ಕ್ವಾರ್ಟರ್ಸ್ ಬಳಿ ನಿಲ್ಲಿಸಿದ್ದ ಬೈಕ್, ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕ್ವಾರ್ಟರ್ಸ್ ಬಳಿ ನಿಲ್ಲಿಸಿದ್ದ ಬೈಕ್ ಹಾಗೂ ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾನಗರ ಸಮೀಪದ ನ್ಯೂ ಕೋಪಾ ನೈಫ್ ರಸ್ತೆಯಲ್ಲಿರುವ ಕ್ವಾರ್ಟರ್ಸ್‌ನ  ಮುಂದೆ ನಿಲ್ಲಿಸಿದ್ದ ಈ ಎರಡು ವಾಹನ ನಿನ್ನೆ  ಬೆಳಿಗ್ಗೆ ೫ ಗಂಟೆ ವೇಳೆ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಬಗ್ಗೆ ನ್ಯೂ ಕೋಪಾದ ನೂರುದ್ದೀನ್ ಎಂಬವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಎರಡು ದ್ವಿಚಕ್ರ ವಾಹನಗಳು ದೂರುಗಾರರಾದ ನೂರುದ್ದೀನ್‌ರ ಮಕ್ಕಳು ಚಲಾಯಿಸುವ ವಾಹನಗಳಾಗಿವೆ. 70,೦೦೦ ರೂ.ಗಳ ನಷ್ಟ …

ಹಿತ್ತಿಲಲ್ಲಿ ಕಟ್ಟಿ ಹಾಕಿದ 3 ದನಗಳ ಕಳವು : ಹೈನುಗಾರ ಅಬ್ದುಲ್ ಜಲೀಲ್‌ರಿಗೆ ಕಣ್ಣೀರ ಬಕ್ರೀದ್

ಕಾಸರಗೋಡು: ಭಾರೀ ಮಳೆ ಹಿನ್ನೆಲೆಯಲ್ಲಿ ಹಟ್ಟಿಗೆ ನೀರು ಸೇರಿದ ಕಾರಣ ಹಿತ್ತಿಲಲ್ಲಿ ಕಟ್ಟಿಹಾಕಿದ  ಮೂರು ದನಗಳನ್ನು ಕಳವು ನಡೆಸಿದ ಘಟನೆ ನಡೆದಿದೆ. ಕೂಡ್ಲು, ಚೌಕಿ, ಬದರ್‌ನಗರ ನಿವಾಸಿ ಅಬ್ದುಲ್ ಜಲೀಲ್ (47)ರ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಬೆಳಿಗ್ಗೆ ದನಗಳು ನಾಪತ್ತೆಯಾದ ಬಗ್ಗೆ ತಿಳಿದಿರುವುದಾಗಿ ಅಬ್ದುಲ್ ಜಲೀಲ್ ನುಡಿದರು. ಹೈನುಗಾರನಾಗಿರುವ ಇವರು ಇತ್ತೀಚೆಗೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಹಟ್ಟಿಯಲ್ಲಿ ನೀರು ಸೇರಿತ್ತು. ಆದ್ದರಿಂದ ಮನೆ ಸಮೀಪದ ಹಿತ್ತಿಲಿನಲ್ಲಿ …

ಕಾರಿನಲ್ಲಿ ಸಾಗಿಸುತ್ತಿದ್ದ ತಂಬಾಕು ಉತ್ಪನ್ನ ವಶ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ 19,185 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಚೆಟ್ಟುಂಗುಳಿಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ವಿದ್ಯಾನಗರ ಠಾಣೆಯ ಎಸ್‌ಐ ಪ್ರಜೀಶ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಉಳಿಯತ್ತಡ್ಕ ಸಮೀಪದ ನೇಶನಲ್ ನಗರದ ಪಳ್ಳಂ ಹೌಸ್‌ನ ಖಮರುದ್ದೀನ್ ಎ (34) ಮತ್ತು ಸೌತ್ ತೃಕ್ಕರಿಪುರದ ಮೊಹಮ್ಮದ್ ಶಫೀಕ್ (26) ಎಂಬಿವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲು ಸಾಗಿಸಲು ಉಪಯೋಗಿ ಸಲಾದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

