ವಿದ್ಯಾನಗರ ಪೊಲೀಸರ ಪಕ್ಷಪಾತ ನೀತಿ ಕೊನೆಗೊಳಿಸಲು ವಿಎಚ್‌ಪಿ ಆಗ್ರಹ

ಕಾಸರಗೋಡು: ವಿದ್ಯಾನಗರ ಠಾಣೆಯ ಪೊಲೀಸರು ಪಕ್ಷಪಾತ ನಿಲುವು ಕೊನೆಗೊಳಿಸಬೇಕೆಂದು ವಿಎಚ್‌ಪಿ ಆಗ್ರಹಿಸಿದೆ. ಎಡನೀರು ಕಳರಿಯಲ್ಲಿ ಸ್ಥಾಪಿಸಲಾಗಿದ್ದ ಓಂಕಾರ ಧ್ವಜ, ತೋರಣಗಳನ್ನು ತೆರವುಗೊಳಿಸಿದ ಘಟನೆಯನ್ನು ವಿಶ್ವಹಿಂದು ಪರಿಷತ್ ಖಂಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಿಪಿಎಂ ಬೆಂಬಲಿಗರಲ್ಲದ ಇತರ ಪಕ್ಷ ದವರು ನಡೆಸುವ ಧಾರ್ಮಿಕ ಕಾರ್ಯ ಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡದೆ ಸಿಪಿಎಂನ ನಿಲುವನ್ನೇ ಪೊಲೀಸರು ಕೂಡ ಬೆಂಬಲಿಸುತ್ತಿದ್ದಾ ರೆಂದು ವಿಎಚ್‌ಪಿ ದೂರಿದೆ. ಸಾರ್ವಜ ನಿಕ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಹಲವು ವರ್ಷಗಳಿಂ ದ ಸ್ಥಾಪಿಸಿರುವ ಸಿಪಿಎಂ ಧ್ವಜ, …

ಸೌದಿ ಅರೇಬಿಯಾದಲ್ಲಿ ಕಾಸರಗೋಡು ನಿವಾಸಿ ಗುಂಡೇಟಿಗೆ ಬಲಿ

ಕಾಸರಗೋಡು: ಕಾಸರಗೋಡು ಖಾಸಗಿ ಬಸ್ಸೊಂದರ ಚಾಲಕ ಸೌದಿ ಅರೇಬಿಯಾದಲ್ಲಿ ಗುಂಡೇಟು ತಗಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂದಡ್ಕ ಏಣಿಂiiಡಿ ನಿವಾಸಿ  ಕುಂಬಕ್ಕೋಡು ಮುಹಮ್ಮದ್ ಬಷೀರ್ (42) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ರಾತ್ರಿ 12 ಗಂಟೆ ವೇಳೆಗೆ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ ಸ್ಥಳದಲ್ಲಿ ತಮ್ಮ ಕಾರಿನ ಬಳಿಯಲ್ಲೇ ಗುಂಡೇಟು ತಗಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತೆರುವತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ನಡಾವಳಿ ಮಹೋತ್ಸವ: ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ತೆರುವತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ಮುಂ ದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ನಡಾವಳಿ ಉತ್ಸವ ಹಾಗೂ ಬ್ರಹ್ಮಕಲ ಶೋತ್ಸವದ ಪೂರ್ವ ಭಾವಿಯಾಗಿ ಸ್ವಾಗತ ಸಮಿತಿ ರೂಪೀ ಕರಣ ಸಭೆ ಕ್ಷೇತ್ರದ ಕಲ್ಯಾಣ ಮಂಟಪ ದಲ್ಲಿ ನಿನ್ನೆ ಜರಗಿತು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಕೋಟೆಕಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಚ್ಚಮ್ಮಾರ್, ಮಡಯನ್, ಮೂತಚೆಟ್ಟಿ ಯಾರ್ ಸಹಿತ ಹಲವರು ಉಪಸ್ಥಿತ ರಿದ್ದರು. ಮೂತಚೆಟ್ಟಿಯಾರ್ ರಾಘವ ಮಾಯಿಪ್ಪಾಡಿ, ಕೆ.ಎನ್. ಕಮ ಲಾಕ್ಷನ್, ನಾರಾಯಣ ವಡಕ್ಕೇವೀಡ್ …

