ಮಳೆ: ವಿವಿಧೆಡೆ ವ್ಯಾಪಕ ಹಾನಿ: ತಗ್ಗು ಪ್ರದೇಶಗಳು ನೀರಿನಿಂದಾವೃತ

ಕುಂಬಳೆ/ಉಪ್ಪಳ: ಧಾರಾಕಾ ರವಾಗಿ ಸುರಿಯುತ್ತಿರುವ ಮಳೆಯಿಂ ದಾಗಿ ಜಿಲ್ಲೆಯ ಹಲವೆಡೆಗಳಲ್ಲಿ ರಸ್ತೆಗಳು ಸಹಿತ ತಗ್ಗುಪ್ರದೇಶಗಳು ನೀರಿನಿಂದಾವೃತವಾಗಿದೆ. ವಾಮಂಜೂರು ಚೆಕ್‌ಪೋಸ್ಟ್ ಬಳಿಯಲ್ಲಾಗಿ ಹರಿಯುವ ಉಪ್ಪಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಸಮೀಪದ ಬಯಲು ಪ್ರದೇಶಗಳು ನೀರಿನಿಂದಾವೃತಗೊಂಡಿದೆ.  ಅಲ್ಲದೆ ವಿವಿಧೆಡೆ ಮರಗಳು ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಮಂಗಲ್ಪಾಡಿ ತಿಂಬರದಲ್ಲಿ ತೆಂಗಿನ ಮರವೊಂದು ಬುಡ ಸಮೇತ ಮಗುಚಿಬಿದ್ದು ಬಾವಿಗೆ ಹಾನಿ ಸಂಭವಿಸಿದೆ. ತಿಂಬರ ಪುಷ್ಪಾಕರ ಎಂಬವರ ಮನೆ ಬಳಿಯ ಬಾವಿ ಮೇಲೆ ತೆಂಗಿನ ಮರ ಬಿದ್ದಿದೆ. ಇದರಿಂದ ಆವರಣಗೋಡೆ …

16ರ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ದೌರ್ಜನ್ಯ: ಮೂರು ಮಂದಿ ಆರೋಪಿಗಳು ಸೆರೆ; ಓರ್ವನಿಗಾಗಿ ಶೋಧ

ಕಾಸರಗೋಡು: ಹದಿನಾರರ ಹರೆಯದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು  ಲೈಂಗಿಕ ದೌರ್ಜನ್ಯವೆಸಗಿದ ಆರೋಪದಂತೆ ವಿದ್ಯಾನಗರ ಪೊಲೀಸರು ೪ ಮಂದಿ ವಿರುದ್ಧ ಪೋಕ್ಸೋ  ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಮುಖ್ಯ ಆರೋಪಿ ಸಹಿತ  ಮೂರು ಮಂದಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಯುವಕನಿಗಾಗಿ ತನಿಖೆ ಆರಂಭಿಸಲಾಗಿದೆ. ನೀರ್ಚಾಲು ಕಡಂಬಳದ ಮುಹಮ್ಮದ್ ರಿಫಾಯಿ (25), ನೆಕ್ರಾಜೆಯ ರಮೇಶನ್ (25), ಚೆಂಗಳದ ಮನೋಜ್ (26) ಎಂಬಿವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಎಂಬಾತನಿಗಾಗಿ ಶೋಧ ನಡೆಯುತ್ತಿದೆ. ಮುಹಮ್ಮದ್ ರಿಫಾಯಿ ವಿರುದ್ಧ ದೌರ್ಜನ್ಯ ಆರೋಪದಂತೆ  ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ. …

ಅಬಕಾರಿ ದಾಳಿ: ಮದ್ಯ ವಶ

ಕಾಸರಗೋಡು: ಅಬಕಾರಿ ಇಲಾಖೆ ತಂಡ ನಿನ್ನೆ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಸಿದ ದಾಳಿಯಲ್ಲಿ ಅಕ್ರಮ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದರಂತೆ ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಆದರ್ಶ ಕೆ. ಜಿ.ಯವರ ನೇತೃತ್ವದ ಅಬಕಾರಿ ತಂಡ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ನಲ್ಲಿ  ನಡೆಸಿದ ತಪಾಸಣೆಯಲ್ಲಿ 3.6 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಪ್ರಿವೆಂಟೀವ್ ಆಫೀಸರ್‌ಗಳಾದ ಮೊಯ್ದೀನ್ ಸಾದಿಕ್, ವಿಜಯನ್ ಸಿ.(ಗ್ರೇಡ್), …

ಪಾನ್ ಮಸಾಲೆ ಸಹಿತ ಇಬ್ಬರ ಸೆರೆ

ಉಪ್ಪಳ: ರಾಜ್ಯದಲ್ಲಿ ಮಾರಾಟ ನಿಷೇಧಿಸಲಾದ ಪಾನ್ ಮಸಾಲೆ ಕೈವಶವಿರಿಸಿಕೊಂಡ ಇಬ್ಬರು ಅನ್ಯರಾಜ್ಯ ಕಾರ್ಮಿಕರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅಂಗಡಿಮೊಗರಿನಲ್ಲಿ ವಾಸಿಸುವ ಅಮಿತ್ ಸೋಂಕಾರ್ (25), ಮಜೀರ್ಪಳ್ಳ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸೂರಜ್  ಸೋನಕರ್ (31) ಎಂಬಿವರು ಬಂಧಿತ ವ್ಯಕ್ತಿಗಳು. ಹೊಸಂಗಡಿ ಪೇಟೆಯಲ್ಲಿ ನಿಂತಿದ್ದ ಅಮಿತ್ ಸೋಂಕಾರ್‌ನ ಕೈಯಿಂದ 18ಪ್ಯಾಕೆಟ್, ಮಜೀರ್ಪಳ್ಳ ಬಸ್ ನಿಲ್ದಾಣದಲ್ಲಿದ್ದ ಸೂರಜ್ ಸೇನಕರ್‌ನ ಕೈಯಿಂದ ೪೫ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ. ಮಂಜೇಶ್ವರ ಎಸ್‌ಐ ಅಜಯ್ ಎಸ್ ಮೆನನ್ ನೇತೃತ್ವದ ಪೊಲೀಸರ ಗಸ್ತು ನಡೆಸುತ್ತಿದ್ದ ವೇಳೆ …

ವ್ಯಕ್ತಿ ನೇಣು ಬಿಗಿದು ಸಾವು

ಕಾಸರಗೋಡು:  ಪೆರುಂಬಳ ಕನಿಯಾಲತ್ತ್ ಹೌಸ್‌ನ ಶಾಜಿ ಕೆ.ಪಿ. (60) ಎಂಬವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ಮನೆಯ ಅಡುಗೆ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಈ ಹಿಂದೆ ಇವರು ಕೋಳಿಯಡ್ಕದಲ್ಲಿ ಹೋಟೆಲ್ ಕಾರ್ಮಿಕನಾಗಿದ್ದರು. ಮೃತರು ಪತ್ನಿ ಕಮನಿ, ಮಕ್ಕಳಾದ ಸನೀಶ, ನಿಶಾ, ದೀಪಾ, ದಿಲೀಪ್, ಅಳಿಯ ಸೊಸೆಯಂದಿರಾದ ಅಂಬಿ ಕಾಸುತನ್, ಶರತ್, ಬಿಂದು, ಸಹೋದರಿ ಜಗದಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರಿ ಓಮನಕುಟ್ಟನ್ ಈ ಹಿಂದೆ …

ಮುಂದಿನ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಒಂದು ತೋರು ಬೆರಳು: ನಿಲಂಬೂರು ವಿಧಾನಸಭಾ ಕ್ಷೇತ್ರ  ಉಪ ಚುನಾವಣೆ ಜೂನ್ 19ರಂದು

