ಮಾನಸಿಕ ಅಸ್ವಸ್ಥತೆ ಹೊಂದಿರುವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ 167 ವರ್ಷ ಸಜೆ ಮತ್ತು 5.50 ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 14ರ ಹರೆಯದ ಬಾಲಕಿಯನ್ನು ರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ರಿಕ್ಷಾ ಚಾಲಕನಿಗೆ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ಚಂದ್ರ ಬಾನು ಅವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 167 ವರ್ಷ ಕಠಿಣ ಸಜೆ ಹಾಗೂ 5,50,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 22 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.ಚೆಂಗಳ ಪಾಣಳಂ ನಿವಾಸಿ ಉಸ್ಮಾನ್ ಅಲಿಯಾಸ್ …

ಉಕ್ಕಿ ಹರಿದ ಸುವರ್ಣಗಿರಿ ಹೊಳೆ: ಕ್ಷೇತ್ರ, ಮನೆಗಳು ಜಲಾವೃತ; ಮನೆಗಳ ಮೇಲೆ ಗುಡ್ಡೆ ಕುಸಿತ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ಹೊಳೆ ಉಕ್ಕಿ ಹರಿದ ಪರಿಣಾಮ ಅಲ್ಲಿ ಶ್ರೀ ಶಾಸ್ತಾವುಕ್ಷೇತ್ರ ಸಮೀಪದಲ್ಲಿರುವ ಅರ್ಚಕರ ಮನೆಗೆ ನೀರು ನುಗ್ಗಿದೆ. ಅಲ್ಲದೆ ಪರಿಸರ ಪ್ರದೇಶದಲ್ಲಿರುವ ತೋಟ ಹಾಗೂ ಮನೆಗಳಿಗೂ ನೀರು ನುಗ್ಗಿದೆ.  ಕುಬಣೂರು ರಸ್ತೆಯಲ್ಲಿ ನೀರು ತುಂಬಿ ಕೊಂಡು ಶಾಂತಿಗುರಿ-ಕುಬಣೂರು-ವಿದ್ಯಾನಗರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಲಾಲ್‌ಬಾಗ್‌ನಿಂದ ಶಿರಂತಡ್ಕಕ್ಕೆ ತೆರಳುವ  ರಸ್ತೆಗೆ ಗುಡ್ಡೆ ಕುಸಿದಿದೆ. ಇದರಿಂದ ಎಚ್.ಟಿ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ …

ಪೆರ್ಲ-ವಾಣಿನಗರ ರಸ್ತೆಯಲ್ಲಿ ಸಂಚಾರ ಸಂಕಷ್ಟ: ಇಕ್ಕಡೆಗಳಲ್ಲಿ ತಂಬಿಕೊಂಡ ರೆಂಬೆಗಳಿಂದ ವಾಹನಗಳಿಗೆ ಹಾನಿ

ಪೆರ್ಲ: ಪೆರ್ಲದಿಂದ ಸ್ವರ್ಗ ವಾಣಿನಗರಕ್ಕೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ವಾಹನ ಚಾಲಕರು ತಿಳಿಸಿದ್ದಾರೆ. ಈ ದಾರಿಯಲ್ಲಿ ದಿನವೂ ಒಂದೊಂದು ಮರ ಅಲ್ಲಲ್ಲಿ ಬಿದ್ದು ಬಸ್ ಸಂಚಾರ ಮೊಟಕುಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ರಸ್ತೆಯ ಇಕ್ಕಡೆಗಳಲ್ಲೂ ಮರಗಳ ರೆಂಬೆಗಳು ರಸ್ತೆಗೆ ಬಾಗಿಕೊಂಡಿದ್ದು, ವಾಹನಗಳಿಗೆ ಸೈಡ್ ನೀಡಲು, ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ ಎಂದು ದೂರಿದ್ದಾರೆ. ಬಸ್ ಸಹಿತ ವಾಹನಗಳು ಸಾಗುವಾಗ ಮರದ ರೆಂಬೆಗಳು ವಾಹನಗಳಿಗೆ ತಾಗುತ್ತಿದ್ದು, ಇದರಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂದು ದೂರಿದ್ದಾರೆ. ದಿನವೂ ಈ …