ಮನೆಮಂದಿ ಶಾಪಿಂಗ್‌ಗೆ ತೆರಳಿದಾಗ ನುಗ್ಗಿದ ಕಳ್ಳರು: 22 ಪವನ್ ಚಿನ್ನಾಭರಣ ದೋಚಿ ಪರಾರಿ

ಕಾಸರಗೋಡು: ಮನೆ ಮಂದಿ ಹಬ್ಬದ ಬಟ್ಟೆಬರೆ, ಮಕ್ಕಳ ಸಮವಸ್ತ್ರ ಖರೀದಿಗೆಂದು ತೆರಳಿದ ಸಮಯದಲ್ಲಿ ಮನೆಗೆ ನುಗ್ಗಿ 22 ಪವನ್ ಚಿನ್ನಾಭ ರಣಗಳನ್ನು ಕಳವುಗೈಯ್ಯಲಾಗಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಯಾಟ್ ಬ್ಯಾಂಕ್‌ಗೆ ಸಮೀಪದ ನಿವಾಸಿ ಎಂ.ಕೆ. ಜುಸೀಲರ ಮನೆಯಿಂದ ಕಳವು ನಡೆಸಲಾಗಿದೆ. ಜುಸೀಲ ಹಾಗೂ ಕುಟುಂಬ ನಿನ್ನೆ ಸಂಜೆ ಮೂರೂವರೆ ಗಂಟೆಗೆ ಮನೆಗೆ ಬೀಗ ಜಡಿದು ಪಯ್ಯನ್ನೂರಿಗೆ ಶಾಪಿಂಗ್‌ಗಾಗಿ ತೆರಳಿದ್ದರು. ರಾತ್ರಿ 9.45ರ ವೇಳೆಗೆ ಹಿಂತಿರುಗಿದಾಗ ಕಳವು ನಡೆದ ಬಗ್ಗೆ ತಿಳಿದು ಬಂದಿದೆ.  ದ್ವಿಮಹಡಿ ಮನೆಯ ಮುಂಭಾಗದ …

ಮಳೆ: ರಾಜ್ಯದಲ್ಲಿ ನಿನ್ನೆ ಮಾತ್ರವಾಗಿ 7 ಸಾವು: 10 ಬೆಸ್ತರು ನಾಪತ್ತೆ

ಕಾಸರಗೋಡು: ರಾಜ್ಯದಲ್ಲಿ ಜಡಿಮಳೆ ಸುರಿಯುವಿಕೆ ನಿರಂತ ರವಾಗಿ ಮುಂದುವರಿಯುತ್ತಿದ್ದು, ಮುಂದಿನ ೫ ದಿನಗಳ ತನಕ ಮಳೆ ಇದೇ ರೀತಿ ಮುಂದುವರಿಯಲಿದೆ ಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮಾತ್ರವಲ್ಲ ಕಾಸರಗೋಡು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್, ಉಳಿದ 11 ಜಿಲ್ಲೆಗಳಲ್ಲ್ಲಿ ಆರೆಂಜ್ ಎಲರ್ಟ್ ಘೋಷಿಸಲಾಗಿದೆ. ಧಾರಾಕಾರ ಮಳೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ  ಪ್ರವಾಹ ಸದೃಶ ಪ್ರತೀತಿ ಸೃಷ್ಟಿಸಿದೆ. ಪ್ರಾಕೃತಿಕ ವಿಕೋಪಕ್ಕೆ  ಮಧೂರು ಪಟ್ಲದಲ್ಲಿ ಓರ್ವ ಯುವಕ ಸೇರಿದಂತೆ ನಿನ್ನೆ ಮಾತ್ರವಾಗಿ 7 ಮಂದಿ …

ಪಟ್ಲದಲ್ಲಿ ಹೊಳೆ ನೀರಿನ ಸೆಳೆತಕ್ಕೆ ಸಿಲುಕಿ  ಗಲ್ಫ್ ಉದ್ಯೋಗಿ ಯುವಕ ಸಾವು

ಕಾಸರಗೋಡು: ಮಧೂರಿಗೆ ಸಮೀಪದ ಪಟ್ಲದಲ್ಲಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಪಾಲಕುನ್ನು ರೈಲು ನಿಲ್ದಾಣ ರಸ್ತೆ ಬಳಿಯ ಫಾಲ್ಕನ್ ಟೆಕ್ಸ್ ಟೈಲ್ ಅಂಗಡಿ ಮಾಲಕ ಪಿ.ಕೆ. ಅಬ್ದುಲ್ ಅಸೀಸ್-ಅಸ್ಮಾ  ದಂಪತಿ ಪುತ್ರ  ಪಾಲಕುನ್ನು ಕರಿಪ್ಪೊಡಿ ನಿವಾಸಿ ಸಾದಿಕ್ (39) ಸಾವನ್ನಪ್ಪಿದ ದುರ್ದೈವಿ. ಗಲ್ಫ್ ಉದ್ಯೋಗಿಯಾ ಗಿರುವ ಸಾದಿಕ್ ಒಂದು ವಾರದ ಹಿಂದೆಯಷ್ಟೇ ಊರಿಗೆ  ಬಂದಿದ್ದರು. ಇವರು ಕರಿಪ್ಪೊಡಿ ಯಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದು ಅದರ ನಿರ್ಮಾಣ …

ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಲಾರಿ ಢಿಕ್ಕಿ: ಯುವತಿ ಸಾವಿನಿಂದ ಶೋಕಸಾಗರ

ಉಪ್ಪಳ: ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ವಾಹನ ಅಪಘಾತದಲ್ಲಿ ಯುವತಿಯೋರ್ವೆ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮಂಗಳೂರು ಪಡೀಲ್ ಅಳಕ್ಕೆ ನಿವಾಸಿ ಪದ್ಮನಾಭ ಆಚಾರ್ಯರ ಪತ್ನಿ ನವ್ಯ (34) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಪಘಾತದಲ್ಲಿ ಪದ್ಮನಾಭ ಆಚಾರ್ಯ ಹಾಗೂ ಪುತ್ರ ಗಯಾನ್ ಗಾಯಗೊಂಡಿದ್ದಾರೆ. ಈ ಮೂವರು ಸಂಚರಿಸುತ್ತಿದ್ದ ಕಾರಿಗೆ ಮೀನು ಸಾಗಾಟ ಲಾರಿಢಿಕ್ಕಿ ಹೊಡೆದು  ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಈ ಮೂವರನ್ನು ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ನವ್ಯ ಮೃತಪಟ್ಟಿದ್ದಾರೆ. …

ಹೋಟೆಲ್‌ನಲ್ಲಿ ತಪಾಸಣೆಗೆ ತಲುಪಿದ ಅಬಕಾರಿ ಅಧಿಕಾರಿಗೆ ಹಲ್ಲೆ: ಆರೋಪಿಗೆ ಎರಡು ವರ್ಷ ಸಜೆ, ದಂಡ

ಕಾಸರಗೋಡು:  ಹೋಟೆಲ್‌ನಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದ ಅಬಕಾರಿ ಅಧಿಕಾರಿ ಮೇಲೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದಲ್ಲಿ ಆರೋಪಿಗೆ ಕಾಸರಗೋಡು ಅಡಿಶನಲ್ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಪ್ರಿಯ ಕೆ. ಅವರು ಎರಡು ವರ್ಷ ಸಜೆ ಹಾಗೂ 20,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಕೊಯಿಪ್ಪಾಡಿ ಗ್ರಾಮದ ಕುಂಟಂಗೇರಡ್ಕ ನಿವಾಸಿ ಅಣ್ಣಿ ಪ್ರಭಾಕರ (61) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 2021 ಎಪ್ರಿಲ್ …