ತಿರುವನಂತಪುರ: ನಿಲಂಬೂರು ವಿಧಾನಸಭಾ ಕ್ಷೇತ್ರದ ಎಡರಂಗ ಬೆಂಬಲಿತ ಶಾಸಕರಾಗಿದ್ದ ಪಿ.ವಿ. ಅನ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತೆರವುಗೊಂಡಿರುವ ಆ ಸ್ಥಾನಕ್ಕೆ ಜೂನ್ 19ರಂದು ಉಪಚುನಾವಣೆ ನಡೆಯಲಿದೆ. ಇದರ ಫಲಿತಾಂಶ ಮುಂದೆ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ವಿಧಾನಸಭಾ ಚುನಾವಣೆಗಿರುವ ಒಂದು ತೋರು ಬೆರಳು ಕೂಡಾ ಆಗಲಿದೆ.ಆದ್ದರಿಂದ ಈ ಉಪಚುನಾವಣೆಯ ಫಲಿತಾಂಶ ಆಡಳಿತ ಹಾಗೂ ವಿಪಕ್ಷ ಗಳಿಗೂ ಅತ್ಯಂತ ನಿರ್ಣಾಯಕವಾಗಲಿದೆ. ಆ ಹಿನ್ನೆಲೆಯಲ್ಲಿ ಆ ಕ್ಷೇತ್ರವನ್ನು ತನ್ನ ಕೈಯಲ್ಲೇ ಉಳಿಸಿಕೊಳ್ಳಲು ಒಂದೆಡೆ ಎಡರಂಗ ಯತ್ನಿಸುತ್ತಿದ್ದರೆ, ಇನ್ನೊಂದೆಡೆ …

ಹಜ್ ತೀರ್ಥಾಟನೆಗೆ ತೆರಳಿದ ವ್ಯಕ್ತಿ ಕುಸಿದು ಬಿದ್ದು ಸಾವು

ಕುಂಬಳೆ: ಹಜ್ ತೀರ್ಥಾಟನೆಗೆ ತೆರಳಿದ ವ್ಯಕ್ತಿ ಮಕ್ಕಾದಲ್ಲಿ ಕುಸಿದು ಬಿದ್ದು ಮೃತಪಟ್ಟರು. ಮೊಗ್ರಾಲ್ ನಿವಾಸಿಯೂ ಮಂಗಳೂರಿನಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ಸಾಹಿಬ್ (61) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಮಕ್ಕಾದಲ್ಲಿ ತವಾಫ್ ಬಳಿಕ ನಮಾಜು ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೇ ೧೪ರಂದು ಫರೀದ, ಸಹೋದರಿ ಆಯಿಶಾರ ಜೊತೆ ಅಬ್ದುಲ್ ಸತ್ತಾರ್ ಹಜ್ ತೀರ್ಥಾಟನೆಗೆ ತೆರಳಿದ್ದರು. ಮೃತರು ಮಕ್ಕಳಾದ ನಬೀಲ್, ನಹೀಂ, ಉಸ್ಮ, ಅಳಿಯ ಕಾಹಿನಾಥ್, ಸೊಸೆ ರಫ, ಇತರ ಸಹೋದರ- …