ಕೃಷಿ ಪರಿಪಾಲನೆ ಯೋಜನೆಯಲ್ಲಿ ಆರ್ಥಿಕ ಅವ್ಯವಹಾರ ಪ್ರಕರಣ: ಕಾಸರಗೋಡಿನ ನಿವೃತ್ತ ಕೃಷಿ ಸಹ ನಿರ್ದೇಶಕರಿಗೆ 37 ವರ್ಷ ಸಜೆ, 15 ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಕೃಷ್ಯುತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಗುರುತಿಸಲು ರಾಜ್ಯ ಸರಕಾರ ಮಂಜೂರು ಮಾಡಿದ ಹಣದಲ್ಲಿ ಆರ್ಥಿಕ ಅವ್ಯವಹಾರ ನಡೆಸಿದ ಪ್ರಕರಣದಲ್ಲಿ ಕಾಸರಗೋಡು ಪ್ರಿನ್ಸಿಪಲ್ ಕೃಷಿ ಕಚೇರಿಯ ನಿವೃತ್ತ ಸಹಾಯಕ ನಿರ್ದೇಶಕ ಕಲ್ಲಿಕೋಟೆ ಫಾರೂಕ್ ಪೇಟ್ಟಾ ಪುನಿಯಾಲ್ ಹೌಸ್ನ ಎಂ. ಅಬ್ದುಲ್ ರಹೀಂ (66)ರಿಗೆ ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ರಾಮಕೃಷ್ಣನ್ರವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 37 ವರ್ಷ ಸಜೆ ಹಾಗೂ 15 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. …

ಮುಂಬಯಿಯಲ್ಲಿ ಅಪಘಾತ: ಚಿಕಿತ್ಸೆಯಲ್ಲಿದ್ದ ಉಪ್ಪಳ ನಿವಾಸಿ ಮೃತ್ಯು

ಉಪ್ಪಳ: ನವಿಮುಂಬಯಿಯಲ್ಲಿ ಕಾರು ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಉಪ್ಪಳ ನಿವಾಸಿ ಮೃತಪಟ್ಟರು. ಮುಂಬಯಿ ವಿಮಾನ ನಿಲ್ದಾಣದ ನಿವೃತ್ತ ಕಸ್ಟಮ್ಸ್ ಅಧಿಕಾರಿ ಉಪ್ಪಳ ಮಳ್ಳಂಗೈ ನಾಟೆಕಲ್ ನಿವಾಸಿ ಅಬ್ದುಲ್ ಖಾದರ್ (78) ಮೃತಪಟ್ಟವರು. ಹಲವು ವರ್ಷಗಳಿಂದ ಇವರು ಕುಟುಂಬ ಸಮೇತ ನವಿ ಮುಂಬ ಯಿಯಲ್ಲಿ ವಾಸವಾಗಿದ್ದಾರೆ. ಕಳೆದ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಇವರು ಗಂಭೀರ ಗಾಯಗೊಂಡಿದ್ದರು. ನಿನ್ನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಸುಹರಾ, ಮಕ್ಕಳಾದ ಫರ್ಸೀನ, ರಿಸ್ವಾನ, ನಸ್ರಾನ ಹಾಗೂ …