ಸರ್ವೀಸ್ ಸ್ಟೇಶನ್ ನಿರ್ವಹಣೆಗಾರ ಹೃದಯಾಘಾತದಿಂದ ನಿಧನ

ಕಾಸರಗೋಡು: ವಿದ್ಯಾನಗರ ಪೆಟ್ರೋಲ್ ಬಂಕ್‌ನೊಂದಿಗೆ ಹೊಂದಿಕೊಂಡು ಸರ್ವೀಸ್ ಸ್ಟೇಶನ್ ನಡೆಸುತ್ತಿದ್ದ  ಮುಳ್ಳೇ ರಿಯ ಕೋಳಿಯಡ್ಕ ನಿವಾಸಿ ಉದಯನ್ ಬಿ (54) ಎಂಬ ವರು ಹೃದಯಾಘಾ ತದಿಂದ ನಿಧನಹೊಂದಿದರು. ನಿನ್ನೆ ರಾತ್ರಿ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿ ಮರಳುತ್ತಿದ್ದಾಗ ಇವರಿಗೆ ಎದೆನೋವು ಕಾಣಿಸಿಕೊಂ ಡಿತ್ತೆನ್ನಲಾಗಿದೆ. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸ ಣೆಗೊಳಗಾಗಿದ್ದು ಅಷ್ಟರಲ್ಲಿ ಕುಸಿದು ಬಿದ್ದು ಮೃತ ಪಟ್ಟರೆನ್ನಲಾಗಿದೆ. ಮೃತರು ತಾಯಿ, ಪತ್ನಿ ಶಾಂತ, ಪುತ್ರ ವಿನೋದ್, ಪುತ್ರಿ, ಸಹೋದರ, ಸಹೋದರಿ ಸಹಿತ  ಅಪಾರ ಬಂಧು-ಮಿತ್ರರನ್ನು …

ಕುಂಬಳೆ ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ನೀರು: ಸಂಚಾರಕ್ಕೆ ಸಮಸ್ಯೆ

ಕುಂಬಳೆ: ಕುಂಬಳೆ ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ನೀರು ತುಂಬಿಕೊಂಡಿದ್ದು ಇದರಿಂದ ಕೊಯಿಪ್ಪಾಡಿ ಕಡಪ್ಪುರದ ಜನರಿಗೆ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಬತ್ತೇರಿ, ಕೊಯಿಪ್ಪಾಡಿ ಭಾಗಕ್ಕೆ ತೆರಳಬೇಕಾದರೆ ಇದೇ ಅಂಡರ್ ಪ್ಯಾಸೇಜ್‌ನಲ್ಲಿ ಸಾಗಬೇಕು. ಆದರೆ ಈಗಾಗಲೇ ಸುರಿದ ಮಳೆಯ ನೀರು ಅದರಲ್ಲಿ ಕಟ್ಟಿ ನಿಂತಿದ್ದು, ಸಂಚಾರ ಸಮಸ್ಯೆ  ಎದುರಾಗಿದೆ. ನಿನ್ನೆ ಈ ಅಂಡರ್ ಪ್ಯಾಸೇಜ್‌ನೊಳಗೆ  ನೀರಿನಲ್ಲಿ ಕಾರೊಂದು ಸಿಲುಕಿಕೊಂಡಿತ್ತು. ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ಸಾಗಲು  ಸಾಧ್ಯವಾಗದಿದ್ದಲ್ಲಿ ಕುಂಬಳೆ ಪೇಟೆಗೆ ಬರುವವರು ರೈಲು ಹಳಿ ದಾಟಬೇಕಾಗಿ ಬರಲಿದೆ. ಇದು  ಅಪಾಯಕ್ಕೂ ಕಾರಣವಾಗಲಿದೆಯೆಂದು …