ಕಾಸರಗೋಡು ಗಣೇಶೋತ್ಸವ: ಸ್ವಾಗತ ಸಮಿತಿ ರೂಪೀಕರಣ; ಎಡನೀರು ಶ್ರೀ ಉದ್ಘಾಟನೆ

ಕಾಸರಗೋಡು: ಸ್ವಾತಂತ್ರ್ಯ  ಸಂಗ್ರಾಮದ ವೇಳೆ ಹಿಂದೂ ಸಮಾಜವನ್ನು ಒಗ್ಗೂಡಿಸಲು 1893ರಲ್ಲಿ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಆರಂಭಿಸಿದ್ದರು. ಇಂದು ನಮ್ಮ ದೇಶದಲ್ಲಿ ನಡೆಯುವ ಆಗುಹೋಗು ಗಳಿಂದಾಗಿ ದೇಶದಲ್ಲಿ ಗಣೇಶೋ ತ್ಸವದ ಪರಿಕಲ್ಪನೆ ಮತ್ತೆ ಅನಿವಾ ರ್ಯವಾಗಿದೆಯೆಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಅಗೋಸ್ತ್ 27ರಿಂದ ಸೆ. 6ರ ತನಕ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಪ್ತತಿ ಮಹೋತ್ಸವದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಶ್ರೀ ಮಲ್ಲಿಕಾರ್ಜುನ …

ವ್ಯಾಪಕಗೊಂಡ ಗಾಳಿ, ಮಳೆ ಪ್ರತಾಪನಗರ ಸಹಿತ ವಿವಿಧ ಪ್ರದೇಶಗಳಲ್ಲಿ ಮರ ಮುರಿದು ವಿದ್ಯುತ್ ಕಂಬ ಹಾನಿ

ಉಪ್ಪಳ: ಗಾಳಿ, ಮಳೆ ವ್ಯಾಪಕ ಗೊಂಡ ಹಿನ್ನೆಲೆಯಲ್ಲಿ ಪ್ರತಾಪನಗರ ಸಹಿತ ವಿವಿಧ ಪ್ರದೇಶಗಳಲ್ಲಿ ಮರಗಳು ಮುರಿದು ವಿದ್ಯುತ್ ಕಂಬ ಹಾನಿ ಗೊಂಡ ಘಟನೆ ನಡೆದಿದೆ. ಶನಿವಾರ ರಾತ್ರಿ ಭಾರೀ ಮಳೆ, ಗಾಳಿಗೆ ಪ್ರತಾಪ ನಗರದ ಗುಳಿಗ ಬನದ ಬಳಿಯ ರಸ್ತೆ ಯಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆ ತಡೆ ಉಂಟಾ ಗಿದೆ. ಮಂಗಲ್ಪಾಡಿ ಕೃಷ್ಣನಗರದಲ್ಲಿ ಮರ ತಂತಿಗೆ ಬಿದ್ದು ವಿದ್ಯುತ್ ಕಂಬ ಹಾನಿ ಗೊಂಡಿದೆ. ಜನ ಸಂಚಾರ ವಿರುವ ಪ್ರದೇಶವಾಗಿದ್ದು, ಸಂಭವಿಸಬಹು ದಾದ …

ಮಸೀದಿ ಮಾಜಿಖತೀಬ್ ನಿಧನ

ಕುಂಬಳೆ: ಪೈವಳಿಕೆ ಪಲ್ಲಕೂಡಲ್  ಜುಮಾ ಮಸೀದಿಯ ಮಾಜಿ ಖತೀಬ್ ಮುಹಮ್ಮದ್ ಮುಕ್ರಿ ಹಾಜಿ (84) ನಿಧನಹೊಂದಿದರು. ಸುಮಾರು ೫೦ ವರ್ಷಕ್ಕೂ ಹೆಚ್ಚು ಕಾಲ ಇವರು ಪಲ್ಲಕೂಡಲ್ ಜುಮಾ ಮಸೀದಿಯ ಖತೀಬ್ ಆಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಬೀಫಾತ್ತಿಮ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಲತೀಫ್,  ಸಿದ್ದಿಕ್, ಜಮೀಲ, ನಸೀಮ (ಕುಂಬಳೆ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯೆ), ಶೆಮೀಮ, ಅಳಿಯ-ಸೊಸೆಯಂದಿರಾದ ಹಾಜಿರ, ಸೈನ, ಅಬ್ದುಲ್ಲ, ಖಾಲಿದ್ ಬಂಬ್ರಾಣ, ಅಸೀಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.