20 ಲಕ್ಷ ರೂ. ವ್ಯಯಿಸಿ ನಿರ್ಮಿಸಿದ ವಿಶ್ರಾಂತಿ  ಕೊಠಡಿ, ಶೌಚಾಲಯ ಉಪಯೋಗಶೂನ್ಯ: ಸೀತಾಂಗೋಳಿ ಪೇಟೆಗೆ ಬರುವ ಸಾರ್ವಜನಿಕರಿಗೆ ಸಮಸ್ಯೆ

ಸೀತಾಂಗೋಳಿ: ಸಾರ್ವಜನಿಕ ಬಳಕೆಗಾಗಿ ಸೀತಾಂಗೋಳಿ ಪೇಟೆಯಲ್ಲಿ 20 ಲಕ್ಷರೂಪಾಯಿ ವ್ಯಯಿಸಿ ನಿರ್ಮಿ ಸಿದ ಶೌಚಾಲಯ ಸಹಿತ ವಿಶ್ರಾಂತಿ ಕೊಠಡಿ ಉಪ ಯೋಗವಿಲ್ಲದೆ ಪ್ರದ ರ್ಶನ ವಸ್ತುವಾಗಿ ಉಳಿದುಕೊಂಡಿದೆ. ಪುತ್ತಿಗೆ ಪಂಚಾಯತ್ ಫಂಡ್ ನಿಂದ ಹಣ ಬಳಸಿ ನಿರ್ಮಿಸಿದ ಈ ಕಟ್ಟಡ ನಿರ್ಮಾಣಗೊಂಡು ಹಲವು ಕಾಲ ಉದ್ಘಾಟನೆಗೊಳ್ಳದೆ ಉಳಿದಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟ ಗೊಂಡ ಬಳಿಕ ಎಚ್ಚೆತ್ತ ಅಧಿಕಾರಿಗಳು ಕಟ್ಟಡ  ಉದ್ಘಾಟಿಸಿದ್ದರು. ಅನಂತರ ಎರಡು ತಿಂಗಳು ಅದು ಕಾರ್ಯಾಚರಿ ಸಿತ್ತು. ಅನಂತರ ಅದು ತೆರೆಯದೆ ಹಾಗೆಯೇ …

ವಿಶ್ವ ಪರಿಸರ ದಿನಾಚರಣೆಯಂಗವಾಗಿ ರಾಜ್ ಭವನದಲ್ಲಿ ಭಾರತಾಂಬೆಯ ಫೋಟೋ ಇರಿಸಿ ಪುಷ್ಚಾರ್ಚನೆ; ಸಮಾರಂಭ ಬಹಿಷ್ಕರಿಸಿದ ಕೃಷಿ ಸಚಿವ, ವಿವಾದಕ್ಕೆ ನಾಂದಿ

ತಿರುವನಂತಪುರ: ವಿಶ್ವ ಪರಿಸರ ದಿನಾಚರಣೆ ದಿನವಾದ ನಿನ್ನೆ ಕೃಷಿ ಇಲಾಖೆಯ ಆಶ್ರಯದಲ್ಲಿ ರಾಜ್‌ಭವನದಲ್ಲಿ ಆಯೋಜಿಸಿದ ಸರಕಾರಿ ಕಾರ್ಯಕ್ರಮದಲ್ಲಿ ಭಾರತಾಂಬೆಯ ಫೋಟೋ ಇರಿಸಿ ಅದಕ್ಕೆ ಪುಷ್ಪಾರ್ಚನೆ ನಡೆಸುವುದನ್ನು ಪ್ರತಿಭಟಿಸಿ ಕೃಷಿ ಸಚಿವ ಪಿ. ಪ್ರಸಾದ್   ಆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರ ನಡೆದ ಬೆಳವಣಿಗೆ ನಡೆದಿದೆ. ಸಮಾರಂಭದಲ್ಲಿ ಭಾರತಾಂಬೆಯ ಪೋಟೋ ಇರಿಸಿದ್ದುದನ್ನು ತೆರವುಗೊಳಿಸುವಂತೆ ಕೃಷಿ ಸಚಿವರು ಆಗ್ರಹಿಸಿದ್ದರು. ಆದರೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅದನ್ನು ನಿರಾಕರಿಸಿದಾಗ ಅದನ್ನು ಪ್ರತಿಭಟಿಸಿ ಕೃಷಿ ಸಚಿವರು ಆ ಸಮಾರಂಭವನ್ನು ಬಹಿಷ್ಕರಿಸಿ ಹೊರ ನಡೆದರು. ಸಚಿವರು  …

ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು

ಕಣ್ಣೂರು: ಕಡವತ್ತೂರು ಕಲ್ಲಾಚ್ಚೇರಿ ಕಡವು ಸಮೀಪ ಹೊಳೆಯ ನೀರಿಗೆ ಬಿದ್ದು ಯುವಕ ಮೃತಪಟ್ಟನು.  ತೆಕ್ಕಿಲ್ ಮುಹಮ್ಮದ್ (21) ಮೃತಪಟ್ಟ ಯುವಕ. ನಿನ್ನೆ ಸಂಜೆ 6 ಗಂಟೆಗೆ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿದ್ದ ಮಧ್ಯೆ ಸೆಳೆತಕ್ಕೆ ಸಿಲುಕಿ ಅಪಾಯ ಸಂಭವಿಸಿದೆ. ಕೂಡಲೇ ತಲಶ್ಶೇರಿ ಖಾಸಗಿ ಆಸ್ಪತ್ರೆಗೆ ತಲುಪಿಸಿದ ರಾದರೂ ಜೀವ ಉಳಿಸಲು ಸಾಧ್ಯವಾಗ ಲಿಲ್ಲ. ಆಟೋ ಚಾಲಕ ತೆಕ್ಕಿಲ್ ಸಲೀಂ- ಅಫ್ಸ ದಂಪತಿ ಪುತ್ರನಾಗಿದ್ದಾನೆ.

ಬಿದ್ದರೆ ಅಪಾಯ: ಎಚ್ಚೆತ್ತರೆ ತಪ್ಪಿಸಬಹುದು; ಆದೂರಿನಲ್ಲಿ ವಿದ್ಯುತ್ ಕಂಬ ಧರಾಶಾಯಿ ಸಾಧ್ಯತೆ

ಮುಳ್ಳೇರಿಯ: ಆದೂರಿನಲ್ಲಿ ವಿದ್ಯುತ್ ಕಂಬವೊಂದು ಅಪಾಯವನ್ನು ಕೈಬೀಸಿ ಆಹ್ವಾನಿಸುತ್ತಿದ್ದರೂ, ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ. ನಿತ್ಯ ಜನಜಂಗುಳಿಯಿಂದ ಕೂಡಿದ ಆದೂರು ಬಸ್ ತಂಗುದಾಣದ ಬಳಿಯಲ್ಲೇ ಇರುವ ಈ ವಿದ್ಯುತ್ ಕಂಬ ಯಾವುದೇ ಕ್ಷಣ ಧರಾಶಾಯಿಯಾಗುವ ಸ್ಥಿತಿ ಇದೆ. ಮುಳ್ಳೇರಿಯದಿಂದ ಪಡ್ಯತ್ತಡ್ಕವರೆಗೆ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಈ ವೇಳೆ ರಸ್ತೆ ಬದಿ ನೀರು  ಹರಿದು ಹೋಗಲು ತಾತ್ಕಾಲಿಕ ಚರಂಡಿ ನಿರ್ಮಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿದ  ಮಳೆಗೆ ನೀರೆಲ್ಲ ಹರಿದು ವಿದ್ಯುತ್ ಕಂಬದ ಬುಡದ ಮಣ್ಣು ನೀರಿನೊಂದಿಗೆ ಹೋಗಿದೆ. …

ಸಾರಿಗೆ ಕಾನೂನು ಉಲ್ಲಂಘನೆಗೆ ನೋಟೀಸು ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ನಿರ್ದೇಶಿಸಿದ ಸಚಿವ ಗಣೇಶ್ ಕುಮಾರ್

ಕುಂಬಳೆ: ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಂತೆ ಕುಂಬಳೆ ಪರಿಸರದ 400ರಷ್ಟು ಮಂದಿಗೆ ನೋ ಟೀಸು ನೀಡಿದ ಘಟನೆಗೆ ಸಂಬಂಧಿಸಿ ಸಾರಿಗೆ ಇಲಾಖೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಮಧ್ಯಪ್ರವೇಶಿಸಿದ್ದಾರೆ. ಘಟನೆ ಕುರಿತು ತುರ್ತಾಗಿ ವರದಿ ಸಲ್ಲಿಸುವಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸಚಿವ ನಿರ್ದೇಶ ನೀಡಿದ್ದಾರೆ. ಸಾರಿಗೆ ಕಾನೂನು ಉಲ್ಲಂಘನೆ ಹೆಸರಲ್ಲಿ ಹಲವು ಮಂದಿಗೆ ಏಕ ಕಾಲದಲ್ಲಿ ನೋಟೀಸು ಲಭಿಸಿದ ಬಗ್ಗೆ ಇತ್ತೀಚೆಗೆ ‘ಕಾರವಲ್’ ವರದಿ ಪ್ರಕಟಿಸಿತ್ತು. ಕುಂಬಳೆ ಪೇಟೆ ಬಳಿಯ ರಸ್ತೆ ಡಿವೈಡರ್‌ನಲ್ಲಿ 2023ರಲ್ಲಿ ಎ.ಐ. ಕ್ಯಾಮರಾ …

