲ್ಲಿ ಕಳೆದ ೧೦ ದಿವಸಗಳಿಂದ ವಾಸಿಸುತ್ತಿದ್ದ ದಂಪತಿಯ ಮೃತದೇಹಗಳು ಕೊಠಡಿಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಪಡಿಞಾರಕೋಟೆಯಲ್ಲಿ ವಾಸಿಸುವ ಅರಿಪ್ಪಾಡ್ ಚೇಪ್ಪಾಡ್ ನಿವಾಸಿ ಸುಗತನ್ (೭೧), ಪತ್ನಿ ಸುನಿಲ (೭೦) ಎಂಬಿವರು ಮೃತ ಪಟ್ಟವರು. ಮನೆಯ ದುರಸ್ಥಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿ ಕಳೆದ ೨೬ರಂದು ಪುತ್ರಿಯ ಜೊತೆ ತಲುಪಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ನಿನ್ನೆ ಬೆಳಿಗ್ಗೆವರೆಗೆ ಕೊಠಡಿಯಲ್ಲಿ ಇದ್ದ ಇವರು ಅಪರಾಹ್ನ ಹೊಟೇಲ್ ನೌಕರ ಕೊಠಡಿ ಶುಚೀಕರಿಸಲೆಂದು ತಲುಪಿದಾಗ …

ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಐಸಿಸ್ ನೇತಾರನ ಸೆರೆ

ಕೊಚ್ಚಿ: ಕೇರಳದಲ್ಲಿ ವಿಧ್ವಂಸಕ ಕೃತ್ಯ ಸಂಚಿಕೆ ಯೋಜನೆ ಹಾಕಿಕೊಂಡಿದ್ದ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್)ನ ನೇತಾರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚೆನ್ನೈಯಿಂದ ಬಂಧಿಸಿದೆ. ತೃಶೂರು ತಾವರಡ್ಕ ನಿವಾಸಿ ಸೈಯಿದ್ ನಬೀಲ್ ಅಹಮ್ಮದ್ (೩೦) ಬಂಧಿತನಾದ ಉಗ್ರ. ತಮಿಳುನಾಡಿನ ಕೊಯಂಬತ್ತೂರನ್ನು ಕೇಂದ್ರೀಕರಿಸಿ ನಬೀಲ್ ಈ ಹಿಂದೆ ಗುಪ್ತವಾಗಿ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದನು. ಈತ ಐಸಿಸ್‌ನ ತೃಶೂರು ಘಟಕದ (ಮೊಡ್ಯೂಲ್)ನ  ಮುಖ್ಯಸ್ಥನಾಗಿ ದ್ದಾನೆಂದು ಎನ್‌ಐಎ ತಿಳಿಸಿದೆ. ಕೇರಳ ಮಾತ್ರವಲ್ಲ ಕರ್ನಾಟಕ ಮತ್ತು ತಮಿಳು ನಾಡಿನಲ್ಲೂ ಈತ …

ಮಳೆಯ ಕೊರತೆ: ಬಾವಿಕೆರೆ ಅಣೆಕಟ್ಟು ಶಟರ್ ಎರಡು ತಿಂಗಳ ಮುಂಚಿತ ಮುಚ್ಚಲು ಆಲೋಚನೆ

ಬೋವಿಕ್ಕಾನ: ಮಳೆ ಇದೇ ರೀತಿಯಲ್ಲಿ ಮುಂದುವರಿಯುವುದಾ ದರೆ ಬಾವಿಕೆರೆ ಅಣೆಕಟ್ಟಿನ ಶಟರ್‌ನ್ನು ಮುಂದಿನ ತಿಂಗಳಲ್ಲಿಯೇ ಮುಚ್ಚಲಿರು ವ ಕಾರ್ಯ ನೀರಾವರಿ ಇಲಾಖೆಯ ಪರಿಗಣನೆಯಲ್ಲಿದೆ. ಹೊಳೆಯ ನೀರ ಹರಿವು, ಮಳೆಯ ಸ್ಥಿತಿಯನ್ನು ಪರಿಗಣಿಸಿ ಅಂತಿಮ ತೀರ್ಮಾನ ಉಂಟಾಗಲಿದೆ. ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಸಾಮಾನ್ಯವಾಗಿ ಶಟರ್‌ಗಳನ್ನು ಮುಚ್ಚಲಾಗುತ್ತಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾದ ಕಾರಣ ಈ ಬಗ್ಗೆ ನೀರಾವರಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಅಣೆಕಟ್ಟಿನಲ್ಲಿ ಅರ್ಧಭಾಗ ತೆರೆದು ಬದಲಿಸಬಹುದಾದ ಫೈಬರ್ ಶಟರ್‌ಗಳು ಹಾಗೂ ಉಳಿದರ್ಧ ಯಾಂತ್ರಿಕ ಶಟರ್‌ಗಳಾಗಿವೆ. ಪ್ರತಿ ವರ್ಷವೂ …

೧೮ರ ಯುವತಿ ನಾಪತ್ತೆ

ಮಂಜೇಶ್ವರ: ಮುಳಿಂಜ ಗ್ರಾಮದ ೧೮ರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಮಂಜೇಶ್ವರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈತಿಂಗಳ ೬ರಂದು ರಾತ್ರಿ ತನ್ನ ಮಗಳು ನೆರೆಮನೆಗೆ ಹೋಗುವುದಾಗಿ ತಿಳಿಸಿ ಹೊರಹೋದವಳು ಮತ್ತೆ   ಹಿಂತಿರುಗದೆ ನಾಪತ್ತೆಯಾಗಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾಯಿ ತಿಳಿಸಿದ್ದಾರೆ.

ಮಂಜೇಶ್ವರ ಎಸ್.ಐ.ಗೆ ಆಕ್ರಮಿಸಿದ ತಂಡದಲ್ಲಿ ಕೊಲೆ ಪ್ರಕರಣದ ಆರೋಪಿಯೂ ಶಾಮೀಲು; ಪ್ರಥಮ ಆರೋಪಿ ಗಲ್ಫ್‌ಗೆ ಪರಾರಿ

ಮಂಜೇಶ್ವರ: ರಾತ್ರಿ ಗಸ್ತು ನಡೆಸುತ್ತಿದ್ದಾಗ ಮಂಜೇಶ್ವರ ಎಸ್‌ಐ ಪಿ. ಅನೂಪ್‌ರ ಮೇಲೆ ಆಕ್ರಮಿಸಿದ ಪ್ರಕರಣದಲ್ಲಿ ಕೊಲೆ ಪ್ರಕರಣದ ಆರೋಪಿಯೂ ಶಾಮೀಲಾಗಿರುವು ದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ವರ್ಷಗಳ ಹಿಂದೆ ಉಪ್ಪಳದ ಕುಖ್ಯಾತ ಗೂಂಡಾ ತಂಡದ ನೇತಾರನಾಗಿದ್ದ ಖಾಲಿಯಾ ರಫೀಕ್‌ನನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ ಈತನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಖಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಸೆರೆಹಿಡಿದು ಬಳಿಕ ರಿಮಾಂಡ್‌ನಲ್ಲಿದ್ದ ಆರೋಪಿ ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡು ಊರಿಗೆ ಮರಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆದಿತ್ಯವಾರ ಮುಂಜಾನೆ …