ಹೊಲಿಗೆದಾರರ ಸಂಘಟನೆಯ ಮುಖಂಡ ಸುಂದರನ್ ಕೋಹಿನೂರ್ ನಿಧನಕ್ಕೆ ಸಂತಾಪ

ಕಾಸರಗೋಡು: ರಾಜ್ಯ ಹೊಲಿಗೆದಾರರ ಸಂಘಟನೆಯ ಸಂಸ್ಥಾಪಕ ಮುಖಂಡ ಹಾಗೂ ಕೆಎಸ್‌ಟಿಎ ರಾಜ್ಯ ಮಾಜಿ  ಉಪಾಧ್ಯಕ್ಷ ಸುಂದರನ್ ಕೋಹಿನೂರ್‌ರವರ ನಿಧನಕ್ಕೆ ಸಂಘಟನೆಯ ಜಿಲ್ಲಾ ಸಮಿತಿ ಸಂತಾಪ ಸೂಚಿಸಿತು. ಈ ಬಗ್ಗೆ ನಡೆದ ಸಭೆಯಲ್ಲಿ ಮಧೂರು ಪಂಚಾಯತ್ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ, ಕೆಎಸ್‌ಟಿಎ ಜಿಲ್ಲಾ ಕಾರ್ಯದರ್ಶಿ  ಪಿ.ಯು. ಶಂಕರನ್,  ಮಾಜಿ ರಾಜ್ಯಾಧ್ಯಕ್ಷ ರಾಮನ್ ಚೆನ್ನಿಕ್ಕರ, ರಾಜ್ಯ ಸಮಿತಿ ಸದಸ್ಯ ಮೋಹನ್‌ದಾಸ್ ಕುಂಬಳೆ, ಶಂಕರನ್ ಅಣಂಗೂರು, ಘಟಕಾಧ್ಯಕ್ಷ ರಮೇಶ್ ಓಸಾರ್, ಜಿಲ್ಲಾಧ್ಯಕ್ಷ ಸುರೇಶ್ ಭಟ್, ಉಪಾಧ್ಯಕ್ಷ ಉದಯನ್ ಮಾತನಾಡಿದರು.

ಸಂದರ್ಶನ ದಿನಾಂಕ ಮುಂದೂಡಿಕೆ

ಮಂಜೇಶ್ವರ: ಇಲ್ಲಿನ ಗೋವಿಂದಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಕನ್ನಡ ವಿಷಯಕ್ಕೆ  ಅತಿಥಿ ಅಧ್ಯಾಪಕರನ್ನು ನೇಮಕಗೊಳಿಸಲು ಜೂನ್ 2ರಂದು ಬೆಳಿಗ್ಗೆ 11.30ಕ್ಕೆ ನಿಗದಿ ಪಡಿಸಿದ್ದ ಸಂದರ್ಶನವನ್ನು 3ರಂದು ಬೆಳಿಗ್ಗೆ 11 ಗಂಟೆಗೆ ಮುಂದೂಡಿರುವುದಾಗಿ ತಿಳಿಸಲಾಗಿದೆ. ಕಲ್ಲಿಕೋಟೆ ಕಾಲೇಜು ಶಿಕ್ಷಣ ಡೆಪ್ಯೂಟಿ ಡೈರೆಕ್ಟರ್ ಪ್ರಕಟಿಸಿದ ಪ್ಯಾನಲ್‌ನಲ್ಲಿ ಒಳಗೊಂಡವರು ಜನನ ದಿನಾಂಕ, ಶಿಕ್ಷಣ ಅರ್ಹತೆ, ಅನುಭವ ದೃಢೀಕರಿಸುವ ಪ್ರಮಾಣಪತ್ರಗಳು ಹಾಗೂ ಅವುಗಳ ಪ್ರತಿಗಳ ಸಹಿತ ಪ್ರಾಂಶುಪಾಲರ ಮುಂಭಾಗ ಸಂದರ್ಶನಕ್ಕೆ ಹಾಜರಾಗಬಹುದು.