ವಿಷಾಹಾರ: ಅಣಬೆ ತಿಂದ 6 ಮಂದಿ ಆಸ್ಪತ್ರೆಗೆ ದಾಖಲು

ಕಲ್ಲಿಕೋಟೆ: ತಾಮರಶ್ಶೇರಿ ಪೂನೂರ್‌ನಲ್ಲಿ ವಿಷಯುಕ್ತ ಅಣಬೆ ಅಡುಗೆ ಮಾಡಿ ಸೇವಿಸಿದ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿ ಸಲಾಗಿದೆ. ವಾಂತಿ ಹಾಗೂ ಅಸ್ವಸ್ಥತೆ ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿ ಲಾಗಿದೆ. ಪೂನೂರ್ ನಿವಾಸಿ ಅಬೂಬಕ್ಕರ್, ಶಬ್ನ, ಸೈದ, ಫಿರೋಸ್, ದಿಯಾ ಫೆಬಿನ್, ಮುಹಮ್ಮದ್ ರಸಾನ್ ಎಂಬಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿತ್ತಿಲಿನಿಂದ ಲಭಿಸಿದ ಅಣಬೆಯನ್ನು ಸ್ಥಳೀಯ ಎರಡು ಕುಟುಂಬಗಳು ನಿನ್ನೆ ಅಡುಗೆ ಮಾಡಿ ಸೇವಿಸಿದ್ದರು. ಇವರಿಗೆ ವಾಂತಿ ಹಾಗೂ ಅಸ್ವಸ್ಥತೆ ಉಂಟಾಗಿ ಆಸ್ಪತ್ರೆಗೆ …

ತಲಕ್ಲಾಯಿ ಕಣ್ಣೋತ್ ಕ್ಷೇತ್ರಗಳ ಆಡಳಿತ ನಿರ್ವಹಣೆ ಪರಿಪಾಲನಾ ಸಮಿತಿಗೆ

ಕಾಸರಗೋಡು: ಹಲವು ವರ್ಷಗಳಿಂದ ಪಾಲಮಂಗಲಂ ಇಲ್ಲಂನವರ ನಿಯಂತ್ರಣದಲ್ಲಿದ್ದ ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಕಣ್ಣೋತ್ ಶ್ರೀ ಮಹಾವಿಷ್ಣು ಕ್ಷೇತ್ರಗಳ ಆಡಳಿತ ನಿರ್ವಹಣೆಯನ್ನು ಟ್ರಸ್ಟಿ ಕುಟುಂಬಗಳು ಸಹಿತ ಒಳಗೊಂಡು ನಾಗರಿಕರ ನೇತೃತ್ವದಲ್ಲಿ ರೂಪೀಕರಿಸಿದ ಪರಿಪಾಲನಾ ಸಮಿತಿ ವಹಿಸಿಕೊಂಡಿದೆ.ಹಲವು ವರ್ಷಗಳ ಇತಿಹಾಸವುಳ್ಳ ಈ ಕ್ಷೇತ್ರಗಳು ಪಾಲಮಂಗಲ ಕುಟುಂಬದ ಹಿರಿಯ ಸದಸ್ಯರು ಟ್ರಸ್ಟಿಗಳಾಗಿ ಪರಿಪಾಲನೆ ನಡೆಸುತ್ತಿದ್ದರು. ಟ್ರಸ್ಟಿ ಕುಟುಂಬಗಳ ಮಧ್ಯೆ ನಡೆದ ಚರ್ಚೆಯಲ್ಲಿ ಈ ಎರಡೂ ಕ್ಷೇತ್ರಗಳ ಮುಂದಿನ ಚಟುವಟಿಕೆಯನ್ನು ಪರಿಪಾಲನಾ ಸಮಿತಿಗೆ ಹಸ್ತಾಂತರಿಸಲಾಗಿದೆ. ಕ್ಷೇತ್ರದ ದಾಖಲೆ ಪತ್ರಗಳು ಮೊದಲಾದವುಗಳನ್ನು …