ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಸಂಪೂರ್ಣ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಕಲಿಯಲು ಅವಕಾಶವಾಗಬೇಕು- ಶಾಸಕ ಎನ್.ಎ.

ಕಾಸರಗೋಡು: ಶಿಕ್ಷಣ ಹಕ್ಕು ಕಾನೂನು ಪ್ರಕಾರ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ರಾಜ್ಯದ ಎಲ್ಲಾ ವಿದ್ಯಾ ರ್ಥಿಗಳಿಗೆ ಅವರವರ ಪಂಚಾಯತ್ ನಲ್ಲೇ ಕಲಿಯಲು ಅವಕಾಶ ಉಂಟು ಮಾಡಬೇಕೆಂದೂ, ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ಗಳಿಗೆ ಸಾಕಾಗುವಷ್ಟು ಹೆಚ್ಚುವರಿ ಬ್ಯಾಚ್‌ಗಳನ್ನು ಜಿಲ್ಲೆಯ ಎಲ್ಲಾ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಅಧ್ಯಾ ಪಕರನ್ನು, ಪ್ರಾಂಶುಪಾಲರನ್ನು ನೇಮP ಗೊಳಿಸಬೇಕೆಂದು ಶಾಸಕ ಎನ್.ಎ. ನೆಲ್ಲಿಕುನ್ನು ಆಗ್ರಹಿಸಿದರು. ಕೆ.ಪಿ.ಎಸ್. ಟಿ.ಎ ಕಂದಾಯ ಜಿಲ್ಲಾ ದ್ವಿದಿನ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ  ಅವರು ಮಾತನಾಡಿದರು. ಹಿಡಿದಿಟ್ಟುಕೊಂಡ ಸೌಲಭ್ಯಗಳನ್ನು ತುರ್ತಾಗಿ …

ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಯುವತಿ ಯೋರ್ವೆ ಮಲಗುವ ಕೊಠಡಿ ಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚೀಮೇನಿ ಪಳ್ಳಿಪ್ಪಾರದ ಕೆ. ಪ್ರಮೋದ್‌ರ ಪತ್ನಿ ಸಜಿತಾ (39) ಮೃತಪಟ್ಟವರು. ಮೃತರು ಪತಿ, ಮಕ್ಕಳಾದ ಶಿವದಾಲಕ್ಷ್ಮಿ, ಶಿಕಿಲ್‌ದೇವ್, ತಾಯಿ ಕಮಲ, ಸಹೋದರ ಸಜೇಶ್, ಸಹೋದರಿ ಸಜಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಾಜ್ಯ ಶಾಲಾ ಪ್ರವೇಶೋತ್ಸವ ಕವಲೂರಿನಲ್ಲಿ

ತಿರುವನಂತಪುರ: ರಾಜ್ಯ ಶಾಲಾ ಪ್ರವೇಶೋತ್ಸವ ಜೂನ್ 2ರಂದು ಬೆಳಿಗ್ಗೆ 9.30ಕ್ಕೆ ಕವಲೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಇದರ ಅಂಗವಾಗಿ ಅಂದು ಬೆಳಿಗ್ಗೆ 8.30 ರಿಂದ ವಿದ್ಯಾರ್ಥಿಗಳಿಂದ ವಿವಿಧ ಕಲಾ ಕಾರ್ಯಕ್ರಮಗಳಿರುವುದು. 3೦೦೦ ಮಂದಿಗೆ ಭೋಜನವನ್ನು ಏರ್ಪಡಿಸಲಾಗುವುದೆಂದು ಸಂಘಾಟಕರು ತಿಳಿಸಿದ್ದಾರೆ.

ವಿವಿಧೆಡೆಗಳಲ್ಲಿ ಅಧ್ಯಾಪಕ ಹುದ್ದೆ ಭರ್ತಿಗೆ ಸಂದರ್ಶನ

ಮುಳ್ಳೇರಿಯ: ಆದೂರು ಸರ ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಚ್ಎಸ್ಟಿ ಇಂಗ್ಲಿಷ್, ಕಾಮರ್ಸ್, ಇಕಾನಾಮಿಕ್ಸ್, ಸೋಷ್ಯಲ್ ವರ್ಕ್, ಜ್ಯೂನಿಯರ್ ಎಕಾನಾಮಿಕ್ಸ್, ಪೊಲಿಟಿಕಲ್ ಸಯನ್ಸ್ ಎಂಬೀ ಹುದ್ದೆ ಭರ್ತಿಗೆ ದಿನವೇತನ ಆಧಾರದಲ್ಲಿ ಅಧ್ಯಾಪಕರನ್ನು ನೇಮಕ ಮಾಡಲಾಗುವುದು. ಈ ತಿಂಗಳ 28ರಂದು ಬೆಳಿಗ್ಗೆ 10ಕ್ಕೆ ಸಂದರ್ಶನ ನಡೆಯಲಿದೆ.ಕುಂಬಳೆ: ಉಜಾರ್ ಉಳುವಾರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಎಲ್ಪಿ ಎಸ್ಟಿ ಕನ್ನಡ-1, ಮಲಯಾಳ-1 ಹುದ್ದೆ ಭರ್ತಿಗೆ ಈ ತಿಂಗಳ 30ರಂದು ಬೆಳಿಗ್ಗೆ 10ಕ್ಕೆ …

ಪ್ರತಾಪನಗರದಲ್ಲಿ ಶ್ರೀ ಸತ್ಯಸಾಯಿ ಅಭಯನಿಕೇತನ್ ವತಿಯಿಂದ ಉಚಿತ ಕನ್ನಡಕ ವಿತರಣೆ

ಮಂಗಲ್ಪಾಡಿ: ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ ಕಾಸರಗೋಡು ಹಾಗೂ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ಸಮಿತಿ ಪ್ರತಾಪನಗರ ಇದರ ಜಂಟಿ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬರವರ ಜನ್ಮ ಶತಾಬ್ದಿ ಪ್ರಯುಕ್ತ ಇತ್ತೀಚೆಗೆ ಜರಗಿದ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಿನ್ನೆ ಬೆಳಿಗ್ಗೆ ಪ್ರತಾಪನಗರ ಸಾರ್ವಜನಿಕ ಶ್ರೀ ಗೌರೀ ಗಣೇಶ ಮಂದಿರದಲ್ಲಿ ದೀಪ ಪ್ರಜ್ವಲನೆಯೊಂದಿಗೆ ನಡೆಯಿತು. ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಶ್ರೀ ಸತ್ಯಸಾಯಿ ಅಭಯಾನಿಕೇತನ …

ಕುನಿಲ್ ಇಸ್ಲಾಮಿಕ್ ಸೆಂಟರ್ ಮುಹಮ್ಮದಿಯಾ ಕಾಲೇಜಿನ 8ನೇ ವಾರ್ಷಿಕೋತ್ಸವ ಧಾರ್ಮಿಕ ಉಪನ್ಯಾಸ ಆರಂಭ

ಕುಂಬಳೆ: ಬಂದ್ಯೋಡು ಸಮೀ ಪದ ಮುಟ್ಟಂ ಕುನಿಲ್ ಇಸ್ಲಾಮಿಕ್ ಸೆಂಟರ್ ಮುಹಮ್ಮದಿಯಾ ಕಾಲೇಜಿನ 8ನೇ ವಾರ್ಷಿಕೋತ್ಸವ ಹಾಗೂ ಎರಡು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಮಜ್ಲಿಸ್-ಎ ಸುನ್ನೂರು ನಿನ್ನೆ ಆರಂಭಗೊAಡಿದ್ದು, ಇಂದು ಸಮಾಪ್ತಿಯಾಗಲಿದೆ. ನಿನ್ನೆ ಸಂಜೆ 5ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊAಡಿತು. ಕೆ.ಎಸ್.ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸಿ ದರು. ಯಾಹ್ಯಾ ತಂಙಳ್ ಅಲ್ ಹಾದಿ ಪ್ರಾರ್ಥನೆಯ ನೇತೃತ್ವ ವಹಿಸಿದರು. ಅಲಿ ಸೈಫುದ್ದೀನ್ ತಂಙಳ್ ಪ್ರಾಸ್ತಾವಿಕ ವಾಗಿ ಭಾಷಣ ಮಾಡಿದರು. ಹಾಫಿಝ್ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ …

ರಾಜ್ಯದಲ್ಲಿ ಮುಂಗಾರು ಮಳೆಗೆ ಕ್ಷಣಗಣನೆ: ಜಡಿ ಮಳೆ ಸಾಧ್ಯತೆ ;ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ತಿರುವನಂತಪುರ: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಇಂದು ಜಡಿ ಮಳೆಗೆ ಸಾಧ್ಯತೆ ಇದ್ದು, ಅದರಿಂದಾಗಿ ಈ ಎರಡು ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮಾತ್ರವಲ್ಲ ಈ ಎರಡು ಜಿಲ್ಲೆಗಳ ಪ್ರವಾಸಿ ಕೇಂದ್ರಗಳಲ್ಲಿ ಇಂದಿನಿಂದ ಬಿಗಿ ನಿಯಂತ್ರಣವನ್ನೂ ಏರ್ಪಡಿಸಲಾಗಿದೆ. ವಿಶೇಷವಾಗಿ ಮಲೆನಾಡು ಪ್ರದೇಶವಾದ ಕಾಸರಗೋಡು ಜಿಲ್ಲೆಯ ರಾಜಪುರಂ ಮತ್ತು ಜಿಲ್ಲೆಯ ಎಲ್ಲಾ ಬೀಚ್‌ಗಳಲ್ಲೂ ಇಂತಹ ಬಿಗಿ ನಿಯಂತ್ರಣ ಹೇರಲಾಗಿದೆ. ಮಲೆನಾಡ ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆಯ ಮುನ್ನೆಚ್ಚರಿಕೆಯನ್ನೂ ಇನ್ನೊಂದೆಡೆ ನೀಡಲಾಗಿದೆ. ಮಾತ್ರವಲ್ಲ ಅದನ್ನು ಮುಂಗಡವಾಗಿ ಮನಗಂಡು …

ಗಲ್ಫ್‌ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವಕ ನಾಪತ್ತೆ

ಮುಳ್ಳೇರಿಯ: ಗಲ್ಫ್‌ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮುಳಿಯಾರು ಪಂಚಾಯತ್ ವ್ಯಾಪ್ತಿಯ ಮಲ್ಲ ಪುಂಜಂಗೋಡು ನಾರಾಯಣೀಯಂ ಹೌಸ್‌ನ ಚಂದ್ರನ್ ಎಂಬವರ ಪುತ್ರ ಕೆ. ರಾಗೇಶ್ (35) ನಾಪತ್ತೆಯಾಗಿರು ವುದಾಗಿ ತಿಳಿದು ಬಂದಿದೆ. ಈ ಕುರಿತು ತಾಯಿ ಕೆ. ವತ್ಸಲ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಗಲ್ಫ್‌ಗೆ ಹೋಗುವುದಾಗಿ ತಿಳಿಸಿ ಮೇ 5ರಂದು ಸಂಜೆ 4 ಗಂಟೆಗೆ ರಾಗೇಶ್ ಮನೆಯಿಂದ ಹೊರಟು ಹೋಗಿರುವು ದಾಗಿ ತಾಯಿ ಪೊಲೀಸರಿಗೆ …

ವಂದೇ ಭಾರತ್ ರೈಲಿನಲ್ಲಿ ಆಹಾರ ಸೇವಿಸಿದವರಿಗೆ ಅಸೌಖ್ಯ 5 ಮಂದಿ ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಾಡಿಯಲ್ಲಿ ನಿನ್ನೆ ಆಹಾರ ಸೇವಿಸಿದ ತಿರುವನಂತಪುರ ನಿವಾಸಿಗಳಾದ ಐದು ಮಂದಿಗೆ ಅಸೌಖ್ಯ ಕಾಣಿಸಿಕೊಂಡಿದ್ದು ಅವರನ್ನು ಕಾಸರಗೋಡು  ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಿರುವನಂತಪುರ ಮಂಗಲಪುರದ  ಮುಹಮ್ಮದ್ ಶಾದುಲಿ (21), ಮುಹಮ್ಮದ್ ಶಿಬಿಲಿ (25), ನಜ್ಮಾ (50), ದಿ| ಕೃಷ್ಣನ್ ನಾಯರ್‌ರ  ಪುತ್ರಿ ಕೃಷ್ಣ ಕುಮಾರಿ (45), ಕೃಷ್ಣ ಕುಮಾರಿಯ ಪುತ್ರಿ ಗೌರಿ ಕೃಷ್ಣ (23) ಎಂಬಿವರನ್ನು  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಗೋವಾದಿಂದ ಮಂಗಳೂರಿಗೆ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಇವರು ಪ್ರಯಾಣಿಸಿದ್ದರೆಂದು …

ವಿವಿಧೆಡೆ ವ್ಯಾಪಕಗೊಂಡ ಮಟ್ಕಾ ದಂಧೆ: ಅಂಗಡಿಪದವಿನಲ್ಲಿ 26,650 ರೂ. ಸಹಿತ ಓರ್ವ ಸೆರೆ

ಉಪ್ಪಳ: ಹೊಸಂಗಡಿ ಹಾಗೂ ಪರಿಸರ ಪ್ರದೇಶಗಳಲ್ಲಿ ವ್ಯಾಪಕ ಮಟ್ಕಾ ದಂಧೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ನಿನ್ನೆ ರಾತ್ರಿ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆ ಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ಹೊಸಂ ಗಡಿ ಮಿತ್ತಕನಿಲ ನಿವಾಸಿ ರವೀನ್ ಕುಮಾರ್ ಬಿ.ಎಂ. (43) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಕೈಯಿಂದ 26,650 ರೂ. ವಶಪಡಿಸಲಾಗಿದೆ. ನಿನ್ನೆ ರಾತ್ರಿ 8.45ರ ವೇಳೆ ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು ಅಂಗಡಿಪದವು ಬಸ್ ನಿಲ್ದಾಣ ಬಳಿ ಗಸ್ತು ನಡೆಸುತ್ತಿದ್ದಾಗ …