ಮವ್ವಾರು ಶ್ರೀಕೃಷ್ಣ ಭಜನಾ ಮಂದಿರ ಮಹಾಸಭೆ

ಮವ್ವಾರು : ಶ್ರೀ ಕೃಷ್ಣ ಭಜನ ಮಂದಿರ ಸಮಿತಿ ಮಹಾಸಭೆ ಮಂದಿರದಲ್ಲಿ ಜರಗಿತು. ಮಂದಿರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಗಂಗಾಧರ ರೈ ಮಠದಮೂಲೆ ಅಧ್ಯಕ್ಷತೆ ವಹಿಸಿದರು. ವರದಿ ವಾಚನ, ಲೆಕ್ಕಪತ್ರಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ನಂತರ ನೂತನ ಕಾರ್ಯಕಾರಿ ಸಮಿತಿ ರೂಪೀಕರಿಸ ಲಾಯಿತು. ಅಧ್ಯಕ್ಷರಾಗಿ ಗಂಗಾಧರ ರೈ ಮಠದಮೂಲೆ, ಉಪಾಧ್ಯಕ್ಷರಾಗಿ ಹರ್ಷ ಕೊಟ್ಟಂಗುಳಿ, ನಾಗರಾಜ ಭಟ್ ಮಠದಮೂಲೆ, ಸುಧಾಮ ಮವ್ವಾರು, ನಾಗರಾಜ ಎಂ .ವಿ ಮಠದಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಮಲ್ಲಮೂಲೆ, ಜತೆ ಕಾರ್ಯದರ್ಶಿಗಳಾಗಿ ನಿಶಾಂತ್ ರೈ ಮವ್ವಾರು, …

ಭಾಸ್ಕರನಗರದಲ್ಲಿ ಗಂಟೆಗಳ ವ್ಯತ್ಯಾಸದಲ್ಲಿ ಎರಡು ಕಾರುಗಳ ಅಪಘಾತ: 7 ಮಂದಿ ಆಸ್ಪತ್ರೆಯಲ್ಲಿ

ಕುಂಬಳೆ: ಕುಂಬಳೆ ಸಮೀಪದ ಭಾಸ್ಕರನಗರ ಕೆಎಸ್‌ಟಿಪಿ ರಸ್ತೆಯಲ್ಲಿ ನಿನ್ನೆ ರಾತ್ರಿ ಗಂಟೆಗಳ ವ್ಯತ್ಯಾಸದಲ್ಲಿ ಎರಡು ಕಾರುಗಳು ಅಪಘಾತಕ್ಕೀಡಾ ಗಿವೆ. ಈ ಪೈಕಿ ಒಂದು ಕಾರಿನಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮೊದಲ ಅಪಘಾತ ರಾತ್ರಿ ೧೦ ಗಂಟೆಗೆ ಸಂಭವಿಸಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಬರುತ್ತಿದ್ದ ಕಳತ್ತೂರು ನಿವಾಸಿಗಳು ಸಂಚರಿಸಿದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿ ಬಿದ್ದಿದೆ. ಅದರಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ …

ಮುಳ್ಳೇರಿಯ 110 ಕೆವಿ ಸಬ್‌ಸ್ಟೇಷನ್‌ನಲ್ಲಿ ಬೆಂಕಿ ಆಕಸ್ಮಿಕ: ಪೊಟೆನ್ಶಿಯಲ್ ಟ್ರಾನ್ಸ್‌ಫಾರ್ಮರ್ ಭಸ್ಮ

ಮುಳ್ಳೇರಿಯ: ಇಲ್ಲಿನ 110 ಕೆವಿ ಸಬ್ ಸ್ಟೇಷನ್‌ನಲ್ಲಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದೆ. ನೌಕರರು ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಇಂದು ಮುಂಜಾನೆ ಮೂರೂವರೆ ಗಂಟೆಗೆ ಘಟನೆ ನಡೆದಿದೆ. ಸಬ್ ಸ್ಟೇಷನ್ ಯಾರ್ಡ್‌ನ ಪೊಟೆನ್ಶಿಯಲ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಉಂಟಾಗಿತ್ತು. ಕರ್ತವ್ಯದಲ್ಲಿದ್ದ ನೌಕರರು ಯಾರ್ಡ್‌ನಲ್ಲಿ ಇದ್ದ ಎಸ್ಟಿಂಗ್ಯೂಶರ್ ಉಪಯೋಗಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲ ಉಂ ಟಾಗದ ಹಿನ್ನೆಲೆಯಲ್ಲಿ ಕಾಸರಗೋಡು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅಲ್ಲಿನ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ …